ಈಚಲು ಮರದ ಗೀಜಗ ಪಕ್ಷಿಗಳು,ಅಡಿಕೆ ತೋಟದ ಏಡಿಗಳು


Team Udayavani, Jul 1, 2018, 1:38 PM IST

gubbi.jpg

ಆಗೆಲ್ಲ ಅಂತರ್ಜಾಲ, ಆ್ಯಪ್‌, ಗೂಗಲ್‌, ಅನಿಮಲ್‌ ಪ್ಲಾನೆಟ್‌ ಇಲ್ಲದಿದ್ದ ಸಮಯ. ಹೊಸಪಕ್ಷಿ, ಚಿಟ್ಟೆ, ಗಿಡಗಳ 
ಹೆಸರು ತಿಳಿದುಕೊಳ್ಳಲು ಬಹು ಕಷ್ಟವಾಗುತ್ತಿತ್ತು. ನಿಸರ್ಗದ ಬಗ್ಗೆ ಪುಸ್ತಕಗಳೂ ವಿರಳ. ಜೇಬಿನಲ್ಲಿರುತ್ತಿದ್ದ ಪುಟ್ಟ ಟಿಪ್ಪಣಿ ಪುಸ್ತಕದಲ್ಲಿ ಅವುಗಳ ಬಣ್ಣ, ಗಾತ್ರ, ಅಳತೆ, ಆಕಾರವನ್ನೆಲ್ಲ ಬರೆದಿಟ್ಟುಕೊಂಡು ಆನಂತರ ಪರಿಣತರನ್ನು ಕೇಳಿ ಕಲಿಯಬೇಕಾಗಿತ್ತಷ್ಟೆ.

“ಯಾವುದಾದರೂ ಅಸಾಂಪ್ರದಾಯಿಕ ವೃತ್ತಿಯನ್ನು ಕೈಗೊಂಡರೆ ಆ ವ್ಯಕ್ತಿಗೆ ಆ ವಿಷಯದಲ್ಲಿ ಆಸಕ್ತಿ ಬಂದದ್ದು ಹೇಗೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಕುತೂಹಲ ಹುಟ್ಟಿಸುವ ವಿಷಯ. ನನಗೂ ಹಲವರು ಕೇಳುತ್ತಾರೆ: “ನಿಮಗೆ ವನ್ಯಜೀವಿಗಳ ಬಗ್ಗೆ ಆಸಕ್ತಿ ಬಂದದ್ದು ಹೇಗೆ?’ ಎಂದು. ಎಲ್ಲೋ ಹೇಗೋ ನನಗೆ ನಿಸರ್ಗದ ಬಗ್ಗೆ ಆಸಕ್ತಿ, ಅಭಿರುಚಿ ಪ್ರಾರಂಭವಾಯಿತು. ಅದಕ್ಕೆ ಕಾರಣ ಹುಡುಕುವುದು ಸೂಕ್ತವೆನಿಸುತ್ತದೆ. 

ನಾನು ಹಲವಾರು ವರ್ಷ ಸ್ಕೌಟ್ಸ್‌ ಆಂದೋಲನದಲ್ಲಿ ಸಕ್ರಿಯನಾಗಿ¨ªೆ. ಸ್ಕೌಟ್ಸ್‌ ಸಂಸ್ಥೆಯಲ್ಲಿ ಹೊರಾಂಗಣ ಚಟುವಟಿ ಕೆಗಳಿಗೆ ಒತ್ತುಕೊಡುತ್ತಾರೆ. ನಿಸರ್ಗದಲ್ಲಿ ಸಮಯ ಕಳೆಯಲು ಸಾಕಷ್ಟು ಅವಕಾಶ ಸಿಗುತ್ತದೆ ಮತ್ತು ಅದಕ್ಕೆ ಅವರು ಪ್ರೋತ್ಸಾ ಹಿಸುತ್ತಾರೆ ಕೂಡ. ಇದು ವನ್ಯಜೀವಿಗಳತ್ತ ನನಗೆ ಆಸಕ್ತಿ ಬೆಳೆಯು ವಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ಅದರೊಡನೆ ನಾನು ಮರೆತಿದ್ದ ಅಥವಾ ಗಮನಕೊಡದಿದ್ದ ಇನ್ನೊಂದು ವಿಚಾರವಿದೆ. ಅದು ನಾವು ಗ್ರಾಮೀಣ ಪ್ರದೇಶದಲ್ಲಿ ಕಳೆದ ಕ್ಷಣಗಳು. ಆ ಅನುಭವ ಕೂಡ ನನಗೆ  ನಿಸರ್ಗದ ಬಗ್ಗೆ ಮತ್ತು ಚಿಕ್ಕಪುಟ್ಟ ವನ್ಯಜೀವಿಗಳ ಬಗ್ಗೆ ಸಾಕಷ್ಟು ತಿಳಿಸಿಕೊಟ್ಟಿದೆ. ಇದನ್ನು ನಾನು ಮರೆತಿದ್ದರೂ ನನ್ನ ಅಂತರಾಳದಲ್ಲಿದ್ದು, ಇತ್ತೀಚೆಗೆ ನಿಸರ್ಗ ಶಿಕ್ಷಣದ ಬಗ್ಗೆ ಯೋಚಿಸುತ್ತಿ¨ªಾಗ ಮತ್ತೆ ನನ್ನ ಮನದಾಳದಿಂದ ಪುಟಿದೆದ್ದಿತು. ಹೆಚ್ಚು ಹೆಚ್ಚು ಯೋಚಿಸಿದಂತೆ ಮನದಾಳದಿಂದ ನಿಸರ್ಗದ ಬಗ್ಗೆ ನಾನು ಕಲಿಯಲು ಸಹಕರಿಸಿದ ಎಷ್ಟೋ ವಿಚಾರಗಳು ಹೊರಬಂದವು. ಕೆಲವು ಬಹು ಸಾಧಾರಣ ಘಟನೆಗಳಾದರೂ ಅವು ನಮ್ಮ ಜೀವನದಲ್ಲಿ ಎಷ್ಟೋ ವಿಚಾರಗಳನ್ನು ಕಲಿಸಿರಬಹುದು ಮತ್ತು ನಿಸರ್ಗ, ವನ್ಯಜೀವಿಗಳ ಬಗೆಗಿನ ಕಲಿಕೆಗೆ ಬೇಕಾದ ಕೌತುಕತೆ ಮತ್ತಿತರ ಗುಣಗಳನ್ನು ಬೆಳಸಿರಬಹುದು. 

