ನೌಕರಿಗೆ ಲಂಚ ಕೋಡಲು ನಿರಾಕರಿಸಿದಾತ ಇಂದು ಪ್ರಗತಿಪರ ಕೃಷಿಕ


Team Udayavani, Sep 6, 2020, 3:29 PM IST

sathish

ಸತೀಶ್‌ ಸಿದ್ದಗೌಡರ್‌ 38 ವಯೋಮಾನದ ಈ ಪ್ರಗತಿಪರ ಯುವ ಕೃಷಿಕ ಮೂಲತಃ ಬೆಳಗಾವಿ ಜಿಲ್ಲೆ ಶಿರೂರು ಗ್ರಾಮದವರು.

ಈ ಭಾಗದಲ್ಲಿ ಇವರು ಹಾಗಲಕಾಯಿ ಸ್ಪೆಶಲಿಸ್ಟ್‌ ಎಂದೇ ಜನಜನಿತ. ಪ್ರತಿ ವರ್ಷ ಇವರು ತಮ್ಮ 1.5 ಎಕ್ರೆ ಹೊಲದಲ್ಲಿ 50 ಟನ್‌ ತರಕಾರಿ ಬೆಳೆಯುವುದರ ಮೂಲಕ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ.

ಇವರು ಶಿಕ್ಷಕನಾಗುವ ಆಸೆ ಹೊತ್ತು 2008ರಲ್ಲಿ ಶಿಕ್ಷಣಶಾಸ್ತ್ರ ವಿಷಯದಲ್ಲಿ ಎಂ. ಎ ಪಡೆದರು. ಪದವಿ ಮುಗಿಸಿ ಕೆಲಸಕ್ಕಾಗಿ ಅಲೆಯುತ್ತಿದ್ದಾಗ ಶಿಕ್ಷಕ ವೃತ್ತಿಯೊಂದರ ಸಂದರ್ಶನಕ್ಕೆ ಹಾಜರಾಗುತ್ತಾರೆ. ತಿಂಗಳಿಗೆ 16 ಸಾವಿರ ಸಂಬಳ, ಆದರೆ 16 ಲಕ್ಷ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ತಂದೆಯವರು ಲೋನ್‌ ಮಾಡಿ ಲಂಚ ನೀಡಲು ತಯಾರಾದಾಗ ಸತೀಶ್‌ ಕೆಲಸ ನಿರಾಕರಿಸಿ ಕೃಷಿತಯತ್ತ ಮುಖ ಮಾಡಿದರು. ಆದರೆ ತಂದೆಯಂತೆ ಸಾಂಪ್ರದಾಯಿಕ ಕೃಷಿಗೆ ಮಾತ್ರ ಸೀಮಿತವಾಗಿರದೆ ಹೊಸ ಆಲೋಚನೆಯ ಮೂಲಕ ವೈಜ್ಞಾನಿಕ, ಹೆಚ್ಚು ಇಳುವರಿ ಮತ್ತು ಆದಾಯ ತರುವಂತ ಕೃಷಿ ಮಾಡಿ ಇಂದು ಯಶಸ್ವಿಯಾಗಿದ್ದಾರೆ.

ನನ್ನ ತಂದೆ ಮತ್ತು ಚಿಕ್ಕಪ್ಪ ಕಳೆದ 50 ವರ್ಷದಿಂದಲೂ ತರಕಾರಿ ಕೃಷಿ ಮಾಡುತ್ತಿದ್ದಾರೆ. ಆದರೆ ಇಳುವರಿ ಮತ್ತು ಉತ್ತಮ ಗುಣಮಟ್ಟ ಇಲ್ಲದ ಕಾರಣ ಅವರಿಗೆ ಹೆಚ್ಚಿನ ಲಾಭ ಸಿಗುತ್ತಿರಲಿಲ್ಲ. ಅನಂತರ ನಾನು ಅವರೊಂದಿಗೆ ಸೇರಿ ಹೊರ ತಂತ್ರಜ್ಞಾನ ಅಳವಡಿಸಿದ್ದೇನೆ. ವ್ಯವಸ್ಥಿತವಾದ ಹನಿ ನೀರಾವರಿ, ನೆಲದ ತೇವಾಂಶ ಹೆಚ್ಚು ಸಮಯ ಉಳಿಯಲು ನೆಲ ಹಾಸು ಬಳಸುತ್ತಿದ್ದೇನೆ. ಈ ತಂತ್ರಗಳನ್ನು ಪುಸ್ತಕ ಮತ್ತು ಇತರ ಕೃಷಿಕರಿಂದ ಕಲಿತು ಅಳವಡಿಸಿಕೊಂಡಿದ್ದೇನೆ ಎನ್ನುತ್ತಾರೆ ಸತೀಶ್‌.

