ಘಟನೆಯೊಂದು ಕಲಿಸಿದ ಜೀವನ ಪಾಠ


Team Udayavani, Jun 28, 2020, 1:00 PM IST

ಘಟನೆಯೊಂದು ಕಲಿಸಿದ ಜೀವನ ಪಾಠ

ಜೀವನವೆಂದರೆ ಅನುಭವಗಳ ಭಂಡಾರ. ಅನುಭಗಳು ಕಲಿಸುವ ಪಾಠ ಜೀವನದುದ್ದಕ್ಕೂ ಆದರ್ಶ ಮತ್ತು ಅನುಕರಣೀಯ. ನಮ್ಮ ಜೀವನ ಇನ್ನೊಬ್ಬರಿಗೆ ಆದರ್ಶವಾಗಬಹುದು. ಇನ್ನೊಬ್ಬರ ಜೀವನ ಮತ್ತು ಅವರ ಪರಿಪಕ್ವವಾದ ಅನುಭವದ ಒಂದು ಮಾತು ನಮ್ಮಲ್ಲಿ ಅದ್ವಿತೀಯ ಬದಲಾವಣೆಗೆ ಕಾರಣವಾಗಬಹುದು.

ನನ್ನ ಜೀವನದಲ್ಲಿ ಘಟಿಸಿದ ಒಂದು ಘಟನೆ ಪ್ರೀತಿ, ವಿಶ್ವಾಸ ಮತ್ತು ಮಾನವೀಯ ಮೌಲ್ಯಗಳನ್ನು ತಿಳಿ ಹೇಳಿದೆ. ಸದಾ ಹಣದಿಂದಲೇ ಎಲ್ಲ, ಹಣವಿದ್ದರೆ ಮಾತ್ರ ಬದುಕು ಎಂಬ ಧೋರಣೆ ತಳೆದಿದ್ದ ನನ್ನ ಮನಸ್ಸಿನ ಭಾವನೆಯನ್ನು ಹಿರಿಯರೊಬ್ಬರು ಬದಲಾಯಿಸಿದ್ದಾರೆ.

ಕಾಲೇಜಿಗೆ ಹೊರಟ ನಾನು ನನ್ನ ಗೆಳತಿಯರೊಂದಿಗೆ ಹರಟೆ ಹೊಡೆಯುತ್ತಾ ಸಾಗುತ್ತಿದ್ದೆ. ಹೀಗೆ ಮಾತುಗಳ ಮಧ್ಯೆಅಕಸ್ಮಾತಾಗಿ “ಹಣಕ್ಕೆ ಮಾತ್ರ ಬೆಲೆ ಅಲ್ವಾ? ಹಣದಿಂದಲೇ ಎಲ್ಲ, ಜಗತ್ತಿನಲ್ಲಿ ಹಣಕ್ಕಿರುವ ಬೆಲೆ ಮಾನವೀಯತೆಗೆ ಇಲ್ಲ ಲೋಕವೆಲ್ಲಾ ಹಣಮಯ’ ಎಂದು ಹಣ ಮತ್ತು ಮನುಷ್ಯನ ಬೆಲೆಯ ಬಗ್ಗೆ ಚರ್ಚಿಸುತ್ತಾ ಕಾಲೇಜು ತಲುಪಿದ್ದು ಗೊತ್ತೇ ಆಗಲಿಲ್ಲ. ಕಾಕತಾಳೀಯವೋ ಎಂಬಂತೆ ಅಂದಿನ ಪಾಠ ಕೂಡ ಹಣದ ಬಗ್ಗೆಯೇ ಇತ್ತು.

ಸೊಗಸಾದ ಪಾಠ ಅದಾಗಿತ್ತು. ಹಣದ ಬಗ್ಗೆ ಮನುಷ್ಯನಿಗಿರುವ ವ್ಯಾಮೋಹವನ್ನು ಸುಂದರವಾಗಿ ವರ್ಣಿಸುವ ಪಾಠ ಅದಾಗಿತ್ತು. “ಹಣದಿಂದಲೇ ಜೀವನ ಅಲ್ಲ, ಇವತ್ತಿರುವ ವ್ಯಕ್ತಿ ನಾಳೆ ಇರುವುದಿಲ್ಲ. ಹಣವು ಅಷ್ಟೇ ಇವತ್ತು ನಮ್ಮ ಬಳಿ ನಾಳೆ ಇನ್ನೊಬ್ಬರ ಬಳಿ’ ಎಂಬ ಆಶಯವನ್ನು ಅದು ಹೇಳಿತ್ತು.
ಅಸ್ವಸ್ಥನಾಗಿರುವ ಒಬ್ಬ ರೋಗಿಗೆ ನೀವು ಹಣ ಕೊಡಲು ಮುಂದಾದರೆ ಅವನು ಅದನ್ನು ಸ್ವೀಕರಿಸಲಾರ. ಬದಲಾಗಿ ಅವನಿಗೆ ಬೇಕಾಗಿರುವುದು ಸಾಂತ್ವನದ ಮಾತುಗಳು. ದೇವರಿದ್ದಾನೆ ಎಂಬ ಭರವಸೆಯನ್ನು ಅವನಲ್ಲಿ ತುಂಬುವ ಪ್ರಯತ್ನ ಮಾಡಿ. ಆಗ ಅವರ ಮುಖದಲ್ಲಿ ಚೈತನ್ಯ ಮೂಡುವುದನ್ನು ನೀವು ಕಾಣಬಹುದು. ವೃದ್ಧರ ಬಳಿ ಕೇಳಿ ಸೌಜನ್ಯದ ನಾಲ್ಕು ಮಾತುಗಳನ್ನಾಡಿ. ಅನಾಥರ ಬಳಿ ಪ್ರೀತಿ ಮತ್ತು ವಾತ್ಸಲ್ಯಕ್ಕಿರುವ ಬೆಲೆ ತಿಳಿಯಬೇಕು.

ಹಣದಿಂದಲೇ ಎಲ್ಲ ಎನ್ನುತ್ತಿದ್ದ ನನ್ನ ಭಾವನೆ ಬದಲಾಯಿತು. ಅಂದು ನಾನು ದೃಢ ನಿರ್ಧಾರ ಮಾಡಿದೆ. ನನಗೆ ಮಾನವೀಯ ಮೌಲ್ಯಕ್ಕಿರುವ ಬೆಲೆ ಅರಿವಾಯಿತು. ಹಣ ಜೀವನಕ್ಕೆ ಮುಖ್ಯ ಆದರೆ ಹಣ ಸಂಪಾದಿಸುವುದೇ ಜೀವನದ ಉದ್ದೇಶವಾಗಬಾರದು. ಹಣದ ಮೇಲಿರುವ ಪ್ರೀತಿಯನ್ನು ಮನುಷ್ಯರ ಮೇಲೆ ತೋರಿಸಿ. ಇರುವುದನ್ನೆಲ್ಲಾ ಬಿಟ್ಟು ಇರದೆಡೆಗೆ ಹಾತೊರೆಯುವ ಬದಲು ಇದ್ದುದರಲ್ಲೇ ಸಂತೃಪ್ತ ರಾಗೋಣ, ಸಂತೋಷ ವಾಗಿರೋಣ.


ಕವನ ದೇವಾಡಿಗ , ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.