ನಮ್ಮ ತಾಯಿಯ ಊರು ಮೈಸೂರು ಜಿÇÉೆ, ಕೆ.ಆರ್‌.ನಗರ ತಾಲೂಕಿನ ಮಿರ್ಲೆಸಾಲಿ ಗ್ರಾಮ. 70 ಮತ್ತು 80ರ ದಶಕಗಳಲ್ಲಿ ಆ ಪ್ರದೇಶಕ್ಕೆ ದೊಡ್ಡ ಊರಾದ ಮಿರ್ಲೆಯ ಹೆಸರು ಅಲ್ಲಿನ ಸುತ್ತಮುತ್ತಲ ಹಲವಾರು ಹಳ್ಳಿಗಳಿಗೆ ತೋರುಗಂಬವಾಗಿತ್ತು. ಅದಕ್ಕೆ ಸಾಲಿಗ್ರಾಮಕ್ಕೆ ಮಿರ್ಲೆಯ ಹೆಸರು ಅಷ್ಟು ಅಂಟಿಕೊಂಡಿರುವುದು. ಹಲವಾರು ವರ್ಷಗಳವರೆಗೆ ನಾನು ವರ್ಷದಲ್ಲಿ ಸುಮಾರು ಮೂರು ತಿಂಗಳುಗಳನ್ನು ಸಾಲಿಗ್ರಾಮದಲ್ಲಿ ಕಳೆದಿದ್ದೇನೆ. ಆ ದಿನಗಳು ಹತ್ತು ಜನ್ಮಗಳಿಗಾಗುವಷ್ಟು ನಿಸರ್ಗ ಪಾಠವನ್ನು ಕಲಿಸಿವೆ, ಅದಕ್ಕಿಂತ ಹೆಚ್ಚಾಗಿ ಅದರ ಬಗ್ಗೆ ಪ್ರೀತಿ ಬೆಳೆಸಿದೆ. ತಾತನ ಒಂದೂವರೆ ಎಕರೆ ಹೊಲ ನೋಡಿಕೊಳ್ಳುವ ಬೋರನ ಪ್ರಾಣ ತಿಂದು ಎತ್ತಿನ ಗಾಡಿಯಲ್ಲಿ ಗುಡಲಾರೆಗೆ ಹೋದರೆ ಅಲ್ಲಿನ ಅರಳಿಮರ, ಕಲ್ಲು ತುಂಬಿದ್ದ ಒಣಹೊಲದ ಮಧ್ಯದಿಂದ ಪುರ್ರೆಂದು ಹಾರಿಹೋಗುತ್ತಿದ್ದ ನೆಲ ಗುಬ್ಬಿಗಳು ಇಂದಿಗೂ ಮನದಲ್ಲಿವೆ. ಆ ಪಕ್ಷಿಗಳಿಗೆ ಇಂಗ್ಲಿಷ್‌ನಲ್ಲಿ “ಲಾರ್ಕ್‌’ ಎನ್ನುತ್ತಾರೆಂಬುದನ್ನು ಹಲವು ವರ್ಷಗಳ ನಂತರ ಅರಿತೆ.

