ಬದುಕು ಬಯಕೆಗಳ ಬಯಲು ರಂಗಮಂದಿರ


Team Udayavani, Jun 27, 2020, 9:30 AM IST

ಬದುಕು ಬಯಕೆಗಳ ಬಯಲು ರಂಗಮಂದಿರ

ನಾನು ಹೈಸ್ಕೂಲ್‌ಗೆ ಹೋಗುವಾಗ ಪ್ರತಿನಿತ್ಯ ಮನೆಯಿಂದ ಒಂದು ಕಿ.ಮೀ . ದೂರದ ಬಸ್‌ ನಿಲ್ದಾಣದ ತನಕ ನಡೆದುಕೊಂಡು ಹೋಗಿ ಅನಂತರ ಅಲ್ಲಿ ಸಿಗುವ ಎಕ್ಸ್‌ಪ್ರೆಸ್‌ ಬಸ್‌ಗೆ ಕೈ ಚಾಚಿ, ಕಂಡಕ್ಟರ್‌ ಕೈಗೆ ಎರಡು ರೂ. ಇತ್ತವನು ಟಿಕೆಟ್‌ನ್ನು ಅಪೇಕ್ಷಿಸದೆ ಬಾಗಿಲಲ್ಲಿ ಜೋತುಬಿದ್ದಿದ್ದೆ. ಶಾಲೆಯನ್ನು ತಲುಪುವ ತವಕದಲ್ಲಿದ್ದ ನನಗೆ ಶಾಲೆಗೆ ಹೋಗುವುದೆಂದರೆ ಎಲ್ಲಿಲ್ಲದ ಸಂಭ್ರಮ ಕೂಡ.  ಅಂದೇ ಮೊಟ್ಟಮೊದಲ ಬಾರಿಗೆ ನನಗೆ ಬಸ್‌ನಲ್ಲಿ ಕೆಲಸಕ್ಕೆ ಸೇರಬೇಕೆಂಬ ಬಯಕೆ ಹುಟ್ಟಿತ್ತು. ಅದಕ್ಕೂ ಮೊದಲಿನ ಬಯಕೆಗಳೆಲ್ಲ ಇದರ ಮುಂದೆ ಕ್ಷುಲ್ಲಕವೆನಿಸುವಷ್ಟು ಅಗಾಧ ಸೆಳೆತವನ್ನು ಹುಟ್ಟುಹಾಕಿತ್ತು ಆ ಕೆಲಸ. ಬಸ್‌ನಲ್ಲಿದ್ದಷ್ಟು ಹೊತ್ತು ಕ್ಲೀನರ್‌- ಕಂಡಕ್ಟರ್‌- ಡ್ರೈವರ್‌ಗಳ ಹಾವ-ಭಾವಗಳನ್ನು ನೋಡುವುದರಲ್ಲಿ ತಲ್ಲೀನನಾಗುತ್ತಿದ್ದೆ. ಬರುಬರುತ್ತಾ ಬಸ್‌ನ ಸೆಳೆತವನ್ನು ಮೀರಿಸುವಂತೆ ಕಾಡಿದ್ದು ಸುದ್ದಿವಾಹಿನಿಗಳು.

