ಯುವ ಜನರಿಗೆ ಸ್ಫೂರ್ತಿಯಾಗುವ ಮಿಲಿಯನ್‌ ಮನುಷ್ಯ


Team Udayavani, Sep 16, 2020, 8:02 PM IST

deerubai Ambani

ಜೀವನ ಪಯಣದಲ್ಲಿ ಮುಂದೆ ನಾವೇನು ಮಾಡಬೇಕು ಎಂಬ ಹಂಬಲದೊಂದಿಗೆ ಹೊಸ ಆಯಾಮದಡೆಗೆ ಮುನ್ನುಗುತ್ತಿರುತ್ತೇವೆ. ನಮ್ಮ ಕನಸುಗಳನ್ನು ನನಸಾಗಿಸುವ ಪಯಣದಲ್ಲಿ ಹಲವಾರು ತಿರುವುಗಳು ಕಾಣುತ್ತೇವೆ.

ಕಷ್ಟ, ನೋವು ಸಾಮಾನ್ಯವಾಗಿರುತ್ತವೆ. ಕೆಲವೊಮ್ಮೆ ಕಷ್ಟಗಳು ನಮ್ಮನ್ನು ಗಟ್ಟಿಯಾಗಿಸಬಹುದು, ಇನ್ನೂ ಕೆಲವು ಅನುಭವವಾಗಬಹುದು. ಇವೆಲ್ಲವೂ ನಮ್ಮ ಜೀವನದ ಗತಿಯನ್ನು ಬದಲಿಸಿಬಿಡುತ್ತವೆ.

ಇಂತಹದೇ ಜೀವನದ ಗತಿಯನ್ನು ಬದಲಿಸಿಕೊಂಡ ಜಗತ್ತಿನ ಶತಮಾನದ ಪುರುಷನಾಗಿ ನಿಂತ ಉದ್ಯಮಿಯೋರ್ವರು ನಮಗೆ ಸ್ಫೂರ್ತಿಯಾಗಬಲ್ಲರು. ಆ ಯಶಸ್ವಿ ಉದ್ಯಮಿಯೇ ಧೀರೂಬಾಯಿ ಅಂಬಾನಿ.

ಇವರನ್ನ ನೋಡಿದರೆ ನಮ್ಮ ಕನಸು ಯಾವಾಗಲೂ ದೊಡ್ಡದಾಗಿ ಇರಬೇಕೆಂದೆನಿಸುತ್ತದೆ. ಹುಟ್ಟು ಬಡತನವಾದರೂ ಧೃತಿಗೆಡದೇ ಮುಂದೆ ಜಗತ್ತಿನ ಶ್ರೀಮಂತರಾಗಿ ಬೆಳೆದ ಪರಿ ನಿಜಕ್ಕೂ ಪ್ರೇರಣೀಯ, ಆದರ್ಶ.

ಧೀರೂಭಾಯಿ ಅಂಬಾನಿ ಗುಜರಾತ್‌ನ ಒಂದು ಬಡ ಕುಟುಂಬದಲ್ಲಿ ಜನಿಸುತ್ತಾರೆ. ಬಾಲ್ಯದಿಂದಲೂ ಕಷ್ಟಗಳನ್ನು ಎದುರಿಸಿರುವ ಈತ ಅಸಾಧಾರಣ ಪ್ರತಿಭಾವಂತನಾಗಿದ್ದ. ಜತೆಗೆ ಕಲಿಕೆಯ ಛಲ, ದೃಢನಿರ್ಧಾರವನ್ನು ತೆಗೆದುಕೊಳ್ಳುವ ಮನೋಭಾವವನ್ನು ಚಿಕ್ಕನಿಂದಲೂ ರೂಢಿಸಿಕೊಂಡಿದ್ದ. ಇದೇ ಕಾರಣಕ್ಕೆ ಮುಂದೆ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಆತನ ಹೆಸರು ಸೇರ್ಪಡೆಯಾಯಿತು.

ಚಿಕ್ಕ ವಯಸ್ಸಿನಲ್ಲಿ ಹಣ ಸಂಪಾದನೆಗೆ ಮನೆಯವರಿಗೆ ಸಹಾಯ ಮಾಡು ಎಂದು ಮನೆಯವರು ಕೇಳಿಕೊಂಡಾಗ ಆಗ ಧೀರೂಬಾಯಿ ಅಂಬಾನಿ “ನೀವು ಹಣದ ಬಗ್ಗೆ ಚಿಂತಿಸಬೇಡಿ, ಮುಂದೊಂದು ದಿನ ರಾಶಿಯಷ್ಟು ಹಣವನ್ನು ಸಂಪಾದಿಸುತ್ತೇನೆ ಎಂದು ಎದೆಯುಬ್ಬಿಸಿ ಹೇಳಿದನಂತೆ. ಕೇವಲ ಹೇಳುವುದಷ್ಟೇ ಅಲ್ಲ. ಅದಕ್ಕೆ ಬೆವರು ಕೂಡ ಹರಿಸಿದ.