ಊರಿನ ಮುಂಭಾಗದಲ್ಲಿನ ಕೆರೆಯಲ್ಲಿದ್ದ ನೀಲಿ ಮೈಬಣ್ಣದ, ಕೆಂಪು ಕೊಕ್ಕಿನ, ತಾವರೆ ಎಲೆಯ ಮೇಲೆ ಗಾಜಿನ ಮೇಲೆ ಕಾಲಿಟ್ಟ ಹಾಗೆ ಓಡಾಡುತ್ತಿದ್ದ ದಪ್ಪ ಪಕ್ಷಿಗಳನ್ನು ಕೆನ್ನೀಲಿ ನೀರುಕೋಳಿ (ಪರ್ಪಲ್‌ ಮೂಹೆìನ್‌) ಎನ್ನುತ್ತಾರೆಂದು ಪಕ್ಷಿವೀಕ್ಷಣೆ ಕಲಿಯಲು ಪ್ರಾರಂಭಿಸಿದಾಗ ತಿಳಿದುಕೊಂಡೆ. ಆ ಕೆರೆಯಲ್ಲಿ ಆ ಪಕ್ಷಿಗಳನ್ನು ನೋಡುವುದೇ ಚೆಂದ.  ದೊಡ್ಡಮ್ಮನ ಮನೆಯ ಹಿತ್ತಲಲ್ಲಿದ್ದ ಬಾವಿಯ ಒಳಸುತ್ತಿನಲ್ಲಿ ಹಾಕಿದ್ದ ಕಲ್ಲುಗಳ ಮೇಲೆ ಬೆಳೆದಿರುತ್ತಿದ್ದ ಅಚ್ಚಹಸಿರಿನ ಪಾಚಿ ಇಂದಿಗೂ ನನಗೆ ಅತ್ಯಂತ ಪ್ರಿಯವಾದ ಗಿಡ. ನೀರು, ಮಳೆಯನ್ನು  ನೆನೆಪಿಸುವ ಹೂ ಬಿಡದ ಪುಟ್ಟ, ಸುಂದರ ಗಿಡವಿದು. ಹತ್ತಿರದ ಹಂಪಾಪುರದಲ್ಲಿ ಚಿಕ್ಕಮ್ಮನ ಮನೆ. ಮನೆಯ ಸುತ್ತಮುತ್ತಲೆಲ್ಲ ಭತ್ತ ಮತ್ತು ಕಬ್ಬಿನ ಗ¨ªೆಗಳು. ಕಬ್ಬಿನ ಗ¨ªೆಯ ಮಧ್ಯೆ ಯಾರಿಗೂ ಸಿಗದ ಜಾಗಗಳಲ್ಲಿ, ವಿದ್ಯುತ್‌ ತಂತಿಗಳಿಗೆ  ಕಟ್ಟಿದ್ದ ಗೀಜಗದ ಗೂಡುಗಳು. ಎತ್ತರದ, ಚರ್ಮ ಹರಿಯುವ ಕಬ್ಬಿನ ಜÇÉೆಯ ಎಲೆಗಳ ಮಧ್ಯೆ ಮನುಷ್ಯ, ಹಾವಿನಂತಹ ವೈರಿಗಳು ತಲುಪದ ಜಾಗದಲ್ಲಿ ವಿದ್ಯುತ್‌ ತಂತಿಯಿಂದ ಜೋತಾಡುತ್ತಿದ್ದ ಸುಂದರ ಗೂಡುಗಳಿಗೆ ಬಂದು ಹೋಗುತ್ತಿದ್ದ ಕಂದು ಮತ್ತು ಹಳದಿ ಬಣ್ಣದ ಗೀಜಗಗಳನ್ನು ನೋಡುವುದೇ ಬಹು ಹರ್ಷದಾಯಕ.  ನಂತರದ ದಿನಗಳಲ್ಲಿ ಪಕ್ಷಿವೀಕ್ಷಣೆ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು, ಸ್ವಲ್ಪ ಅದು ಇದು ಕಲಿತ ಮೇಲೆ ನಮಗೆ ಗೊತ್ತಿರುವುದನ್ನು ಬೇರೆಯವರಿಗೆ ಕಲಿಸದಿದ್ದರೆ ಹೇಗೆಂದು ಅನಿಸಿ ಶಾಲಾ ಮಕ್ಕಳಿಗೆ ನಿಸರ್ಗ ಶಿಬಿರಗಳು, ಪಾಠಗಳು ಪ್ರಾರಂಭವಾದವು. ತುಮಕೂರಿನ ಕೆಲವು ಶಾಲೆಗಳಲ್ಲಿ ನಮ್ಮ ಚಟುವಟಿಕೆ ಪ್ರಾರಂಭವಾಯಿತು. ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ತಂಡದ ನಮ್ಮ ನಾಯಕ “ಆಟೋ ಶಿವು’ ಕರೆದÇÉೆಲ್ಲ ತನ್ನ ಆಟೋದಲ್ಲಿ ಮಕ್ಕಳನ್ನು ತುಂಬಿಕೊಂಡು ಹೊರಡಲು ತಯಾರಾಗುತ್ತಿದ್ದರು. ಒಂದು ಆಟೋದಲ್ಲಿ ಎಷ್ಟು ಮಕ್ಕಳಿರುತ್ತಿದ್ದರೆಂದರೆ ಈಗ ಮಕ್ಕಳ ಹಕ್ಕುಗಳ ಕಾಯ್ದೆಗಳಡಿ ಮೊಕ್ಕದ್ದಮೆ ದಾಖಲಾಗುತ್ತಿತ್ತೇನೋ! ಊರಿನ ಸುತ್ತಮುತ್ತಲ ಪಾಲಸಂದ್ರ, ಶೆಟ್ಟಿಹಳ್ಳಿ, ದೇವರಾಯನದುರ್ಗ, ಸಿದ್ಧಗಂಗೆ ಇನ್ನೂ ಹತ್ತಾರು ಹಳ್ಳಿಗಳನ್ನು ತಿರುಗಿ¨ªಾಯ್ತು. ಈ ಹಳ್ಳಿಗಳೆಲ್ಲ ಹಲವಾರು ನಿಸರ್ಗ ಪಾಠಗಳನ್ನು ಹೇಳಿಕೊಟ್ಟವು. ಭತ್ತದ ಗ¨ªೆ, ಅಡಿಕೆ ಮತ್ತು ಬಾಳೆ ತೋಟಗಳ ಮಧ್ಯೆಯಿರುವ ಪುಟ್ಟನೀರಿನ ಕಾಲುವೆಗಳಲ್ಲಿ ಓಡಾಡುತ್ತಿದ್ದ ಏಡಿಗಳ ಬಗ್ಗೆ ಇತ್ತೀಚೆಗಷ್ಟೇ ಸ್ವಲ್ಪ ತಿಳಿದುಕೊಂಡಿದ್ದೇನೆ. ಕುಟ್ರ ಪಕ್ಷಿಯ ಕೂಗು “ಶೆಟ್ರಾ ಕೊಟ್ರಾ’ ಅಂತ ಕೇಳುತ್ತದೆ ಎಂದು ವ್ಯಾಖ್ಯಾನಿಸಿ ಹೇಳಿದರೆ ಮಕ್ಕಳಿಗೆ ಭಾರಿ ಖುಷಿ. ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲು ನಾವೇ ಹಲವಾರು ಪುಸ್ತಕಗಳನ್ನು ಓದಿ ಹೊಸ ವಿಚಾರಗಳನ್ನು ತಿಳಿದುಕೊಂಡಿದ್ದಿದೆ. 

