ಅನಾದರ, ಅಸಡ್ಡೆಯನ್ನು ತತ್ತ್ವಶಾಲಿಗಳು ಮಾತ್ರ ಸಹಿಸಬಲ್ಲರು


Team Udayavani, Jun 9, 2020, 8:10 AM IST

ಅನಾದರ, ಅಸಡ್ಡೆಯನ್ನು ತತ್ತ್ವಶಾಲಿಗಳು ಮಾತ್ರ ಸಹಿಸಬಲ್ಲರು

ಎಷ್ಟೇ ಬದ್ಧಿವಂತರಾಗಿದ್ದರೂ ಕೂಡ ಅವರು ವಿಚಾರಶಾಲಿಯಾಗಿಲ್ಲದಿದ್ದರೆ ಎಲ್ಲಾ ಸಂದರ್ಭಗಳನ್ನು ಕೂಡ ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಿಲ್ಲ. ಅದರಲ್ಲೂ ನಂಬಿಕೆ, ಪ್ರೀತಿ, ವಿಶ್ವಾಸ, ಭಕ್ತಿ ವಿಷಯಗಳಲ್ಲಿ ವ್ಯಕ್ತಿಯ ವಿಚಾರವಂತಿಕೆ ಅತೀ ಮುಖ್ಯವಾಗುತ್ತದೆ. ಸ್ವಾಮಿ ವಿವೇಕಾನಂದರ ಪರಿಚಯ ನಮಗೆಲ್ಲರಿಗೂ ಇದ್ದೇ ಇದೆ. ನರೇಂದ್ರ ಬಾಲ್ಯದ ಹೆಸರು. ಗುಣವಂತರು, ಅಪಾರವಾದ ಜ್ಞಾನ ಸಂಪತ್ತನ್ನು ಹೊಂದಿದ್ದವರಾಗಿದ್ದರು. ಇವರ ಗುರುಗಳು ಶ್ರೀರಾಮಕೃಷ್ಣ ಪರಮಹಂಸರು. ಗುರು ಶಿಷ್ಯರ ಸಂಬಂಧ ಬಹಳ ಗಟ್ಟಿಯಾಗಿತ್ತು. ಒಂದು ಬಾರಿ ರಾಮಕೃಷ್ಣರು ನರೇಂದ್ರನನ್ನು ಪರೀಕ್ಷೆಗೆ ಗುರಿ ಮಾಡಿದರು. ಅವರಿಗೆ ವಿವೇಕಾನಂದರೆಂದರೆ ಪ್ರಾಣ. ಸ್ವಲ್ಪ ದಿನಗಳ ಕಾಲ ಅವರನ್ನು ನೋಡದಿದ್ದರೆ ಹುಚ್ಚು ಹಿಡಿದಂತೆ ಆಗುತ್ತಿತ್ತು. ಆದರೂ ಕೆಲವು ಸಮಯ ನರೇಂದ್ರ ಅವರ ಬಳಿ ಬಂದರೂ ಮುಖ ನೋಡುತ್ತಿರಲಿಲ್ಲ. ಮಾತನಾಡಿಸುತ್ತಿರಲಿಲ್ಲ. ಆದರೆ ನರೇಂದ್ರ ಅವರ ಬಳಿ ಬಂದು ನಮಸ್ಕರಿಸಿ ಹೋಗುತ್ತಿದ್ದನು. ಅವರ ಸಮೀಪದಲ್ಲೇ ಬಂದು ಕುಳಿತುಕೊಳ್ಳುತ್ತಿದ್ದನು.