ತನ್ನ 16ನೇ ವಯಸ್ಸಿನಲ್ಲಿ ಧೀರೂಬಾಯಿ ಅವರು ಯೆಮನ್‌ನ ಅಡೆನ್‌ಗೆ ಹೋಗಿ ಅಲ್ಲಿ ಕಂಪೆನಿಯೊಂದರಲ್ಲಿ 300 ರೂ. ತಿಂಗಳ ಸಂಬಳಕ್ಕೆ ದುಡಿಯುತ್ತಾರೆ. ಮುಂದೆ ಅದೇ ಅಡೆನ್‌ ಬಂದರಿನಲ್ಲಿ ಇಂಧನ ಭರ್ತಿ ಮಾಡುವ ಕೇಂದ್ರದ ವ್ಯವಸ್ಥಾಪಕನಾಗಿ ಭಡ್ತಿ ಹೊಂದುತ್ತಾರೆ. ಮುಂದೆ ಸ್ವೋದ್ಯಮದ ಆಲೋಚನೆ ಅವರಲ್ಲಿ ಮೊಳಕೆಯೊಡೆದು ತಮ್ಮದೆ ಕಂಪೆನಿ ರಿಲಾಯನ್ಸ್‌ ಕಂಪೆನಿಯನ್ನು ಆರಂಭಿಸುತ್ತಾರೆ.

ಸೋದರ ಸಂಬಂಧಿಯೊಂದಿಗೆ ಧೀರೂಬಾಯಿ ಅಂಬಾನಿ ಅವರು ಮುಂಬಯಿಯಲ್ಲಿ ಆರಂಭಿಸಿದ ರಿಲಯನ್ಸ್‌ ಕಂಪೆನಿ ಕೇವಲ ಬಂಡವಾಳ ಹೂಡಿಕೆ ಮಾತ್ರವಲ್ಲ, ನಿರಂತರ ಶ್ರಮ, ಛಲ ಹಾಗೂ ಸಾಹಸವನ್ನು ಹೂಡಿದ್ದರು.ಮೂಗಿನ ಮೇಲೆ ಬೆರಳಿನಿಟ್ಟು ನೋಡುವಂತೆ ಬೆಳವಣಿಗೆ ಕಂಡಿತ್ತು. ಬಡತನ ಎಂಬ ಬೇಗುದಿಯಲ್ಲಿ ಬೆಂದ ಸಾಮಾನ್ಯನೊಬ್ಬನು ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತಾನೆ ಎಂದರೆ ನಿಜಕ್ಕೂ ಕುತೂಹಲ ಜತೆಗೆ ಆಶ್ಚರ್ಯದ ಸಂಗತಿ. ಮುಂದೆ ಶತ ಕೋಟಿ ಡಾಲರ್‌ನ ಒಡೆಯನಾಗುತ್ತಾನೆ.

ವ್ಯವಹಾರದಲ್ಲಿ ಕೌಶಲವನ್ನು ರೂಢಿಸಿಕೊಂಡ ಇವರು ಉದ್ಯಮವನ್ನು ಬಹು ಆಯಾಮದಲ್ಲಿ ತೊಡಗಿಸಿಕೊಳ್ಳುತ್ತಾರೆ. ರಿಲಯನ್ಸ್‌ ಕಂಪೆನಿಯ ಹೆಸರಿನ ಮೇಲೆ ತೈಲೋದ್ಯಮ, ಮಸಾಲೆ ಪದಾರ್ಥಗಳ ವ್ಯಾಪಾರ, ಜವುಳಿ ಉದ್ಯಮ, ಪ್ಲಾಸ್ಟಿಕ್‌ ಉದ್ಯಮದ ಜತೆಗೆ ಇತರೆ ಉದ್ಯಮಗಳನ್ನು ಆರಂಭಿಸುತ್ತಾರೆ. ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತೆ ಅವರು ಆರಂಭಿಸಿದ ಎಲ್ಲ ಉದ್ಯಮಗಳು ಕೂಡ ಅವರಿಗೆ ಯಶಸ್ಸು ತಂದುಕೊಡುತ್ತವೆ. ಇದರಿಂದ ಅವರು ಸಾಧನೆಯ ಶಿಖರವನ್ನು ಏರುತ್ತಾರೆ.

ಪೆಟ್ರೋ ರಾಸಾಯನಿಕ ಉದ್ಯಮದಲ್ಲಿ ಅವರು ಕಂಡ ಯಶಸ್ಸು ಮತ್ತು ಬಡತನದಿಂದ ಸಿರಿತನಕ್ಕೆ ಮುನ್ನಡೆದ ಅವರ ದಂತಕಥೆಯು ಭಾರತೀಯರ ಮನದಲ್ಲಿ ಒಬ್ಬ ಅದ್ವಿತೀಯ ವ್ಯಕ್ತಿಯನ್ನಾಗಿ ಮಾಡಿತು. ಉತ್ತಮ ಉದ್ದಿಮೆಯ ಉತ್ತಮ ಮುಂದಾಳಾಗಿ, ಅವರು ಒಬ್ಬ ಪ್ರೇರಕರೂ ಆಗಿದ್ದರು. ಅವರು ಸಾರ್ವಜನಿಕ ಭಾಷಣಗಳನ್ನು ನೀಡಿದ್ದು ವಿರಳ. ಮಿಲಿಯನ್‌ ಮನುಷ್ಯರಾದ ಧೀರೂಭಾಯಿಯವರ ಜೀವನ ಇಂದಿನ ಯುವಪಿಳಿಗೆ ಸ್ಪೂರ್ತಿಯಾಗಿಸಿಕೊಂಡು ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬೇಕು.

 ಅಶ್ವಿ‌ನಿ ತಳವಾರ, ಅಕ್ಕಮಹಾದೇವಿ ಮಹಿಳಾ ವಿವಿ ವಿಜಯಪುರ 

 

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.