ಜೂನ್‌ ತಿಂಗಳಿನ ಸ್ವಾರಸ್ಯಕರ ಸಂಗತಿ


Team Udayavani, Jun 17, 2020, 1:20 PM IST

ಜೂನ್‌ ತಿಂಗಳಿನ ಸ್ವಾರಸ್ಯಕರ ಸಂಗತಿ

ವರ್ಷದ ಹನ್ನೆರಡು ತಿಂಗಳ ಪೈಕಿ ಜೂನ್‌ ಮಾಸ ವಿಶೇಷವಾದದ್ದು. ಏಕೆಂದರೆ ಹೆಚ್ಚಿನವರ ಹುಟ್ಟಿದ ದಿನಾಂಕ ಇದೇ ತಿಂಗಳಾಗಿರುತ್ತದೆ. ಅಂದರೆ ಬರ್ತ್‌ಡೇಗಳ ಪರ್ವದ ತಿಂಗಳಿದು. ಕೆಲವರದು ನಿಜವಾಗಿ ಜೂನ್‌ ತಿಂಗಳಿದ್ದರು, ಇನ್ನು ಕೆಲವರ ಜನ್ಮದಿನಾಂಕ ಶಾಲಾ ಶಿಕ್ಷಕರ ಕೃಪಾಕಟಾಕ್ಷದಿಂದ ಶಾಲೆಗೆ ಪ್ರವೇಶ ಪಡೆದ ದಿನದಂದೇ ಅನೇಕರ ಹುಟ್ಟಿದ ದಿನಾಂಕವಾಗಿರುತ್ತದೆ. ಹೀಗಾಗಿ ಜೂನ್‌ ತಿಂಗಳನ್ನು ಸಾರ್ವತ್ರಿಕ ಹುಟ್ಟುಹಬ್ಬ ಆಚರಿಸಿಕೊಳ್ಳುವವರ ತಿಂಗಳಾಗಿ ಆಚರಿಸಲು ತಮಾಷೆಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಒತ್ತಾಯಿಸುವುದು ನಾವು ಕಂಡಿರುತ್ತೇವೆ.

ನನ್ನ ವಿಷಯದಲ್ಲೂ ಕೂಡ ಅದೇ ಆಗಿದ್ದು. ಶಾಲಾ ಪ್ರವೇಶಾತಿ ಪಡೆಯಲು ನನ್ನಜ್ಜನೊಂದಿಗೆ ಹೋಗಿದ್ದೆ. ಆ ಶಿಕ್ಷಕರು ನನ್ನೆಲ್ಲ ಪರಿಚಯ ಬರೆದುಕೊಂಡರು. ಆ ಮೇಷ್ಟ್ರು ನನ್ನ ಅಜ್ಜನಿಗೆ ನಿಮ್ಮ ಮಗುವಿನ ಹುಟ್ಟಿದ ದಿನಾಂಕದ ಬಗ್ಗೆ ಕೇಳಿದಾಗ ತಡವರಿಸುತ್ತಾ ಅದ್ಯಾವುದೋ ಅಮಾಸ್ಯೆಗೊ, ಹುಣ್ಣಿಮೆಗೋ ಹುಟ್ಟಿದಾನೆ ನನಗೂ ಸರಿಯಾಗಿ ಗೊತ್ತಿಲ್ಲ ಎಂದುಬಿಟ್ಟರು.

ಜೂನ್‌ 8ರಂದು ನಾನು ಅಡ್ಮಿಶನ್‌ಗೆ ಹೋಗಿದ್ದರಿಂದ ಅಂದೇ ನಾನು ಜನ್ಮ ಪಡೆದಿದ್ದೆ. ಬಹುತೇಕರದು ಇದೇ ಕಥೆ. ಆದರೆ ನನ್ನ ಅಮ್ಮ ಜಾಣ್ಮೆ ವಹಿಸಿ ನನ್ನ ಹುಟ್ಟಿದ ದಿನಾಂಕ, ವಾರ, ಸಮಯ ಬರೆದಿಟ್ಟಿದ್ದರಿಂದ ನನ್ನ ಹುಟ್ಟಿದ ಹಬ್ಬವನ್ನು ಎಪ್ರಿಲ್‌ ತಿಂಗಳಲ್ಲಿ ಆಚರಿಸಿಕೊಳ್ಳುತ್ತಿರುವೆ. ಇಲ್ಲದಿದ್ದರೆ ನನ್ನದೂ ಹುಟ್ಟಿದ ದಿನ ಕೂಡ ಕೃತಕವಾಗಿರುತ್ತಿತ್ತು.

