ಕಷ್ಟದಲ್ಲೂ ಖುಷಿ ಕಂಡುಕೊಂಡ ಎಲ್ಕೆ ವೋಗೆಲ್ಸಾಂಗ್‌


Team Udayavani, Jun 1, 2020, 7:47 PM IST

ಕಷ್ಟದಲ್ಲೂ ಖುಷಿ ಕಂಡುಕೊಂಡ ಎಲ್ಕೆ ವೋಗೆಲ್ಸಾಂಗ್‌

ನಿಯತ್ತು ಮತ್ತು ಮಾನವನೊಂದಿಗೆ ಆಪ್ತ ಒಡನಾಟದ ಪ್ರಾಣಿಗಳ ಸಾಲಿನಲ್ಲಿ ಶ್ವಾನಗಳು ಮೊದಲಿಗೆ ನಿಲ್ಲುತ್ತವೆ. ಹೌದು ಶ್ವಾನಗಳು ಎಲ್ಲರಿಗೂ ಗೊತ್ತಿರುವಂತೆಯೇ ನಿಯತ್ತಿಗೆ ಹೆಸರಾದವುಗಳು. ಇನ್ನೂ ಹೆಚ್ಚಾಗಿ ಹೇಳುವುದಾದರೆ ಅನೇಕ ವ್ಯಕ್ತಿಗಳು ಮನುಷ್ಯರಿಗಿಂತಲೂ ಶ್ವಾನಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಮನುಷ್ಯರೊಂದಿಗಿನ ಅನ್ಯೂನ್ಯತೆಯಿಂದಾಗಿ ಜಗತ್ತಿನಾದ್ಯಂತ ಅವುಗಳ ಜನಪ್ರೀಯತೆಯನ್ನು ಹೆಚ್ಚಿಸಿದೆ. ಶ್ವಾನಗಳಿದ್ದರೆ ಯಾವುದೇ ವ್ಯಕ್ತಿಗೂ ಏಕತಾನತೆ ಕಾಡುವುದಿಲ್ಲ. ಅಲ್ಲದೇ ಇವುಗಳನ್ನು ಮಾನಸಿಕ ಒತ್ತಡ ನಿಗ್ರಹಿಗಳೆಂದರೆ ತಪ್ಪಾಗಲಿಕ್ಕಿಲ್ಲ. ಇದೇ ಕಾರಣಕ್ಕೆ ಕೋವಿಡ್-19 ಮಾಹಾಮಾರಿಯ ಲಾಕ್‌ಡೌನ್‌ ಸಮಯದಲ್ಲಿ ಶ್ವಾನಗಳನ್ನು ಸಾಕುವುದು ತೀವ್ರಗತಿಯಲ್ಲಿ ಹೆಚ್ಚಾಗಿದೆಯಂತೆ.

ಹಾಗೆಯೇ ಅವುಗಳು ಛಾಯಾಚಿತ್ರ ಕ್ಷೇತ್ರದಲ್ಲೂ ಬೇಡಿಕೆ ಪಡೆದುಕೊಂಡಿವೆ. ನಡೆದುಕೊಂಡು ಹೋಗುವಾಗ ಮುದ್ದಾದ ನಾಯಿ ಮರಿಯೊಂದು ಎದುರಿಗೆ ಓಡಿಬಂದರೆ ಅದರ ಛಾಯಾಚಿತ್ರ ಸೆರೆಹಿಡಿಯಲು ಯಾರು ತಾನೆ ಮುಂದಾಗುವುದಿಲ್ಲ ಹೇಳಿ. ಹೀಗೆ ಶ್ವಾನಗಳ ವಿಭಿನ್ನ ಸುಂದರ ಮತ್ತು ವಿನೋದಮಯ ಛಾಯಚಿತ್ರಗಳನ್ನು ಸೆರೆಹಿಡಿದು ಜನಪ್ರೀಯತೆ ಪಡೆದಿರುವ ಮಹಿಳೆಯ ಬಗ್ಗೆ ನಾವಿಲ್ಲಿ ಹೇಳಲಿದ್ದೇವೆ.