ಮಕ್ಕಳಿಗೆ ಹೇಳಿದರೆ ಸಾಕೆ? ಹಳ್ಳಿಯ ಜನರಿಗೆ ನಮ್ಮ ಜ್ಞಾನವನ್ನು ಪಸರಿಸಬಾರದೇ? ಸರಿ, ಸ್ನೇಹಿತರೊಬ್ಬರು ಕೊಟ್ಟಿದ್ದ ಆಗಿನ ಕಾಲಕ್ಕೆ ಬಹು ಆಧುನಿಕ ಸಲಕರಣೆಯಾಗಿದ್ದ ಸ್ಲೆ„ಡ್‌ ಪ್ರಾಜೆಕ್ಟರ್‌ ಒಂದನ್ನು ಅಣ್ಣನ ಲೂನಾಕ್ಕೆ ಕಟ್ಟಿಕೊಂಡು ಸಂಜೆಯ ವೇಳೆ ಹಳ್ಳಿಗಳಿಗೆ ಹೋಗಿ ಉಪದೇಶ ಮಾಡುವ ಕಾರ್ಯಕ್ರಮ ಪ್ರಾರಂಭವಾಯಿತು. “ಅದ್ಕಣÕರಿ ಸಾಮಿ, ರಾತ್ರಿ ಒತ್ತು ಹೊಲ್ಗುಳ್ಗೆ ಹಂದಿ, ನರಿ, ಕರಡಿ ಬತ್ತವಲ್ಲ ಅದ್ಕೆàನು ಮಾಡ್ತೀರಾ?’ ಅಂತ ಮುಖಕ್ಕೆ ಮಂಗಳಾರತಿ ಆದಾಗ ವನ್ಯಜೀವಿಗಳನ್ನು ಹಳ್ಳಿಯ ಜನ ಯಾವ ದೃಷ್ಟಿಕೋನದಲ್ಲಿ ನೋಡುತ್ತಾರೆಂಬ ಮಹತ್ವದ ಪಾಠಗಳನ್ನು ಕಲಿತೆವು. 

