ಪಂಚ ತತ್ತ್ವ‌ ದರ್ಶನ ವೇದಂ


Team Udayavani, Jul 30, 2020, 10:30 AM IST

vedam

ಕ್ರಿಶ್‌ ಅವರ ನಿರ್ದೇಶನದ ಎರಡನೇ ಚಿತ್ರ ತೆಲುಗಿನ “ವೇದಂ’. ಅಲ್ಲು ಅರ್ಜುನ್‌, ಅನುಷ್ಕಾ ಶೆಟ್ಟಿ, ಮನೋಜ್‌ ಮಂಚು, ಮನೋಜ್‌ ವಾಜಪೇಯಿ, ಶರಣ್ಯಾ, ದೀಕ್ಷಾ ಸೇಥ್‌ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

“ವೇದಂ’ ಹೈಪರ್‌ಲಿಂಕ್‌ ಸ್ಟೋರಿ ಟೆಲ್ಲಿಂಗ್‌ ಅಥವಾ ಅಂತೋಲಜಿ ಶೈಲಿಯ ಚಲನಚಿತ್ರ. ಐದು ಪ್ರಮುಖ ವ್ಯಕ್ತಿಗಳ ಬೇರೆ ಬೇರೆ ಕಥೆ ಕೊನೆಯಲ್ಲಿ ಬೆಸೆದುಕೊಳ್ಳುವುದು ಈ ಚಿತ್ರದ ವಿಶೇಷತೆ.

ವೇದಗಳಿರುವುದು ನಾಲ್ಕು. ಆದರೆ ಈ ಸಿನೆಮಾದಲ್ಲಿ ಐದನೇ ವೇದ ಯಾವುದೆಂದು ಹೇಳಿದ್ದಾರೆ ನಿರ್ದೇಶಕ. ಈ ಸಿನೆಮಾದಲ್ಲಿ ಚಿತ್ರಕಥೆ, ವಿಶಿಷ್ಟ ಪಾತ್ರಗಳು, ಭಾವನೆಗಳು, ತತ್ತÌಗಳು ನೋಡುಗರ ಮೇಲೆ ಪ್ರಭಾವ ಬೀರುತ್ತವೆ. ಈ ಸಿನೆಮಾದ ಪ್ರಮುಖ ಐದು ಪಾತ್ರಗಳನ್ನು ಪಂಚಭೂತಗಳ ಗುಣಗಳಿಗೆ ಹೋಲಿಕೆಯಾಗುವಂತೆ ಸೃಷ್ಟಿಸಲಾಗಿದೆ. ಸರೋಜಾ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ಗಮನ ಸೆಳೆಯುತ್ತಾರೆ.

ಸರೋಜಾ ವೇಶ್ಯೆಯಾಗಿದ್ದು, ಈಕೆ ಒಂದು ಸ್ಥಳದಲ್ಲಿ ನಿಲ್ಲದೇ ನೀರಿನಂತೆ ಚಲನಶೀಲರಾಗಿರುತ್ತಾಳೆ. ಮನೋಜ್‌ ವಾಜಪೇಯಿ ನಿರ್ವಹಿಸಿರುವ ರಹೀಮುದ್ದೀನ್‌ ಪಾತ್ರ ಅಗ್ನಿಗೆ, ಮಂಚು ಮನೋಜ್‌ ನಿರ್ವಹಿಸಿರುವ ರಾಕ್‌ ಸ್ಟಾರ್‌ ವಿವೇಕ್‌ ಚಕ್ರವರ್ತಿ ಪಾತ್ರವನ್ನು ಗಾಳಿ, ರಾಮುಲು ಪಾತ್ರವನ್ನು ಭೂಮಿಗೆ ಹೋಲಿಸಿ ಪಾತ್ರಗಳನ್ನು ಸೃಷ್ಟಿಸಲಾಗಿದೆ.

ಅಲ್ಲು ಅರ್ಜುನ್‌ ಅವರದ್ದು ಈ ಚಿತ್ರದಲ್ಲಿ ವಿಶೇಷ ಪಾತ್ರ. ಕೇಬಲ್‌ ರಾಜು ಎಂಬ ಪಾತ್ರ ನಿರ್ವಹಿಸಿರುವ ಈತ ಶ್ರೀಮಂತ ಮನೆಯೊಂದರ ಹುಡುಗಿಯನ್ನು ಪ್ರೀತಿಸುತ್ತಾನೆ. ಇವನದು ಆಕಾಶಕ್ಕೆ ಏಣಿ ಹಾಕುವ ಕನಸು. ಈ ಪಾತ್ರ ಆಕಾಶವನ್ನು ಪ್ರತಿನಿಧಿಸುತ್ತದೆ. ಸರಿಯಾಗಿ ಸಾಯಬೇಕೆಂದರೂ ಹಣವಿರಬೇಕು ಎನ್ನುವ ಸಿದ್ಧಾಂತವನ್ನು ನಂಬುವ ಪಾತ್ರ ಇದಾಗಿದೆ. ಐದು ಪಾತ್ರಗಳು ಸಮಾನಾಂತರವಾಗಿ ಸಾಗುತ್ತವೆ. ಪ್ರತಿಯೊಂದು ಪಾತ್ರಕ್ಕೂ ಜೀವನ ಸಂಘರ್ಷವಿದೆ. ಹಣ, ಮಹತ್ವಕಾಂಕ್ಷೆಯ ಕನಸು ಕಾಣುವ ಪಾತ್ರಗಳು ಇವಾಗಿವೆ.

ಅಂತಿಮವಾಗಿ ಪಾತ್ರಗಳು ರೂಪಾಂತರಗೊಳ್ಳುತ್ತ ನೀತಿ ಬೋಧನೆ ಮಾಡುತ್ತವೆ. ಧರ್ಮ ಇರುವುದು ರಕ್ಷಣೆಗೆ ವಿನಃ ಸಾಯಿಸುವುದಕ್ಕಲ್ಲ ಎಂಬ ರಾಜನೀತಿಯನ್ನು “ವೇದಂ’ ಸಾರಿ ಹೇಳುತ್ತದೆ.

-ಆರ್‌.ಕೆ. ಪ್ರೀತೇಶ್‌ ಕುಮಾರ್‌, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.