ಕಬ್ಬು ಬೆಳೆಗಾರರ ಬಾಕಿ ನೀಡಲು ಕಾರ್ಖಾನೆಗಳಿಗೆ ನೋಟಿಸ್: ಸಚಿವ ಮುನೇನಕೊಪ್ಪ
Team Udayavani, Oct 5, 2021, 11:12 AM IST
ಬೆಂಗಳೂರು: ರೈತರು ಕಬ್ಬು ಬೆಳೆಗಾರರಿಗೆ ಬಾಕಿ ಮೊತ್ತ ಪಾವತಿ ವಿಚಾರಕ್ಕೆ ಬೆಳಗಾವಿಯಲ್ಲಿ ಹಾಗೂ ಬೆಂಗಳೂರಿನಲ್ಲಿ ಸಭೆ ನಡೆಸಿದ್ದೇವೆ. ಮಾಲೀಕರು ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇವೆ ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಹೇಳಿದರು.
ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರೈತರಿಗೆ ಬಾಕಿ ಇರುವ ಹಣ ನೀಡಲು ಸೂಚನೆ ನೀಡಲಾಗಿತ್ತು. ಈ ವರ್ಷ 42.17 ಕೋಟಿ ರೂ ಮೊತ್ತ ಬಾಕಿಯಿತ್ತು. ಕಾರ್ಖಾನೆಗಳು ಮೂರು ದಿನಗಳ ಒಳಗಾಗಿ 26.26 ಕೋಟಿ ಜಮೆ ಮಾಡಿವೆ. ಇನ್ನೂ ಪಾವತಿ ಆಗದ 15.91 ಕೋಟಿ ರೂ. ಬಾಕಿಯಿದೆ ಎಂದರು.
ಇದನ್ನೂ ಓದಿ:ಪೆಂಡೋರಾ ತನಿಖಾ ವರದಿ:ಅನಿಲ್ ಹೆಸರಲ್ಲಿ 9,600 ಕೋ.ರೂ. ಆಸ್ತಿ, ತೆಂಡೂಲ್ಕರ್ ಗೌಪ್ಯ ಕಂಪೆನಿ
ಬಸವೇಶ್ವರ ಶುಗರ್ಸ್ 9.50 ಕೋಟಿ, ಕೋರ್ ಗ್ರೀನ್ ಶುಗರ್ಸ್ ಕಾರ್ಖಾನೆಯಿಂದ 6.41 ಬಾಕಿ ಇದೆ. ಈ ಕಾರ್ಖಾನೆಗಳಿಗೆ ವಸೂಲಾತಿಗೆ ನೋಟಿಸ್ ನೀಡಲಾಗಿದೆ. ಹೀಗಾಗಿ ನಾಡಿನ ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ರೈತರ ಬಿಲ್ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಹೇಳಿದರು.