ಸ್ವಾತಂತ್ರ್ಯ ಜೀವನದ ಅವಿಭಾಜ್ಯ ಅಂಗ


Team Udayavani, Aug 15, 2020, 8:35 AM IST

bird freedom

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಪ್ರಪಂಚದಲ್ಲಿ ವಾಸಿಸುವ ಪ್ರತಿ ಜೀವ ಸಂಕುಲಕ್ಕೆ ಆವಶ್ಯಕ ವಾಗಿರುವುದು ಸ್ವಾತಂತ್ರ್ಯ.

ಸ್ವಾತಂತ್ರ್ಯ ವಿಲ್ಲದೆ ಉತ್ತಮ ಬದುಕು ನಡೆಸುವುದು ಅಸಾಧ್ಯ.

ವ್ಯಕ್ತಿಗೆ ಸ್ವತಂತ್ರವಾಗಿ ಬದುಕುವು ದಕ್ಕಿಂತ ಮಿಗಿಲಾದ ಹಕ್ಕು ಬೇರೊಂದಿಲ್ಲ. ಅದಕ್ಕೆ ಪೂರಕವಾಗಿ ಹಕ್ಕಿಯ ಕಥೆಯೊಂದು ಇಲ್ಲಿದೆ.

ಒಬ್ಬ ರಾಜ ಕಾಡಿನಲ್ಲಿ ಬೇಟೆಯಾಡುವಾಗ ಒಂದು ಪಕ್ಷಿ ಸಿಗುತ್ತದೆ. ಅದನ್ನು ತಂದು ಸಾಕಲು ಒಂದು ಪಂಜರದೊಳಗೆ ಕೂಡಿ ಹಾಕುತ್ತಾನೆ.

ಅರಮನೆಯ ಊಟೋಪಹಾರ ಎಂದರೆ ಕೇಳಬೇಕೆ? ಅದಕ್ಕೆ ನಿತ್ಯ ಚಿನ್ನದ ತಟ್ಟೆಯಲ್ಲಿ ಆಹಾರ, ಬೆಳ್ಳಿಯ ಬಟ್ಟಲಿನಲ್ಲಿ ನೀರು ಇಡುತ್ತಿದ್ದ.

ಆದರೆ ಆ ಪಕ್ಷಿಯ ಮುಖ ಸದಾ ಬಾಡಿರುತ್ತಿತ್ತು. ಲವಲವಿಕೆಯಿಂದ ಇರುತ್ತಿರಲಿಲ್ಲ. ಪಕ್ಷಿಗೆ ಏನೋ ಕೊರತೆ ಕಾಡುತ್ತಿರು ವುದನ್ನು ಪ್ರತಿದಿನ ರಾಜ ಗಮನಿಸುತ್ತಲೇ ಇದ್ದ.

ನಾನು ಇಷ್ಟು ಪ್ರೀತಿಯಿಂದ ನೋಡಿಕೊಂಡರೂ ಇದು ಮೌನವಾಗಿಯೇ ಇದೆಯಲ್ಲ ಎಂದು ಯೋಚಿಸತೊಡಗಿದ.

ಕೊನೆಗೊಂದು ದಿನ ಪಕ್ಷಿ ಸತ್ತೇ ಹೋಯಿತು. ಈ ಸಾವಿನ ಹಿಂದಿನ ಸತ್ಯ ಏನೆಂದರೆ ಪಕ್ಷಿಗೆ ಸ್ವಾತಂತ್ರ್ಯ ದೊರೆಯದಿರುವುದು.

ಜೀವ ಸಂಕುಲಗಳು ಎಲ್ಲೆಲ್ಲಿ ಯಾವ ರೀತಿ ವಾಸಿಸಬೇಕೆಂಬುದು ಪ್ರಕೃತಿಯ ನಿಯಮ. ಅದರಂತೆ ಜೀವಿಸಿದಾಗಲೇ ಜೀವನ ಸ್ವರ್ಗ. ಸ್ವತಂತ್ರವಾಗಿ, ಸ್ವತ್ಛಂದವಾಗಿ ಹಣ್ಣು ಹಂಪಲು ತಿನ್ನುತ್ತ ವಿಶಾಲ ನೀಲಾಕಾಶದಲ್ಲಿ ಹಾರಾಡುತ್ತಾ, ಬೆಚ್ಚನೆಯ ಗೂಡಿನಲ್ಲಿ ವಾಸಿಸಬೇಕಿದ್ದ ಹಕ್ಕಿ ಸ್ವಾತಂತ್ರ್ಯ ಕಳೆದುಕೊಂಡು ರಾಜನ ಕೈ ಸೆರೆ ಯಾಗಿ ಬದುಕಲಾಗದೆ ಸತ್ತೇ ಹೋಯಿತು. ರಾಜನಿಗೆ ತುಂಬಾ ದುಃಖವಾಯಿತು. ಜತೆಗೆ ಸ್ವಾತಂತ್ರ್ಯದ ಮಹತ್ವವನ್ನು ಅರಿತ. ಹಾಗೆಯೇ ಮನುಷ್ಯನಿಗೂ ಸ್ವಾತಂತ್ರ್ಯ ವಿಲ್ಲದ ಬದುಕು ವ್ಯರ್ಥ ಮತ್ತು ನರಕ.

