ಭಾರತೀಯ ಸೇನೆಯ ಕಲಿ ಫೀಲ್ಡ್‌ ಮಾರ್ಷಲ್‌ ಕೆ. ಎಂ. ಕಾರ್ಯಪ್ಪ


Team Udayavani, Sep 17, 2020, 7:58 PM IST

FMC

ಭಾರತ ಸೈನ್ಯದ ಪ್ರಪ್ರಥಮ ಫೀಲ್ಡ್ ಮಾರ್ಷ್‌ಲ್‌ ಮಹಾದಂಡನಾಯಕ ಕೊದಂಡೆರ ಮಾದಪ್ಪ ಕಾರ್ಯಪ್ಪ ಅವರು ಭಾರತೀಯರ ಜನಮನದಲ್ಲಿ ಕಳಶಪ್ರಾಯರು. ಇವರು ಕರ್ನಾಟಕದ ಕೊಡಗಿನವರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.

ಭಾರತೀಯ ಸೇನೆಯಲ್ಲಿ ಅತ್ಯುನ್ನತ ಪದವಿ ಗಳಿಸಿದ್ದ ಇವರು ಶಿಸ್ತು, ಆದರ್ಶಕ್ಕೆ ಹೆಸರಾಗಿದ್ದರು. ಈ ಕಾರಣದಿಂದಲೇ ಅವರು ಕೊಡಗಿನ ಮಂದಿಗಷ್ಟೇ ಅಲ್ಲ; ಎಲ್ಲ ಯುವಕರ ಪಾಲಿಗೆ ಸ್ಫೂರ್ತಿಯ ಚಿಲುಮೆ. ಇವರ ಸೇನೆಯ ಬದುಕಿನ ರೋಚಕ ಕ್ಷಣಗಳು ಕೇಳಿದರೆ ಮೈ ರೋಮಾಂಚನಗೊಂಡು ನಮ್ಮಲ್ಲೊಂದು ಕಿಡಿ ಹಚ್ಚುವಂತೆ ಮಾಡುತ್ತದೆ.

ಕಾರ್ಯಪ್ಪನವರು 1899ರ ಜನವರಿ 28ರಂದು ಕೊಡಗಿನ ಶನಿವಾರ ಸಂತೆಯಲ್ಲಿ ಜನಿಸಿದರು. ಇವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಡಿಕೇರಿಯ ಕೇಂದ್ರಿಯ ಪ್ರೌಢ ಶಾಲೆಯಲ್ಲಾಯಿತು. ಆ ಬಳಿಕ ಮದ್ರಾಸಿನ ಪ್ರಸಿಡೆನ್ಸಿ ಕಾಲೇಜಿನಲ್ಲಿ ಕಾಲೇಜು ಶಿಕ್ಷಣವನ್ನು ಪೂರೈಸಿದರು. ಕಾಲೇಜಿನಲ್ಲಿ ಪುಸ್ತಕಗಳು ಮತ್ತು ಖ್ಯಾತ ಶಿಕ್ಷಣ ತಜ್ಞರ ನೇತೃತ್ವದಲ್ಲಿ ನಡೆಯುತ್ತಿದ್ದ ನಾಟಕಗಳು ಕಾರ್ಯಪ್ಪನವರನ್ನು ಬಹಳಷ್ಟು ಆಕರ್ಷಿಸಿದ್ದವು. ಸಕ್ರಿಯ ಕ್ರೀಡಾಪಟು ಕೂಡ ಆಗಿದ್ದ ಇವರು ಹಾಕಿ ಮತ್ತು ಟೆನಿಸ್‌ನಂತಹ ಆಟಗಳಲ್ಲಿಯೂ ನಿಪುಣರಾಗಿದ್ದರು.