ಆ ಕಾಲದಲ್ಲಿ ಸುದ್ದಿವಾಹಿನಿಗಳು ಹೇಳುವುದೆಲ್ಲವನ್ನೂ ನಂಬಲಾಗುತ್ತಿತ್ತು. ಮತ್ತು ಸಮಾಜದ ಅನ್ಯಾಯಗಳನ್ನೆಲ್ಲ ಒಧ್ದೋಡಿಸಲೆಂದೇ ಸುದ್ದಿವಾಹಿನಿಗಳು ಮತ್ತು ಅದರಲ್ಲಿ ಕಾರ್ಯನಿರ್ವಹಿಸುವ ನಿರೂಪಕರು ಅವತರಿಸಿದರೆಂದು ಭಾವಿಸಲಾಗಿತ್ತು. ಆದ್ದರಿಂದ ನನಗೆ ಹೈಸ್ಕೂಲು ಮುಗಿಸುವ ವೇಳೆಗಾಗಲೇ ಸುದ್ದಿವಾಹಿನಿಗಳೆಡೆಗೆ ಅತೀವ ಸೆಳೆತ ಉಂಟಾಗಿ ನಾನು ಪತ್ರಕರ್ತನಾಗಲೇಬೇಕೆಂದು ನಿರ್ಧರಿಸಿಬಿಟ್ಟಿದ್ದೆ. ಆದರೆ ಕೆಲವೊಮ್ಮೆ ನಮ್ಮ ನಿರೀಕ್ಷೆಗೂ ಮೀರಿದ ಘಟನೆಗಳು ಸಂಭವಿಸುತ್ತವೆ. ಅಂತೆಯೇ ಎಸೆ ಸೆಲ್ಸಿ ಫಲಿತಾಂಶ ಬರಲು ಕೆಲವೇ ದಿನಗಳು ಬಾಕಿಯಿರುವಾಗ ನಮ್ಮ ಮನೆಗೆ ಭೇಟಿಯಿತ್ತ ವೈದ್ಯರೊಬ್ಬರು ನಾನು ಪಶುವೈದ್ಯನಾಗಲು ಅರ್ಹ ಮತ್ತು ಆ ಕ್ಷೇತ್ರಕ್ಕೆ ಬಹುಬೇಡಿಕೆ ಇದೆಯೆಂದು ಹೊಸ ಆಸೆಯೊಂದನ್ನು ಬಿತ್ತಿ ಹೋದರು. ಅಲ್ಲಿಯ ತನಕ ನಾಯಿ, ಬೆಕ್ಕು, ದನ, ಕರುಗಳನ್ನು ಮುದ್ದಾಡುವುದರಲ್ಲಿ ಖುಷಿ ಕಾಣುತ್ತಿದ್ದ ನಾನು ಪಶುವೈದ್ಯನಾಗುವ ಮೂಲಕ ಅವುಗಳ ಸೇವೆಯನ್ನೂ ಮಾಡಿ ಸಾರ್ಥಕ್ಯ ಕಾಣಬೇಕೆಂದು ಬಯಸಿ ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡಿದ್ದೆ. ಆದರೆ ಪಾಠ ಪ್ರವಚನ ಶುರುವಾದ ಕೆಲವೇ ದಿನಗಳಲ್ಲಿ ವಿಜ್ಞಾನ ವಿಷಯದ ಆಳ, ಅಗಲ ನನ್ನನ್ನು ದಿಗ್ಭ್ರಾಂತನನ್ನಾಗಿಸಿತ್ತು. ಅಲ್ಲಿಗೆ ಪಶುವೈದ್ಯನಾಗುವ ಆಸೆಯೂ ಮಂಕಾಯಿತು. ಪತ್ರಕರ್ತನಾಗಬೇಕೆಂಬ ನನ್ನ ಆಸೆ ಮತ್ತೆ ಚಿಗುರೊಡೆದು ಡಿಗ್ರಿಯಲ್ಲಿ ಪತ್ರಿಕೋದ್ಯಮದ ಹಾದಿ ಹಿಡಿಯಲು ಕಾರಣವಾಯಿತು.

ಈಗ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇನ್ನೇನು ಕೆಲಸ ಹಿಡಿಯಬೇಕೆಂಬ ಹೊತ್ತಿನಲ್ಲಿ ಇಷ್ಟು ವರ್ಷಗಳ ಆಸೆಗೆ ಅಡ್ಡಗಾಲು ಎಂಬಂತೆ ಕೋವಿಡ್ ಎದುರಾಗಿ ಕೂತಿದೆ. ಇಷ್ಟು ವರ್ಷಗಳ ಕಾಲ ಓದು, ಶಾಲಾಕಾಲೇಜು ಎಂಬ ನೆಪದಲ್ಲಿ ಊರಿನಿಂದ ದೂರವಿದ್ದ ನಾನು ಮೂರು ತಿಂಗಳುಗಳಿಂದ ಸತತವಾಗಿ ಮನೆಯಲ್ಲಿರುವುದರಿಂದ ವಾತಾವರಣ ನಿಧಾನಕ್ಕೆ ನನ್ನನ್ನು ಮತ್ತೆ ಊರಿನವನನ್ನಾಗಿಸಿಕೊಳ್ಳುತ್ತಿದೆ ಎಂಬ ಭಾವ ಕಾಡಲಾರಂಭಿಸಿದೆ. ಇದೇ ಪರಿಸ್ಥಿತಿ ಇನ್ನೊಂದೆರೆಡು ತಿಂಗಳು ಮುಂದುವರಿದರೆ ಮತ್ತೆ ನನ್ನ ಬಯಕೆ ಬದಲಾಗಲಿದೆಯೇ? ಕೃಷಿ, ಊರ ಹಸುರು, ನೆಮ್ಮದಿ, ಖುಷಿ ನನ್ನನ್ನು ಇಲ್ಲೇ ಇರುವಂತೆ ಪ್ರೇರೇಪಿಸಲಿದೆಯೇ? ನನಗಂತೂ ತಿಳಿಯದು. ಬದುಕು ಬಯಕೆಗಳ ಬಯಲು ರಂಗಮಂದಿರ ವಿದ್ದಂತೆ. ಇಲ್ಲಿ ಎಲ್ಲವುಗಳಿಗೂ ಮುಕ್ತ ಅವಕಾಶ. ನೀವೇನಂತೀರಿ?


ಸ್ಕಂದ ಆಗುಂಬೆ , ಎಸ್ಡಿಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

16-wtr

Water: ನೀರು ಭುವನದ ಭಾಗ್ಯ

15-mother

Mother: ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ತಾನೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.