ಎಪ್ಪತ್ನಾಲ್ಕು ವರ್ಷಗಳ ಹಿಂದೆ ಆ ಪಕ್ಷಿಯ ರೀತಿಯೇ ನಮ್ಮ ದೇಶದ ಜನತೆ ಶತಮಾನಗಳ‌ ಕಾಲ ಸ್ವಾತಂತ್ರ್ಯ ಕಳೆದುಕೊಂಡು ಬ್ರಿಟಿಷರ ಕೈ ಸೆರೆಯಾಗಿ ಒದ್ದಾಡಿದ್ದರು. ವ್ಯಾಪಾರಕ್ಕೆಂದು ಬಂದು ಇಡೀ ದೇಶವನ್ನೇ ಆಕ್ರಮಿಸಿ ಜನರನ್ನು ತಮ್ಮ ಕೈಯಾಳಾಗಿ ಮಾಡಿಕೊಂಡಿದ್ದರು. ಸ್ವಾತಂತ್ರ್ಯವಿಲ್ಲದ ಬದುಕು ಭಾರತೀಯರಿಗೆ ನರಕ ಸಮಾನವಾಗಿತ್ತು. ಬ್ರಿಟಿಷರು ತಯಾರಿ ಸಿದ ವಸ್ತುಗಳನ್ನೇ ಬಳಸಬೇಕಿತ್ತು. ನಮ್ಮ ದೇಶದಲ್ಲಿ ಉತ್ಪಾದಿಸಲು ಅವಕಾಶ ಇರುತ್ತಿರಲಿಲ್ಲ. ತಮ್ಮವರ ಕಷ್ಟ ಅರಿತ ಗಾಂಧೀಜಿ ವಕೀಲಿ ವೃತ್ತಿ ಬಿಟ್ಟು ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ಮುಂದಾದರು.

ಅಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆಯುವುದು ಅವರ ಧ್ಯೇಯವಾಗಿದ್ದು, ಅದರಂತೆ ನಡೆದುಕೊಂಡರು. ಬ್ರಿಟಿಷರ ಬಟ್ಟೆಗಳನ್ನು ನಿರಾಕರಿಸಿ ಸ್ವತಃ ಚರಕದಲ್ಲಿ ಬಟ್ಟೆಗಳನ್ನು ತಯಾರಿಸಲು ಪ್ರಾರಂಭಿಸಿದರು. ಜನರಲ್ಲಿ ಜಾಗೃತಿ ಮೂಡಿಸಿದರು. ಅನೇಕ ಸತ್ಯಾಗ್ರಹ, ಚಳವಳಿಗಳ ಮೂಲಕ 1947ರ ಆಗಸ್ಟ್‌ 15ರಂದು ದೇಶವನ್ನು ಬ್ರಿಟಿಷರ ಕೈ ಸೆರೆಯಿಂದ ಬಿಡುಗಡೆ ಮಾಡಿದರು. ಇವರ ಜತೆಗೆ ಅನೇಕ ವ್ಯಕ್ತಿಗಳು ಸ್ವಾತಂತ್ರÂಕ್ಕೆ ಹೋರಾಡಿ ಪ್ರಾಣ ತೆತ್ತರು. ಈ ಪವಿತ್ರವಾದ ದಿನದಂದು ಎಲ್ಲರಿಗೂ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಲೇಬೇಕು. ಇಲ್ಲವಾಗಿದ್ದರೆ ಇಂದಿಗೆ ನಾವು ಸ್ವತಂತ್ರವಾಗಿರಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ದೇಶಾದ್ಯಂತ ಆಗಸ್ಟ್‌ 15ರಂದು ಎಲ್ಲರೂ ಸ್ವತಂತ್ರ ಹಕ್ಕಿಗಳಂತೆ ಹಾರಾಡುತ್ತಾ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತಾರೆ.

ಎಲ್ಲೆಲ್ಲೂ ಕೇಸರಿ, ಬಿಳಿ, ಹಸುರು ಬಣ್ಣಗಳ ಬಾವುಟ ಹಾರಾಡುತ್ತಾ ಕಣ್ತುಂಬುತ್ತದೆೆ. ಒಟ್ಟಾರೆ ಸ್ವಾತಂತ್ರ್ಯ ನಮ್ಮ ಜೀವನದ ಅವಿಭಾಜ್ಯ ಅಂಗ. ಸ್ವಾತಂತ್ರ್ಯ ಇಲ್ಲದೇ ಎಷ್ಟು ವರ್ಷ ಬದುಕಿದರೂ ಅಂತ ಬದುಕು ಸಾರ್ಥಕ ಬದುಕಾಗಲು ಸಾಧ್ಯವೇ ಇಲ್ಲ.

 ಸಂಗೀತಾ, ತುಮಕೂರು ವಿಶ್ವ ವಿದ್ಯಾನಿಲಯ

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

7-uv-fusion

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

10-uv-fusion

Lifestyle‌: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ

8-uv-fusion-2

Photographers: ನೆನಪಿನ ನಾವಿಕರಿಗೆ ಸಲಾಂ…

6-uv-fusion

Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.