ಗ್ರಾಮ ಸುಭಿಕ್ಷೆಗಾಗಿ ವಿಶೇಷ ಪೂಜೆ, ಭಜನೆ
Team Udayavani, Jun 2, 2019, 11:31 AM IST
ಹೆಬ್ರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ಹೆಬ್ರಿ ವಲಯದ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಮಳೆ ಹಾಗೂ ಗ್ರಾಮದ ಸುಭೀಕ್ಷೆಗಾಗಿ ದೇವರಿಗೆ ವಿಶೇಷ ಪೂಜೆ, ಭಜನೆ ಮೇ 31ರಂದು ನಡೆದವು.
ಅರ್ಧನಾರೀಶ್ವರ ದೇವರ ಮತ್ತು ಬ್ರಹ್ಮಬೈದರ್ಕಳ ಗರಡಿಯ ಎಲ್ಲ ದೈವ ಶಕ್ತಿಗಳು ಮತ್ತು ವರುಣ ದೇವನನ್ನು ಈ ಸಂದರ್ಭ ಸಾಮೂಹಿಕವಾಗಿ ಪ್ರಾರ್ಥಿಸ ಲಾಯಿತು.
ಈ ಸಂದರ್ಭ ಬಚ್ಚಪ್ಪು ಶ್ರೀ ದುರ್ಗಾ ಪರಮೇಶ್ವರಿ ಗದ್ದುಗೆ ಅಮ್ಮನವರ ಭಜನ ಮಂಡಳಿ ಮತ್ತು ಹೆಬ್ರಿ ಅನಂತ ಶ್ರೀ ಮಹಿಳಾ ಭಜನ ಮಂಡಳಿ ಇವರಿಂದ ಕುಣಿತ ಭಜನೆ ನಡೆಯಿತು.
ಹೆಬ್ರಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ವಲಯದ ಮೇಲ್ವಿಚಾರಕ ಪ್ರವೀಣ್, ವಲಯದ ಅಧ್ಯಕ್ಷ ಮುದ್ದು ಕೃಷ್ಣ, ಭಜನ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಉಪಸ್ಥಿತರಿದ್ದರು.