ಗುರುಗಳು ಆಲೋಚನೆಯಲ್ಲಿ ಮಗ್ನರಾಗಿರಬೇಕೆಂದು ಹೊರಗೆ ಹೋಗಿ ಯಾರಾದರೊಬ್ಬರೊಡನೆ ಮಾತನಾಡುತ್ತಿದ್ದುದು ಕೇಳಿಬರುತ್ತಿತ್ತು. ಪುನಃ ಗುರುಗಳ ಬಳಿ ಬಂದು ಕುಳಿತುಕೊಳ್ಳುತ್ತಿದ್ದನು. ಆಗಲೂ ನರೇಂದ್ರನ ಬಳಿ ಅವರು ಮಾತನಾಡುತ್ತಿರಲಿಲ್ಲ. ಒಂದು ವಾರದ ಬಳಿಕ ನರೇಂದ್ರ ಬಂದ. ಆಗಲೂ ರಾಮಕೃಷ್ಣರು ಆಲಕ್ಷ್ಯದಿಂದಲೇ ಅವನನ್ನು ನೋಡಿದರು. ಇಷ್ಟೆಲ್ಲಾ ನಡೆದರೂ ನರೇಂದ್ರ ಮಾತ್ರ ಬರುವುದನ್ನು ಬಿಡಲಿಲ್ಲ. ಒಂದು ತಿಂಗಳಾದ ಮೇಲೆ ರಾಮಕೃಷ್ಣರು ನರೇಂದ್ರನಿಗೆ “ನಾನು ನಿನ್ನೊಡನೆ ಒಂದು ಮಾತನ್ನೂ ಆಡದೇ ಇದ್ದರು ನೀನು ಏತಕ್ಕೆ ಬರುತ್ತೀಯ?’ ಎಂದು ಕೇಳಿದರು. ಅದಕ್ಕೆ ನರೇಂದ್ರ “ನಾನು ನಿಮ್ಮೊಡನೆ ಬರೀ ಮಾತನಾಡಲು ಮಾತ್ರ ಬರುತ್ತೇನೆಯೇ? ನಿಮ್ಮನ್ನು ಪ್ರೀತಿಸುತ್ತೇನೆ, ನೋಡಬೇಕೆಂಬ ಆಸೆ ಅದಕ್ಕೆ ಬರುತ್ತೇನೆ’ ಎಂದ.

ರಾಮಕೃಷ್ಣರ ಸಂತೋಷ ಮುಗಿಲು ಮುಟ್ಟಿತು. “ನಾನು ನಿನ್ನನ್ನು ಪರೀಕ್ಷೆಗೊಳಪಡಿಸಿ ಈ ರೀತಿ ನಡೆದುಕೊಂಡೆ. ಆಲಕ್ಷ್ಯದಿಂದ ಇದ್ದರೆ, ಪ್ರೀತಿಯನ್ನು ತೋರಿಸದಿದ್ದರೆ ನೀನು ಬರುತ್ತೀಯೋ ಇಲ್ಲವೋ ಎಂಬುದನ್ನು ನೋಡಬೇಕೆಂದಿದ್ದೆ. ಇಷ್ಟೊಂದು ಅನಾದರ ಅಸಡ್ಡೆಯನ್ನು ನಿನ್ನಂತಹ ತತ್ತ್ವಶಾಲಿಗಳು ಮಾತ್ರ ಸಹಿಸುವರು’ ಎಂದು ಹೆಮ್ಮೆ ಪಟ್ಟರು ಶ್ರೀರಾಮಕೃಷ್ಣರು.

ಆಲೋಚನೆಯುಳ್ಳವರು ಎಂತಹ ಸ್ಥಿತಿಯಲ್ಲೂ ತಮ್ಮ ವಿವೇಚನಾ ಶಕ್ತಿಯನ್ನು ಬಿಡುವುದಿಲ್ಲ ಹಾಗೂ ನಂಬಿಕೆ, ಪ್ರೀತಿ ಬಲಾಡ್ಯವಾಗಿದ್ದರೆ ಎಂಥಹ ಸ್ಥಿತಿಯಲ್ಲಿಯೂ ಕೂಡ ಅದು ತನ್ನ ಸ್ವರೂಪವನ್ನು ಕಳೆದುಕೊಳ್ಳುವುದಿಲ್ಲ. ಅದೇನಾದರೂ ನಾಟಕೀಯವಾಗಿದ್ದರೆ ಮಾತ್ರ ಸಂಬಂಧಗಳು ಹಾಳಾಗುತ್ತವೆ ಎಂಬುದಕ್ಕೆ ಇದು ಒಂದು ನಿದರ್ಶನ.

ಸಂಗೀತ ಶ್ರೀ ಕೆ. ತುಮಕೂರು, ವಿಶ್ವವಿದ್ಯಾಲಯ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.