1918ರ ಮೊದಲನೆಯ ಮಹಾಯುದ್ಧ ಮುಗಿದಾಗ ಭಾರತೀಯರನ್ನೂ ಸೈನ್ಯಾಧಿಕಾರಿಗಳ ಸ್ಥಾನಕ್ಕೆ ಪರಿಗಣಿಸಲು ಕೂಗು ಕೇಳಿಬಂತು. ಆಗ ನಡೆದ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಆಯ್ಕೆಗೊಂಡವರಲ್ಲಿ ಕಾರ್ಯಪ್ಪನವರೂ ಓರ್ವರು. ಮೊದಲು ಇಂದೂರಿನ ಡೆಲ್ಲಿ ಕೆಡೆಟ್‌ ಕಾಲೇಜಿನಲ್ಲಿ ರಾಜನ ಸೈನ್ಯಕ್ಕೆ ನಿಯುಕ್ತರಾದ ಭಾರತೀಯ ಅಧಿಕಾರಿಗಳ ಮೊದಲ ವರ್ಗಕ್ಕೆ ಸೇರಿಕೊಂಡ ಕಾರ್ಯಪ್ಪನವರು ಮುಂದೆ ಮುಂಬಯಿಯಲ್ಲಿದ್ದ ಕಾರ್ನಾಟಿಕ್‌ ಪದಾತಿ ದಳಕ್ಕೆ ನಿಯುಕ್ತಿಗೊಂಡರು.

ಕ್ವೆಟ್ಟಾ ಮಹಾವಿದ್ಯಾಲಯಕ್ಕೆ ಸೇರಿದ ಮೊದಲ ಭಾರತೀಯ
ಮೊದಲ ಬಾರಿಗೆ ಇರಾಕ್‌(ಅಂದಿನ ಮೆಸೊ ಪೊಟಾಮಿಯಾ)ನಲ್ಲಿದ್ದ ವೇಲ್ಸ್ ರಾಜಕುಮಾರನ ಡೊಗ್ರಾ ದಳದೊಂದಿಗೆ ಸೈನ್ಯದ ಸಕ್ರಿಯ ಸೇವೆ ಆರಂಭಿಸಿ, ಅನಂತರ ಇವರನ್ನು ವಿಕ್ಟೋರಿಯಾ ರಾಣಿಯ ಆಪ್ತ ದಳವಾದ 2ನೇ ರಾಜಪೂತ್‌ ಲಘು ಪದಾತಿ ದಳಕ್ಕೆ ವರ್ಗಾಯಿಸಲಾಯಿತು.ಸೇನೆಯಿಂದ ನಿವೃತ್ತಿಹೊಂದುವವರಿಗೂ ಇವರು ಇದೇ ಸೇನೆಯಲ್ಲಿ ಸೇವೆಗೈದರು. 1933ರಲ್ಲಿ ಕ್ವೆಟ್ಟಾದಲ್ಲಿದ್ದ ಸಿಬಂದಿ ಮಹಾವಿದ್ಯಾಲಯಕ್ಕೆ ತರಬೇತಿ ಪಡೆಯಲು ಸೇರಿದ ಮೊದಲ ಭಾರತೀಯ ಅಧಿಕಾರಿ ಕಾರ್ಯಪ್ಪನವರಾಗಿದ್ದರು. ಮುಂದೆ 1946ರಲ್ಲಿ ಇವರಿಗೆ ಫ್ರಾಂಟಿಯರ್‌ ಬ್ರಿಗೇಡ್‌ ದಳದ ಬ್ರಿಗೇಡಿಯರ್‌ ಆಗಿ ಭಡ್ತಿ ನೀಡಲಾಯಿತು.

ತುಕಡಿಯನ್ನು ಪಡೆದ  ಮೊದಲ ಭಾರತೀಯ ಅಧಿಕಾರಿ
1941-42ರ ಅವಧಿಯಲ್ಲಿ ಇರಾಕ್‌, ಸಿರಿಯಾ ಮತ್ತು ಇರಾನ್‌ ಪ್ರದೇಶಗಳಲ್ಲಿ, 1943-44ರಲ್ಲಿ ಬರ್ಮಾ, ವಝಿರಿಸ್ತಾನದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿದ್ದಾರೆ. 1942ರಲ್ಲಿ ಇವರ ಸ್ವಾಧೀನಕ್ಕೆ ಒಂದು ತುಕಡಿಯನ್ನು ಒಪ್ಪಿಸಲಾಯಿತು. ಈ ಅಧಿಕಾರ ಪಡೆದ ಮೊದಲ ಭಾರತೀಯ ಅಧಿಕಾರಿ ಇವರು. ಸ್ವಲ್ಪ ಸಮಯದ ನಂತರ ಬರ್ಮಾದಿಂದ ಜಪಾನೀಯರನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದ 26ನೇಯ ಸೈನ್ಯವಿಭಾಗದಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಇಚ್ಛೆ ವ್ಯಕ್ತಪಡಿಸಿದ ಕಾರ್ಯಪ್ಪನವರು ಆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದಾಗ ಅವರಿಗೆ ಆರ್ಡರ್‌ ಆಫ್ ದಿ ಬ್ರಿಟಿಷ್‌ ಎಂಪೈರ್‌ ಗೌರವವನ್ನು ಪ್ರದಾನಿಸಲಾಯಿತು.

