ದೇಶದ ಕಿರಿಯ ಐಪಿಎಸ್‌ ಆಧಿಕಾರಿ ಹಸನ್‌

ದೃಢ ಸಂಕಲ್ಪ ಮತ್ತು ಸಮರ್ಪಿತ ಶ್ರಮದ ಸಾಧಕ

Team Udayavani, Jul 22, 2020, 5:34 PM IST

Safin-Hasan

ನಿಮ್ಮ ಗುರಿಯತ್ತ ದೃಢ ಸಂಕಲ್ಪ ಮತ್ತು ಸಮರ್ಪಿತ ಶ್ರಮ ಇದ್ದರೆ ನಿರೀಕ್ಷಿತ ಫ‌ಲಿತಾಂಶವನ್ನು ಪಡೆಯಬಹುದು ಇದಕ್ಕೆ ಹಸನ್‌ ಸಫಿನ್‌ ಅವರು ಒಂದು ಉತ್ತಮ ಉದಾಹರಣೆ. ಹಸನ್‌ ಸಫಿನ್‌ ಭಾರತದ ಕಿರಿಯ ಐಪಿಎಸ್‌ ಅಧಿಕಾರಿ.

ಸಾಧಿಸುವ ಹಂಬಲ ಎಲ್ಲರಲ್ಲೂ ಇರುತ್ತೆ. ಅದಕ್ಕೆ ಬೇಕಾಗುವ ಪರಿಶ್ರಮ, ಕಠಿನ ಪ್ರಯತ್ನ ಎಲ್ಲರೂ ಮಾಡುವುದಿಲ್ಲ. ಭಾರತದಲ್ಲಿ ಲಕ್ಷಾಂತರ ಮಂದಿ ಲೋಕಾ ಸೇವಾ ಆಯೋಗ ನಡೆಸುವ ಪರೀಕ್ಷೆ ಬರೆಯುತ್ತಾರೆ. ಇದರಲ್ಲಿ ತೇರ್ಗಡೆ ಹೊಂದುವವರು ಕೆಲವೇ ಮಂದಿ. ಅದರಲ್ಲೂ 25 ವಯಸ್ಸಿನ ಮೇಲಿನವರು ಅಧಿಕಾರಿಗಳಾಗುವ ಸಾಧ್ಯತೆ ತೀರಾ ವಿರಳ.

ಆದರೆ ಭಾರತ ಅತೀ ಕಿರಿಯ ಐಪಿಎಸ್‌ ಅಧಿಕಾರಿ ಹಸನ್‌ ಸಫಿನ್‌ ಇವರಿಗೆಲ್ಲ ಸ್ಫೂರ್ತಿ. 2018ರಲ್ಲಿ ನಡೆದ ಲೋಕಾ ಸೇವಾ ಆಯೋಗ ಪರೀಕ್ಷೆಯಲ್ಲಿ 570 ಶ್ರೇಯಾಂಕದೊಂದಿಗೆ ಪಾಸಾಗುವ ಮೂಲಕ 22 ಹರೆಯದ ಹಸನ್‌ ಸಫಿನ್‌ ಭಾರತದ ಅತ್ಯಂತ ಕಿರಿಯ ಅಧಿಕಾರಿ ಎಂದೆನಿಸಿಕೊಳ್ಳುತ್ತಾರೆ.