ಮನೆಯ ಹತ್ತಿರದಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಿದ್ದ ಮಾಜಿ ಪುರಸಭಾ ಸದಸ್ಯರಾದ ಲಕ್ಷಿ ¾àನರಸಿಂಹಯ್ಯ ಅವರ ಇನ್ನೊಂದು ವೃತ್ತಿಯಾದ ಬಾಡಿಗೆ ಸೈಕಲ್‌ ಅಂಗಡಿಯಲ್ಲಿ ಗಂಟೆಗೆ ಹದಿನೈದು ಪೈಸೆ ಲೆಕ್ಕದಲ್ಲಿ ಅಟ್ಲಾಸ್‌ ಸೈಕಲ್‌ ಬಾಡಿಗೆಗೆ ಪಡೆದು ಹೊರಟರೆ ಊರಿನಿಂದ ಸ್ವಲ್ಪ$ದೂರವಿದ್ದ ಸ್ವಾನಂದೇನಳ್ಳಿ, ಗೂಳೂರು, ಮೈದಾಳ, ಬಸ್ತಿಬೆಟ್ಟ ಇನ್ನಿತರ ಜಾಗಗಳಿಗೆ ಗಂಟೆಗಟ್ಟಲೆ ವಿಹಾರವಾಗುತ್ತಿತ್ತು. ಹಳ್ಳಿಯ ಸುತ್ತಮುತ್ತಲಿದ್ದ ವ್ಯವಸಾಯಕ್ಕೆ ಯೋಗ್ಯವಲ್ಲದ “ಖರಾಬು’ ಜಮೀನಿನಲ್ಲಿ ಬೆಳೆಯುತ್ತಿದ್ದ ಈಚಲು ಮರದ ಮುಳ್ಳು ಗರಿಗಳ ತುದಿಯಲ್ಲಿದ್ದ ಗೀಜಗ ಪಕ್ಷಿಗಳ ಗೂಡುಗಳು ಸ್ವಲ್ಪ ಗಾಳಿ ಬಂದರೂ ಹೊಯ್ದಾಡಿ, ಗೂಡುಗಳು ಕಿತ್ತು ಸೂತ್ರವಿಲ್ಲದೆ ಹಾರಿ ಹೋಗುವ ಗಾಳಿಪಟದ ಹಾಗೆ ತೊಯ್ದಾಡುತ್ತವೇನೋ ಎನಿಸುತ್ತಿತ್ತು. ಈಚಲುಮರಗಳಲ್ಲಿ ಹೆಂಡಕ್ಕಾಗಿ ಕಟ್ಟಿದ್ದ ಮಣ್ಣಿನ ಕುಡಿಕೆಗಳು ಸಹ ಆ ಮರಗಳ ಮುಖ್ಯ ಲಕ್ಷಣಗಳ ಒಂದು ಭಾಗವೇ ಆಗಿತ್ತು. 

ಅಡಿಕೆ ತೋಟ ಮತ್ತು ಹೊಲಗ¨ªೆಗಳ ಮಧ್ಯದಲ್ಲಿ ಮರಳು ತುಂಬಿದ, ಒಣಗಿದ, ನೀರಿನ ಕಾಲುವೆಗಳೆಲ್ಲ ಸೀಗೇಮೆಳೆಗಳಿಂದ ತುಂಬಿ, ಹಲವು ವನ್ಯಜೀವಿಗಳಿಗೆ ಮನೆಯಾಗಿದೆಯೆಂದು ತಿಳಿಯಿತು. ಅಲ್ಲಿ ಇರುತ್ತಿದ್ದ ಸಣ್ಣಗೆ, ಉದ್ದನೆಲೆಯ ಚಿಕ್ಕಮರಗಳನ್ನು, ಆ ಬೀಳಿನ ಮಧ್ಯೆ ಯಾಕೆ ಹೋಗುತ್ತೀರಿ ಎಂದು ಬೈದು, ಬೆಪ್ಪಾಲೆ ಎಂದು ಕರೆಯುತ್ತಾರೆಂದು ತೋಟದ ಮಾಲೀಕರು ಕೊಟ್ಟ ಜ್ಞಾನ ಈಗಲೂ ಈ ಮರವನ್ನು ಸುಲಭವಾಗಿ ಗುರುತಿಸಲು ಸಹಕಾರಿ ಯಾಗಿದೆ. ಸಂಜೆ ಕತ್ತಲಾದ ಮೇಲೆ ಟಾರ್ಚಿನ ಬೆಳಕಿನಲ್ಲಿ ಆ ಸೀಗೇ ಮೆಳೆಗಳ ಮಧ್ಯೆ ನಡೆದರೆ ಹೊಳೆಯುವ ಕಣ್ಣುಗಳ ಮೂಲಕ ತಾನೂ ಅಲ್ಲಿದ್ದೇನೆಂದು ತಿಳಿಸುತ್ತಿದ್ದ ಕಾಡುಪಾಪಗಳು ಅಷ್ಟು ವಿರಳವೇನಲ್ಲ ವೆಂದು ಅರಿತೆವು. ಹೆಚ್ಚಾಗಿ ಯಾರೂ ಹೋಗದ ಈ ಸಿಗೇಮೆಳೆಗಳ ಮೂಲಕ ಒಂದು ಗುಡ್ಡದಿಂದ ಇನ್ನೊಂದು ಗುಡ್ಡಗಳಿಗೆ ಚಿರತೆಗಳು ಹಾದು ಹೋಗಲು ಉಪಯೋಗಿಸುವ ಸಾಧ್ಯತೆಗಳೂ ಇವೆ. 

