ಜೀವನಕ್ಕೆ ರೆಕ್ಕೆಯನ್ನು ಕೊಡಿ; ಹಾರಾಡಲಿ


Team Udayavani, Jun 17, 2020, 1:13 PM IST

ಜೀವನಕ್ಕೆ ರೆಕ್ಕೆಯನ್ನು ಕೊಡಿ; ಹಾರಾಡಲಿ

ಸಾಂದರ್ಭಿಕ ಚಿತ್ರ

ಮನಸ್ಸು ಗುರಿಯಿಲ್ಲದೆ ಹಾರುವ ಹಕ್ಕಿಯಂತೆ. ಅದು ಒಂದು ಕ್ಷಣ ಬಿಡುವಿಲ್ಲದೆ ಏನೇನೋ ಯೋಚಿಸುತ್ತಾ ಇರುತ್ತದೆ. ಎಷ್ಟೇ ನಿಯಂತ್ರಿಸಿದರೂ ಆಗಿ ಹೋದ ಘಟನೆಗಳನ್ನು ಮರುಕಳಿಸುತ್ತದೆ. ಜೀವನದಲ್ಲಿ ನಡೆದ ಎಲ್ಲ ಕೆಟ್ಟ ವಿಚಾರಗಳನ್ನು ಮರೆಯಬೇಕು ಅನ್ನುವಷ್ಟರಲ್ಲಿ ಮತ್ತೇನೋ ಘಟನೆ ಸಂಭವಿಸಿ ಮನಸ್ಸು ಮತ್ತಷ್ಟು ರೋಸಿ ಹೋಗುತ್ತದೆ. ವಾಸ್ತವವೇನೆಂದರೆ, ಒಂದು ಸಮಸ್ಯೆಗೆ ಮನಸ್ಸಿನಲ್ಲಿ ಪರಿಹಾರ ಹುಡುಕುತ್ತಾ ಜೀವನದ ಅದೆಷ್ಟೋ ನೆಮ್ಮದಿಯ ಕ್ಷಣಗಳನ್ನು ಕಳೆದುಕೊಳ್ಳುತ್ತೇವೆ, ಕಳೆದುಕೊಂಡಿರುತ್ತೇವೆ.

ಸಮಸ್ಯೆಗಳು ಸಹಜ. ಪ್ರತಿಯೊಂದು ಸಮಸ್ಯೆಯು ಜೀವನಕ್ಕೊಂದು ಪಾಠವನ್ನು ಹೇಳಿಕೊಡುತ್ತದೆ. ಅದಕ್ಕಾಗಿ ಸಮಸ್ಯೆಯಿಂದ ಹೊರಬಂದು ನಾಳಿನ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಆಗಿ ಹೋದ ಘಟನೆಗಳನ್ನು ಮೆಲುಕು ಹಾಕುತ್ತಾ ದಿನ ಕಳೆಯುವುದು ತರವಲ್ಲ. ಕಷ್ಟ ಸುಖ ಜೀವನದ ಅಂಗ. ಅದರ ಜತೆಗೆ ಆತ್ಮವಿಶ್ವಾಸವು ಬಹುಮುಖ್ಯವಾಗಿದೆ. ಒಂದರ ಬಳಿಕ ಇನ್ನೊಂದು ಸರಮಾಲೆಯಂತೆ ಕಷ್ಟಗಳು ಎದುರಾಗುತ್ತಲೇ ಇರುತ್ತವೆೆ. ಅದಕ್ಕೆ ತಲೆ ತಗ್ಗಿಸದೆ ಜೀವನದಲ್ಲಿ ಸಕಾರತ್ಮಕ ಯೋಚನೆಯಿಂದ ಗುರಿ ತಲುಪಬೇಕು.

ನಿನ್ನೆಯ ಕಷ್ಟಕ್ಕೆ ಸೋತು ಇಂದಿನ ಖುಷಿಯನ್ನು ಕಳೆದುಕೊಳ್ಳುವುದು ಮೂರ್ಖತನ. ಒಳ್ಳೆಯ ಕ್ಷಣಗಳನ್ನು ಅನುಭವಿಸಬೇಕು, ಸಾಧ್ಯವಾದರೆ ನಮ್ಮಂತೆಯೇ ಇರುವ, ನೋವಿನ ಮನಸ್ಸಿಗೆ ಸಮಾಧಾನ ಹೇಳಬೇಕು. ಆಗ ನಮ್ಮ ನೋವನ್ನು ಮರೆತು ಪ್ರತಿದಿನ ಹೊಸತನ ಹಾಗೂ ನೆಮ್ಮದಿಯಿಂದ ಇರಲು ಸಾಧ್ಯ. ಇದನ್ನು ಹೊರತುಪಡಿಸಿ ಕಷ್ಟಕ್ಕೆ ಹೆದರಿ ಹಿಂಜರಿಯಬಾರದು. ಕಷ್ಟ ಯಾರನ್ನೂ ಬಿಡುವುದಿಲ್ಲ. ಹಾಗೆಯೇ ಸುಖ ಯಾರ ಸ್ವತ್ತೂ ಅಲ್ಲ. ಜೀವನದಲ್ಲಿ ಕಷ್ಟ ಬಂದರೆ ಮಾತ್ರ ಸುಖ ಅನುಭವಿಸಲು ಸಾಧ್ಯ. ಈ ಸತ್ಯಾಂಶವನ್ನು ತಿಳಿದು ಮುನ್ನಡೆಯಬೇಕು. ಜೀವನ ಒಂದು ಸುಂದರ ಹಕ್ಕಿಯಂತೆ ಅದನ್ನು ಸರಿಯಾದ ದಾರಿಯಲ್ಲಿ ಆಯ್ಕೆಮಾಡಿ ರೂಪಿಸಿಕೊಂಡರೆ ಮಾತ್ರ ಅದೂ ಸ್ವಚ್ಛಂದವಾಗಿ ಹಾರಲು ಸಾಧ್ಯ.


ನಿಶ್ಮಿತಾ ,
ಶ್ರೀರಾಮಕುಂಜೇಶ್ವರ ಕಾಲೇಜು, ರಾಮಕುಂಜ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.