ಸರ್‌ ಕೊಡಿಸಿದ ಪಾರ್ಟಿಯಲ್ಲಿ ತಿನ್ನೋಕೆ ಮಿತಿಯೇ ಇರಲಿಲ್ಲ !


Team Udayavani, Sep 1, 2020, 10:22 PM IST

Canteen

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ನಾವು ಆಗಷ್ಟೆ ವಿಶ್ವ ವಿದ್ಯಾಲಯಕ್ಕೆ ಪ್ರವೇಶವನ್ನ ಪಡೆದಿದ್ದೆವು. ಪಾಠ ಕೇಳುವುದಕ್ಕಿಂತ ನಮಗೆ ವಿವಿಯಲ್ಲಿನ ಹೊಸತನ್ನು ಅರಿಯುವ ಹುಮ್ಮಸ್ಸು.

ಅದೇ ಸಮಯಕ್ಕೆ ವಿವಿಗೆ ನ್ಯಾಕ್‌ ಕಮಿಟಿ ಬರಲು ದಿನಾಂಕ ನಿಗದಿಯಾಗಿತ್ತು. ಹಾಗಾಗಿ ವಿವಿಯಲ್ಲಿ ಕೆಲಸ ಕೂಡಾ ಬಲು ಜೋರಾಗಿತ್ತು.

ನ್ಯಾಕ್‌ ಟೀಮ್‌ನವರು ಪ್ರತಿ ಡಿಪಾರ್ಟ್‌ಮೆಂಟ್‌ಗೆ ಭೇಟಿ ಕೊಡುವುದರಿಂದ ಡಿಪಾರ್ಟ್‌ಮೆಂಟ್‌ಗಳಲ್ಲಿ ಕೂಡಾ ಕೆಲಸಗಳು ಬಲು ಜೋರಿತ್ತು. ನಮ್‌ ಡಿಪಾರ್ಟ್‌ಮೆಂಟ್‌ನಲ್ಲಿ ಬೇರೆ ಬೇರೆ ಭಾಷೆಯ, ಬೇರೆ ಬೇರೆ ದೇಶದ ಪತ್ರಿಕೆಗಳನ್ನ ಸಂಗ್ರಹಿಸಿಡಲಾಗಿತ್ತು.

ಹಾಗಾಗಿ ಡಿಪಾರ್ಟ್‌ಮೆಂಟಿನಲ್ಲಿದ್ದ ಪತ್ರಿಕೆಗಳನ್ನ ಹಿಸ್ಟ್ರಿ ಡಿಪಾರ್ಟ್‌ಮೆಂಟಿನಲ್ಲಿದ್ದ ಆರ್ಟ್‌ ಗ್ಯಾಲರಿಗೆ ಸಾಗಿಸಬೇಕಿತ್ತು. ಈ ಎಲ್ಲ ಪತ್ರಿಕೆಗಳನ್ನ ದೊಡ್ಡ ದೊಡ್ಡ ಟ್ರಂಕ್‌ಗಳಲ್ಲಿ ಇಡಲಾಗಿತ್ತು.

ಸೀನಿಯರ್ ಮತ್ತು ಜ್ಯೂನಿಯರ್ ಸೇರಿ ಇವುಗಳನ್ನ ಸಾಗಿಸಲು ಮುಂದಾದೆವು. ಇವುಗಳನ್ನ ಕೈಯಲ್ಲಿ ಎತ್ತಿಕೊಂಡು ಸಾಗಿಸುವುದು ಕಷ್ಟದ ಕೆಲಸವಾಗಿತ್ತು. ಇನ್ನೊಂದು ಆಸಕ್ತಿಯ ಸಂಗತಿ ಎಂದರೆ ಇವುಗಳನ್ನ ಆರ್ಟ್‌ ಗ್ಯಾಲರಿಗೆ ಸಾಗಿಸಲು ಜತೆಯಾದದ್ದು ವಿವಿಯ ಪುಸ್ತಕ ವಾಹನ. ಬೃಹತ್‌ ಟ್ರಂಕ್‌ಗಳನ್ನ ಎತ್ತಿಕೊಂಡು ಬಂದು ಗಾಡಿಗೆ ಹಾಕಿದೆವು. ಇನ್ನು ಒಂದಿಷ್ಟು ಸ್ನೇಹಿತರು ಅವುಗಳನ್ನು ಆರ್ಟ್‌ ಗ್ಯಾಲರಿಯಲ್ಲಿ ಇಳಿಸಿಕೊಳ್ಳಲು ವಾಹನ ಹತ್ತಿ ಕೂತರು. ಹೀಗೆ ಅದೇ ಗಾಡಿಯಲ್ಲಿ ಮೂರ್ನಾಲ್ಕು ಸಾಗಿಸಿದೆವು.

ಅಂತು ಸಂಜೆ ಐದು ಗಂಟೆಗೆ ಎಲ್ಲ ಕೆಲಸ ಮುಗಿದಿತ್ತು. ಈ ಕೆಲಸ ಮುಗಿಯುತಿದ್ದಂತೆ ಸೀನಿಯರ್ಸ್‌ ಸತ್ಯಪ್ರಕಾಶ್‌ ಸರ್‌ಗೆ ಕಾಲ್‌ ಮಾಡಿ, “ಸರ್‌ ಶಿಫ್ಟಿಂಗ್‌ ಮುಗೀತು’ ಎಂದರು. ಸರ್‌ ಕೂಡಾ ಖುಷಿಯಿಂದಲೆ “ಶಿಫ್ಟಿಂಗ್‌ ಮಾಡಿದವರೆಲ್ಲ ಕ್ಯಾಂಟೀನಲ್ಲಿ ಏನಾದ್ರು ತಿನ್ನಿ. ನಾನು ದುಡ್ಡು ಕೊಡ್ತಿನಿ’ ಎಂದಾಗ ದ‌ಂಡು ಕಟ್ಟಿಕಂಡು ಜಗ್ಗಣ್ಣನ ಕ್ಯಾಂಟೀನಿಗೆ ಲಗ್ಗೆ ಇಟ್ಟೆವು.

