ನೋವನ್ನುಂಡು  ಜಗವ ನಗಿಸಿದ ಚಾರ್ಲಿ ಚಾಪ್ಲಿನ್‌


Team Udayavani, Sep 16, 2020, 7:44 PM IST

Charlie-Chaplin-Little-Tramp

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ತಾನು ಕಷ್ಟ ಅನುಭವಿಸುತ್ತಲೇ ಇತರರ ಮೊಗದಲ್ಲಿ ನಗು ಮೂಡಿಸಿದಾತ ಯಾರೆಂದರೆ ನಮಗೆಲ್ಲರಿಗೂ ತಟ್ಟನೆ ನೆನಪಾಗುವುದು ಚಾರ್ಲಿ ಚಾಪ್ಲಿನ್‌.

ಕುಂತರೂ, ಹೋದರೂ, ನಡೆದ್ದದು, ನಿಂತಿದ್ದು ಮನುಷ್ಯನ ಜೀವನದ ಸಾಮಾನ್ಯ ಸಂಗತಿಗಳೆಲ್ಲವನ್ನೂ ಹಾಸ್ಯವಾಗಿ, ರಸವತ್ತಾಗಿ ಬಿಂಬಿಸುವುದರಲ್ಲಿ ಈತ ಎತ್ತಿದ ಕೈ.

ಉದ್ದನೆಯ ಕೋಲು, ಗುಂಗುರು ಕೂದಲಿಗೊಂದು ಟೊಪ್ಪಿ, ಸೊಟ್ಟ ಸೊಟ್ಟ ನಡೆ, ನಕದ ಕೆಳಗೆ ಚಿಕ್ಕ ಮೀಸೆ, ಜೋತು ಬೀಳುವ ಕೋಟು, ಪ್ಯಾಂಟ್‌ ಧರಿಸಿ ಚಟಪಟ ಓಡುತ್ತಾ, ಹಾರುತ್ತಾ ಹೀಗೆ ವಿವಿಧ ಆಯಾಮಗಳನ್ನು ಮಾಡುತ್ತಲೇ ಹಾಸ್ಯಲೋಕದಲ್ಲಿ ಎಂದಿಗೂ ಮರೆಯಲಾಗದ ಚಹರೆ ಇಟ್ಟ ವ್ಯಕ್ತಿ ಚಾರ್ಲಿ ಚಾಪ್ಲಿನ್‌. ಈತ 1889 ಎಪ್ರಿಲ್‌ 16ರಂದು ಲಂಡನ್‌ನಲ್ಲಿ ಚಾರ್ಲಸ್‌ ಚಾಪ್ಲಿನ್‌, ಹುನ್ನಾ ದಂಪತಿಯ 2ನೇ ಪುತ್ರನಾಗಿ ಜನಿಸಿದರು. ಮೂಕಿ ಚಿತ್ರದಿಂದ ಟಾಕಿವರೆಗೆ ಈತನಿಗೆ ವಯೋವೃದ್ಧ ಅಭಿಮಾನಿಗಳಿದ್ದಾರೆ.

ಅಸಾಧಾರಣ ಪ್ರತಿಭೆಯ ಹೊನ್ನು
ಚಾರ್ಲಿ ಹೆತ್ತವರೂ ಕಲಾವಿದರಾದ ಕಾರಣ ಚಿಕ್ಕಂದಿನಿಂದಲೇ ಕಲಾ ಪ್ರತಿಭೆ ಇವರಲ್ಲಿ ಚಿಗುರೊಡೆದಿತ್ತು. ಹೂ ಮಾರುವುದು, ಡಾಕ್ಟರ್‌ನೊಂದಿಗೆ ಕ್ಲರ್ಕ್‌, ಹಾಡುಗಾರನಾಗಿ, ನಾಟಕ ಕಲಾವಿದ ಹೀಗೆ ಮಾಡಿದ ಕಾಯಕಗಳೆಲ್ಲದರಲ್ಲೂ ನಿಸ್ಸಿಮರಾಗಿದ್ದರು. ಸಮಾಜದ ನೈಜತೆಯನ್ನು ಎತ್ತಿ ಹಿಡಿದು ತನ್ನ ನಟನಾ ಕೌಶಲದಿಂದಲೇ ಜನಪ್ರಿಯತೆ ಪಡೆದನು. “ನನಗೆ ಮಳೆಯಲ್ಲಿ ನೆನೆಯುವುದು ಇಷ್ಟ ಯಾಕೆಂದರೆ ನಾನು ಮಳೆಯಲ್ಲಿ ಅಳುವುದು ಯಾರಿಗೂ ಕಾಣದು’ ಎಂಬ ಅವರ ನುಡಿಮುತ್ತಿನಿಂದಲೇ ಜೀವನವನ್ನು ಅವರು ಸ್ವೀಕರಿಸಿದ ರೀತಿ ನಮಗೆ ಅರಿವಾಗುತ್ತದೆ.

