ಸೇಡು ತೀರಿಸಿಕೊಂಡ ಆರ್‌ಸಿಬಿ


Team Udayavani, Apr 22, 2019, 9:49 AM IST

RCB

ಬೆಂಗಳೂರು: ಚೆನ್ನೈ ಎದುರಿನ ಉದ್ಘಾಟನಾ ಪಂದ್ಯದಲ್ಲಿ ಅನುಭವಿಸಿದ ಹೀನಾಯ ಸೋಲಿಗೆ ಆರ್‌ಸಿಬಿ ರವಿವಾರ ರಾತ್ರಿ ತವರಿನ ಅಂಗಳದಲ್ಲಿ ಸೇಡು ತೀರಿಸಿಕೊಂಡಿದೆ. ಅಂಕಪಟ್ಟಿಯ ಅಗ್ರ ಮತ್ತು ಕೊನೆಯ ಸ್ಥಾನದಲ್ಲಿರುವ ತಂಡಗಳ ಈ ರೋಚಕ ಸೆಣಸಾಟದಲ್ಲಿ ಆರ್‌ಸಿಬಿ 1 ರನ್ನಿನಿಂದ ಜಯಭೇರಿ ಬಾರಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 7 ವಿಕೆಟಿಗೆ 161 ರನ್‌ ಗಳಿಸಿದರೆ, ಚೆನ್ನೈ ತಂಡವು ಧೋನಿ (ಅಜೇಯ 84) ಅವರ ಅಮೋಘ ಬ್ಯಾಟಿಂಗಿನ ಹೊರತಾಗಿಯೂ ನಿಗದಿತ ಓವರ್‌ಗಳಲ್ಲಿ 8 ವಿಕೆಟಿಗೆ 160 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಮೊದಲ ಓವರಿನಲ್ಲೇ ವಾಟ್ಸನ್‌ ಮತ್ತು ರೈನಾ ಅವರನ್ನು ಸತತ ಎಸೆತಗಳಲ್ಲಿ ಕೆಡವಿದ ಸ್ಟೇನ್‌ ಚೆನ್ನೈಗೆ ಘಾತಕವಾಗಿ ಪರಿಣಮಿಸಿದರು. ಆದರೆ ಧೋನಿ ಅವರ ಸಾಹಸದ ಬ್ಯಾಟಿಂಗಿನಿಂದಾಗಿ ಚೆನ್ನೈ ಗೆಲ್ಲುವ ಸನಿಹಕ್ಕೆ ಬಂತು. ಅಂತಿಮ ಓವರಿನಲ್ಲಿ ತಂಡ ಗೆಲ್ಲಲು 26 ರನ್‌ ಗಳಿಸಬೇಕಿತ್ತು. ಮೊದಲ ಐದು ಎಸೆತಗಳಲ್ಲಿ ಧೋನಿ ಮೂರು ಸಿಕ್ಸರ್‌ ಸಹಿತ 24 ರನ್‌ ಕಸಿದರು. ಅಂತಿಮ ಎಸೆತದಲ್ಲಿ 2 ರನ್‌ ಬೇಕಿತ್ತು. ಆದರೆ ಶಾದೂಲ್‌ ಠಾಕುರ್‌ ರನೌಟ್‌ ಆಟ ಕಾರಣ ಚೆನ್ನೈ ಸೋಲು ಕಾಣುವಂತಾಯಿತು.

ಆರ್‌ಸಿಬಿ ಸರದಿಯಲ್ಲಿ ಆರಂಭಕಾರ ಪಾರ್ಥಿವ್‌ ಪಟೇಲ್‌ ಅವರ ಅರ್ಧ ಶತಕ ಹೊರತುಪಡಿಸಿದರೆ ಉಳಿದವರ್ಯಾರಿಂದಲೂ ದೊಡ್ಡ ಕೊಡುಗೆ ಸಂದಾಯವಾಗಲಿಲ್ಲ. 16ನೇ ಓವರ್‌ ತನಕ ಚೆನ್ನೈ ದಾಳಿ ನಿಭಾಯಿಸಿ ನಿಂತ ಪಾರ್ಥಿವ್‌ 37 ಎಸೆತಗಳಿಂದ 53 ರನ್‌ ಹೊಡೆದರು (2 ಬೌಂಡರಿ, 4 ಸಿಕ್ಸರ್‌). ಕಳೆದ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದ ನಾಯಕ ವಿರಾಟ್‌ ಕೊಹ್ಲಿ ಇಲ್ಲಿ ಕೇವಲ 9 ರನ್ನಿಗೆ ಔಟಾದರು.

ಎಬಿ ಡಿ ವಿಲಿಯರ್ ಆಟ 25 ರನ್ನಿಗೆ ನಿಂತಿತು (19 ಎಸೆತ, 3 ಬೌಂಡರಿ, 1 ಸಿಕ್ಸರ್‌). ಅಕ್ಷದೀಪ್‌ ನಾಥ್‌ ನಿಧಾನ ಗತಿಯಲ್ಲಿ ಆಡಿ 24 ರನ್‌ ಮಾಡಿದರು. ಇವರಿಬ್ಬರ ವಿಕೆಟ್‌ ರವೀಂದ್ರ ಜಡೇಜ ಪಾಲಾಯಿತು. ಇಬ್ಬರೂ ಡು ಪ್ಲೆಸಿಸ್‌ಗೆ ಕ್ಯಾಚ್‌ ನೀಡಿದರು. ಮಾರ್ಕಸ್‌ ಸ್ಟೋಯಿನಿಸ್‌ ಆಟದಲ್ಲೂ ಬಿರುಸಿರಲಿಲ್ಲ. 14 ರನ್ನಿಗೆ 13 ಎಸೆತ ತೆಗೆದುಕೊಂಡರು. ಮೊಯಿನ್‌ ಅಲಿ ಬಿರುಸಿನ ಆಟಕ್ಕಿಳಿದರೂ ಇನ್ನಿಂಗ್ಸ್‌ ಬೆಳೆಸಲು ಸಾಧ್ಯವಾಗಲಿಲ್ಲ. 16 ಎಸೆತಗಳಿಂದ 26 ರನ್‌ ಮಾಡಿ (5 ಬೌಂಡರಿ) ಬ್ರಾವೋಗೆ ವಿಕೆಟ್‌ ಒಪ್ಪಿಸಿದರು. ಚೆನ್ನೈ ಪರ ದೀಪಕ್‌ ಚಹರ್‌, ರವೀಂದ್ರ ಜಡೇಜ ಮತ್ತು ಡ್ವೇನ್‌ ಬ್ರಾವೊ ತಲಾ 2 ವಿಕೆಟ್‌ ಉರುಳಿಸಿದರು.

