ಖಾಸಗಿ ಸ್ಕೂಲ್ಗೆ ಕಮ್ಮಿ ಇಲ್ಲ ನಂದಿಹಳ್ಳಿ ಸರ್ಕಾರಿ ಶಾಲೆ!
Team Udayavani, Jul 12, 2019, 3:47 PM IST
ಯಡ್ರಾಮಿ: ನಂದಿಹಳ್ಳಿ ಗ್ರಾಮದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಪ್ರಶಸ್ತಿ ಪತ್ರ ಪಡೆದರು.
ಯಡ್ರಾಮಿ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಪಾಲಕರೇ ಹೆಚ್ಚು. ಖಾಸಗಿ ಶಾಲೆಗಳು ಅಬ್ಬರದ ಪ್ರಚಾರದಿಂದ ಪಾಲಕರನ್ನು ಮತ್ತು ಮಕ್ಕಳನ್ನು ತಮ್ಮತ್ತ ಸೆಳೆಯುವುದು ಸಹಜವಾಗಿದೆ. ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಮಾಯವಾಗಿದೆ ಎನ್ನುವ ಮಾತನ್ನು ನಿತ್ಯ ಜನತೆ ಆಡಿಕೊಳ್ಳುವ ಕಾಲವಿದು. ಈ ಎಲ್ಲ ಪ್ರಶ್ನೆಗಳಿಗೆ ನಂದಿಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉತ್ತರವಾಗಿ ನಿಲ್ಲುತ್ತದೆ.
ಯಡ್ರಾಮಿ ತಾಲೂಕಿನ ಯಲಗೋಡ ಗ್ರಾಪಂ ವ್ಯಾಪ್ತಿಗೆ ಬರುವ ಈ ಹಳ್ಳಿಯ ಶಾಲೆ ತಾಲೂಕಿಗೇ ಮಾದರಿಯಾಗಿದೆ. ನಂದಿಹಳ್ಳಿ ಶಾಲೆ 1 ರಿಂದ 5ನೇ ತರಗತಿ ವರೆಗೂ ಒಟ್ಟು 99 ಮಕ್ಕಳ ದಾಖಲಾತಿಯಿದೆ.
ಸುಭಾನ್ ಪಟೇಲ್ ಮತ್ತು ಮೈಲಾರಲಿಂಗ ಎನ್ನುವ ಇಬ್ಬರೇ ಶಿಕ್ಷಕರು ಐದನೇ ತರಗತಿವರೆಗೂ ಪಾಠ ಮಾಡುತ್ತಾರೆ. ಅಲ್ಲದೇ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿದ್ದಾರೆ.
ಕಳೆದ 2018-19ನೇ ಸಾಲಿಗೆ 5ನೇ ತರಗತಿಯ 26 ವಿದ್ರ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 24 ವಿದ್ಯಾರ್ಥಿಗಳು ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗುವ ಮೂಲಕ ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವ ಹಾಗೆ ಫಲಿತಾಂಶ ತಂದಿದ್ದಾರೆ. ಇದರಿಂದ ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ಹೆಚ್ಚಿದೆ.
ಶಾಲೆಯಲ್ಲಿ ಕ್ವಿಜ್ ಕಾಂಪಿಟೇಶನ್, ಭಾಷಣ ಸ್ಪರ್ಧೆ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಎಂಟು ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇವೆ. ಇದರಿಂದ ಮಕ್ಕಳಿಗೆ ಉತ್ತಮ ಕಲಿಕೆಯಾಗಿ ಪ್ರತಿವರ್ಷವೂ ಒಳ್ಳೆಯ ಫಲಿತಾಂಶ ಬಂದೇ ಬರುತ್ತದೆ. ಈ ಬಾರಿ 24 ಮಕ್ಕಳು ಮೊರಾರ್ಜಿ ವಸತಿ ಶಾಲೆಗೆ ಆಯ್ಕೆ ಆಗಿದ್ದು ನಮಗೆ ಖುಷಿ ತಂದಿದೆ. •ಸುಭಾನ್ಪಟೇಲ, ಪ್ರಭಾರಿ ಮುಖ್ಯ ಶಿಕ್ಷಕ