ಎಲ್ಕೆ ವೋಗೆಲ್ಸಾಂಗ್‌
ಛಾಯಾಚಿತ್ರಗಾರ್ತಿ ಎಲ್ಕೆ ವೋಗೆಲ್ಸಾಂಗ್‌ ಅವರ‌ಲ್ಲಿನ ಶ್ವಾನಗಳ ಬಗೆಗಿನ ವ್ಯಾಮೋಹ, ಪ್ರೀತಿ ಮತ್ತು ಜೀವನದಲ್ಲಿ ಎದುರಾದ ಕಷ್ಟಗಳು ಇಂದು ಅವರನ್ನು ಅತ್ಯುತ್ತಮ ಛಾಯಾಚಿತ್ರಗಾರ್ತಿಯನ್ನಾಗಿ ಮಾಡಿವೆ. ಅಲ್ಲದೇ ಪ್ರಸಿದ್ಧ ಪೆಟ್‌ ಕಂಪೆನಿಗಳಾದ ಪೆಡಿಗ್ರಿ ಮತ್ತು ಫ್ಲಫ್ ಆ್ಯಂಡ್‌ ಟಫ್ ಕಂಪೆನಿಗಳ್ಳೋಂದಿಗೆ ಸೇರಿ ಕಾರ್ಯನಿರ್ವಹಿಸುತ್ತದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇವರಿಗೆ 1.5 ಲಕ್ಷ ಹಿಂಬಾಲಕರಿದ್ದಾರೆ.

ಕಷ್ಟ ಕಾಲದಲ್ಲಿ ಮನೋಬಲ
ಮನೆಯಲ್ಲಿ ಅತ್ತೆ ಬುದ್ದಿಮಾಂದ್ಯ ಕಾಯಿಲೆಯಿಂದ ಬಳಲುತಿದ್ದರು. ಎರಡು ವರ್ಷಗಳ ಅನಂತರ ಪತಿ ಕೂಡ ಮಿದುಳಿನ ರಕ್ತಸ್ರಾವ (ಬ್ರೈನ್‌ ಹ್ಯಾಮರೇಜ್‌) ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರುತ್ತಾರೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಆಕೆಯ ಮನೋಬಲ ಹೆಚ್ಚಿಸಿದ್ದು ಮನೆಯಲ್ಲಿದ ಮುದ್ದಾದ ಶ್ವಾನಗಳು. ಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವಾಗ ಮನೆಯಲ್ಲಿದ್ದ ಶ್ವಾನಗಳು ಛಾಯಾಚಿತ್ರಗಳಾಗಿ ಆಗಾಗ ನನ್ನ ಮೊಬೈಲ್‌ನಲ್ಲಿ ಸೆರೆಯಾಗುತ್ತಿದ್ದವು. ಆದರೆ ಪತಿ ಸಂಪೂರ್ಣವಾಗಿ ಗುಣಮುಖವಾದ ಅನಂತರ ಶ್ವಾನಗಳ ಛಾಯಾ ಚಿತ್ರಗ್ರಹಣವೇ ನನ್ನ ಧ್ಯೇಯವಾಯಿತು ಎನ್ನುತ್ತಾರೆ ವೋಗೆಲ್ಸಾಂಗ್‌.

