ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋದ ಆಟಗಳು


Team Udayavani, Jun 1, 2020, 7:59 PM IST

ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋದ ಆಟಗಳು

ಮನಸ್ತಾಪಗಳ ಮರೆಸಿ ಮನಸ್ಸುಗಳ ಒಂದಾಗಿಸುತ್ತಿದ್ದ ಆಟಗಳು, ಇಂದು ಮನಸ್ಸುಗಳನ್ನು ದೂರಮಾಡುತ್ತಿದೆ ಎಂದೆನಿಸುತ್ತಿದೆ. ನಾಲ್ಕು ಮಂದಿ ಸೇರಿ ಆಡುವ ಆಟಗಳ ಬದಲು ಮಾತೆ ಬಾರದ ಮೊಬೈಲ್‌, ಕಂಪ್ಯೂಟರ್‌ಗಳ ಜತೆಗೂಡಿ ಆಡುವ ಸ್ಥಿತಿ ಬಂದೊದಗಿದೆ. ಇದು ಸುಲಭವಾಗಿದ್ದರೂ, ತನ್ನ ರಸವನ್ನು ಕಳೆದುಕೊಂಡಿದೆ.

ಆಟಗಳ ಬಗ್ಗೆ ಪುರಾಣಗಳಲ್ಲೂ ಪ್ರಸ್ತಾವಗಳು ಇವೆ. ಅವು ಇಂದಿನ ಮಕ್ಕಳು ಕೇಳದ ಆಟಗಳು ಎನಿಸಿದರೂ, ಆಡದ ಆಟಗಳಂತೂ ಅಲ್ಲ. ಅಂದರೆ ಮುಖತಃ ಆಡದಿದ್ದರು, ತಾಂತ್ರಿಕತೆಯ ಮೂಲಕ ಆಡುತ್ತಿದ್ದಾರೆ. ಅಂದು ಮಹಾಭಾರತದ ತಿರುವಿಗೆ ಒಂದು ಕಾರಣವಾದ ಪಗಡೆ ಆಟ ಇಂದು ಲೂಡೋ ಆಗಿ ಮಾರ್ಪಾಡಾಗಿದೆ. ಹಾಗೇಯೆ ಮರಕೋತಿ “ಮಂಕಿ ಗೇಮ್ಸ್‌’ಗಳಾಗಿ, ಕಣ್ಣಾಮುಚ್ಚಾಲೆ “ಹೈಡೆಂಡ್‌ ಸಿಕ್‌ ಗೇಮ್ಸ್‌’ ಆಗಿದೆ. ಹೀಗೆ ಎಲ್ಲ ಆಟಗಳೂ ಹಳೆಯದ್ದೇ ಆದರೂ ಹೆಸರು ಮಾತ್ರ ಹೊಸದು.

ಮಕ್ಕಳಿಗೆ ಆಟ ಎಂದರೆ ಅಚ್ಚುಮೆಚ್ಚು ಎಂಬುದು ಬದಲಾಗದ ಮಾತು. ಬೆಳಗ್ಗೆಯಿಂದ ಸಂಜೆಯ ವರೆಗೂ ಆಡಲು ಬಿಟ್ಟರೆ ಅದೇ ಸ್ವರ್ಗ ಅವರಿಗೆ. ಕೆಲಸಕ್ಕೆಂದು ಕಳಿಸಿದರೂ ಅಲ್ಲಿ ಆಡುವ ಮಾರ್ಗವನ್ನು ಅವರು ಕಂಡುಕೊಳ್ಳುತ್ತಿದ್ದರು. ಅದಕ್ಕೆ ಹೇಳಿ ಮಾಡಿಸಿದ ಉದಾಹರಣೆ ಎಂದರೆ ಕೃಷ್ಣನ ಬಾಲ್ಯದ ಕಥೆಗಳು. ಈ ಆಟಗಳು ಮಕ್ಕಳಿಗೆ ನೇರವಾಗಿ ಉಪಯೋಗವಾಗುತ್ತದೆ ಎನಿಸದಿದ್ದರೂ ಅವುಗಳು ಕಲಿಸುತ್ತಿದ್ದ ಪಾಠ ಹಾಗೂ ನೀಡುತ್ತಿದ್ದ ನೆನಪುಗಳು ಅಪಾರವಾದುದು.