ಇನ್ನು ತೋಟಗಳ, ಹೊಲಗಳಲ್ಲಿರುವ ದೊಡ್ಡ ಬಾವಿಗಳು ಹತ್ತಾರು ಪ್ರಾಣಿಪಕ್ಷಿಗಳ ಜೀವಸೆಲೆ. ಬಾವಿಯಲ್ಲಿ ಬಾಗಿರುವ ಮರಗಳಿದ್ದರೆ ಅಲ್ಲಿ ಮತ್ತದೇ ಗೀಜಗಗಳ ಗೂಡು, ಬಾವಿಯ ಇಕ್ಕೆಲಗಳಲ್ಲಿ ಬೆಳೆದಿರುವ ಕುರುಚಲಿನಲ್ಲಿ ದರ್ಜಿ ಹಕ್ಕಿಗಳ ಕಲರವ, ಬಾಯಲ್ಲಿ ಹಸಿ ಹುಲ್ಲನ್ನು ಕಚ್ಚಿ, ಬ್ಯಾಲೆ ಹುಡುಗಿಯರು ರಿಬ್ಬನ್‌ ಹಿಡಿದು ನರ್ತಿಸುವ ಹಾಗೆ ಹಾರಿ ಬರುವ ಗುಬ್ಬಿಗಿಂತಲೂ ಚಿಕ್ಕದಿರುವ ರಾಟವಾಳ ಹಕ್ಕಿ.  

ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ ಹೊಲಗಳ ಬಳಿ ಹೈಸ್ಕೂಲ್‌ ವಯಸ್ಸಿನ ಹುಡುಗರು ಚಾವಿ ಬೆಂಕಿಪೆಟ್ಟಿಗೆಗಳಲ್ಲಿ ಹಿಡಿದಿಟ್ಟುಕೊಂಡಿರುತ್ತಿದ್ದ ಗಾಢ ಹಸಿರು ಮತ್ತು ಹಳದಿ ಬಣ್ಣದ, ಹೊಳಪು ಮೈಯ, ಸುಮಾರು ಎರಡರಿಂದ ಮೂರು ಇಂಚಿನ ದೊಡ್ಡ ಜೀರುಂಡೆಹುಳಗಳನ್ನು “ಜ್ಯೂಯಲ್‌ ಬೀಟಲ್‌’ ಎಂದು ಕರೆಯುತ್ತಾರೆಂದು ಅದನ್ನು ನೋಡಿದ ಎಷ್ಟೋ ವರ್ಷಗಳ ನಂತರ ತಿಳಿದುಕೊಂಡೆ. ಅದರ ಕಾಲಿಗೆ ಬಿಳಿದಾರ ಕಟ್ಟಿ ಅವುಗಳನ್ನು ಗಾಳಿಪಟದ ಹಾಗೆ ಹಾರಿಸಲು ಯತ್ನಿಸುತ್ತಿದ್ದ ಹುಡುಗರಿಗೆ ಪ್ರಾಣಿದಯೆಯ ಬಗ್ಗೆ ಒಂದೆರೆಡು ವಾಕ್ಯಗಳನ್ನು ಬೋಧಿಸುವುದು ಕೂಡ ಆಗುತ್ತಿತ್ತು.  