ಮೊದಲಿನ ಅಜ್ಜ-ಅಜ್ಜಿಯರು ತಮ್ಮ ಮಕ್ಕಳು ಜನ್ಮ ಪಡೆದರೆ ದಿನಾಂಕವನ್ನು ಬರೆದಿಡುವ ಗೋಜಿಗೆ ಹೋಗುತ್ತಿರಲಿಲ್ಲ. ಯಾವುದೋ ಹಬ್ಬಕ್ಕೊ, ನಮ್ಮೂರ ಜಾತ್ರೆಗೊ ಜನಿಸಿದ ಎಂಬ ಕುರುಹನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು. ಇದೇ ಆಧಾರದ ಮೇಲೆ ಅವರ ಜನ್ಮದಿನಾಂಕವು ನಿರ್ಧಾರವಾಗುತಿತ್ತು. ಬರಬರುತ್ತಾ ಕಾಲ ಬದಲಾದಂತೆ ಹುಟ್ಟಿದ ದಿನಾಂಕ, ವಾರ, ನಕ್ಷತ್ರ, ಗಂಟೆ ನಿಮಿಷಾದಿಯಾಗಿ ಎಲ್ಲವನ್ನು ದಾಖಲಿಸಲಾಗುತ್ತಿದೆ. ಹಾಗಾಗಿ ಇಂದಿನ ಮಕ್ಕಳ ಜನ್ಮದಿನಾಂಕಗಳು ಸೇಫ್‌. ಆದರೆ ಈ ಮೊಬೈಲ್‌ ಯುಗ ಮತ್ತಷ್ಟು ಮುಂದಕ್ಕೆ ಹೋಗಿದೆ. ಒಂಬತ್ತು ತಿಂಗಳು ಗರ್ಭ ಧರಿಸಿದ ತಾಯಂದಿರು ತಮ್ಮ ಮಗು ಯಾವ ದಿನದಂದು ಹುಟ್ಟಬೇಕೆಂದು ಅವರೇ ತೀರ್ಮಾನಿಸುತ್ತಾರೆ.

ತಾವಂದುಕೊಂಡ ವಿಶೇಷ ದಿನದಂದೇ ಡೆಲಿವರಿ ಆಗಬೇಕೆಂದು ವೈದ್ಯರಿಗೆ ದುಂಬಾಲು ಬೀಳುತ್ತಾರೆ. ಇದಕ್ಕೆ ತಂದೆಯರು ಹೊರತಾಗಿಲ್ಲ. ತಾವು ದೇಶಭಕ್ತರಾಗಿದ್ದರೆ ಆಗಸ್ಟ್‌ 15ರಂದು, ಯಾವುದೋ ಸಿನೆಮಾ ಹೀರೋನ ಅಭಿಮಾನಿಯಾಗಿದ್ದರೆ ಅವನ ಜನ್ಮದಿನದಂದು ತಮ್ಮ ಮಗುವಿನ ಹುಟ್ಟುವನ್ನು ನಿಗದಿಪಡಿಸುತ್ತಾರೆ. ಇಂತಹ ಸೆಲ್ಫಿ ಕಾಲದಲ್ಲಿ ತಮ್ಮ ಶಿಶು ಜನಿಸಿದ ತತ್‌ಕ್ಷಣವೇ ಒಂದು ಸೆಲ್ಫಿಗೆ ಹಲ್ಲು ಗಿಂಜಿದರೆ ಸಾಕು, ಅಲ್ಲಿಯೆ ಎಲ್ಲವು ದಾಖಲಾಗಿಬಿಡುತ್ತದೆ. ಹಾಗಾಗಿ ಬರೆದಿಡುವ ಅನಿವಾರ್ಯತೆ ಇಲ್ಲ. ಆದ್ದರಿಂದ ಇಂದಿನ ಮಕ್ಕಳು ತಮ್ಮ ಹುಟ್ಟಿದ ದಿನದ ಬಗ್ಗೆ ಯಾವ ಅನುಮಾನವಿಲ್ಲದೇ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳ ಬಹುದಾಗಿದೆ.

 ಅಂಬ್ರಿಶ್‌ ಎಸ್‌. ಹೈಯ್ನಾಳ್‌ , ಯುವ ಉದ್ಯಮಿ, ಯಾದಗಿರಿ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.