ಯಾವುದೂ  ಯಾರೂ ಶಾಶ್ವತವಲ್ಲ  ಎಂದು ಜಗಕೆ ಹೇಳಿದಾತ
ಜಗತ್ತಿನಲ್ಲಿ ಯಾವುದು, ಯಾರು ಕೂಡ ಶಾಶ್ವತವಲ್ಲ. ಎಲ್ಲವೂ ಕ್ಷಣಿಕ. ಅಂತೆಯೇ ಈ ವಿಚಾರವಾಗಿ ಚಾರ್ಲಿ ಚಾಪ್ಲಿನ್‌ ಹೇಳುವಂತೆ ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ನಿಮ್ಮ ಸಮಸ್ಯೆಗಳು ಕೂಡ. ಅದಕ್ಕೆ ಒಂದು ದಿನ ಪರಿಹಾರ ಸಿಕ್ಕೆ ಸಿಗುತ್ತದೆ. ಅದನ್ನು ನೀವು ಹುಡುಕಬೇಕು ಎಂದು ಹೇಳಿದ್ದರು.

ಪ್ರತಿಭೆಯ ಕುಲುಮೆ
ಚಾರ್ಲಿ ತನ್ನ ಸ್ವಂತ ನಿರ್ದೇಶನವನ್ನು ಮಾಡುವ ಮುನ್ನ ಬೇರೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಜಗತ್ತಿಗೆ ಪರಿಚಿತರಾಗಿದ್ದಾನೆಂದರೆ ಅದಕ್ಕೆ ಫೋರ್ಡ್‌ ಸ್ಟೆರ್ಲಿಂಗ್‌ನ ಪ್ರಭಾವವು ಇರುವುದನ್ನು ಕಾಣಬಹುದು. ಫೋರ್ಡ್‌ ಸ್ಟೆರ್ಲಿಂಗ್‌ ಆಂಗಿಕ ಅಭಿನಯದ ಮೂಲಕವೇ ಪ್ರಸಿದ್ಧ ನಟರೆಂದು ಗುರುತಿಸಿಕೊಂಡಿದ್ದರು. ಅವರಿದ್ದ ಕಂಪನಿಯನ್ನು ತೊರೆದ ಬಳಿಕ ಅವರ ಅನುಪಸ್ಥಿತಿಯನ್ನು ಚಾರ್ಲಿ ತುಂಬಬೇಕೆಂದು ಸ್ಟೆರ್ಲಿಂಗ್‌ನನ್ನು ಅನುಕರಣೆ ಮಾಡುವಂತೆ ಕಂಪನಿಯೂ ತಿಳಿಸುತ್ತದೆ. ಇಂತಹ ಪಾತ್ರ ತನ್ನಿಂದ ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತಲೇ ಇರುತ್ತಿತಂತೆ. ನಿರ್ದೇಶಕ ಸೆನೆಟ್‌ ಸಾಮಾನ್ಯ ಚಿತ್ರವೊಂದಕ್ಕೆ ಚಾರ್ಲಿಯನ್ನು ಹಾಸ್ಯನಟನಾಗಿ ಆಯ್ಕೆ ಮಾಡಿದ ಬಳಿಕ ಚಾರ್ಲಿಗೆ ತೋಚಿದಂತೆ ಮೇಕ್‌ ಮಾಡಿ ಬಂದು ಹಾಸ್ಯಮಾಡಲು ಹೇಳುತ್ತಾನೆ. ಈ ಸ್ವಂತಿಕೆ ಆತನಿಗೆ ಸಿಕ್ಕಿದ್ದೆ ತಡ ಹಲವು ವರ್ಷಗಳಿಂದ ಬಚ್ಚಿಟ್ಟ ತನ್ನ ವಿಶೇಷ ಪ್ರತಿಭೆಗೆ ಪ್ರೋತ್ಸಾಹ ದೊರೆತಂತಾಯಿತು. ಆ ದಿನ ಆತ ತೊಟ್ಟ ಉಡುಗೆ ತೊಡುಗೆ ಆಂಗಿಕ ಅಭಿನಯವೇ ಇಂದಿಗೂ ಚಾರ್ಲಿಯ ಅನುಪಸ್ಥಿತಿಯನ್ನು ಮರೆಮಾಚುವಂತೆ ಮಾಡಿದೆ.