ಆಗೆಲ್ಲ ಅಂತರ್ಜಾಲ, ಆ್ಯಪ್‌, ಗೂಗಲ್‌, ಅನಿಮಲ್‌ ಪ್ಲಾನೆಟ್‌ ಇಲ್ಲದಿದ್ದ ಸಮಯ. ಹೊಸಪಕ್ಷಿ, ಚಿಟ್ಟೆ, ಗಿಡಗಳ ಹೆಸರು ಕಲಿಯಲು ಬಹು ಕಷ್ಟವಾಗುತ್ತಿತ್ತು. ನಿಸರ್ಗದ ಬಗ್ಗೆ ಪುಸ್ತಕಗಳೂ ವಿರಳ. ಜೇಬಿನಲ್ಲಿರುತ್ತಿದ್ದ ಪುಟ್ಟ ಟಿಪ್ಪಣಿ ಪುಸ್ತಕದಲ್ಲಿ ಅವುಗಳ ಬಣ್ಣ, ಗಾತ್ರ, ಅಳತೆ, ಆಕಾರವನ್ನೆಲ್ಲ ಬರೆದಿಟ್ಟುಕೊಂಡು ಆನಂತರ ಪರಿಣತರನ್ನು ಕೇಳಿ ಕಲಿಯಬೇಕಾಗಿತ್ತಷ್ಟೆ. ಈಗ, ಮನೆಯಲ್ಲಿ ಹತ್ತಾರು ವರ್ಷ ಬರೆದಿಟ್ಟ ಈ ಪುಟ್ಟ ಪುಸ್ತಕಗಳ ಸಣ್ಣ ಗ್ರಂಥಾಲಯವೇ ಇದೆ. ಇವೊಂದು ಮಾಹಿತಿಯ ಖಜಾನೆಯೇ ಆಗಿವೆ. ಎÇÉೆಲ್ಲಿ ಯಾವ್ಯಾವ ಪ್ರಾಣಿಪಕ್ಷಿಗಳನ್ನು ನೋಡಿದ್ದೇವೆಂಬ ದಾಖಲೆಗಳಿವೆ. ಇವೆಲ್ಲ ಕಳೆದುಹೋದ ದಿನಗಳ ಮತ್ತು ಆಧುನಿಕವಲ್ಲದ ಪ್ರಾಕೃತಿಕ ಚರಿತ್ರಾ (ನ್ಯಾಚುರಲ್‌ ಹಿಸ್ಟರಿ) ಕಥನಗಳು. ಅದ್ಯಾಕೋ, ದುರ್ಬೀನಿನಲ್ಲಿ ಪ್ರಾಣಿ, ಪಕ್ಷಿ ನೋಡಿದಷ್ಟು ನೆಮ್ಮದಿ, ಸಂತೋಷ, ಆಧುನಿಕ ಕ್ಯಾಮೆರಾಗಳಲ್ಲಿ ಬಹು ಸುಂದರ ಚಿತ್ರ ತೆಗೆದರೂ ಆಗುವುದಿಲ್ಲ. 

ಈಗ ಬಿಳಿ ಬಣ್ಣದ ಹೆಂಡವೂ ಇಲ್ಲ, ಹಳ್ಳಿಗಳ ಸುತ್ತಮುತ್ತ ಇರುತ್ತಿದ್ದ ಖರಾಬು ಜಮೀನೂ ಅಪರೂಪ, ಈಚಲು ಮರಗಳು ಕಾಣುವುದು ಬಹುವಿರಳ. ಇನ್ನೆಲ್ಲಿ ಗೀಜಗ ಪಕ್ಷಿಗಳ ಗೂಡುಗಳು? ಈಗ ಹಳ್ಳಿಗಳ ಕಡೆ ಚಾವಿ ಬೆಂಕಿ ಪೆಟ್ಟಿಗೆಯಲ್ಲಿ ಆ ದೊಡ್ಡ ಜೀರುಂಡೆಯನ್ನು ಹಿಡಿದಿಟ್ಟುಕೊಂಡು ಓಡಾಡುವ  ಹುಡುಗರೂ ಕಡಿಮೆ. ಬಹುಶಃ ಈಗವರನ್ನು ಕಂಡರೆ ಅರಣ್ಯ ಇಲಾಖೆಯವರು ಬಂಧಿಸಿದರೂ ಆಶ್ಚರ್ಯವಿಲ್ಲ. ಏನು ಮಾಡುವುದು ಸ್ವಾಮಿ ಕಾನೂನೇ ಹಾಗೆ. ದಾಖಲೆ ತಿರುಚಿ, ಸುಳ್ಳು ಮಾಹಿತಿ ನೀಡಿ ಹತ್ತಾರು ಎಕರೆ ಕಾಡು ಕಡಿದು ಅಭಿವೃದ್ಧಿಯ ಹೆಸರಿನಲ್ಲಿ ಯೋಜನೆಗಳನ್ನು ನಿರ್ಮಿಸಿದ ಪ್ರಭಾವಿ ವ್ಯಕ್ತಿಗಳಾ ಇವರು?  

