ಜೀವನದ ನಿತ್ಯ  ಹುಡುಕಾಟದ  ಸಂಗತಿಗಳು…


Team Udayavani, Jul 21, 2021, 10:15 AM IST

ಜೀವನದ ನಿತ್ಯ  ಹುಡುಕಾಟದ  ಸಂಗತಿಗಳು…

ಆಗಾಗ ಅಡಿಗರ ಕೆಲವು ಸಾಲುಗಳು ನೆನಪಾಗುತ್ತಿರುತ್ತವೆ. “ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿಯುವುದೇ ಜೀವನ’.. ಒಂದೇ ಸಾಲಿನಲ್ಲಿ ಬದುಕೆಂಬುದು ನಿತ್ಯ ಹುಡುಕಾಟ ಮತ್ತು ಕೊರತೆಯೇ ಜೀವನ ಎಂಬ ಬಹು ದೊಡ್ಡ ಮರ್ಮವನ್ನು ಈ ಸಾಲುಗಳು ಸಾರುತ್ತವೆ. ಹಾಗಾದರೆ ನಾವು ಯಾವುದರ ಹುಡುಕಾಟ ಮಾಡುತ್ತಿದ್ದೇವೆ ಎಂಬುದನ್ನು ಅವಲೋಕಿಸಿದರೆ ಅದರ ವ್ಯಾಪ್ತಿಯು ಶೀಘ್ರ ಹಣ ಸಂಪಾದನೆಯ ಮಾರ್ಗದ ಹುಡುಕಾಟ, ಉತ್ತಮ ಒಡನಾಡಿ ಗಳ ಹುಡುಕಾಟ ಸಹಿತ ಇತ್ಯಾದಿ ಅಂಶಗಳನ್ನು ಒಳಗೊಂಡಿದೆ.

ಎಲ್ಲಕ್ಕಿಂತ ಮಿಗಿಲಾಗಿ ಪ್ರೀತಿಯ ಹುಡುಕಾಟವೆಂಬುದು ದೈನಂದಿನ ಬದುಕಿನ ನಿರಂತರ ದೀಕ್ಷೆಯಾಗಿದೆ. ಪ್ರೀತಿಯೆಂಬುದು ವ್ಯಾಪ್ತಿ ರಹಿತವಾದುದು. ಹಾಗಾಗಿ ಕೇವಲ ವಿಸ್ತರಿಸಬಹುದಷ್ಟೇ. ಅಳೆಯಲಾಗದು. ಎಲ್ಲ ವಯೋಮಾನದವರಿಗೂ ಪ್ರೀತಿಯೆಂಬುದೊಂದು ಸೆಲೆ; ಒಂದು ಬಗೆಯ ಆಕ್ಸಿಜನ್‌. ಮಗುವಿಗೆ ತಂದೆ-ತಾಯಿ ಯರ ಮಮತೆಯಾಗಿ, ತಾರುಣ್ಯಕ್ಕೆ ಗೆಳೆಯ-ಗೆಳತಿಯರ ಆಕರ್ಷಣೆಯಾಗಿ, ಮಧ್ಯ ವಯಸ್ಕರ ಅಗತ್ಯವಾಗಿ, ಅಷ್ಟೇ ಯಾಕೆ; ವಯೋವೃದ್ಧರ ಬೌದ್ಧಿಕ ಒಂಟಿತನ ಕಳೆಯುವ ಮದ್ದು, ಹೀಗೆ ಬೇರೆ ಬೇರೆ ಪಾತ್ರೆಗಳಲ್ಲಿ ಸುರಿದ ನೀರಿನಂತೆ ಒಂದೊಂದು ಹಂತದಲ್ಲೂ ಪ್ರೀತಿಯು ತನ್ನದೇ ಆದ ಮಹತ್ವ ಹೊಂದಿರುವ ಅಗಾಧ ಶಕ್ತಿಯಾಗಿದೆ.

ವಿಸ್ತಾರ ವ್ಯಾಪ್ತಿಗಳಿಗನುಗುಣವಾಗಿ ಒಲವು, ಅನುರಾಗ, ಮಮತೆ ಎಂಬ ವಿವಿಧ ನಾಮಗಳನ್ನು ಪ್ರೀತಿಯು ಪಡೆದುಕೊಳ್ಳುತ್ತದೆ. ಆದರೆ ಇಂತಹ ಅದ್ಭುತ ಶಕ್ತಿಗೂ ವೈಫಲ್ಯವೆಂಬ ಕಳಂಕವಿದೆ.

ಅನುರಾಗವೆಂಬ ಅನಂತ ಭಾವಕ್ಕೂ, ವೈಫಲ್ಯವಿದೆಯೆಂಬುದು ಒಂದು ಹಂತಕ್ಕೆ ಸತ್ಯ.ಅನುರಾಗವೆಂಬುದು ಸಮಾನವಾಗಿ ಹಂಚಿ, ಎಲ್ಲರೂ ಸಂತೋಷದಿಂದ ಅನುಭವಿಸಬೇಕಾದ ಒಂದು ಅದ್ಭುತ, ಅಗೋಚರ ಭಾವ ಎಂಬುದರ ಅರಿವೇ ನಮಗಾರಿಗೂ ಇದ್ದಂತಿಲ್ಲ.  ಪ್ರತಿಯೊಬ್ಬರ ಜತೆಗೂ ಪ್ರೀತಿ ವಿಶ್ವಾಸದಿಂದ ಇದ್ದು, ಅದರ ಪರಿಮಳವನ್ನು ಪಸರಿಸುವಂತೆ ಮಾಡುವುದು. ಇದು ಸಂಪೂರ್ಣ ಕಾರ್ಯಗತಗೊಂಡರೆ, ಈ ಸಮಾಜದಲ್ಲಿ ಸಾಮರಸ್ಯದ ಕೊರತೆ ಎದುರಾಗಲಾರದು. ಅಗತ್ಯಕ್ಕಿಂತ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತಿವೆ.ಅದರಲ್ಲೂ ಪ್ರಮುಖವಾಗಿ ಅವಧಾನದ ಕೊರತೆಯನ್ನು ಹೆಚ್ಚಿಸುತ್ತಿದೆ. ಈ ನಿಟ್ಟಿನಲ್ಲಿ “ಬೇಂದ್ರೆಯವರ ಈ ಸಾಲುಗಳು ಸೂಕ್ತ ಅರ್ಥವನ್ನು ಒದಗಿಸುತ್ತದೆ.”ನಾನು ಬಡವಿ,ಆತ ಬಡವ ಒಲವೆ ನಮ್ಮ ಬದುಕು”..ಇದರಾರ್ಥ ಪ್ರೇಮವೆಂದರೆ ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಮುನ್ನಡೆಯುವುದೇ ಬದುಕು. ಇಲ್ಲಿ ಶ್ರೀಮಂತಿಕೆಯಿಲ್ಲ, ಕೇವಲ ಅನುರಾಗವಿದೆ.ಪ್ರೀತಿಯಲ್ಲಿ ನಿರ್ಮಿತಿಯಿರಲಿ; ಪ್ರೇಮವೆಂಬುದು ಹಿಡಿದು ಕೊಡುವುದಲ್ಲ, ಮನಸ್ಸೆಂಬ ಬಯಲಲ್ಲಿ ವಿಶಾಲವಾಗಿ ಹರಡಿ ಹಂಚುವುದು.

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.