ಸಮೃದ್ಧವಾದ ಅರಣ್ಯಗಳು ಬೆಳೆಯಲಿ


Team Udayavani, Jun 5, 2020, 4:21 PM IST

ಸಮೃದ್ಧವಾದ ಅರಣ್ಯಗಳು ಬೆಳೆಯಲಿ

ಸಾಂದರ್ಭಿಕ ಚಿತ್ರ

ಒಬ್ಬ ಮನುಷ್ಯ ಒಂದು ವರ್ಷ ಕಾಲ ನಿರಾಳವಾಗಿ ಉಸಿರಾಡಬೇಕಿದ್ದರೆ ಅದಕ್ಕಾಗಿ ಬರೋಬ್ಬರಿ ಎಂಟು ಮರಗಳು ಆಮ್ಲಜನಕ ಬಿಡುಗಡೆ ಮಾಡಿ ಅವನಿಗೆ ಒದಗಿಸಬೇಕು. ಅಂದರೆ ಒಬ್ಬ ವ್ಯಕ್ತಿಯ ಒಂದು ವರ್ಷದ ಜೀವಿತಾವಧಿ ಎಂಟು ಮರಗಳ ಮೇಲೆ ನಿರ್ಧರಿಸಲ್ಪಡುತ್ತದೆ! ಮರಕ್ಕೂ ಮನುಷ್ಯನ ಜೀವಕ್ಕೂ ಇರುವ ಅವಿನಾಭಾವ ಸಂಬಂಧ ಇದು.

ಆದರೆ ದುರಂತ ನೋಡಿ, ಕೈಗಾರೀಕರಣ, ನಗರೀಕರಣ ಎಂಬ ಆಧುನಿಕತೆಯತ್ತ ಧಾಪುಗಾಲು ಹಾಕುತ್ತಿರುವ ಭರದಲ್ಲಿ ಮನುಷ್ಯ ತನ್ನ ಪ್ರಾಣಪ್ರಾಯವೇ ಆದ ಮರಗಳನ್ನು ನಾನಾ ಕಾರಣಕ್ಕೆ ಕಡಿಯುತ್ತಿದ್ದಾನೆ. ಹೀಗೆ ಒಂದು ವರ್ಷಕ್ಕೆ ಕಡೆಯಲ್ಪಡುತ್ತಿರುವ ಮರಗಳ ಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚು. ಇದು ಕೇವಲ ಒಂದು ಅಂದಾಜಿನ ಅಂಕಿ ಅಷ್ಟೇ! ಇದರ ಘೋರ ಪರಿಣಾಮವನ್ನು ಅರಿತರೆ ಎದೆ ಢವಗುಟ್ಟಿ, ಉಸಿರು ಕಟ್ಟಿದಂತಾಗುತ್ತದೆ.

ಹಾಗೆ ನೋಡಿದರೆ ಪ್ರಕೃತಿ ಸರ್ವ ಜೀವಕುಲಕ್ಕೂ ಜೀವ ಭಿಕ್ಷೆಯನ್ನು ಒದಗಿಸುವಂತದ್ದು. ಆದರೆ ಮನುಷ್ಯನ ಉದ್ದಟತನಕ್ಕೆ ಎಲ್ಲೆ ಎನ್ನುವುದೇ ಇಲ್ಲ. ಪ್ರಕೃತಿಯನ್ನು ದಿನೇ ದಿನೇ ಹಾಳುಗೆಡವುತ್ತಾ ತಾನೇ ವಿನಾಶಕ್ಕೆ ಎದುರಾಗಿ ಓಡುತ್ತಿದ್ದಾನೆ. ಇದರಿಂದಾಗಿ ವಾಯು ಮಾಲಿನ್ಯ, ಜಲ ಮಾಲಿನ್ಯ ಆರೋಗ್ಯದ ಮೇಲೆ ವಿಪರೀತ ದುಷ್ಪರಿಣಾಮವನ್ನು ಬೀರುತ್ತಿದೆ.

ಕೇವಲ ಮರಗಳಷ್ಟೇ ಅಲ್ಲದೇ, ಎಲ್ಲಾ ರೀತಿಯ ನೈಸರ್ಗಿಕ ಸಂಪನ್ಮೂಲಗಳನ್ನು ತಳ ಬರಿದಾಗುವಂತೆ ಅಗಿಯುತ್ತಿರುವುದು, ಅಗತ್ಯಕ್ಕಿಂತ ಹೆಚ್ಚು ಬಳಸಿ ಹಾಳುಗೆಡುವುತ್ತಿರುವುದು ಆತಂಕಕಾರಿ. ಮುಂದಿನ ಪೀಳಿಗೆ ಬದುಕುಳಿಯಲು ಅತ್ಯವಶ್ಯಕವಾಗುವಷ್ಟು ಸಂಪನ್ಮೂಲವನ್ನು ಸಹ ನಾವು ಉಳಿಸಬಲ್ಲೆವು ಎಂಬ ಭರವಸೆಯೂ ಉಳಿದಿಲ್ಲ. ಅನೇಕ ಜೀವರಾಶಿ ಮತ್ತು ಅರಣ್ಯ ಸಂಪತ್ತಿಗೆ ಹೆಸರುವಾಸಿಯಾದ ನಮ್ಮ ಭಾರತದ ಪಶ್ಚಿಮ ಘಟ್ಟದ ಕಾಡುಗಳಂತೂ ಮೊದಲಿನ ವಿಸ್ತೀರ್ಣದಲ್ಲಿಲ್ಲ. ಅದಕ್ಕೆ ಕಾರಣಗಳನ್ನು ಹುಡುಕುತ್ತಾ ಹೊರಟರೆ ನಮ್ಮ ರಾಜಕೀಯ ವ್ಯವಸ್ಥೆಯತ್ತಲೇ ಬೆಟ್ಟು ಮಾಡಿ ತೋರಿಸಬೇಕಾದದ್ದು ನಾಚಿಕೆಯ ಸಂಗತಿ.

