ವಿನ್‌ ಮಾಡೋ ವಿನ್ಯಾಸ

ಪ್ರಾಡಕ್ಟ್ ಡಿಸೈನ್‌ ಪಂಡಿತರಾಗ್ತಿರಾ?

Team Udayavani, Apr 2, 2019, 6:27 AM IST

a-8

ಉತ್ಪನ್ನ ವಿನ್ಯಾಸಕರು ವಾಣಿಜ್ಯೋದ್ಯಮಗಳಿಗಾಗಿ ಉತ್ಪನ್ನಗಳು, ವಸ್ತುಗಳು ಹಾಗೂ ಇತರೆ ಪರಿಕರಗಳನ್ನು ವಿನ್ಯಾಸ ಮಾಡುತ್ತಾರೆ. ಇಂದು ಈ ವಿನ್ಯಾಸಗಾರರು ವಿನ್ಯಾಸೋದ್ಯಮದ ಅವಿಭಾಜ್ಯ ಅಂಗವಾಗಿ ಬೆಳೆದಿದ್ದಾರೆ. ಇವರ ವಿನ್ಯಾಸ ಕೌಶಲಗಳು ಉತ್ಪನ್ನಗಳ ಪ್ರಾಯೋಗಿಕತೆ ಹಾಗೂ ಅವುಗಳ ಸೌಂದರ್ಯ ಎರಡಕ್ಕೂ ನ್ಯಾಯ ಒದಗಿಸುತ್ತದೆ.

ವಿನ್ಯಾಸಗಾರರು ಏನು ಮಾಡುತ್ತಾರೆ?
ವಿನ್ಯಾಸಗಾರರು ಕೇವಲ ಕೌಶಲವಿರುವ ಕಲಾವಿದರಲ್ಲ! ಇವರು ಗೃಹೋಪಯೋಗಿ ವಸ್ತುಗಳಿಂದ ತೊಡಗಿ ಕಾರು, ಕಂಪ್ಯೂಟರ್‌, ವೈದ್ಯಕೀಯ ಸಂಬಂಧಿತ ಅಥವಾ ಮನರಂಜನಾ ಉದ್ದಿಮೆಯ ಪರಿಕರಗಳು, ಮಕ್ಕಳ ಆಟಿಕೆ ಹೀಗೆ ವೈವಿಧ್ಯಮಯ ವಸ್ತುವಿಶೇಷಗಳನ್ನು ಲಾಭದಾಯಕವಾಗಿ ತಯಾರಿಸುವುದರಿಂದ ಹಿಡಿದು ಅವುಗಳನ್ನು ಗ್ರಾಹಕ ಪ್ರಿಯ ವಸ್ತುಗಳನ್ನಾಗಿ ಮಾರುಕಟ್ಟೆಯಲ್ಲಿ ಬಿಡುವಂತೆ ವಿನ್ಯಾಸ ಮಾಡಬೇಕಾಗುತ್ತದೆ. ಮಾರುಕಟ್ಟೆಯ ಸ್ಫರ್ಧಾತ್ಮಕ ಜಗತ್ತಿನಲ್ಲಿ ವಸ್ತುಗಳು ಗೆಲ್ಲಬೇಕು. ಅದೇ ವಿನ್ಯಾಸಗಾರ ಎದುರಿಸಬೇಕಾಗಿರುವ ಅತಿದೊಡ್ಡ ಸವಾಲು. ಉತ್ಪನ್ನ ವಿನ್ಯಾಸಕರು ಉತ್ಪನ್ನ ವಿನ್ಯಾಸ/ಪಿಂಗಾಣಿ ವಸ್ತುಗಳ ವಿನ್ಯಾಸ/ಪೀಠೊಪಕರಣಗಳ ವಿನ್ಯಾಸ ಇಂಥವುಗಳಲ್ಲಿ ವಿಶೇಷ ಪರಿಣತಿ ಹೊಂದಿರಬೇಕು.

