ಮೊದಲ ಮಳೆಯಲಿ ನೆನೆದ ಅನುಭವ…


Team Udayavani, Jun 6, 2021, 11:00 AM IST

ಮೊದಲ ಮಳೆಯಲಿ ನೆನೆದ ಅನುಭವ…

ಸಾಂದರ್ಭಿಕ ಚಿತ್ರ

ಮಳೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕ ವಯಸ್ಸಿನಿಂದಲೂ ನನಗೆ ಮಳೆಯಲ್ಲಿ ನೆನೆಯಬೇಕೆಂಬ ಆಸೆ. ಆದರೆ ಅಮ್ಮನ ಭಯ. ಮಳೆ ಬರುತ್ತಿರುವಾಗ “ಅಮ್ಮ ಒಂದೇ ಒಂದು ಬಾರಿ ಹೊರಗೆ ಹೋಗುತ್ತೇನೆ’ ಎಂದು ಕೇಳಿದರೆ ಆಕೆ ಬೇಡ ಎನ್ನುತ್ತಿರಲಿಲ್ಲ. ಬದಲಾಗಿ ನನ್ನನ್ನೊಮ್ಮೆ ಕೋಪದಿಂದ ನೋಡುತ್ತಿದ್ದಳು. ಅಪ್ಪನಲ್ಲಿ ಹೇಳುತ್ತೇನೆ ನೋಡು ಎಂದಾಗ ನಾನು ಹೆದರಿ ಸುಮ್ಮನಾಗುತ್ತಿದ್ದೆ. ಆದರೆ ಈ ಬಾರಿಯ ಮಳೆ ನನಗೆ ಹೊಸ ಹುರುಪನ್ನು ತಂದಿತ್ತು.  ಆ ದಿನ ಸಂಜೆ. ಸೂರ್ಯ ಇನ್ನೇನೂ ಮುಳುಗಿ ಕತ್ತಲು ಆವರಿಸಿತು.

ಜೋರಾಗಿ ಗಾಳಿ ಮಳೆ ಬರಲು ಆರಂಭವಾಯಿತು. ಕೆಂಡದಂತೆ ಉರಿಯುತ್ತಿದ್ದ ಧರೆ ಮಳೆರಾಯನ ಆಗಮನದಿಂದ ತಂಪಾಯಿತು. ಹಾಡು ಕೇಳುತ್ತಾ ಕುಳಿತಿದ್ದ ನನಗೆ ಹೊರಗೆ ನೋಡುವಾಗ ಮಳೆಯಲ್ಲಿ ನೆನೆಯುವ ಆಸೆ ಇನ್ನಷ್ಟು ಹೆಚ್ಚಾಯಿತು.

ನಾನು ಸುಮ್ಮನೆ “ಅಮ್ಮಾ’ ಎಂದೆ. ಅಷ್ಟರಲ್ಲೇ ಅಮ್ಮ “ಮೊದಲ ಮಳೆಯಲ್ಲಿ ಒದ್ದೆ ಆಗಬೇಡ, ಜ್ವರ, ಶೀತ ಬರುತ್ತೇ ಎಂದಳು. ಅಪ್ಪ ಕೂಡ ಅಮ್ಮನ ಜತೆ ಸೇರಿ “ಏನು ಮಕ್ಕಳಾಟ ನಿನ್ನದು’ ಎಂದು ಗದರಿದರು. ಆದರೆ ಈ ಬಾರಿ ನನ್ನ ಮನಸ್ಸು ಯಾರ ಮಾತನ್ನೂ ಕೇಳುವಂತಿರಲಿಲ್ಲ. ಆದದ್ದು ಆಗಲಿ ಎಂದು ಅಂಗಳದ ಕಡೆ ಹೆಜ್ಜೆ ಹಾಕಿಯೇ ಬಿಟ್ಟೆ. ವಾ ! ಆ ಕ್ಷಣದಲ್ಲಿ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಮಳೆಯಲ್ಲಿ ನೆನೆಯುತ್ತಾ ಒಂದು ಕ್ಷಣ ಮಗುವಾಗಿ ಬಿಟ್ಟೆ. ಕಿವಿಗೆ ಮಳೆರಾಯನು ಧರೆಯನ್ನು ಚುಂಬಿಸುವ ಸದ್ದು ಬಿಟ್ಟರೆ ಬೇರೇನೂ ಕೇಳುತ್ತಿರಲಿಲ್ಲ. ಮಳೆ ನಿಂತ ಬಳಿಕ ಮೆಲ್ಲನೆ ಒಳ ಬಂದ ನನಗೆ ಅಪ್ಪ, ಅಮ್ಮನ ಬಿಸಿ ಬಿಸಿ ಬೈಗುಳ ಸಿದ್ಧವಾಗಿಯೇ ಇತ್ತು. ಆದರೆ ಮಳೆಗೆ ನೆನೆದೆನಲ್ಲ ಎಂಬ ಸಂತೋಷದ ಮಧ್ಯೆ ಅದೇನೂ ದೊಡ್ಡದಾಗಿ ಕಾಣಲಿಲ್ಲ. ಕಾರಣ ಆ ಮೊದಲ ಮಳೆ ನನ್ನ ಮನಸ್ಸಿನಲ್ಲಿ ಆಗಲೇ ಮನೆಮಾಡಿತ್ತು.

 

-  ಲಾವಣ್ಯಾ ಎಸ್‌.  ಸಂತ ಫಿಲೋಮಿನಾ, ಪುತ್ತೂರು

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.