ಮೊಬೈಲ್‌ ಎಂಬ ಸಂಗಾತಿ ಇಲ್ಲದ ಆ ಒಂದು ವಾರ!

ಕೋವಿಡ್ ಕಾಲದ ಊರಿನ ಕಥೆಯಿದು..!

Team Udayavani, Jun 27, 2020, 1:00 PM IST

ಮೊಬೈಲ್‌ ಎಂಬ ಸಂಗಾತಿ ಇಲ್ಲದ ಆ ಒಂದು ವಾರ!

ಸಾಂದರ್ಭಿಕ ಚಿತ್ರ

ನಾನಿರೋದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ. ಪೇರೆಂಟ್‌ ಕಂಪೆನಿಯಿಂದ ಕ್ಲೈಂಟ್‌ ಆಫೀಸ್‌ಗೆ ಕೆಲಸ ಮಾಡುತ್ತಿರುವುದು. ಮನೆಯಿಂದ ಆಫೀಸ್‌ ದೂರ, ಹೀಗಾಗಿ ಆಫೀಸ್‌ ಬಸ್‌ ಒದಗಿಸಿಕೊಟ್ಟಿರುವುದರಿಂದ ಆರಾಮವಾಗಿ ಹೋಗಿ ಬರುತ್ತೇನೆ. ಹುಟ್ಟಿ ಬೆಳೆದ ಊರಿಗೂ ಬೆಂಗಳೂರಿಗೂ ಅಜಗಜಾಂತರ ವ್ಯತ್ಯಾಸ. ಇಲ್ಲಿಯ ಚಾಲಕರು ಮಾತಾಡೋದು ಕೂಡ ಬೈತಿದ್ದಾರೆ ಅಂತಾನೆ ಅನಿಸುತ್ತಿತ್ತು. ಹಾಗಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸುವುದರಿಂದ ಸ್ವಲ್ಪ ದೂರವೇ ಇದ್ದೆ.

ಆದರೆ ಅದೊಂದು ದಿನ ಬಸ್‌ನಲ್ಲಿ ಹೋಗಬೇಕಾಗಿ ಬಂತು. ಯಾವುದೋ ತರಬೇತಿ ಸಲುವಾಗಿ ಪೇರೆಂಟ್‌ ಕಂಪೆನಿಗೆ ಹೊರಟೆ. ಬೆಳಗ್ಗೆ ಸಲೀಸಾಗಿ ತಲುಪಿ, ಮಾಡಬೇಕಿದ್ದ ಕೆಲಸಗಳನ್ನೆಲ್ಲ ಚೆನ್ನಾಗಿ ಮುಗಿಸಿ ವಾಪಸ್‌ ಹೊರಟೆ. ಜನರಿಂದ ತುಂಬಿದ್ದ ಹಲವು ಬಸ್‌ಗಳನ್ನು ಬಿಟ್ಟು, ಜನರಿಲ್ಲದೇ ಭಣಗುಟ್ಟುತ್ತಿದ್ದ ಬಸ್‌ ಹತ್ತಿದೆ. ಆಗಾಗ ಮೊಬೈಲ್‌ ನೋಡಿ ಮೆಸೇಜುಗಳನ್ನು ಪರೀಕ್ಷಿಸಿ, ಬ್ಯಾಗ್‌ ಒಳಗೆ ಇಡುತ್ತಿದ್ದೆ. ಅವಳೊಬ್ಬಳು ನನ್ನನ್ನು ಗಮನಿಸುತ್ತಿದ್ದಳು, ನನಗದು ಅರಿವಾಗಲೇ ಇಲ್ಲ!

ಸರಿ. ಇನ್ನೇನು ನನ್ನ ಸ್ಟಾಪ್‌ ಬಂತು ಇಳಿಯಬೇಕೆಂದು ಮುಂದೆ ಬಂದು ನಿಂತೆ, ಅವಳು ನನ್ನ ಹಿಂದೆ ಸ್ವಲ್ಪ ದೂರಕ್ಕೆ ನಿಂತಳು. ಹಂಪ್‌ ಬಂತೆಂದು ಬಸ್‌ ಡ್ರೈವರ್‌ ಬ್ರೇಕ್‌ ಒತ್ತಲೂ, ತನ್ನ ಕೆಲಸ ಚಕಚಕಾಂತ ಮುಗಿಸಿಬಿಡೋಣವೆಂದು ಅವಳು. ನನ್ನ ಚೀಲಕ್ಕೆ ಏನೋ ಭಾರದ್ದು ಬಿತ್ತೆಂದು ಸುಮ್ಮನೆ ತಿರುಗಿ ನೋಡಿದೆ, ಅವಳು ನನ್ನೆಡೆಗೆ ಅಮಾಯಕಳಂತೆ ನೋಡಿದಳು. ಗಮ್ಯ ತಲುಪಿದಾಗ ಇಳಿದೆ, ಅವಳು ಇಳಿದು ಇನ್ನೊಂದೆಡೆ ಸಾಗಿದಳು. ಐಡಿ ಕಾರ್ಡ್‌ ತೆಗೆಯಬೇಕೆಂದು ಹೊರಟವಳಿಗೆ ಸಣ್ಣಕೆ ಹೃದಯಾಘಾತವಾಗುವಂತಹ ಕ್ಷಣ! ಲ್ಯಾಪ್‌ ಟಾಪ್‌ ಬ್ಯಾಗ್‌ ಝಿಪ್‌ ಸ್ವಲ್ಪ ತೆರೆದಿತ್ತು, ನೋಡಿದ್ರೆ ನನ್ನ ಮೊಬೈಲ್‌ ಅನ್ನು ಅವಳು ಕದ್ದುಬಿಟ್ಟಿದ್ದಳು!

ಅದಾದ ಅನಂತರ ಒಂದು ವಾರದ ಕಾಲ ಹಳೆಯ ಬೇಸಿಕ್‌ ಮೊಬೈಲೇ ನನ್ನ ಪಾಲಾಯಿತು. ಹೊಸತು ಕೊಂಡರೆ ಪುನಃ ಅದೆಲ್ಲಿ ಕಳೆದು ಹೋಗುವುದೋ ಎಂಬ ವಿಚಿತ್ರ ಭಯ ಆವರಿಸಿತ್ತು. ವಾಟ್ಸ್‌ಆ್ಯಪ್‌ ಇಲ್ಲ, ಫೇಸ್‌ಬುಕ್‌ ಇಲ್ಲ ಅಂತೂ ವನವಾಸ ತರವಿತ್ತು ಆ ಏಳು ದಿನಗಳು. ಕೆಲವು ವರ್ಷಗಳಿಂದ ಸ್ಮಾರ್ಟ್‌ಫೋನ್‌ ಅಭ್ಯಾಸವಾಗಿ ಈ ಬೇಸಿಕ್‌ ಫೋನ್‌ ಅಲ್ಲಿ ಏನೂ ಮಾಡೋಕಾಗದ ಸ್ಥಿತಿ! ಮೊಬೈಲ್‌ ಎಂಬ ಮಾಯೆಯಲ್ಲಿ ನಾನೆಷ್ಟು ಬಂಧಿಯೆಂದು ಮನವರಿಕೆಯಾಯಿತು.


ಸುಪ್ರೀತಾ ವೆಂಕಟ್‌ ಸಾಫ್ಟ್ವೇರ್‌ ಎಂಜಿನಿಯರ್‌, ಬೆಂಗಳೂರು

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.