ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ


Team Udayavani, Jun 5, 2020, 12:10 AM IST

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವ ಮಾತನ್ನು ನಾವು ಚಿಕ್ಕಂದಿನಿಂದಲೇ ಕೇಳಿರುತ್ತೇವೆ. ಮಾತ್ರವಲ್ಲದೆ ಅದರ ಮೇಲೆ ಪ್ರೀತಿ, ಕಾಳಜಿಯು ಮುಖ್ಯವಾಗಿರುತ್ತದೆ. ಅದಕ್ಕನುಗುಣವಾಗಿ ವಿಶ್ವ ಪರಿಸರ ದಿನವೆಂದು ಜೂನ್‌ 5ರಂದು ಆಚರಿಸುತ್ತೇವೆ. ಈ ಮಾತು ಕೇವಲ ಆ ದಿನಕ್ಕನುಗುಣವಾಗಿರದೆ ಪ್ರತಿ ದಿನ ಸಾಧ್ಯವಾಗದಿದ್ದರೆ ವಾರಕ್ಕೊಮ್ಮೆಯಾದರೂ ಸಸ್ಯದ ಪೋಷಣೆ ಮಾಡಿದರೆ ಆ ಗಿಡವೇ ಮುಂದಿನ ಮರವಾಗಿ ನಾವು ಪ್ರಕೃತಿಗೆ ಕೊಟ್ಟ ಉಡುಗೊರೆಯಾಗುತ್ತದೆ.

ಪ್ರಸ್ತುತ ಕಾಲಘಟ್ಟದಲ್ಲಿ ನಮಗೆ ತಿಳಿದಿವೆ. ಈ ಜಗತ್ತಿನ ಅತಿ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಅತಿಹೆಚ್ಚು ಸ್ಥಾನ ನಮ್ಮ ದೇಶದಲ್ಲಿವೆಯೆಂದು ಏರ್ ಕ್ವಾಲಿಟಿ ರಿಪೋರ್ಟ್‌ ಹೇಳುತ್ತಿದೆ. ಪರಿಸ್ಥಿತಿ ಕೆಲವು ಕಡೆಗಳಲ್ಲಿ ಕೈ ಮೀರಿ ನಿಂತಿದೆ ಎನ್ನುವ ಸಂದರ್ಭದಲ್ಲಿ ಇಡೀ ವಿಶ್ವಕ್ಕೇ ಸವಾಲಾಗಿ ಕೋವಿಡ್ ಎಂಬ ವೈರಸ್‌ ನಿಂತಿದೆ. ಇದರಿಂದ ಎಷ್ಟೋ ಅಭಿವೃದ್ಧಿ ಕಾರ್ಯಗಳು ನಿಂತರೆ ಅತ್ತ ಪರಿಸರ ಕಳೆದು ಹೋಗಿದ್ದ ತನ್ನ ಜೀವಕಳೆ ಮರಳಿ ಪಡೆಯಿತು. ದೇವರ ಆಟ ಬಲ್ಲವರಾರು ಎಂಬಂತೆ ಈ ಸಮಯದ ಸದ್ವಿನಿಯೋಗವಾದಂತಾಯಿತು.

ಲೊಕ್ಡೌನ್‌ ಸಂದರ್ಭ ಅದೆಷ್ಟೋ ಧೂಳು ಮಿಶ್ರಿತ ಪ್ರದೇಶ ಕಡಿಮೆಯಾಯಿತು, ಕಲುಷಿತಗೊಂಡಿದ್ದ ನದಿಗಳು ಸ್ವಚ್ಛತೆಯಿಂದ ಕೂಡಿತು, ಅದಷ್ಟೇ ಅಲ್ಲದೆ ಪ್ರಾಣಿ- ಪಕ್ಷಿ ಸಂಕುಲಗಳು ನಿರ್ಭೀತಿಯಿಂದ ವಿಹರಿಸಿದವು. ಈ ಮಾತು ಏಕೆ ಬಂತೆಂದರೆ ಮನುಷ್ಯನ ದುರ್ಭುದ್ಧಿ ಹಾಗೂ ದುರಾಲೋಚನೆಯಿಂದ ಕಾಡು ಇದ್ದ ಜಾಗದಲ್ಲಿ ನಾಡು ಎದ್ದು ನಿಂತಿದೆ .ಇವೆಲ್ಲವೂ ಮುಖ್ಯ ಎಂದೆನಿಸಿದರೆ ಪರಿಸರ ರಕ್ಷಣೆ ಮಾತು ಏಕೆ ಬಹುಮುಖ್ಯವೆನಿಸಿಲ್ಲ? ಇವೆಲ್ಲ ಮನುಷ್ಯನ ಆಸೆ, ಆಕಾಂಕ್ಷೆಗಳನ್ನೂ ಮೀರಿ ದುರಾಸೆಯ ಪ್ರತಿಫ‌ಲವಾಗಿ ಇಂದು ಹಲವಾರು ಕಡೆಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿ ಗೋಚರಿಸಿದೆ. ಹಾಗೆಯೇ ವಾತಾವರಣದಲ್ಲಿ ಬಹಳಷ್ಟು ಬದಲಾವಣೆಗಳ ಜೊತೆಗೆ ವೈಪರೀತ್ಯದ ಪ್ರಭಾವ ತುಸು ಹೆಚ್ಚಾಗಿಯೇ ಇದೆ. ಇದೇ ಕಾರಣಕ್ಕಾದರೂ ಪರಿಸರ ರಕ್ಷಿಸಿ ಉಳಿಸಿ ಬೆಳೆಸಿಕೊಂಡರೆ ಪ್ರಸ್ತುತ ಪರಿಸ್ಥಿತಿ ತುಸು ಬದಲಾವಣೆಯ ಬಗ್ಗೆ ಯೋಚಿಸಬಹುದು. ಇದಲ್ಲದೇ ಕಟ್ಟು ನಿಟ್ಟಿನ ಕ್ರಮಗಳಿದ್ದರೂ ವಾಮ ಮಾರ್ಗದ ಮೂಲಕ ತಮ್ಮ ಕಾರ್ಯ ಸಫ‌ಲಗೊಳ್ಳುತ್ತದೆ.