ಸಮರ್ಥ ನಾಯಕತ್ವ
ಕಾರ್ಯಪ್ಪನವರು ಇದ್ದ ಕಾಲದಲ್ಲಿ ಲೆಫ್ಟಿನೆಂಟ್‌ ಜನರಲ್‌ಎಂದಿದ್ದ ಹುದ್ದೆಯನ್ನು ಔನ್ನತ್ಯಗೊಳಿಸಿ ಈಸ್ಟರ್ನ್ ಆರ್ಮಿ ಕಮಾಂಡರ್‌ ಎಂದು ಮಾಡಲಾಯಿತು. ಝಿಲಾ, ದ್ರಾಸ್‌ ಮತ್ತು ಕಾರ್ಗಿಲ್‌ ಪ್ರದೇಶಗಳನ್ನು ಹಿಂದಿರುಗಿ ಪಡೆಯಲು ಸೈನ್ಯಕ್ಕೆ ಕಾರ್ಯಪ್ಪನವರು ಸಮರ್ಥ ನಾಯಕತ್ವ ನೀಡಿ, ಲೆಹ್‌ ಪ್ರದೇಶಕ್ಕೆ ಕಡಿದು ಹೋದ ಸಂಪರ್ಕವನ್ನು ಮರಳಿ ದೊರಕಿಸಿಕೊಟ್ಟರು. 1949ರಲ್ಲಿ ಅವರನ್ನು ಕಮಾಂಡರ್‌ ಇನ್‌ ಚೀಫ್ ಎಂದು ನೇಮಿಸಲಾಯಿತು. ಇಂಪೀರಿಯಲ್‌ ಆರ್ಮಿ ಎಂದು ಅಲ್ಲಲ್ಲಿ ಹಂಚಿಹೋಗಿದ್ದ ಭಾರತೀಯ ಸೈನ್ಯವನ್ನು ರಾಷ್ಟ್ರೀಯ ಸೈನ್ಯವಾಗಿ ಒಂದುಗೂಡಿಸಿದ ಶ್ರೇಯಸ್ಸು ಕಾರ್ಯಪ್ಪನವರಿಗೆ ಸಲ್ಲುತ್ತದೆ.‌

1953ರಲ್ಲಿ ಸೈನ್ಯದಿಂದ ನಿವೃತ್ತಿಯ ಅನಂತರದಲ್ಲಿ ಕಾರ್ಯಪ್ಪನವರು ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಭಾರತೀಯ ರಾಯಭಾರಿಯಾಗಿ ನಿಯೋಜಿಸಲ್ಪಟ್ಟಿದ್ದರು. ಬಹಳಷ್ಟು ದೇಶಗಳಲ್ಲಿನ ಸೈನ್ಯಗಳ ಸಂಘಟನೆಗಳ ಕಾರ್ಯದಲ್ಲಿ ಸೇವೆ ಸಲ್ಲಿಸಿದ್ದ ಕಾರ್ಯಪ್ಪ ಚೀನ, ಜಪಾನ್‌, ಅಮೆರಿಕ, ಬ್ರಿಟನ್‌ ಮತ್ತು ಬಹುತೇಕ ಯೂರೋಪ್‌ ರಾಷ್ಟ್ರಗಳಲ್ಲಿಯೂ ಕಾರ್ಯಾಚರಿಸಿದ್ದಾರೆ. ಅಮೆರಿಕಾದ ಅಧ್ಯಕ್ಷ ಟ್ರೂಮನ್‌ ಅವರು ಕಾರ್ಯಪ್ಪನವರಿಗೆ Order of the Chief Commander of the Legion of Merit ಪ್ರಶಸ್ತಿ ನೀಡಿ ಗೌರವಿಸಿದ್ದರು.

