ಸ್ವಾತಂತ್ರ್ಯ ನಿಜವಾದ ಸಮಾನತೆಯೇ


Team Udayavani, Jul 20, 2021, 3:34 PM IST

ಸ್ವಾತಂತ್ರ್ಯ ನಿಜವಾದ ಸಮಾನತೆಯೇ

ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಸಿದ್ಧಲಿಂಗಯ್ಯನವರ ಬಹು ಪ್ರಸಿದ್ಧ ಬರೆಹದ ಸಾಲುಗಳು ಇಂದಿಗೂ ಜೀವಂತಿಕೆಯಿಂದ ಕೂಡಿವೆ. ಬ್ರಿಟಿಷರಿಂದ ಸ್ವಾತಂತ್ರ್ಯ ನಮಗೆ ದಕ್ಕಿದ್ದರೂ ನಾವು ಸಂಪೂರ್ಣ ಸ್ವತಂತ್ರರಲ್ಲ. ಅದರಲ್ಲೂ ಮಹಿಳೆಯರಿಗೆ ಸ್ವಾತಂತ್ರ್ಯ ಹೆಸರಿಗೆ ಮಾತ್ರ ಸೀಮಿತವೆಂಬಂತಿದೆ. ಕೆಲಸ ಮಾಡೋ ಮಹಿಳೆಯರು ಅಂದರೆ ಅಂಥವರ ಬಗ್ಗೆ ಈ ಸಮಾಜ ಎರಡು ಗುಂಪುಗಳಾಗಿ ಮಾತನಾಡುತ್ತದೆ.  ಒಂದು ಗುಂಪು ಅವಳನ್ನು, ಅವಳು ಮಾಡುತ್ತಿರುವ ಕೆಲಸವನ್ನು ಗೌರವಿಸಿ ಆಕೆಯ ಸ್ವಾತಂತ್ರ್ಯಕ್ಕೆ ಬೆಲೆ ಕೊಟ್ಟರೆ ಮತ್ತೂಂದು ಗುಂಪು ಅವಳ ಸ್ವಾತಂತ್ರ್ಯವನ್ನು ಹರಣಮಾಡಿ ಮನೆಗೆ ಸೀಮಿತಗೊಳಿಸುತ್ತದೆ.

ಹೆಣ್ಣಿಗೂ ತನ್ನವರನ್ನು ತಾನೇ ದುಡಿದು ನೋಡಿಕೊಳ್ಳಬೇಕೆಂಬ ಹಂಬಲವಿರುತ್ತದೆ. ಹಾಗೇ ಯಾರ ಮುಂದೆಯೂ ಕೈಚಾಚದೆ ತನ್ನ ಜೀವನವನ್ನ ತಾನೇ ರೂಪಿಸ‌ಬೇಕೆಂಬ ಸ್ವಾಭಿಮಾನವು ಇರುತ್ತದೆ.  ಇಂತಹ ಸ್ವಾಭಿಮಾನವನ್ನು ಕೆಲವರು ಅಹಂಕಾರವೆಂದು ದೂಷಿಸುತ್ತಾರೆ. ಹೆಣ್ಣು ಕೆಲಸ ಮಾಡಲಿಚ್ಛಿಸುವುದು ತಪ್ಪು ಎಂಬ ಭಾವನೆಯನ್ನು ಬಲವಂತವಾಗಿ ಹೇರಿ, ಆಕೆಯನ್ನು ಅಸಹಾಯಕ ಸ್ಥಿತಿಗೆ ತುಳ್ಳುತ್ತಾರೆ. ನೀನು ಮನೆಯಿಂದ ಆಚೆಹೋಗಿ ಹೇಗೆ ಕೆಲಸಮಾಡಬಲ್ಲೆ,  ಹೇಗೆ ಒಬ್ಬಳೆ ಇರಬಲ್ಲೆ ಎಂದು ಅವಳ ಆತ್ಮಸ್ಥೈರ್ಯವನ್ನು  ಕುಗ್ಗಿಸಿ ಬಿಡುತ್ತಾರೆ. ಮುಂದೆ ಅವಳ ಪೋಷಕರು ಆಕೆಗೊಂದು ಮದುವೆ ಮಾಡಿ ತಮ್ಮ ಜವಾಬ್ದಾರಿಯಿಂದ ಮುಕ್ತಿಹೊಂದುತ್ತಾರೆ.  ಮದುವೆಯಾದ ಅನಂತರ ಗಂಡನ ಮನೆಯ ಜವಾಬ್ದಾರಿಯನ್ನು ಹೊತ್ತು ತನ್ನ ಕೆಲಸಕ್ಕೆ ಸೇರುವ ಆಸೆಯನ್ನ ತನ್ನಲ್ಲೇ ಸಾಯಿಸಿಕೊಂಡು ತನ್ನ ಸ್ವಾತಂತ್ರ್ಯದ ಜತೆ ತನ್ನ ಅಸ್ತಿತ್ವವನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾಳೆ.