ಇದಕ್ಕೆ ಮುನ್ಸೂಚನೆಯಂತೆ ಅತಿ ದಟ್ಟ ಅರಣ್ಯ ಎಂಬ ಖ್ಯಾತಿ ಗಳಿಸಿರುವ ಅಮೆಜಾನ್‌ ನ ಪಾಶ್ವ ಭಾಗ ಬೆಂಕಿಗಾಹುತಿ, ಆಸ್ಟ್ರೇಲಿಯಾದ ಬಹುತೇಕ ಹುಲ್ಲುಗಾವಲು ಪ್ರದೇಶ ಹಾಗೂ ಅರಣ್ಯ ಪ್ರದೇಶಗಳಲ್ಲಿ ವ್ಯಾಪಿಸಿದ ಬೆಂಕಿ ನಿಯಂತ್ರಣ ಸಾಧಿಸಲು ಹಲವಾರು ದಿನಗಳೇ ಬೇಕಾಯಿತು. ಹೀಗೆ ಹತ್ತು ಹಲವಾರು ದೇಶಗಳಲ್ಲಿ ವಿವಿಧ ಕಾರಣಗಳಿಂದ ಆದ ಅನಾಹುತ ನಮ್ಮ ಸಮಾಜದಲ್ಲಿ ಚರ್ಚೆ ನಡೆದದ್ದೂಇದೆ. ಮುಖ್ಯವಾಗಿ ಈಗಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿಯಾಗಿವೆ. ಮರಗಳನ್ನು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ನಿರಾಯಾಸವಾಗಿ ಬದಲಿಸಬಹುದು ಈ ತಂತ್ರಜ್ಞಾನದ ಸಹಾಯದಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ದುರುಪಯೋಗವಿದೆ ಎಷ್ಟು ಪರಿಣಾಮಕಾರಿಯಾಗಿ ಪ್ರಭಾವ ಬೀರುವುದೋ ಅಷ್ಟೇ ಒಳಿತು ಕೆಡುಕಿನ ಸಂಭವವಿರುತ್ತದೆ. ಈಗಿನ ಬಹುತೇಕ ಕೆಲಸ ಕಾರ್ಯಗಳು ಕೇವಲ ಲಾಭ ನಷ್ಟದ ಪ್ರಮಾಣವನ್ನಾಧರಿಸಿದೆ. ಕಾರಣ ಲಾಭ ಮನುಷ್ಯನ ಗೌರವ ಪ್ರತಿಷ್ಠೆ ಮಾತಾದರೆ ನಷ್ಟ ಮಾನ ಮರ್ಯಾದೆ ಪ್ರಶ್ನೆಯಾಗಿ ಬದಲಾವಣೆಯಾಗಿದೆ. ಇದೇ ರೀತಿ ಪರಿಸರ ದಿನದ ಮಹತ್ವ ಪೂರ್ಣ ಸಾಕಾರಗೊಳಿಸುವ ಪ್ರಯತ್ನ ನಮ್ಮ ನಿಮ್ಮೆಲ್ಲರದಾಗಲಿ. ವೃಕ್ಷೊà ರಕ್ಷತಿ ರಕ್ಷಿತಃ

ನಾಗಪ್ರಸಾದ್‌, ಕಾಮತ್‌ , ಶ್ರೀಭುನೇಂದ್ರ ಕಾಲೇಜು ಕಾರ್ಕಳ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.