1962, 1965, 1971ರಲ್ಲಿ ಯುದ್ಧಗಳಾದಾಗ ಕಾರ್ಯಪ್ಪನವರು ಗಡಿಯಲ್ಲಿ ಸಂಚರಿಸಿ ಭಾರತೀಯ ಸೈನ್ಯಕ್ಕೆ ಸ್ಫೂರ್ತಿ ತುಂಬುವ ಕೆಲಸ ಮಾಡಿದ್ದರು. 1983ರ ವರ್ಷದಲ್ಲಿ ಕಾರ್ಯಪ್ಪನವರ ಉತ್ಕೃಷ್ಟ ಸೇವೆಯ ಸ್ಮರಣಾರ್ಥವಾಗಿ ಭಾರತ ಸರಕಾರ ಅವರಿಗೆ ಫೀಲ್ಡ್ ಮಾರ್ಷಲ್‌ ಗೌರವವನ್ನು ಸಮರ್ಪಿ ಸಿತು. ತಮ್ಮ ನಿವೃತ್ತಿಯ ಬಹಳಷ್ಟು ವರ್ಷಗಳನ್ನು ಕಾರ್ಯಪ್ಪ ನವರು ಮಡಿಕೇರಿಯ ಸುಂದರ ಪರಿಸರದಲ್ಲಿ ಕಳೆದರು.
ಜತೆಗೆ ಸ್ವತಃ ಪ್ರಕೃತಿ ಪ್ರೇಮಿಯಾದ ಕಾರ್ಯಪ್ಪನವರು ಜನರಿಗೆ ಪ್ರಕೃತಿ ಪ್ರೇಮ, ಸ್ವತ್ಛತೆ ಮತ್ತು ಬದುಕಿನ ಹಲವಾರು ಸೌಂದರ್ಯ ವಿಚಾರಗಳ ಕುರಿತಾದ ಶಿಕ್ಷಣ ನೀಡುವ ಕೆಲಸವನ್ನು ಸಾಂಗವಾಗಿ ನಡೆಸಿದರು. 94 ವರ್ಷಗಳ ಶುದ್ಧ ಜೀವನವನ್ನು ನಡೆಸಿದ ಕಾರ್ಯಪ್ಪನವರು ಮೇ 15, 1993ರಂದು ಬೆಂಗಳೂರಿನಲ್ಲಿ ನಿಧನರಾದರು.

ಪ್ರತಿಯೊಬ್ಬ ಯೋಧ‌ನೂ ನನ್ನ ಮಗನೆ
1965ರ ಅವಧಿಯಲ್ಲಿ ಭಾರತೀಯ ವಾಯುದಳದ ಪೈಲಟ್‌ ಆದ ಅವರ ಮಗ ಪಾಕಿಸ್ಥಾನಿ ಸೇನೆಗೆ ಸೆರೆಸಿಕ್ಕ ಸಂದರ್ಭ ದಲ್ಲಿ ಸ್ವಾತಂತ್ರÂ ಪೂರ್ವದಲ್ಲಿ ಅವರ ಸಹಾಯಕರಾಗಿದ್ದ ಸ್ನೇಹದಲ್ಲಿ ಪಾಕಿಸ್ಥಾನದ ಅಧ್ಯಕ್ಷ ಅಯೂಬ್‌ ಖಾನ್‌ ಅವರು, ಕಾರ್ಯಪ್ಪನವರಿಗೆ ಅವರ ಮಗನನ್ನು ಉಳಿದ ಶತ್ರುಸೈನಿಕರಂತೆ ಕಾಣುವುದಿಲ್ಲ ಎಂಬ ಮಾತನಾಡಿದಾಗ, ಅದನ್ನು ತಿರಸ್ಕರಿಸಿದ ಕಾರ್ಯಪ್ಪನವರು ಈ ದೇಶದ ಪ್ರತಿಯೊಬ್ಬ ಯೋಧನೂ ನನ್ನ ಮಗ ಎಂದಿದ್ದರು.

 ಸುಶ್ಮಿತಾ ಜೈನ್‌, ಉಜಿರೆ 

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.