ವಿಧವೆಯಾದವಳು ಕೆಲಸಕ್ಕೆ ಸೇರಿ ತನ್ನ ಜೀವನವನ್ನು ತಾನೇ ಯಾರ ಸಹಾಯವನ್ನು ಪಡೆಯದೆ ನಡೆಸುತ್ತಿದ್ದರೆ ಅಂತಹವನ್ನು ನಮ್ಮ ಸಮಾಜ ನೋಡುವ ರೀತಿ ಬೇರೆಯೇ ಆಗಿರುತ್ತದೆ. ತನ್ನ ಜೀವನ ಹೇಗಿರಬೇಕೆಂದು ನಿರ್ಧಾರ ಮಾಡುವ ಸ್ವಾತಂತ್ರ್ಯ ಆಕೆಗಿದೆ ಎಂದು ಯಾರು ಯೋಚಿಸುವುದೇ ಇಲ್ಲ. ಅವಳ ತಂದೆಯ ಮನೆಯವರನ್ನು ಅಥವಾ ಅವಳ ಗಂಡನ ಮನೆಯವರನ್ನು ಅವಲಂಬಿತವಾಗಿ ಜೀವನ ನಡೆಸಬೇಕೆಂದು ನಮ್ಮ ಸಮಾಜ ಸ್ವಯಂ ಘೋಷಿಸಿಬಿಡುತ್ತದೆ. ಇವುಗಳನೆಲ್ಲಾ ಧಿಕ್ಕರಿಸಿ ಹೆಣ್ಣು ಸ್ವತಂತ್ರಳಾಗ ಬಯಸಿದರೆ ಆಕೆಗೆ ಬೇರೆಯದೇ ಪಟ್ಟಿ ಕಟ್ಟಿ ತನ್ನ  ಕಟುನುಡಿಗಳಿಂದ  ಹಿಂಸಿಸಿಬಿಡುತ್ತದೆ ಈ ಸಮಾಜ.

ಹಾಗಾದರೆ ಸಂವಿಧಾನ ಎಲ್ಲರಿಗೂ ಸಮಾನವಾಗಿ ಕೊಟ್ಟ ಸ್ವಾತಂತ್ರ್ಯದ ಹಕ್ಕು ಬರೀ ಗಂಡಸರಿಗೆ ಮಾತ್ರ ಸೀಮಿತವೇ ಅಥವಾ ಹೆಣ್ಣು ಈ ಹಕ್ಕಿಂದ ವಂಚಿತಳೇ? ಕಾಲ ಬದಲಾಗುತ್ತಿದೆ. ಹಳೇ ಬೇರಲ್ಲಿ ಹೊಸ ಚಿಗುರು ಚಿಗುರಲೇಬೇಕು. ಆದರೆ ಮನುಷ್ಯ ತನ್ನ ಆಲೋಚನೆಗಳನ್ನ ಈ ವಿಷಯದಲ್ಲಿ  ಬದಲಾಯಿಸಿ ಕೊಳ್ಳುತ್ತಿಲ್ಲ, ಅದಕ್ಕೆ ಏನೋ ಚಿಗುರು ಚಿಗುರುವ ಮುನ್ನವೇ ಚಿವುಟುತ್ತಿದ್ದಾನೆ. ಇನ್ನೂ ಸಹ ಹೆಣ್ಣು ಎಂದರೆ ಕೇವಲ ಮನೆ ಮಕ್ಕಳಿಗೆ ಮಾತ್ರ ಸೀಮಿತ ಎನ್ನುವ ಮನಃಸ್ಥಿತಿ ಬದಲಾಯಿಸುತ್ತಿಲ್ಲ. ಗಂಡು ಮಾತ್ರ ಕೆಲಸಕ್ಕೆ ಸೀಮಿತ, ಹೆಣ್ಣಲ್ಲ ಎನ್ನುವ ಮನಃಸ್ಥಿತಿ ಬದಲಾಗಬೇಕು.  ಎಲ್ಲಿಯವರೆಗೆ ಈ ವಿಷಯದಲ್ಲಿ ಸಮಾನತೆ ಸಾಧಿಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಮಹಿಳೆಯರಿಗೆ ನಿಜವಾದ ಸ್ವಾತಂತ್ರ್ಯ ಸಿಗಲಾರದು.

ಹರ್ಷಿತಾ ಎಂ.

ಮಾನಸಗಂಗೋತ್ರಿ, ಮೈಸೂರು

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.