ಅಗತ್ಯವಿರುವ ಕೌಶಲಗಳು
-ಸೃಜನಶೀಲತೆ
-ಕಲ್ಪನಾ ದೃಷ್ಟಿ
-ಸಮಸ್ಯೆಯನ್ನು ಸ್ಪಷ್ಟವಾಗಿ, ತರ್ಕಬದ್ಧವಾಗಿ ವಿಶ್ಲೇಷಣೆ ಮಾಡಿ, ರಚನಾತ್ಮಕ ಪರಿಹಾರಗಳನ್ನು ಯೋಚಿಸುವ ಶಕ್ತಿ
-ಯೋಜನೆಗಳನ್ನು ಚಿತ್ರಗಳ ಮೂಲಕ ಅಭಿವ್ಯಕ್ತಿಸುವ ಕಲೆ
– ಟೀಂ ವರ್ಕ್‌/ ತಂಡದಲ್ಲಿ ಹೊಂದಿಕೊಂಡು ಕೆಲಸ ಮಾಡುವ ವ್ಯಕ್ತಿತ್ವ
-ಕಲಾತ್ಮಕತೆ
-ಸಲಹೆ ಮತ್ತು ಟೀಕೆಗಳನ್ನು ಸ್ವೀಕರಿಸುವ ಮನೋಧರ್ಮ
-ಬಣ್ಣಗಳ ಕುರಿತ ಸೂಕ್ಷ್ಮತೆ
– ಸೌಂದರ್ಯವನ್ನು ಹೊರತರುವ ಮತ್ತು ಎರ್ಗೆನೋಮಿಕÕ… (ಮಾನವ ಮತ್ತು ಪರಿಸರದ ನಡುವಿನ ಸಂಬಂಧದ ಅಧ್ಯಯನ) ಕಲೆಯಿರಬೇಕು. -ಉತ್ಪಾದನಾ ವೆಚ್ಚದ ಮಿತಿಯಿಂದಾಗಿ ಅನೇಕ ಕಾರ್ಯಗಳನ್ನು ಕೈಬಿಡಲಾಗುವುದು. ಇಂಥ ಸಂದರ್ಭಗಳಿಗೆ ಹೊಂದಿಕೊಳ್ಳುವ ಉಪಾಯಗಳನ್ನು ಯೋಚಿಸುವ ಸಾಮರ್ಥ್ಯ

ಅವಕಾಶ ಎಲ್ಲಿದೆ?
ಉತ್ಪಾದನಾ ಸಂಸ್ಥೆಗಳು, ಕಾರ್ಖಾನೆಗಳು, ಔದ್ಯೋಗಿಕಾ ಸಲಹಾ ಸಂಸ್ಥೆಗಳು, ಪೀಠೊಪಕರಣಗಳು ಹಾಗೂ ಸ್ನಾನಗೃಹೋಪಯೋಗಿ ವಸ್ತುಗಳ ಉತ್ಪಾದನಾ ಘಟಕಗಳು, ದೀಪ ಮತ್ತು ಬೆಳಕಿನ ವ್ಯವಸ್ಥೆಯ ಪರಿಕರಗಳು, ಕುಂಬಾರಿಕೆ ಮಾದರಿಯ ಮಣ್ಣಿನ ಪರಿಕರಗಳನ್ನು ತಯಾರಿಸುವ ಸಂಸ್ಥೆಗಳು, ಅಲಂಕಾರಿಕ ಪೋರ್ಸಲೈನ್‌ ಮತ್ತು ವಿದ್ಯುತ್‌ ಉಪಕರಣಗಳ ತಯಾರಿಕಾ ಸಂಸ್ಥೆಗಳಲ್ಲಿ ಅವಕಾಶಗಳಿವೆ.

ಶೈಕ್ಷಣಿಕ ಹಾದಿ ಹೇಗಿರುತ್ತೆ?
-“ಎನ್‌ಐಡಿ’ (ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಡಿಸೈನ್‌) ನಾಲ್ಕು ವರ್ಷದ ವಿನ್ಯಾಸ ಪದವಿ ಕೋರ್ಸ್‌ ನಡೆಸುತ್ತದೆ. ಅದಕ್ಕೆ ಸೇರಲು ಅರ್ಹತೆ 12 ತರಗತಿ/ಪಿಯುಸಿ (ಯಾವುದೇ ವಿಷಯ). ಗರಿಷ್ಠ 20 ವರ್ಷ. (ಮೂರು ವರ್ಷಗಳ ಸಡಿಲಿಕೆಯಿದೆ).

-ಎನ್‌ಐಡಿ ಮಾಸ್ಟರ್‌ ಆಫ್ ಡಿಸೈನ್‌ ಕೋರ್ಸ್‌ (ಎರಡೂವರೆ ವರ್ಷ ಅವಧಿ). ಅರ್ಹತೆ: ಗರಿಷ್ಠ 30 ವರ್ಷ (ಮೀಸಲಾತಿ ಇರುವವರಿಗೆ ಮೂರು ವರ್ಷ ಸಡಿಲಿಕೆಯಿದೆ). ಶೈಕ್ಷಣಿಕ ಅರ್ಹತೆ ಯಾವುದೇ ಪದವಿ/ ವಿನ್ಯಾಸದಲ್ಲಿ ಡಿಪ್ಲೊಮಾ (10+2+4 ಮಾದರಿಯಲ್ಲಿ) /ಯಾವುದೇ ಪದವಿ (10+2+3 ಮಾದರಿಯಲ್ಲಿ)

ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಿ, ಎನ್‌ಐಡಿ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಯ ತಿಳಿವಳಿಕೆ, ಕೌಶಲಗಳು ಮತ್ತು ವಿಶೇಷ ಸಾಮರ್ಥ್ಯಗಳನ್ನು ಅಳೆಯಲಾಗುವುದು.

ಕಲ್ಗುಂಡಿ ನವೀನ್‌

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.