ಕರುನಾಡ ಹೆಮ್ಮೆಯ ಪ್ರಾಕೃತಿಕ ಕೊಡುಗೆ  ಕೊಡಗು


Team Udayavani, Jun 29, 2021, 9:00 AM IST

ಕರುನಾಡ ಹೆಮ್ಮೆಯ ಪ್ರಾಕೃತಿಕ ಕೊಡುಗೆ  ಕೊಡಗು

ಪ್ರವಾಸ ಎಂದರೆ ಪ್ರತಿಯೊಬ್ಬರಿಗೂ ಹಬ್ಬ. ಪ್ರಾಕೃತಿಕ ಸೌಂದರ್ಯವನ್ನು ಸವಿಯುವುದೇ ಒಂದು ಅತ್ಯದ್ಭುತ ಅನುಭವ. ಅಂತಹ ಪ್ರವಾಸ ತಾಣಗಳ ಸಾಲಿನಲ್ಲಿ ಮಡಿಕೇರಿ ಕೂಡ ಒಂದು ಸುಂದರ ಪ್ರವಾಸ ತಾಣ.

ಎತ್ತ ನೋಡಿದರತ್ತ ಹಸುರು ಸೀರೆಯನ್ನು ಉಟ್ಟಿರುವಂತೆ ಕಾಣುವ ವಸುಂಧರೆ, ನಡುವೆ ಹರಿಯುವ ಝರಿಗಳು, ಚಿಲಿಪಿಲಿ ಕಲರವದ ಖಗಗಳು,ಅಲ್ಲಲ್ಲಿ ಧುಮುಕುವ ಜಲಪಾತಗಳು, ಎತ್ತರವಾದ ಮರಗಳು, ಹಸುರು ಹೊದಿಕೆಯಂತೆ ಕಾಣುವ ಕಾಫಿ ತೋಟ… ಈ ಎಲ್ಲ ಅನುಭವ ಪಡೆಯಬೇಕಾದರೆ ನಾವು ಒಮ್ಮೆ ಮಡಿಕೇರಿಗೆ ಭೇಟಿ ಕೊಡಲೇಬೇಕು.

ಕರ್ನಾಟಕದ ಅತೀ ಚಿಕ್ಕ ಜಿಲ್ಲೆ ಎಂದರೆ ಅದು ಕಿತ್ತಳೆಯ ನಾಡು,ದಕ್ಷಿಣ ಭಾರತದ ಸ್ಕಾಟ್‌ಲ್ಯಾಂಡ್‌ ಎಂದೇ ಹೆಸರಾಗಿರುವ ಕೊಡಗು ಜಿಲ್ಲೆ. ಇದು ತನ್ನದೇ ಆದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. ಪರಿಸರ ಪ್ರೇಮಿಗಳಿಗಂತೂ ಅದರ ಅನುಭವವೊಂದು ಹಬ್ಬವೇ ಸರಿ! ತುಂತುರು ಮಳೆಯಲ್ಲಿ ನಡೆದುಹೋಗುವಾಗ ಅಲ್ಲಲ್ಲಿ ಸಿಗುವ ಪುಟ್ಟ ತಂಗುದಾಣಗಳಲ್ಲಿ ಕೂತು ಒಂದು ಕಪ್‌ ಚಹಾ ಸವಿಯುವಾಗ ಆಗುವ ಆಹ್ಲಾದಕರ ಸ್ವಾದ ನಿಜವಾಗಿಯೂ ವರ್ಣಿಸಲಸದಳ ಮತ್ತು ಅತ್ಯದ್ಭುತ.

