ಮಂಗಳೂರಿನಲ್ಲಿ ಪಿಯು ಮೌಲ್ಯಮಾಪನ
Team Udayavani, Jun 1, 2020, 10:33 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ನಗರದ ಐದು ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷಾ ಮೌಲ್ಯಮಾಪನ ಮೇ 29ರಿಂದ ನಡೆಯುತ್ತಿದ್ದು, 150ಕ್ಕೂ ಹೆಚ್ಚು ಉಪನ್ಯಾಸಕರು ಭಾಗವಹಿಸುತ್ತಿದ್ದಾರೆ. ಸಂತ ಅಲೋಶಿಯಸ್, ಶಾರದಾ, ರಾಮಕೃಷ್ಣ, ಸೈಂಟ್ ಆಗ್ನೆಸ್ ಮತ್ತು ಕುಶೆ ಪಿಯು ಕಾಲೇಜುಗಳಲ್ಲಿ ಮೌಲ್ಯಮಾಪನ ನಡೆಯುತ್ತಿದೆ. ಮುಂದಿನ 15 ದಿನಗಳೊಳಗೆ ಮೌಲ್ಯಮಾಪನ ಮುಗಿಸಲು ಉದ್ದೇಶಿ ಸಲಾಗಿದೆ ಎಂದು ದ.ಕ. ಪ.ಪೂ. ಪ್ರಾಚಾರ್ಯರ ಸಂಘದ ಕಾರ್ಯದರ್ಶಿ ವಿನ್ಸೆಂಟ್ ಡಿ’ಕೋಸ್ಟ “ಉದಯವಾಣಿ’ಗೆ ತಿಳಿಸಿದ್ದಾರೆ.
ಮೌಲ್ಯಮಾಪನಕ್ಕೆ ಸೂಕ್ತ ಸಿದ್ಧತೆ ಮಾಡಿಲ್ಲ ಮತ್ತು ಕೊರೊನಾ ಆತಂಕ ಇರುವಾಗ ಸೂಕ್ತ ಮುನ್ನೆಚ್ಚರಿಕೆ ಕೈಗೊಂಡಿಲ್ಲ ಎಂದು ಆರೋಪಿಸಿ ಉಪನ್ಯಾಸಕರು ಇತ್ತೀಚೆಗೆ ಬಹಿಷ್ಕಾರ ನಿರ್ಧಾರ ಪ್ರಕಟಿಸಿದ್ದರು. ಆದರೆ ಸರಕಾರ ಮಧ್ಯಪ್ರವೇಶಿಸಿ ಕೆಲವು ಬೇಡಿಕೆ ಈಡೇರಿಸಿದ ಹಿನ್ನೆಲೆಯಲ್ಲಿ ಆರಂಭಿಸಿದ್ದಾರೆ. ಈ ಮಧ್ಯೆ ಮೌಲ್ಯಮಾಪನ ಕೇಂದ್ರದಲ್ಲಿ ಸಾಮಾಜಿಕ ಅಂತರ ಪಾಲನೆ ಆಗುತ್ತಿಲ್ಲ; ಉಪನ್ಯಾಸಕರ ಸಂಖ್ಯೆಯೂ ಕಡಿಮೆಯಿದೆ ಎಂದು ಕೆಲವು ಉಪನ್ಯಾಸಕರು ಆರೋಪಿಸಿದ್ದಾರೆ.