ಇಬ್ಬರು ಶಿಕ್ಷಕರು ಉತ್ತಮವಾಗಿ ಪಾಠ ಹೇಳಿಕೊಡುತ್ತಾರೆ. ಶಾಲೆ ಸ್ವಚ್ಛತೆ ಬಗ್ಗೆ ಅವರಿಗೆ ಕಾಳಜಿ ಇದೆ. ಅವರನ್ನು ಬೇರೆ ಶಾಲೆಗೆ ಇಲಾಖೆ ವರ್ಗ ಮಾಡಿದರೂ ನಾವು ಅದನ್ನು ವಿರೋಧಿಸಿ ಅವರನ್ನು ಇಲ್ಲೇ ಉಳಿಸಿಕೊಂಡಿದ್ದೇವೆ. ನಮ್ಮ ಮಕ್ಕಳು ಅವರ ಕೈಯಾಗ ತಯಾರಾಗ್ಯಾರ್. •ಸುಭಾಸ ಮುತ್ತಕೋಡ, ಗ್ರಾಪಂ ಮಾಜಿ ಸದಸ್ಯ , ನಂದಿಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಶ್ಚಿಮಬಂಗಾಳ; ಮಹಿಳೆಯರು, ಮಕ್ಕಳು ಸೇರಿ ನಾಲ್ವರ ಬರ್ಬರ ಹತ್ಯೆ: ಆರೋಪಿ ಸೆರೆ
ಚಾರ್ಮಾಡಿ : ರಸ್ತೆ ಮಧ್ಯೆ ಕೆಟ್ಟು ನಿಂತ ಲಾರಿಗಳು : ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್
ದೇಶದ ಪರ ಆಡಿ ಎಂದು ಬೇಡಲು ಆಗುತ್ತದೆಯೇ..?: ಅಳಲು ತೋಡಿಕೊಂಡ ವಿಂಡೀಸ್ ಕೋಚ್
ಕಾರಿನಲ್ಲಿ ಹೋಗುತಿದ್ದವರನ್ನೇ ಅಟ್ಟಾಡಿಸಿದ ಕಾಡಾನೆ : ಕಾಫಿನಾಡಿನಲ್ಲಿ ಕಾಡಾನೆಗಳ ಪುಂಡಾಟ
ಕೋವಿಡ್ ನಿಂದ ಚೇತರಿಸಿಕೊಳ್ಳುತ್ತಿದ್ದಂತೆ ಅಭಿವೃದ್ಧಿ ಕಾಮಗಾರಿಗಳತ್ತ ಗಮನಹರಿಸಿದ ಬೊಮ್ಮಾಯಿ
MUST WATCH
3 ವರ್ಷಗಳ ಬಳಿಕ ಕೆಆರ್ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ರಿಲೀಸ್
ನಟ ದರ್ಶನ್ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ
ಪ್ರವೀಣ್ ಹತ್ಯೆ ಪ್ರಕರಣ : ಮುಖ್ಯ ಆರೋಪಿಗಳ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ
ಧಮ್ ಇದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ : ಕಾಂಗ್ರೆಸ್ ಗೆ ಸವಾಲು ಹಾಕಿದ ಸಚಿವ ಅಶೋಕ್
ಪಡುಬಿದ್ರಿ : ಬೆಳ್ಳಂಬೆಳಗ್ಗೆ ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ
ಹೊಸ ಸೇರ್ಪಡೆ
ಪಶ್ಚಿಮಬಂಗಾಳ; ಮಹಿಳೆಯರು, ಮಕ್ಕಳು ಸೇರಿ ನಾಲ್ವರ ಬರ್ಬರ ಹತ್ಯೆ: ಆರೋಪಿ ಸೆರೆ
ಚಾರ್ಮಾಡಿ : ರಸ್ತೆ ಮಧ್ಯೆ ಕೆಟ್ಟು ನಿಂತ ಲಾರಿಗಳು : ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್
ದೇಶದ ಪರ ಆಡಿ ಎಂದು ಬೇಡಲು ಆಗುತ್ತದೆಯೇ..?: ಅಳಲು ತೋಡಿಕೊಂಡ ವಿಂಡೀಸ್ ಕೋಚ್
ಕಾರಿನಲ್ಲಿ ಹೋಗುತಿದ್ದವರನ್ನೇ ಅಟ್ಟಾಡಿಸಿದ ಕಾಡಾನೆ : ಕಾಫಿನಾಡಿನಲ್ಲಿ ಕಾಡಾನೆಗಳ ಪುಂಡಾಟ
ಕೋವಿಡ್ ನಿಂದ ಚೇತರಿಸಿಕೊಳ್ಳುತ್ತಿದ್ದಂತೆ ಅಭಿವೃದ್ಧಿ ಕಾಮಗಾರಿಗಳತ್ತ ಗಮನಹರಿಸಿದ ಬೊಮ್ಮಾಯಿ