ಹಾಗೆ ಮುಂದೆ ಹೋದರೆ ಸಿಗುವ ಮತ್ತೂಂದು ಪ್ರವಾಸಿ ತಾಣವೆಂದರೆ ಅಬ್ಬಿ ಫಾಲ್ಸ್. ಬೆಟ್ಟದ ನಡುವೆ ಮೆಟ್ಟಿಲು ಇಳಿದು ನಾವು ಸಾಗಬೇಕು. ಜಿನುಗುವ ಮಳೆಯಲಿ ಸ್ನೇಹಿತರೆಲ್ಲರೂ ಕೈ ಹಿಡಿದು, ಮೆಟ್ಟಿಲುಗಳನ್ನು ಇಳಿದು ಹೋಗುವಾಗ ಜೋರಾಗಿ ಕಿರುಚುವ ಹಂಬಲ, ಸ್ನೇಹದ ಬಾಂಧವ್ಯವನ್ನು ಬೆಸೆಯುತ್ತಾ, ತಮ್ಮ ನೋವುಗಳನ್ನೆಲ್ಲ ಮರೆಮಾಚಿ, ಎಲ್ಲರೂ ಒಂದೇ ಭಾವದಲ್ಲಿ ಹಾಡಿಗೆ ಜೀವವನ್ನು ತುಂಬುತ್ತಾ, ಹಾಡುತ್ತಾ ಸಾಗುವಾಗ ಒಂದು ಸುಂದರ ರಮಣೀಯ ದೃಶ್ಯ ನಮ್ಮ ಕಣ್ಣಮುಂದೆ ಹಾದು ಹೋಗುತ್ತದೆ. ಧುಮುಕುವ ನೀರಿನಲ್ಲಿ ಇಳಿದು, ಎಲ್ಲರ ಮೇಲೂ ನೀರನ್ನು ಎರಚಿಕೊಂಡು, ಆಟವಾಡುವ ಮಜವೇ ಬೇರೆ.

ಕೊಡಗಿನಲ್ಲಿ ನೋಡಬಹುದಾದ ಇನ್ನೊಂದು ಸುಂದರ ತಾಣವೆಂದರೆ ಅದು ತಲಕಾವೇರಿ. ಕನ್ನಡ ನಾಡಿನ ಜೀವನದಿ ತಲಕಾವೇರಿಯ ಉಗಮ ಸ್ಥಾನ. ಬೆಟ್ಟದ ತುದಿಯಲ್ಲಿ ಪ್ರಕೃತಿಯ ಮಡಿಲಲ್ಲಿ. ಅಗಸ್ತ್ಯ ದೇವಸ್ಥಾನದ ಮುಂದಿರುವ ಒಂದು ಕಲ್ಯಾಣಿಯಲ್ಲಿ ಹುಟ್ಟುವ ಈ ನದಿ ಕೋಟ್ಯಂತರ ಜೀವಗಳಿಗೆ ಜೀವನ ನೀಡಿದೆ. ತಲಕಾವೇರಿಯು ಕೊಡಗಿನ ಒಂದು ತುದಿಯ ಭಾಗದಲ್ಲಿದೆ. ಅಗಸ್ತ್ಯ ದೇವಸ್ಥಾನದ ಮಧ್ಯದಲ್ಲಿ ಚಿಕ್ಕದಾದ ಗರ್ಭಗುಡಿಯನ್ನು ಹೊಂದಿದ್ದು, ಸುತ್ತಲೂ ಬೆಣಚು ಕಲ್ಲಿನಿಂದ ಆವರಿಸಿದೆ. ಸುಂದರವಾದ ಅಮೋಘ ಕೆತ್ತನೆಯಿಂದ ನಿರ್ಮಾಣವಾಗಿದೆ ಹಾಗೂ ಮೆಟ್ಟಿಲುಗಳು ಕೂಡ ತುಂಬಾ ದೊಡ್ಡದಾಗಿದ್ದು, ಓಡಾಡಲು ಸರಾಗವಾಗಿದೆ. ಇದನ್ನು ಬೆಟ್ಟದ ತುದಿಯಿಂದ ನಿಂತು ನೋಡಿದರೆ ಬೆಟ್ಟಗಳ ಸಾಲು, ದಟ್ಟ ಕಾನನ, ಹಸುರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಕರುನಾಡ ಹೆಮ್ಮೆಯ ಪ್ರಾಕೃತಿಕ ತಾಣದ ಕೊಡುಗೆಯಾಗಿರುವ ಕೊಡಗಿನ ರಮಣೀಯ ಸ್ಥಳಗಳಿಗೆ ಒಮ್ಮೆ ನೀವೂ ಭೇಟಿ ನೀಡಿ, ಪ್ರಕೃತಿಯ ಚೆಲುವನ್ನು ಆಸ್ವಾದಿಸಿ, ಜತೆಯಲ್ಲಿ ಪ್ರಕೃತಿಯ ಪರಿಶುದ್ಧತೆಯನ್ನು ಕಾಪಾಡಿ.

 

ಗುರುಪ್ರಸಾದ್‌ ಹಳ್ಳಿಕಾರ್‌

ಸರಕಾರಿ ಪದವಿ ಪೂರ್ವ ಕಾಲೇಜು,

 ಸೀಗೆಹಳ್ಳಿ, ತುಮಕೂರು

ಟಾಪ್ ನ್ಯೂಸ್

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.