ಮೊದಲಿಗೆ ತಮ್ಮ ಮನೆ ನಾಯಿಗಳ ಫೋಟೋ ತೆಗೆಯುತ್ತಿದ್ದ ಇವರು ಅನಂತರ ಬೀದಿ ನಾಯಿ, ಹಾಗೂ ಇನ್ನಿತರೆ ಕಡೆಗೆ ಹೊದಾಗಲೆಲ್ಲ ಅವುಗಳ ಮುಗ್ಧ, ಹಾಸ್ಯಾಸ್ಪದವಾದ ಕ್ಯಾಂಡಿಡ್‌ ಫೋಟೋಗಳನ್ನು ಹೆಚ್ಚು ಸೆರೆ ಹಿಡಿಯಲಾರಂಭಿಸಿದರು. ಇದರಿಂದಲೇ ಇಂದು ಪೋಟೋಗ್ರಫಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರತಿಯೊಂದು ಶ್ವಾನದಲ್ಲೂ ಒಂದೊಂದು ವಿಶೇಷತೆ ಇದ್ದು, ಪ್ರತಿಯೊಂದರಿಂದ ಒಂದೊಂದು ಟ್ರಿಕ್ಸ್‌ ಕಲಿಯಲು ಸಾಧ್ಯ.

ಶ್ವಾನಗಳ ಫೋಟೋ ತೆಗೆಯುವಾಗ ಉಂಟಾಗುವ ಯಾವುದೇ ರೀತಿಯ ಮುಜುಗರಗಳಿಗೂ ನಾನು ಅಂಜುವುದಿಲ್ಲ ಎನ್ನುತ್ತಾರೆ ವೋಗೆಲ್ಸಾಂಗ್‌. ಶ್ವಾನಗಳ ಉತ್ತಮ ಫೋಟೊ ಸೆರೆಹಿಡಿಯಬೇಕಾದರೆ ತಾಳ್ಮೆ, ನಂಬಿಕೆ, ಪುನರಾವರ್ತನೆ ಮತ್ತು ಆಹಾರ, ತಿಂಡಿಯ ರೂಪದಲ್ಲಿ ಅವುಗಳಿಗೆ ಲಂಚವನ್ನೂ ನೀಡಬೇಕಾಗುತ್ತದೆ. ಅಲ್ಲದೇ ಈಗಿನ ಕೋವಿಡ್-19 ಲಾಕ್‌ಡೌನ್‌ ಸಮಯದಲ್ಲಿ ನನ್ನ ಏಕಾಂಗಿತನ್ನವನ್ನು ದೂರ ಮಾಡಿದ್ದು, ನಾನು ಇಷ್ಟು ಖುಷಿಯಿಂದಿರಲು ನಮ್ಮ ಮನೆಲ್ಲಿರುವ ನಾಯಿಗಳೇ ಕಾರಣ ಎಂದು ಶ್ವಾನಗಳ ಕೆಲವೊಂದಿಷ್ಟು ಫೋಟೊಗಳನ್ನು ವೋಗೆಲ್ಸಾಂಗ್‌ ಇತ್ತೀಚೆಗೆ ಹಂಚಿಕೊಂಡಿದ್ದರು.

ಇದೆಲ್ಲದಕ್ಕೂ ಹೆಚ್ಚಾಗಿ ಶ್ವಾನಗಳಲ್ಲಿನ ತುಂಟತನ, ಚಾಕಚಕ್ಯತೆ ಮತ್ತು ಹಾಸ್ಯ ಪ್ರವೃತ್ತಿ ಎಂತಹ ಪರಿಸ್ಥಿತಿಯಲ್ಲೂ ನಿಮ್ಮ ಮುಖದಲ್ಲಿ ಮಂದಹಾಸ ಮೂಡಿಸುತ್ತವೆ. ಅಲ್ಲದೇ ಇವುಗಳು ಒಂದು ರೀತಿ ಸಹಜ ಹಾಸ್ಯಗಾರರಿದ್ದಂತೆ. ಹಾಗಾಗಿ ಶ್ವಾನಗಳು ಮನುಷ್ಯರ ಆಪ್ತ ಗೆಳೆಯನ ಸ್ಥಾನ ಪಡೆದುಕೊಂಡಿವೆ.

-ಶಿವಾನಂದ್‌ ಎಚ್‌.

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

7-uv-fusion

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

10-uv-fusion

Lifestyle‌: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ

8-uv-fusion-2

Photographers: ನೆನಪಿನ ನಾವಿಕರಿಗೆ ಸಲಾಂ…

6-uv-fusion

Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.