ಕೃಷಿಯೊಂದಿಗೆ ಮಾರುಕಟ್ಟೆ ಬಗ್ಗೆಯೂ ತಿಳುವಳಿಕೆ
ಸತೀಶ್‌ ಅವರು ಕೇವಲ ಆಧುನಿಕ ಕೃಷಿಕನಾಗಿರದೇ ಮಾರುಕಟ್ಟೆಯ ಏರಿಳಿತಗಳನ್ನು ಬಲ್ಲವರೂ ಆಗಿದ್ದಾರೆ. ಹಾಗಲಕಾಯಿ ಶಿರೂರಿನಲ್ಲಿ ಕೆಲವೇ ಕೆಲವು ರೈತರು ಬೆಳೆಯುತ್ತಿದ್ದು, ಬಹು ಬೇಡಿಕೆಯ ತರಕಾರಿಗಳಲ್ಲೊಂದು. ಮಧುಮೇಹ, ಕೊಬ್ಬು ಕಡಿಮೆಯಾಗುವ ಹೀಗೆ ಬಹುಪಯೋಗಿ ಹಾಗಲಕಾಯಿಗೆ ಬೇಡಿಕೆ ಇರುವುದರಿಂದ ಇದನ್ನು ಆಯ್ದುಕೊಂಡು ಕೃಷಿಯಲ್ಲಿ ತೊಡಗಿದ್ದಾರೆ. ತಮ್ಮ 5 ಎಕ್ರೆ ಜಮೀನಿನಲ್ಲಿ ಮೊದಲಿಗೆ 0.25 ಎಕ್ರೆಯಲ್ಲಿ ಹಾಗಲ ಕಾಯಿ ಕೃಷಿ ಆರಂಭಿಸಿ ಇಂದು ಒಂದುವರೆ ಎಕ್ರೆಯಲ್ಲಿ ಬೆಳೆಯುತ್ತಿದ್ದಾರೆ. ಉಳಿದ 3.5 ಎಕ್ರೆಯಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. ಭೂಮಿಯನ್ನು ಹದಗೊಳಿಸಲು ಎರಡೂ ಮೂರು ಬಾರಿ ಉಳುಮೆ ಮಾಡಿ, ಅದರಲ್ಲಿ ಕಸ ಕಡ್ಡಿಗಳನ್ನೆಲ್ಲ ಸ್ವತ್ಛಮಾಡಲಾಗುತ್ತದೆ. ಅನಂತರ ನಿಯಮಿತ ಅಂತರದಲ್ಲಿ ಒಂದೆಡೆ‌ ಮೂರು ಹಾಗಲ ಬೀಜ ನೇಡಲಾಗುತ್ತದೆ ಮತ್ತು ಸರಿಯಾದ ಪ್ರಮಾಣದ ನೀರೋದಗಿಸಲು ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಇದು ನೀರನ್ನು ಸಮರ್ಪಕವಾಗಿ ಬಳಸಲು ಸಹಕಾರಿ. ಬೀಜ ಮೋಳೆತು ಬಳ್ಳಿಯಾದ ಅನಂತರ ಅದು ಹಬ್ಬಲು ಆಸರೆಯಾಗಿ ಬಿದಿರಿನ ಕೋಲು ನೇಡುತ್ತಾರೆ ಸತೀಶ್‌.