ನಕ್ಕು-ನಗಿಸಿದ ದೈತ್ಯ ಪ್ರತಿಭೆ
ಚಾರ್ಲಿ ಚಾಪ್ಲಿನ್‌ ಅವರು ತಮ್ಮ ಹಾವಭಂಗಿಯಿಂದಲೇ ಇಡೀ ಜನಸಮೂಹವನ್ನು ಹೊಟ್ಟೆ ಹುಣ್ಣಾಗುವಷ್ಟು ನಗುಸುತ್ತಿದ್ದರು. ಇದರಿಂದ ನಾನು ನೋವು ಮರೆತೆ ಎಂದು ಅವರೇ ಹೇಳಿಕೊಂಡಿದ್ದಾರೆ. ಇನ್ನು ಅವರೇ ಹೇಳುವಂತೆ “ಬದುಕಿನಲ್ಲಿ ನಗದ ದಿನ ವ್ಯರ್ಥ’ ಎಂದಿದ್ದಾರೆ. ನಗು ಎಂಬುದು ಜೀವಾನುಮೃತ ಇದ್ದಂತೆ. ಅದನ್ನು ಎಷ್ಟು ಪಸರಿಸುತ್ತೇವೆಯೋ ಅಷ್ಟು ಆರೋಗ್ಯವಾಗಿರುತ್ತೇವೆ ಎಂಬುದು ಚಾರ್ಲಿಯ ಬದುಕಿನ ತಿರುಳು.

ಆಸ್ಕರ್‌ ಪ್ರಶಸ್ತಿ ಮತ್ತು ಭಾವನಾತ್ಮಕ ಭಾಷಣ
ಚಾರ್ಲಿ ಚಾಪ್ಲಿನ್‌ ಅವರಿಗೆ “ದಿ ಸರ್ಕಸ್‌’ ಎಂಬ ಚಿತ್ರಕ್ಕೆ ಅವರಿಗೆ ಆಸ್ಕರ್‌ ಪ್ರಶಸ್ತಿ ದೊರೆಯುತ್ತದೆ. 1972ರಲ್ಲಿ ಅವರು ಆಸ್ಕರ್‌ ಪ್ರಶಸ್ತಿ ಪಡೆಯಲು ಸಭಾಂಗಣಕ್ಕೆ ಬಂದು ಆಸ್ಕರ್‌ ಪ್ರಶಸ್ತಿ ಸ್ವೀಕರಿಸಿ ಕೇವಲ 45 ಸೆಕೆಂಡ್‌ಗಳಲ್ಲಿ ತಮ್ಮ ಭಾಷಣವನ್ನು ಮುಗಿಸಿದ್ದರು. ಆದರೆ ಸುಮಾರು 40 ನಿಮಿಷಗಳ ಕಾಲ ಇವರ ಭಾಷಣಕ್ಕೆ ಕರತಾಡನ ಹಾಕಲಾಗಿತ್ತು. ಇವರ ಸಾಧನೆಗೆ ಜನರ ಕರತಾಡನ ಸಭಾಂಗಣದಿಂದ ಮುಗಿಲು ಮುಟ್ಟಿತ್ತು. ಆ ಭಾಷಣದ ಭಾವನುವಾದ ಹೀಗಿದೆ. “ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು. ಇಂದು ನಾನು ಅತ್ಯಂತ ಹೆಮ್ಮೆಯ, ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದ್ದೇನೆ. ಈ ಘಳಿಗೆಯನ್ನು ವರ್ಣಿಸಲು ಪದಗಳು ಕೂಡ ಸೋಲುತ್ತೀವೆ. ನಾನು ಧನ್ಯವಾದ ಅಂತ ಮಾತ್ರ ಹೇಳಬಲ್ಲೇ. ಥ್ಯಾಂಕ್ಯೂ, ಥ್ಯಾಂಕ್ಯೂ..!