ರಾಯಲ್‌ ಚಾಲೆಂಜರ್ ಬೆಂಗಳೂರು
ಪಾರ್ಥಿವ್‌ ಪಟೇಲ್‌ ಸಿ ವಾಟ್ಸನ್‌ ಬಿ ಬ್ರಾವೊ 53
ವಿರಾಟ್‌ ಕೊಹ್ಲಿ ಸಿ ಧೋನಿ ಬಿ ಚಹರ್‌ 9
ಎಬಿ ಡಿ ವಿಲಿಯರ್ ಸಿ ಡು ಪ್ಲೆಸಿಸ್‌ ಬಿ ಜಡೇಜ 25
ಅಕ್ಷದೀಪ್‌ ನಾಥ್‌ ಸಿ ಡು ಪ್ಲೆಸಿಸ್‌ ಬಿ ಜಡೇಜ 24
ಮಾರ್ಕಸ್‌ ಸ್ಟೋಯಿನಿಸ್‌ ಸಿ ಶೋರಿ ಬಿ ತಾಹಿರ್‌ 14
ಮೊಯಿನ್‌ ಅಲಿ ಸಿ ಠಾಕೂರ್‌ ಬಿ ಬ್ರಾವೊ 26
ಪವನ್‌ ನೇಗಿ ಸಿ ರಾಯುಡು ಬಿ ಚಹರ್‌ 5
ಉಮೇಶ್‌ ಯಾದವ್‌ ಔಟಾಗದೆ 1
ಡೇಲ್‌ ಸ್ಟೇನ್‌ ಔಟಾಗದೆ 0
ಇತರ 4
ಒಟ್ಟು (7 ವಿಕೆಟಿಗೆ) 161
ವಿಕೆಟ್‌ ಪತನ: 1-11, 2-58, 3-99, 4-124, 5-126, 6-150, 7-160.
ಬೌಲಿಂಗ್‌:
ದೀಪಕ್‌ ಚಹರ್‌ 4-0-25-2
ಶಾದೂಲ್‌ ಠಾಕೂರ್‌ 4-0-40-0
ರವೀಂದ್ರ ಜಡೇಜ 4-0-29-2
ಡ್ವೇನ್‌ ಬ್ರಾವೊ 4-0-34-2
ಇಮ್ರಾನ್‌ ತಾಹಿರ್‌ 4-0-31-1

ಚೆನ್ನೈ ಸೂಪರ್‌ ಕಿಂಗ್ಸ್‌
ಶೇನ್‌ ವಾಟ್ಸನ್‌ ಸಿ ಸ್ಟೋಯಿನಿಸ್‌ ಬಿ ಸ್ಟೇನ್‌ 5
ಫಾ ಡು ಪ್ಲೆಸಿಸ್‌ ಸಿ ಡಿ ವಿಲಿಯರ್ ಬಿ ಯಾದವ್‌ 5
ಸುರೇಶ್‌ ರೈನಾ ಬಿ ಸ್ಟೇನ್‌ 0
ಅಂಬಾಟಿ ರಾಯುಡು ಬಿ ಚಾಹಲ್‌ 29
ಕೇದಾರ್‌ ಜಾಧವ್‌ ಸಿ ಡಿ ವಿಲಿಯರ್ ಬಿ ಯಾದವ್‌ 9
ಎಂ.ಎಸ್‌. ಧೋನಿ ಔಟಾಗದೆ 84
ರವೀಂದ್ರ ಜಡೇಜ ರನೌಟ್‌ 11
ಡ್ವೇನ್‌ ಬ್ರಾವೊ ಸಿ ಪಾರ್ಥಿವ್‌ ಬಿ ಸೈನಿ 5
ಶಾದೂìಲ್‌ ಠಾಕುರ್‌ ರನೌಟ್‌ 0
ಇತರ 12
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 160
ವಿಕೆಟ್‌ ಪತನ: 1-6, 2-6, 3-17, 4-28, 5-83, 6-108, 7-136, 8-160
ಬೌಲಿಂಗ್‌:
ಡೇಲ್‌ ಸ್ಟೇನ್‌ 4-0-29-2
ನವದೀಪ್‌ ಸೈನಿ 4-0-24-1
ಉಮೇಶ್‌ ಯಾದವ್‌ 4-0-47-2
ಪವನ್‌ ನೇಗಿ 1-0-7-0
ಮಾರ್ಕಸ್‌ ಸ್ಟೋಯಿನಿಸ್‌ 3-0-20-0
ಯಜುವೇಂದ್ರ ಚಾಹಲ್‌

ಟಾಪ್ ನ್ಯೂಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.