ಕನಸಿನ ಬದುಕು ಹಾದಿ ತಪ್ಪದಿರಲಿ

ನಾನು ಮತ್ತು ನನ್ನ ಕನಸು

Team Udayavani, Jun 13, 2020, 2:59 PM IST

ಕನಸಿನ ಬದುಕು ಹಾದಿ ತಪ್ಪದಿರಲಿ

ಸಾಂದರ್ಭಿಕ ಚಿತ್ರ

ಬದುಕು ಗೊಂದಲಗಳ ಗೂಡು. ಈಗಷ್ಟೇ ಡಿಗ್ರಿ ಎಂಬ ಬಣ್ಣದ ಬದುಕಿನಿಂದ ಹೊರಬಂದ ಯುವ ಮನದ ಹಕ್ಕಿಗಳಿಗೆ ತಮ್ಮದೇ ಗೂಡನ್ನು ಅಂದವಾಗಿ ಕಟ್ಟಿಕೊಳ್ಳಲು ನೂರೆಂಟು ಅಡ್ಡಿಗಳು. ತಮ್ಮದೇ ರೀತಿಯಲ್ಲಿ ರೂಪಿಸಿಕೊಳ್ಳಬೇಕೆಂಬ ಇಚ್ಛೆಯಿರುತ್ತದೆ. ತಿನ್ನೋ ತಿನಿಸಿನಿಂದ ಹಿಡಿದು, ಹಾಕೋ ಬಟ್ಟೆಯವರೆಗೆ ನಮ್ಮದೇ ಆಯ್ಕೆಗಳಿರುತ್ತವೆ. ಇನ್ನು ನನ್ನ ಜೀವನದಲ್ಲಿ ನಾನು ಏನು ಆಗಬೇಕು? ಯಾವ ಕ್ಷೇತ್ರದಲ್ಲಿ ಹೋದರೆ ನಾನು ಗಟ್ಟಿಯಾಗಿ ನಿಲ್ಲಬಹುದು? ನನ್ನ ಆಸಕ್ತಿ, ನನ್ನ ಮನೋಬಲ, ನನ್ನ ಮನೆಯ ಸ್ಥಿತಿಗತಿ, ಎಲ್ಲಕ್ಕಿಂತ ಹೆಚ್ಚು ನನ್ನ ಕನಸು…ಇವೆಲ್ಲವನ್ನೂ ತಲೆಯಲ್ಲಿಟ್ಟುಕೊಂಡು ದಿಟ್ಟ ನಿರ್ಧಾರಗಳನ್ನು ಸಮಯದ ಬೇಲಿಯೊಳಗೆ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ.