ಇಂಗ್ಲೆಡ್‌ನ‌ ಕಡು ಬಡತನದ ಕುಟುಂಬದಲ್ಲಿ ಜನಿಸಿ ಅಮೆರಿಕದಲ್ಲಿ ಅಗ್ರಗಣ್ಯ ಶ್ರೀಮಂತನೆನೆಸಿದ ಚಾರ್ಲಿ ಡಿಸೆಂಬರ್‌ 25, 1977ರಂದು ನಿಧನ ಹೊಂದಿದನು. ಫೋಲ್ಯಾಂಡ್‌, ಐರ್ಲ್ಯಾಂಡ್‌, ಸಿಟ್ಜರ್‌ಲ್ಯಾಂಡ್‌, ಭಾರತ ಕೂಡ ಸೇರಿ ಹತ್ತು ಹಲವು ರಾಷ್ಟ್ರಗಳು ಆತನ ಪ್ರತಿಮೆಯನ್ನು ನಿರ್ಮಿಸಿದ್ದು ಆತನ ಮೇಲಿನ ಅಭಿಮಾನವನ್ನು ಪ್ರತಿಬಿಂಬಿಸುತ್ತದೆ.

ಸಿನೆಮಾಗಳು
ಸಿಟಿ ಲೈಟ್ಸ್‌, ದಿ ಟ್ರಾಂಪ್‌, ಪೊಲೀಸ್‌, ಟ್ರಿಪಲ್‌ ಟ್ರಬಲ್‌, ದಿ ಗ್ರೇಟ್‌ ಡಿಕ್ಟೆಟರ್‌, ದಿ ಕಿಂಗ್‌ ಆಫ್ ನ್ಯೂಯಾರ್ಕ್‌, ದಿ ಸರ್ಕಸ್‌, ದಿ ಫೈರ್‌ ಮ್ಯಾನ್‌, ಸೋಲ್ಡರ್‌ ಆಮ್ಸ್‌ì, 1922 ಪೇ ಪೇ, ದಿ ಬಂಡ್‌, ದಿ ಕ್ಯುರ್‌, ದಿ ಅಡ್ವೆಂಚರ್‌ ಸಹಿತ ನೂರಕ್ಕೂ ಹೆಚ್ಚು ಸಿನೆಮಾಗಳಲ್ಲಿ ಆತ ನಟಿಸಿದ್ದು ಅಂದಿನ ಹಾಸ್ಯನಟರಾದ ಹೆರಾಲ್ಡ್‌, ಬೂಸ್ಟನ್‌ ಕಿಟನ್‌ ಇವರಿಬ್ಬರಿಗಿಂತ ಒಂದು ಕೈ ಮೇಲೆಂದೆ ಜನಮನ್ನಣೆ ಪಡೆದಿದ್ದಾರೆ.

 ರಾಧಿಕಾ, ಕುಂದಾಪುರ 

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.