ಆಡುವ ಸಮಯದಲ್ಲಿ ಏಳು ಬೀಳು, ಸೋಲು ಗೆಲುವು, ಸುಖ ದುಃಖ, ಪ್ರೀತಿ ಹಾಗೂ ಸಂಬಂಧ, ಗೆಳೆತನ ಮುಂತಾದವನ್ನು ತಮಗರಿವಿಲ್ಲದೆ ಕಲಿಯುತ್ತಿದ್ದರು. ಹೀಗಾಗಿಯೇ ನಮ್ಮ ಹಿರಿಯರಲ್ಲಿ ಭಾವನೆಗಳಿಗೆ ಹೆಚ್ಚು ಬೆಲೆ ಇದ್ದದ್ದು. ಇಂದು ಮಕ್ಕಳು ಆಡಲು ಇಚ್ಚಿಸುತ್ತಾರೆ ನಿಜ. ಆದರೆ ಅದು ಜೀವವೇ ಇಲ್ಲದ ತಾಂತ್ರಿಕ, ಕೃತಕ ಸ್ನೇಹಿತನೊಂದಿಗೆ. ಆಡುವ ಆಟಗಳಲ್ಲಿ ಹೆಚ್ಚೇನು ವ್ಯತ್ಯಾಸವಿಲ್ಲ. ಹಾಗೇಂದು ಅದನ್ನು ಮೊದಲಿನ ಆಟಗಳಿಗೆ ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ ಈ ಆಟಗಳು ಭಾವನೆಗಳನ್ನು ಕಲಿಸುವ ಬದಲಾಗಿ ಕೃತಕ ಬದುಕಿನತ್ತ ಕೊಂಡೊಯ್ಯುತ್ತಿದೆ. ಸೋತರೆ ಗೆಲ್ಲಲು ಹುರಿದುಂಬಿಸುವುದಿಲ್ಲ, “ಯು ಲೋಸ್ಟ್‌ ದಿ ಗೇಮ್‌’ ಎಂದು ಆತ್ಮವಿಶ್ವಾಸವನ್ನು ಇನ್ನೂ ಕುಗ್ಗಿಸುತ್ತದೆ. ಭಾಂದವ್ಯಗಳನ್ನು ಬೆಳೆಸುವುದಿಲ್ಲ. ಹೊರತಾಗಿ ಸಂಬಂಧಗಳ ನಡುವೆ ಮಾತನ್ನೇ ಮರೆಸುತ್ತದೆ.

ಆಡುವ ಆಟ ಬರೀ ಮನೋರಂಜನೆಗಾಗಿ ಅಲ್ಲ, ಮನಸ್ಸಿನ ನೆಮ್ಮದಿಗಾಗಿ ಎಂಬುದು ಬಹುತೇಕರಿಗೆ ಗೊತ್ತೇ ಇಲ್ಲ. ಆಟ ಪಾಠ ನಡೆಯಬೇಕಿದ್ದ ಜಾಗದಲ್ಲಿ ಇಂದು ತಾಂತ್ರಿಕ ಜೀವನದ ಭೋದನೆಯಾಗುತ್ತಿದೆ. ಹೆತ್ತವರು ಮಕ್ಕಳನ್ನು ಸ್ನೇಹಿತರೊಂದಿಗೆ ಬೆರೆಯುವುದನ್ನು ಕಲಿಸಬೇಕಾಗಿತ್ತು. ಆದರೆ ಅವರೇ ಇಂದು ಮೊಬೈಲ್‌, ಕಂಪ್ಯೂಟರ್‌ಗಳ ಮುಂದೆ ಮಕ್ಕಳನ್ನು ಹಿಡಿದು ಕೂರಿಸಿ ಅವರ ಸುಂದರ ಬಾಲ್ಯವನ್ನು ಬರಿದಾಗಿಸುತ್ತಿದ್ದಾರೆ.

-ಮೇಘ ಆರ್‌. ಸಾನಾಡಿ,
ವಿವೇಕಾನಂದ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.