ಪ್ರತಿ ವರ್ಷ 50 ಟನ್‌ ಹಾಗಲಕಾಯಿ ಬೆಳೆಯ್ತುತ್ತಾರೆ
ಸತೀಶ್‌ ಅವರ ಜಮೀನಿನಲ್ಲಿ ವರ್ಷದಲ್ಲಿ ಒಟ್ಟು 30 ಬಾರಿ ಹಾಗಲಕಾಯಿ ಕಟಾವು ಮಾಡುತ್ತಾರೆ. ಪ್ರತಿ ಕಟಾವಿಗೆ 1.5ರಿಂದ 2 ಟನ್‌ ಇಳುವರಿ ಪಡೆಯುತ್ತಿದ್ದಾರೆ. ವರ್ಷದ ಕೊನೆಯಲ್ಲಿ 50 ಟನ್ ಪಡೆಯುತ್ತಾರಂತೆ. ಒಂದು ಟನ್‌ಗೆ 35 ಸಾವಿರ ರೂ.ಗಳಂತೆ ಬೆಲೆ ಇರುತ್ತದೆ. ಕೆಲವೊ‌ಮ್ಮೆ ಮಾರುಕಟ್ಟೆ ವಹಿವಾಟು ಚೆನ್ನಾಗಿದ್ದರೆ 48 ಸಾವಿರದ ವರೆಗೂ ಮಾರಟವಾದದ್ದಿದೆ. ಕಟಾವಿನ ಸಮಯದಲ್ಲಿ ಪ್ರತಿದಿನ 25 ಸಾವಿರ ಗಳಿಸುತ್ತೇನೆ ಇಷ್ಟು ಆದಾಯವನ್ನು ನಾನು ಬೇರೆ ಯಾವ ನೌಕರಿಯಿಂದಲೂ ಗಳಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಸತೀಶ್‌.

ಇಂದು ಸತೀಶ ಒಬ್ಬ ಯಶಸ್ವಿ ರೈತನಾಗಿರುವ ಹಿಂದೆ ಸಾಕಷ್ಟು ಪರಿಶ್ರಮವಿದೆ. ಹೆಚ್ಚಿನ ಇಳುವರಿ ಪಡೆಯಲು, ಬಳ್ಳಿಗಳು ಸದೃಢವಾಗಿ ಬೆಳೆಯಲು ಅನೇಕ ಕೀಟನಾಶಕ, ಸೂಕ್ಷ್ಮ ಪೋಷಕಾಂಶಗಳ ಪ್ರಯೋಗವನ್ನು ಇವರು ಮಾಡಿದ್ದಾರೆ. ಬಳ್ಳಿಗಳಿಗೆ ಕೆಲವೊಮ್ಮೆ ಕೀಟಬಾಧೆ ಹೆಚ್ಚಾಗುತ್ತದೆ. ಸೂಕ್ಷ್ಮ ಶಿಲೀಂಧ್ರಗಳ ಕಾಟದಿಂದ ಎಲೆಯ ಮೇಲೆ ಬಿಳಿ ಮತ್ತು ಹಳದಿ ಕಲೆಗಳು ಉಂಟಾಗುತ್ತೆ. ಇದಕ್ಕೆ ಸಮರ್ಪಕವಾದ ಔಷಧಗಳನ್ನು ಬಳಸಬೇಕಾಗುತ್ತದೆ. ಇಲ್ಲವಾದರೆ ಅಧಿಕ ಇಳುವರಿ ಪಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಸತೀಶ್‌.

ಅಂದು ಲಂಚ ನೀಡದೆ ಕೃಷಿಗೆ ಮರಳಿ ತಮ್ಮ ವಿಭಿನ್ನ ಯೋಚನೆ ಮತ್ತು ಶ್ರಮದ ಮೂಲಕ ಸತೀಶ ಇಂದ ಪ್ರಗತಿಪರ ಕೃಷಿಕರಾಗಿ ಹೊರಹೊಮ್ಮಿದ್ದಾರೆ. ತಮ್ಮ ಶ್ರದ್ಧೆ, ಪರಿಶ್ರಮದಿಂದ ದುಡಿಯುವ ಇವರು ಹಾಕುವ ಬಂಡವಾಳಕ್ಕಿಂತ ಹೆಚ್ಚು ಪಟ್ಟು ಆದಾಯ ಪಡೆಯುತ್ತಾರೆ. ಸ್ವಾವಲಂಬಿಯಾಗಿ ಬದುಕುತ್ತಿರುವ ಇವರು ಸುತ್ತಮುತ್ತ ಅನೇಕ ಯುವಕರಿಗೆ ಮಾದರಿಯಾಗಿದ್ದಾರೆ. ಕೃಷಿಯಲ್ಲಿ ಲಾಭವಿಲ್ಲ ಎಂದು ನಗರದತ್ತ ವಲಸೆ ಹೋಗುವುದು ತರವಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎನ್ನುವಂತೆ ಕೃಷಿಯಲ್ಲಿ ಸಾಧಿಸಿದ್ದಾರೆ.

 ಶಿವಾನಂದ ಎಚ್‌., ಗದಗ 

 

ಟಾಪ್ ನ್ಯೂಸ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

9-fusion

Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.