‘ತರಂಗ’ ವಾರಪತ್ರಿಕೆಯ ಸಂಪಾದಕಿ ಡಾ| ಯು. ಬಿ. ರಾಜಲಕ್ಷ್ಮೀ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
Team Udayavani, Oct 31, 2021, 7:50 PM IST
ಉಡುಪಿ: ಮಣಿಪಾಲ ಸಮೂಹದ “ತರಂಗ’ ವಾರಪತ್ರಿಕೆಯ ಸಂಪಾದಕಿ ಡಾ| ಯು.ಬಿ. ರಾಜಲಕ್ಷ್ಮೀ ಅವರಿಗೆ 2020-21ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.
ರಾಜಲಕ್ಷ್ಮೀಯವರು 38 ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಹಂಪಿ ವಿ.ವಿ.ಯಿಂದ ಡಿ.ಲಿಟ್ ಪಡೆದಿರುವ ಇವರು ಕನ್ನಡ ಪತ್ರಿಕಾರಂಗದಲ್ಲಿ ಡಿ.ಲಿಟ್ ಪಡೆದ ಮೊದಲ ಪತ್ರಕರ್ತೆ. 1983ರಿಂದ 87ರ ವರೆಗೆ ಮುಂಗಾರು, ಹೊಸದಿಗಂತ, ಟೈಮ್ಸ್ ಆಫ್ ಡೆಕ್ಕನ್ ದಿನ ಪತ್ರಿಕೆಗಳ ವರದಿಗಾರ್ತಿಯಾಗಿದ್ದರು. 1987ರಲ್ಲಿ ತರಂಗ ವಾರಪತ್ರಿಕೆಯ ಉಪಸಂಪಾದಕಿಯಾಗಿ ಸೇರ್ಪಡೆಗೊಂಡು 2002ರಲ್ಲಿ ಸಹಾಯಕ ಸಂಪಾದಕಿ, 2004ರಿಂದ ಕಾರ್ಯನಿರ್ವಾಹಕ ಸಂಪಾದಕಿ, ಬಳಿಕ ಸಂಪಾದಕಿಯಾದರು.
ಹಿರಿಯ ಸಾಹಿತಿ ಕೊರಡ್ಕಲ್ ಶ್ರೀನಿವಾಸ ರಾವ್ – ಜೀವನಚರಿತ್ರೆ, “ಉಡುಪಿ ಅಡುಗೆ’, “ನೂಪುರ’ ನುಡಿಚಿತ್ರಗಳ ಮಣಿಗೆಜ್ಜೆ, “ಶಂಖನಾದ’ ಕ್ಷೇತ್ರದರ್ಶನ, “ಕನ್ನಡದ ಆಯ್ದ ವಾರಪತ್ರಿಕೆಗಳಲ್ಲಿ ನುಡಿಚಿತ್ರ: ಒಂದು ಗುಣಾತ್ಮಕ ಅಧ್ಯಯನ’- ಡಾಕ್ಟರೇಟ್ ಪಡೆದ ಸಂಶೋಧನ ಕೃತಿ, “ವಾರಪತ್ರಿಕೆಗಳಲ್ಲಿ ನುಡಿಚಿತ್ರ’ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.
ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ರಂಗಭೂಮಿ, ಹಾರ್ಮೋನಿಯಂ, ವಯೋಲಿನ್, ವೀಣಾವಾದನದಲ್ಲಿ ಪರಿಣತಿ ಹೊಂದಿರುವ ರಾಜಲಕ್ಷ್ಮೀ ಅವರು ಮಂಗಳೂರು ಆಕಾಶವಾಣಿಯ ಬಿ ಹೈಗ್ರೇಡ್ ನಾಟಕ ಕಲಾವಿದೆಯಾಗಿದ್ದಾರೆ.ಮಾಧ್ಯಮ ಅಕಾಡೆಮಿ ಸಹಿತ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ನೂರಾರು ಅಧ್ಯಯನಪೂರ್ಣ ಲೇಖನಗಳು “ತರಂಗ’ ಸಹಿತ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
”ರಾಜ್ಯೋತ್ಸವ ಪ್ರಶಸ್ತಿಯ ಗೌರವ “ತರಂಗ’ದ ಓದುಗರು, ಲೇಖಕರು, ಸಹೋದ್ಯೋಗಿಗಳು ವಿಶೇಷವಾಗಿ ನನ್ನನ್ನು ಗುರುತಿಸಿ ಬೆಳೆಸಿ ಜವಾಬ್ದಾರಿ ಕೊಟ್ಟ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ, ಸಂಸ್ಥೆಯ ಆಡಳಿತ ಮಂಡಳಿ, ನನಗೆ ಕೆಲಸ ಕೊಟ್ಟ ಆಗಿನ ಸಂಪಾದಕ ಸಂತೋಷಕುಮಾರ್ ಗುಲ್ವಾಡಿ, ನನ್ನನ್ನು ತಿದ್ದಿತೀಡಿದ ತಾಯಿ ದಿ| ಬಿ.ವನಜಾಕ್ಷಿಯವರಿಗೆ ಸಮರ್ಪಿಸುತ್ತಿದ್ದೇನೆ.”
-ಡಾ| ಯು.ಬಿ. ರಾಜಲಕ್ಷ್ಮೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