ಆಕಾಶಕ್ಕೆ ಏಣಿ : ಕನಸುಗಳಿಗೆ ಬೇಲಿ ಯಾಕೆ

ಚಂದಮಾಮ ಬೇಕು ಎಂದು ಕೇಳಿದ ಪುಟ್ಟನ ಮುಗ್ಧತೆ

Team Udayavani, Jul 10, 2020, 12:00 PM IST

ಆಕಾಶಕ್ಕೆ ಏಣಿ : ಕನಸುಗಳಿಗೆ ಬೇಲಿ ಯಾಕೆ

ನಿನ್ನೆ ರಾತ್ರಿ ನಮ್ಮ ಬ್ರಹ್ಮಚಾರಿ ಮನೆಯ ರಾಜು ಅಣ್ಣನನ್ನು ಅವರ ಕೆಲಸಕ್ಕೆ ಗಾಡಿಯಲ್ಲಿ ಡ್ರಾಪ್‌ ಮಾಡಿ ಬರುವಾಗ ಸ್ವಲ್ಪ ತಡವಾಗಿತ್ತು. ಪಕ್ಕದ ಮನೆಯ ಅಕ್ಕನ ಮಗು ಒಂದೇ ಸಮನೆ ಅಳುವುದು ಕೇಳಿತು. ನಾನು ಸಾಮಾನ್ಯವಾಗಿ ಮಾತನಾಡಿಸುವಂತೆ “ಏನ್‌ ಅಕ್ಕ ಇವತ್ತು ನಮ್ಮ ಪುಟ್ಟ ತುಂಬಾ ಜೋರು ಸದ್ದುಮಾಡ್ತಾ ಇದ್ದಾನೆ’ ಎಂದು ಕೇಳಿದೆ. ಅಕ್ಕ ಉತ್ತರಿಸಿದರು “ಮೂರು ದಿನಗಳಿಂದ ಇವನದ್ದು ಒಂದೇ ಹಠ, ಚಂದಮಾಮನನ್ನು ತಂದು ಕೊಡು ಅಂತ ಕುಳಿತಿದ್ದಾನೆ. ನಾನು ಎಲ್ಲಿಂದ ತಂದು ಕೊಡಲಿ ನೀನೆ ಹೇಳು’ ಅಂದ್ರು. ನಂಗೆ ಅವರ ಪಾಡನ್ನು ನೋಡಿ ನಗು ಬಂತು.

ನಮ್ಮ ಪುಟ್ಟನನ್ನು ಒಂದಷ್ಟು ಆಟವಾಡಿಸುವ ಮನಸ್ಸಾಯಿತು. ಅದಕ್ಕೆ ಅವನಿಗೆ ಕೇಳಿದೆ, “ಲೋ ಪುಟ್ಟ ಚಂದ ಮಾಮನನ್ನು ಹೇಗೆ ತಂದು ಕೊಡಬೇಕು ಅಂತ ಹೇಳು ನಾನೇ ಹೋಗಿ ತಂದು ಕೊಡ್ತಿನಿ’ ಅಂದೆ. ಅದಕ್ಕೆ ಪುಟ್ಟ ತನ್ನ ತೊದಲು ಮಾತುಗಳಲ್ಲಿ ಸುಂದರವಾಗಿ ಉತ್ತರಿಸಿದ; “ಅಣ್ಣ ಮೇಲೆ ನೋಡು ಚಂದ ಮಾಮ ನಮ್ಮ ಕಡೆ ನೋಡ್ತಾ ಇದ್ದಾನೆ. ನಾನು ನಿನ್ನಷ್ಟು ದೊಡ್ಡವನಿದ್ದಿದ್ದರೆ ನಾನೇ ಹೋಗಿ ತರಿದ್ದೆ’ ಎಂದ ಮುಗ್ಧವಾಗಿ. ಅದಕ್ಕೆ ನಾನು “ಬಲೇ ಚೂಟಿ ಬಿಡು ನೀನು’ ಎಂದು ಉತ್ತರಿಸಿ ಮನೆಗೆ ಮರಳಿದೆ.