ನಾವು ಸಣ್ಣವರಿದ್ದಾಗ ಹೀಗೆ ಆಗುತ್ತಿರಲಿಲ್ಲ. ನೀಲಿ ಬಣ್ಣದ ರೈನ್‌ಕೋಟ್‌ ಬೇಕು ಅಂದರೆ, ಅದು ಸಿಗುವವರೆಗೂ ನಮ್ಮ ಹಠ ನಿಲ್ಲುತ್ತಿರಲಿಲ್ಲ. ಕಡೆಗೆ ನಮ್ಮ ಹಠವೇ ಗೆಲ್ಲುತ್ತಿತ್ತು. ಆದರೆ ಈಗ ಹಾಗೆ ಆಗಿಲ್ಲ. ನಮಗೆ ಜವಾಬ್ದಾರಿಗಳ ಅರಿವಿದೆ. ಅಪ್ಪ ಅಮ್ಮನ ಕಷ್ಟ ಅರ್ಥ ಈಗ ಅರ್ಥವಾಗುತ್ತಿದೆ. ಪ್ರೀತಿಸಿದ ಹುಡುಗಿಯನ್ನು ಮದುವೆ ಆಗೋ ಅರ್ಹತೆನೂ ಇಲ್ದೇ ಹೋದ್ರೆ ಅನ್ನೋ ತೊಳಲಾಟ ಇದೆ. ಎಲ್ಲಕ್ಕಿಂತ ಹೆಚ್ಚು ಸಮಾಜದ ಭಯ ತುಂಬಾ ಕಾಡುತ್ತಿರುತ್ತದೆ. ಆದರೆ ಇವೆಲ್ಲದರ ಮಧ್ಯೆ ಆ ಹಠ ಎಲ್ಲಿ ಕಳೆದುಹೋಯ್ತು? ಮುಂಚೆ ಇದ್ದ “ನೀಲಿ ಬಣ್ಣದ್ದೇ ರೈನ್‌ಕೋಟ್‌ ಬೇಕು’ ಎಂಬ ನಿಚ್ಚಳವಾದ ಸ್ಪಷ್ಟತೆ ಎಲ್ಲಿ ಮಾಯ ಆಯ್ತು? ವಸ್ತುಗಳನ್ನ ಕೊಂಡು ಕೊಳ್ಳಬೇಕಾದರೆ ಅದೂ ಅಷ್ಟು ಸಣ್ಣ ವಯಸ್ಸಿನಲ್ಲಿ ಇರುತ್ತಿದ್ದ ಸ್ಪಷ್ಟತೆ, ಜೀವನ ಕಟ್ಟಕೊಬೇಕಾದ್ರೇ ಅದೂ ಈ ವಯಸ್ಸಿನಲ್ಲಿ ಇರಬೇಕಲ್ವಾ?
ಎಲ್ಲವೂ ನಾವು ಅಂದು ಕೊಂಡಂತೆ ನಡೆಯೋದಿಲ್ಲ ನಿಜ. ಆದರೆ ಸಾಧ್ಯತೆಗಳ ಬಗ್ಗೆ ನಮಗೆ ವಿಶ್ವಾಸವಿದ್ದರೆ ಯಾವುದನ್ನು ತಡೆಯೋಕೆ ಆಗಲ್ಲ. ಕಷ್ಟಪಟ್ಟು ಓದು ಆಮೇಲೆ ಆರಾಮವಾಗಿರಬಹುದು. ಎನ್ನುವ ಅಮ್ಮಂದಿರ ಮಾತು ಸುಳ್ಳು. ನಿಜವಾದ ಪ್ರಶ್ನೆಗಳು, ಕಷ್ಟಗಳು ಶುರುವಾಗುವುದು ಪಿಯುಸಿ ಮುಗಿದ ಮೇಲೆ. ನಮಗೆ ಬೇಕಾದ ಕೋರ್ಸ್‌, ವಿಷಯಗಳು, ಕಾಲೇಜು ಆರಿಸೋದ್ರಿಂದ ಹಿಡಿದು, ಅಲ್ಲಿ ಏನೋ ಸಾಧಿಸಿದ್ದೇವೆ ಅಂತ ಖುಷಿ ಪಡೋಷ್ಟರಲ್ಲೇ ನಮ್ಮ ಪದವಿ ಜೀವನ ಮುಗಿದಿರುತ್ತದೆ. ಪದವಿಯ ಅನಂತರ ಕೆಲವರು ಜಾಬ್‌ ಅಂತ ಹೋಗ್ತಾರೆ. ಇನ್ನು ಕೆಲವರು ಮನೆಯಲ್ಲಿರ್ತಾರೆ, ಮತ್ತೂಂದಿಷ್ಟು ಜನ ಮದುವೆ ಆಗ್ತಾರೆ, ಇನ್ನು ಕೆಲವರು ಮುಂದಿನ ಶಿಕ್ಷಣದ ಬಗ್ಗೆ ಯೋಚಿಸ್ತಾರೆ. ಇವೆಲ್ಲದರ ಮಧ್ಯೆ ಬೆರಳೆಣಿ ಕೆಯಷ್ಟು ಜನ ಮಾತ್ರ ತಮ್ಮ ಕನಸುಗಳನ್ನ ನನಸು ಮಾಡಿಕೊಳ್ಳುತ್ತಾರೆ. ಬದುಕಿನ ಗೊಂದಲಗಳ ಮಧ್ಯೆ ಕನಸುಗಳನ್ನು ಮರೆಯಬೇಡಿ. ನಮ್ಮ ಬದುಕಿನ ನಿರ್ಧಾರಗಳು ನಮ್ಮ ದೇ ಆಗಿರಲಿ. ಯಾಕೆಂದ್ರೆ ಎಲ್ಲರಕ್ಕಿಂತ ಹೆಚ್ಚು ನಮ್ಮ ಬಗ್ಗೆ ನಮಗೆ ಮಾತ್ರ ಗೊತ್ತಿರಲು ಸಾಧ್ಯ.

ಹತ್ತು ವರ್ಷ ಆದಮೇಲೆ ‘ನಾನು ಇನ್ನೇನೋ ಆಗಿರುತ್ತಿದ್ದೆ’ ಎಂಬ ಕೊರಗು ನಮ್ಮನ್ನು ಕಾಡಬಾರದು. ಆದರೆ ನಿಮ್ಮ ನಿರ್ಧಾರಗಳ ಮೇಲೆ ನಂಬಿಕೆಯಿರಲಿ, ಕಡೇ ಪಕ್ಷ ನನಗೆ ಬೇಕಾದ ಹಾಗೆ ಬದುಕಿದೆ ಅನ್ನೋ ಸಮಾಧಾನವಾದ್ರೂ ಇರುತ್ತೆ. ಕನಸನ್ನ ತಲುಪೋ ಕಿಚ್ಚು ಕಣ್ಣುಗಳಲ್ಲಿರಲಿ, ಎಲ್ಲಕ್ಕಿಂತ ಹೆಚ್ಚು ನಿಮ್ಮ ಕನಸಿನ ದಾರಿಯಲ್ಲಿ ಒಬ್ಬರೇ ನಡಿಯಲು ತುಂಬು ಧೈರ್ಯವಿರಲಿ. ಹಟ ಮತ್ತು ಸ್ಪಷ್ಟತೆಯಂತೂ ಇರಲೇಬೇಕಲ್ವಾ?


– ಲಾವಣ್ಯ ಎನ್‌.ಕೆ.
ಎಕೊಸಾಫಿಕಲ್‌ ಏಸ್ತೆಟಿಕ್ಸ್‌, ವಿದ್ಯಾರ್ಥಿ, ಮಾಹೆ ಮಣಿಪಾಲ

ಟಾಪ್ ನ್ಯೂಸ್

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-fusion

UV Fusion: ಇಂಡಿ ಪಂಪ್‌ ಮಟ..

5-fusion

UV Fusion: ನಾಟಕದ ಜೀವನಕ್ಕೆ ಯಾತಕ್ಕಾಗಿ ದೇವರ ಹೊಣೆ

4-uv-fusion

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

3-uv-fusion

Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ

12-

UV Fusion: ಮಕ್ಕಳ ಕೈಗೊಂದು ಪುಸ್ತಕ ಕೊಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

The Very Best Payment Techniques for Online Casinos

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.