2019ರ ಡಿಸೆಂಬರ್‌ 23ರಂದು ಗುಜರಾತ್‌ನ ಜಮ್ನಗರ ಜಿಲ್ಲೆಯ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಅಧಿಕಾರಿ ವಹಿಸಿಕೊಳ್ಳುತ್ತಾರೆ. ಹಸನ್‌ ಗುಜರಾತ್‌ನ ಸಣ್ಣ ಹಳ್ಳಿ ಕನೋದರ್‌ ಅವರು ಇವರ ತಂದೆ ಮುಸ್ತಫಾ ಗಣಿಯಲ್ಲಿ ಕೂಲಿಯಾಗಿ ಹಾಗೂ ತಾಯಿ ನಸೀಂ ಬಾನು ಮನೆಕೆಲಸಕ್ಕೆ ಮಾಡಿ ಮಗನ ಜೀವನ ರೂಪಿಸಿದ್ದಾರೆ. ಇಂತಹ ಬಡಕುಟುಂಬದಿಂದ ಬಂದ ಹಸನ್‌ಗೆ ಬಾಲ್ಯದಲ್ಲಿ ನಡೆದ ಘಟನೆ ಐಪಿಎಸ್‌ ಅಧಿಕಾರಿಯಾಗಲು ಸ್ಫೂರ್ತಿ.

ಬಾಲ್ಯದಲ್ಲಿರುವಾಗ ಇವರ ಹಳ್ಳಿಗೆ ಬಂದ ಜಿಲ್ಲಾಧಿಕಾರಿ ಊರಿನವರ ಸಮಸ್ಯೆಗಳನ್ನು ಆಲಿಸುತ್ತಿದನ್ನು ನೋಡಿ ಹಸನ್‌ಗೆ ತಾನು ಅವರಂತೆ ಆಗಬೇಕೆಂಬ ಹಂಬಲ ಉಂಟಾಗಿತ್ತು.

ಹಸನ್‌ ಸಾಧನೆ ಬಗ್ಗೆ ಹೇಳುವಾಗ ತನಗೆ ನೇರವಾದ ಸ್ನೇಹಿತರು, ಶಿಕ್ಷಕರು, ಮನೆಯವರು ಎಲ್ಲರನ್ನೂ ನೆನೆಯುತ್ತಾರೆ. ದಿಲ್ಲಿಯಲ್ಲಿ ಕೋಚಿಂಗ್‌ ಮಾಡುತ್ತಿರುವ ಇವರ ಹೈಸ್ಕೂಲ್‌ ಪ್ರಾಶುಂಪಾಲರು 80 ಸಾವಿರ ಹಣವನ್ನು ನೀಡಿದನ್ನು ಸ್ಮರಿಸುತ್ತಾರೆ. ಬಾಲ್ಯದಲ್ಲೇ ಇವರು ಬುದ್ದಿವಂತ ವಿದ್ಯಾರ್ಥಿಯಾಗಿದ್ದರು. ವಿಶೇಷವೆಂದರೆ ಹಸನ್‌ ಅವರು ತನ್ನ ಎರಡನೇ ಪ್ರಯತ್ನದಲ್ಲಿ ಪಾಸಾಗಿದ್ದಾರೆ. ಇವರಿಗೆ ಐಎಎಸ್‌ ಆಧಿಕಾರಿ ಆಗಬೇಕೆಂಬ ಆಸೆ ಇತ್ತಂತೆ. ಇದಕ್ಕಾಗಿ ಮತ್ತೂಮ್ಮೆ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ.

ಕಡು ಬಡತನದಲ್ಲಿಯೇ ವಿಶ್ವದ ಕಠಿನ ಪರೀಕ್ಷೆಗಳಲ್ಲಿ ಒಂದಾದ ಲೋಕಾಸೇವಾ ಪರೀಕ್ಷೆಯನ್ನು ಎರಡನೆ ಪ್ರಯತ್ನದಲ್ಲಿ ಉತ್ತೀರ್ಣಗೊಳಿಸಿರುವುದು ಸುಲಭ ಮಾತಲ್ಲ. ಇಂತಹ ಸಾಧನೆ ಎಲ್ಲ ಯುವಜನತೆಗೂ ಸ್ಫೂರ್ತಿಯೆ ಸರಿ.

ಧನ್ಯಾಶ್ರೀ ಬೋಳಿಯಾರ್‌

 

 

 

ಟಾಪ್ ನ್ಯೂಸ್

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.