ಆದರೆ ಅವನ ಉತ್ತರ ನನ್ನನ್ನು ಮಂಕಾಗಿಸಿ ಮನಸ್ಸನ್ನು ಕೊರೆಯಲಾರಂಭಿಸಿತ್ತು. ನಾನು ಅವನ ನಂಬಿಕೆ ಸುಳ್ಳೆಂದು ಸಾಧಿಸುವ ಸಲುವಾಗಿ ಪ್ರಯತ್ನಿಸಿದರೆ, ಅವನು ನನ್ನೊಳಗಿನ ಶಕ್ತಿಯನ್ನು ತೋರಿಸಲು ನಿಂತಿದ್ದ. ನಾವು ಚಿಕ್ಕವರಿದ್ದಾಗ ಕಾಣುತ್ತಿದ್ದ ಎಷ್ಟೋ ಕನಸುಗಳನ್ನು ಸ್ವಲ್ಪ ಬುದ್ಧಿ ಬರುತ್ತಲೇ ಅವನ್ನು ಮರೆಯುತ್ತೇವೆ. ಆ ರೀತಿಯ ಹುಚ್ಚು ಕನಸುಗಳನ್ನು ಕಾಣಬಾರದು ಎಂದು ಯೋಚಿಸಿ ನಮ್ಮ ಕನಸುಗಳಿಗೆ ನಾವೇ ಬೇಲಿಯನ್ನು ಹಾಕಿಕೊಳ್ಳುತ್ತೇವೆ.

ರೈಟ್‌ ಸಹೋದರರು ಆಕಾಶದಲ್ಲಿ ಹಾರುವ ಕನಸು ಕಂಡಾಗ ಯಾರಾದರೂ ಅದು ಹುಚ್ಚು ಕನಸು ಎಂದು ತಡೆದಿದ್ದರೆ ನಾವಿಂದು ವಿಮಾನವನ್ನು ಹತ್ತುತ್ತಲೇ ಇರಲಿಲ್ಲವೇನೋ. ಹೀಗೆ ಮಕ್ಕಳು ಕಾಣುವ ಅದೆಷ್ಟೋ ಕನಸುಗಳು ಮುಂದೆ ದೊಡ್ಡ ದೊಡ್ಡ ಆವಿಷ್ಕಾರಗಳಾದ ನಿದರ್ಶನಗಳು ನಮ್ಮ ಮುಂದೆ ಇವೆ. ಹಾಗಾಗಿ ನಾನು ಮನದಲ್ಲೇ ಯೋಚಿಸಿದೆ ಇನ್ನು ಮುಂದೆ ನಾನು ಯಾರ ಕನಸುಗಳನ್ನೂ ಸುಳ್ಳೆಂದು ಸಾಧಿಸಲು ಹೋಗುವುದಿಲ್ಲ ಎಂದು. ಯಾಕೆಂದರೆ ಯಾರಿಗೆ ಗೊತ್ತು ಆ ಮಗುವಿನ ಇಂದಿನ ಹುಚ್ಚು ಕನಸೇ ಮುಂದೆ ಜನರನ್ನು ಬೆರಗಾಗಿಸುವ ಆವಿಷ್ಕಾರವಾಗಬಹುದು.

ಸ್ವತ್ಛಂದವಾದ ಕನಸುಗಳಿಗೆ ಬೇಲಿ ಕಟ್ಟುವುದು ಯಾಕೆ ? ಪುಟ್ಟ ಹೃದಯಗಳು ಕಂಡ ಕನಸುಗಳಿಗೆ ಬಣ್ಣ ಹಚ್ಚಿ ನನಸು ಮಾಡುವ ಛಲ ಹೊತ್ತಿರುತ್ತವೆ. ಅವರ ಕನಸುಗಳನ್ನು ನನಸಾಗಿಸಲು ಸಹಕರಿಸೋಣ. ಸುಂದರ ಸಮಾಜವನ್ನು ನಿರ್ಮಿಸೋಣ.


ಸಂಜು .ಟಿ. ಎಸ್.

ಸಂತ ಫಿಲೋಮಿನಾ ಕಾಲೇಜು ಮೈಸೂರು

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.