ರಸ್ತೆಗೆ ಬೀಳುವ ಸ್ಥಿತಿಯಲ್ಲಿದೆ ಮರ-ವಿದ್ಯುತ್ ಕಂಬ
ಆತಂಕದಲ್ಲಿಯೇ ಸ್ಥಳೀಯರ ಸಂಚಾರ
Team Udayavani, May 9, 2019, 6:03 AM IST
ಕಾರ್ಕಳ: ಮುರತ್ತಂಗಡಿ – ಇರ್ವತ್ತೂರು ಸಂಪರ್ಕಿಸುವ ಕುಕ್ಕೆಟ್ಟೆ ಎಂಬಲ್ಲಿ ರಸ್ತೆ ಬದಿ ಮರಗಳು ಹಾಗೂ ವಿದ್ಯುತ್ ಕಂಬ ಬೀಳುವಂತಿದೆ. ಮರ ಬಿದ್ದಲ್ಲಿ ವಿದ್ಯುತ್ ತಂತಿ ಮೇಲೆಯೇ ಬೀಳುವ ಸಾಧ್ಯತೆ ಅಧಿಕವಾಗಿದೆ.
ಮುರತ್ತಂಗಡಿಯಿಂದ ಇರ್ವತ್ತೂರು ಜಂಕ್ಷನ್ ವರೆಗಿನ ಸುಮಾರು 3.5 ಕಿ.ಮೀ. ರಸ್ತೆಯು ಸಿಆರ್ಎಫ್ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 5 ಕೋಟಿ ರೂ. ಅನುದಾನದಲ್ಲಿ ರಸ್ತೆ ಅಗಲೀಕರಣದೊಂದಿಗೆ ಕಾಂಕ್ರೀಟೀಕರಣ ಗೊಳ್ಳುತ್ತಿದೆ. ಈ ಪ್ರದೇಶದಲ್ಲಿ ಏರಿನ ರಸ್ತೆ ತಗ್ಗಿಸಲಾಗಿದೆ. ಈ ವೇಳೆ ರಸ್ತೆಯಂಚಿನ ಮರಗಳು, ವಿದ್ಯುತ್ ಕಂಬ ಅಪಾಯಕ್ಕೆ ಎಡೆಮಾಡಿದೆ.
ಆಮೆಗತಿ ಕಾಮಗಾರಿ
ಟೆಂಡರ್ ನಿಯಮಾನುಸಾರ 3.5 ಕಿ.ಮೀ. ರಸ್ತೆ ಅಭಿವೃದ್ಧಿಗೊಳಿಸಲು 6 ತಿಂಗಳು ಕಾಲಾವಕಾಶವಿದೆ.
ಆದರೆ, ಗುತ್ತಿಗೆದಾರರು 1 ವರ್ಷವಾದರೂ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ.
ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಇಲ್ಲಿನ ಜನತೆ ರೋಸಿಹೋಗಿದ್ದಾರೆ.