ಇದ್ದದ್ದು ನಾವು ಹತ್ತೋ ಹನ್ನೊಂದೋ ಜನ. ಮೊದ ಮೊದಲು ಕ್ಯಾಂಟೀನಿನ ಗೋಬಿ ಮಂಚೂರಿಗೆ ಮುತ್ತಿಕ್ಕೆವು. ಹಿಂದೆಯೇ ನಾನೇನು ಮಾಡಿದ್ದೆ ಅಂತಾ ಟೀ ಕೂಡಾ ಜತೆಯಾಯಿತು. ಇಷ್ಟಕ್ಕೆ ಮುಗಿಯಿತು ಅಂದುಕೊಂಡ ನಾವು ಸುಮ್ಮನೆ ಹರಟೆ ಹೊಡೆಯುತ್ತಾ ಕೂತುಬಿಟ್ಟೆವು. ನಮ್‌ ಸರ್‌ ಏನಾದ್ರೂ ತಿನ್ನಿ ಬಿಲ್‌ ನಾನ್‌ ಕೊಡ್ತಿನಿ ಅಂದಿದ್ದು ಅದು ಯಾರಿಗೆ ನೆನಪಾಯಿತೋ ಗೊತ್ತಿಲ್ಲಾ. ನಿಧಾನಕ್ಕೆ ಬಾದಾಮ್‌ ಮಿಲ್ಕ್, ದೊಡ್ಡ ದೊಡ್ಡ ಕೋನ್‌ ಐಸ್‌ಕ್ರೀಂ, ಮಸಾಲಪೂರಿ ಹೀಗೆ ಒಂದಾದ ಮೇಲೆ ಒಂದರಂತೆ ನಿಧಾನವಾಗಿ ಹೊಟ್ಟೆ ಸೇರಿದವು.

ಎಲ್ಲ ತಿಂದಾದ ಮೇಲೆ ಜಗ್ಗಣ್ಣನ ಬಿಲ್‌ ಕೌಂಟರ್‌ಗೆ ಬಂದೆವು. ಜಗ್ಗಣ್ಣ ನಾವು ತಿಂದಿದ್ದನ್ನು ಎಳೆ ಎಳೆಯಾಗಿ ಲೆಕ್ಕ ಹಾಕ ತೊಡಗಿದರು. ನೋಡ ನೋಡುತ್ತಿದ್ದಂತೆ ಲೆಕ್ಕ ಹೆಚ್ಚುತ್ತಲೇ ಇತ್ತು. ಕೊನೆಗೆ ಬಿಲ್‌ ನೋಡಿದರೆ ಎರಡು ಸಾವಿರ ರೂ. ದಾಟಿ ಹೋಗಿತ್ತು. ಜಗ್ಗಣ್ಣನಿಗೆ ನಮ್‌ ಸರ್‌ ಕೊಡ್ತಾರೆ ಅಂತಾ ಹೇಳಿ ಅಲ್ಲಿಂದ ಕಾಲ್ಕಿತ್ತೆವು.

ಮಾರನೆ ದಿನ ವಿಕ್ಕಿ ಅಣ್ಣನ ಕರೆದು ಬಿಲ್‌ ಕೇಳಿದ್ರು. ಅವನು ಜಗ್ಗಣ್ಣ ಕೊಟ್ಟಿದ್ದ ಬಿಲ್‌ನನ್ನು ಉದ್ದಕ್ಕೆ ಸರ್‌ ಟೇಬಲ್‌ ಮೇಲಿಟ್ಟ. ನಮ್‌ ಸರ್‌ ಇದನ್ನ ನೋಡಿ “ಅದೇನು ತಿಂದ್ರಿ ಇಷ್ಟೊಂದು’ ಎಂದು ಕೇಳಿದರಂತೆ. ತಿಂದವರೆಲ್ಲಾ ಎದುರಿಗೆ ಸಿಕ್ಕಾಗ ನಾವು “ಸರ್‌ ಚೆಕ್‌ ಕೊಟ್ಟಿದ್ದಾ ಕ್ಯಾಶ್‌ ಕೊಟ್ಟಿದ್ದಾ?’ ಅಂತ ಜೋರಾಗಿ ನಗುತ್ತಿದ್ದೆವು.

ಅದೇ ಕೊನೆ. ಅವತ್ತಿಂದ ಸರ್‌ ನಮಗೆ ಪಾರ್ಟಿನೇ ಕೊಡಿಸಲಿಲ್ಲ. ನಾವು ಕೂಡಾ ಅವರು ಮತ್ತೆ ಯಾವಾಗ ಪಾರ್ಟಿ ಕೊಡಿಸುತ್ತಾರೆ ಅಂತಾ ಕಾಯ್ತಾ ಇದ್ದೇವೆ. ಏನೇ ಆಗ್ಲಿ ಅವತ್ತಿನ ನಮ್ಮ ಪಾರ್ಟಿಯಲ್ಲಿ ತಿನ್ನೋಕೆ ಮಿತಿಯೇ ಇರಲಿಲ್ಲ.

 ಪವನ್‌ಕುಮಾರ್‌ ಎಂ., ಕುವೆಂಪು ವಿವಿ 

 

ಟಾಪ್ ನ್ಯೂಸ್

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.