ಇಂತಹ ಬೆಳವಣಿಗೆಯ ಗಂಭೀರತೆಯನ್ನು ಮನಗಂಡ ಪರಿಸರವಾದಿ ಸಂಘ, ಸಂಸ್ಥೆಗಳು ಮರಗಳನ್ನು ಉಳಿಸಿ, ಬೆಳೆಸುವ ಪಣ ತೊಟ್ಟು ನಿಂತಿವೆ. ಅದರ ಒಂದು ಭಾಗವಾಗಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡಗಳನ್ನು ನೆಟ್ಟು ಸಾಮಾಜಿಕ ಪ್ರಜ್ಞೆಬೆಳೆಸುತ್ತಿದೆ. ಆದರೆ ಇದೊಂದೇ ಪರಿಸರವನ್ನು ರಕ್ಷಿಸಬಹುದಾ? ಖಂಡಿತ ಇಲ್ಲ. ಎಲ್ಲಿಯವರೆಗೆ ಪ್ರತಿಯೊಬ್ಬ ಮನುಷ್ಯ ಪ್ರಕೃತಿಯ ಬಗ್ಗೆ ವಿಶೇಷ ಕಾಳಜಿ ವಹಿಸಲಾರನೋ ಅಲ್ಲಿಯವರೆಗೂ ಪ್ರಕೃತಿಯ ಮೇಲಾಗುವ ಹಾನಿ ಕಡಿಮೆಯಾಗಲಾರದು.

ಕೇವಲ ಪರಿಸರ ದಿನಕಷ್ಟೇ ನಮ್ಮ ಕಾಳಜಿ ಸೀಮಿತವಾಗಿರದೇ ಜೀವನದ ವಿಧಾನವಾಗಿ ರೂಪುಗೊಳ್ಳಬೇಕು. ಮುಖ್ಯವಾಗಿ ಇಂದಿನ ಜನಾಂಗಕ್ಕೆ ಪರಿಸರ ಸಂರಕ್ಷಣೆಯ ಮಹತ್ವ ತಿಳಿಸಿಕೊಡುವುದು ನಮ್ಮ ಆದ್ಯ ಕರ್ತವ್ಯ. ನೈಸರ್ಗಿಕ ಸಂಪತ್ತನ್ನು ಮಿತವಾಗಿ ಬಳಸುವುದು, ಮರಗಳನ್ನು ಉಳಿಸುವುದು, ಪರಿಸರ ಮಾಲಿನ್ಯ ತಡೆಗಟ್ಟುವ ಉಪಾಯಗಳನ್ನು ತಿಳಿ ಹೇಳುವುದು ಅವಶ್ಯ.

ಕುಟುಂಬದವರ, ಆತ್ಮೀಯರ ಹುಟ್ಟು ಹಬ್ಬ ಮುಂತಾದ ವಿಶೇಷ ದಿನಗಳ ನೆನಪಿಗಾಗಿ ಮನೆಯ ಮುಂದೆ ಗಿಡ ನೆಟ್ಟು ಬೆಳೆಸುವುದು ಅಥವಾ ಗಿಡಗಳನ್ನು ದತ್ತು ಪಡೆದು ಬೆಳೆಸುವುದು ಚಂದದ ಆಚರಣೆಯಾಗಬಲ್ಲದು. ಈ ನೆಪದಲ್ಲಿ ಮನೆಗೊಂದು ಮರ ಎನ್ನುವ ಘೋಷಣೆಯೂ ಅರ್ಥವನ್ನು ಪಡೆಯುತ್ತದೆ. ಒಟ್ಟಾರೆ ಪರಿಸರ ಸಂರಕ್ಷಣೆ ಕೇವಲ ನಮ್ಮ ಉದ್ಘೋಷವಾಗಿ ಉಳಿಯದೇ ಕ್ರಿಯೆಯಾಗಿ ಚಾಲ್ತಿಗೆ ಬಂದಾಗ ಮಾತ್ರ ನಾವೇ ನಮ್ಮ ಅಳಿವನ್ನು ತಡೆಯಬಹುದೇನೋ.

ಕವಿತಾ ಭಟ್‌, ಮಾಸ್ತಿಕಟ್ಟೆ ಕುಮಟಾ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.