ದಶಕದ ಹಿಂದೆ ಬೆಂಗಳೂರೆಂಬ ಮಹಾನಗರವನ್ನು ಸೇರಾಗಿದೆ. ಇನ್ನೆಲ್ಲಿ ಗೀಜಗದ ಗೂಡುಗಳಿರುವ ತೋಟಗಳು, ಗ¨ªೆಗಳು, ಜುಳು ಜುಳು ನೀರು ಹರಿಯುವ ಅಡಿಕೆ ತೋಟಗಳು, ಅದರಲ್ಲಿ ತಟ್ಟನೆ ಮಾಯವಾಗುವ ಏಡಿಗಳು? ಈಗನಿಸುತ್ತದೆ ಹೊಲ, ಗ¨ªೆ, ಅಡಿಕೆತೋಟ, ಸೀಗೇಮೆಳೆ, ಕುರುಚುಲು ಗುಡ್ಡಗಳೇ ನನ್ನ ಮೊದಲ ನಿಸರ್ಗಪಾಠದ ಶಾಲೆಗಳೆಂದು. ನಾವು ಉಪದೇಶ ನೀಡಲು ಹೋದ ಹಳ್ಳಿಗಳಲ್ಲಿ ಕೆಲವೊಮ್ಮೆ ಯಾಗ್ಗಮುಗ್ಗ ಬಯ್ದು ಮಾನವ-ವನ್ಯಜೀವಿ ಸಂಘರ್ಷದ ಮೊದಲ ಪಾಠಗಳನ್ನು ನಮಗೆ ಹೇಳಿಕೊಟ್ಟ ರೈತರು, ನಮಗೆ ವಿಜ್ಞಾನ ಕಲಿಸಿದ್ದಕ್ಕಿಂತ ಹೆಚ್ಚು ಪ್ರಾಪಂಚಿಕ ಜ್ಞಾನ ನೀಡಿದವರು. ಈಗ ಅದನ್ನು ಮಾನವ-ವನ್ಯಜೀವಿ ಹೊಂದಿಕೆಯೆಂಬ (ಹ್ಯೂಮನ್‌- ವೈಲ್ಡ್‌ ಲೈಫ್ ಇಂಟರಾಕ್ಷನ್‌)  ಹೊಸ ನಮೂನೆಯ ಪದಗಳನ್ನು  ವಿವಿಗಳಲ್ಲಿ ಹೇಳಿಕೊಡುತ್ತಾರೆ.

ಮಹಾನಗರಗಳಿಂದ ಬರುವ ತಜ್ಞರು ಜಗತ್ತಲ್ಲಿ ತಮಗೇ ಈ ವಿಚಾರ ಮೊದಲು ಜ್ಞಾನೋದಯವಾದ ಹಾಗೆ ಗಂಟೆಗಟ್ಟಲೆ ಭಾಷಣ ಕೊರೆಯುತ್ತಾರೆ. ವನ್ಯಜೀವಿಗಳ ಬಗ್ಗೆ ಅರಿಯಲು ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದಕ್ಕಿಂತ, ಹೊರಾಂಗಣದಲ್ಲಿ ಕಲಿಯಲು ಬಹಳಷ್ಟಿದೆ, ಅದಿಲ್ಲದೆ ಉಳಿದದ್ದು ಪುಸ್ತಕದ ಬದನೆಕಾಯಿ ಆಗಬಹುದು.  

ಹಲವಾರು ಪ್ರಶ್ನೆಗಳ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸಿದ ಮಕ್ಕಳೇ ನಮಗೆ ಒಂದು ಮಾದರಿಯ ಗುರುಗಳು. ಇಂದು ಪ್ರಪಂಚದ ಹಲವಾರು ಮೂಲೆಗಳಲ್ಲಿರುವ ನಿಮಗೆ ನನ್ನ ವಂದನೆಗಳು. ಇವರಲ್ಲಿ ನನಗೆ ಹತ್ತಿರವಾದ ಸುಷ್ಮಾ, ಅಜಯ… ದುರಾದೃಷ್ಟವಶಾತ್‌ ಚಿಕ್ಕ ವಯಸ್ಸಿನಲ್ಲಿಯೇ ನಮ್ಮನ್ನಗಲಿ¨ªಾರೆ. ನೀವೆಲ್ಲಿದ್ದರೂ ನಿಮಗೆ ನನ್ನ ಧನ್ಯವಾದಗಳು.   

(ಇಲ್ಲಿಗೆ “ಕಾಡಿನಲ್ಲೊಂದು ದಿನ’  ಲೇಖನಮಾಲೆ ಮುಕ್ತಾಯವಾಯಿತು)

– ಸಂಜಯ್‌ ಗುಬ್ಬಿ

ಟಾಪ್ ನ್ಯೂಸ್

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.