ಅಲೋಪೆಸಿಯಾದಿಂದ ಬಳಲುತ್ತಿದ್ದ ಗೆಳತಿಗೆ ಇದಕ್ಕಿಂತ ಹೆಚ್ಚಿನ ಪ್ರೀತಿ ಸಾಧ್ಯವೇ…?


Team Udayavani, Jul 30, 2020, 7:20 PM IST

Digitallll

ಜಗತ್ತಿನಲ್ಲಿ ಬೆಲೆ ಕಟ್ಟಲಾಗದ  ವಸ್ತು ಇದ್ದರೆ ಅದು ಪ್ರೀತಿ, ಮಮತೆ, ವಾತ್ಸಲ್ಯ. ಇವುಗಳಿಗೆ ಯಾರಿಂದಲೂ ಬೆಲೆಕಟ್ಟಲಾಗದು.

ಜಗತ್ತಿನಲ್ಲಿ ಆಸ್ತಿ ಅಂತಸ್ತು, ನೆಮ್ಮದಿ ಇಲ್ಲವಾಗಿ, ಸಾವಿನ ದವಡೆಯತ್ತ ಹೋಗುತ್ತಿದ್ದರೂ ಕಡೆಗೆ ಪ್ರೀತಿಯೊಂದಿದೆ ಎಂಬ ಕಾರಣಕ್ಕೆ ಜೀವ ಉಳಿಸಿದ ಅದೆಷ್ಟೋ ನಿದರ್ಶನ ನಮ್ಮ ಮುಂದೆ ಇದೆ.

ಒಂದರ್ಥದಲ್ಲಿ ಪ್ರೀತಿ ಅಥವ ನಮ್ಮವರು ಎಂಬುದು ಜೀವನದ ಆಮ್ಲಜನಕ. ಅದು ಹೆತ್ತ ತಾಯಿ- ತಂದೆಯಿಂದ ಆಗಿರಬಹುದು, ಗೆಳೆಯರಾಗಿರಬಹುದು ಅಥವ ಕೈ ಹಿಡಿದ ಮಡದಿಯಿಂದಲೇ ಆಗಿರಬಹುದು.

ಇಲ್ಲೊಂದು ಕಥೆ ಇದೆ. ಬಹುಶ ಇದು ಭಾವನೆಯ ಅಂತಃಕರಣದಲ್ಲಿನ ಆಳವಾಗಿರಬಹುದು.

ಬಲಿಷ್ಠವಾದ ಮರ ಮೇಲೇಳಿಬರಲು ನೆರವಾದ ತಾಯಿ ಬೇರಿನಂತಹ ಅಚಲ ಕಾಳಜಿ ಮತ್ತು ಅನೋನ್ಯ ಸಂಬಂಧವೂ ಆಗಿರಬಹುದು. ಅಂತು ಇಂತಹ ನಡೆ ಬತ್ತಿಹೋದ ಇಳೆಯಲ್ಲಿ ನೀರು ಚಿಮ್ಮಿದಷ್ಟು ಸಂತೋಷವನ್ನು ದಯಪಾಲಿಸುತ್ತದೆ.

ಜಗತ್ತಿನಲ್ಲಿನ ಕಾಯಿಲೆಗಳಲ್ಲಿ ಬೊಕ್ಕತಲೆ ಅಥವ ಅಲೋಪೆಸಿಯಾ ಒಂದು. ಇದು ಕೆಲವರಿಗೆ ಗಂಭೀರ ಸ್ವರೂಪದಲ್ಲಿದ್ದರೆ, ಕೆಲವರಿಗೆ ಲಘುವಾಗಿರುತ್ತದೆ.

ಅದರಲ್ಲೂ ಪುರಷರಲ್ಲಿ ಇದು ಸಾಮಾನ್ಯವಾಗಿ ಹೆಚ್ಚು ಕಂಡುಬರುತ್ತದೆ. ಇದಕ್ಕೆ ಹಾರ್ಮೋನುಗಳ ಕಾರಣ ಸೇರಿದಂತೆ ನಾನಾ ವ್ಯಾಖ್ಯಾನ ವೈದ್ಯಕೀಯ ಕ್ಷೇತ್ರ ನೀಡುತ್ತದೆ. ಒಳ್ಳೆಯ ಕೂದಲು ಬೇಕು ಎಂದು ಹಂಬಲಿಸುವುದು ಸಾಮಾನ್ಯ. ಅದರಲ್ಲೂ ಯುವತಿಯರು ನೀಲವಾಗ ಕೂದಲಿಗೆ ಮನಸ್ಸು ಮಾಡುತ್ತಾರೆ. ಸಣ್ಣ ಕೂದಲಿದ್ದು ಅದನ್ನು ನೀಲ ಜಡೆಯಾಗಿ ಪರಿವರ್ತಿಸಿಕೊಳ್ಳಲು ಹಲವು ಬಗೆಯ ತೈಲಗಳೂ ಮಾರುಕಟ್ಟೆಯಲ್ಲಿವೆ.

ಅಲೋಪೆಸಿಯಾ ಎನ್ನುವುದು ರೋಗ ನಿರೋಧಕ ಶಕ್ತಿಯು ಕೂದಲಿನ ಕಿರುಚೀಲಗಳ ಮೇಲೆ ದಾಳಿ ಮಾಡಿ ಕೂದಲು ಉದುರಲು ಕಾರಣವಾಗುತ್ತದೆ. ಕೆಲವೊಮ್ಮೆ ಇದು ಸಣ್ಣ ಸಣ್ಣ ತೇಪೆಗಳಾಗಿರಬಹುದು. ಆದರೆ ಇತರ ಸಮಯಗಳಲ್ಲಿ ಈ ತೇಪೆಗಳು ವಿಸ್ತರಿಸಲ್ಪಡುತ್ತದೆ.
ಆದರೆ ಅಲೋಪೆಸಿಯಾ ಕಾಯಿಲೆ ಇದ್ದರಿಗೆ ಕೂದಲನ್ನು ಹೊಂದಲು ಸಾಧ್ಯವಾಗುವುದಿಲ್ಲ. ಅಲ್ಲಲ್ಲಿ ಪ್ಯಾಚಸ್‌ ರೂಪದಲ್ಲಿ ಕೂದಲನ್ನು ಕಳೆದುಕೊಳ್ಳುವುದು ಇದರ ಲಕ್ಷಣ. ಅಂದರೆ ಅಲ್ಲಲ್ಲಿ ಕೂದಲು ಕೆಲವು ಕಡೆ ಖಾಲಿ.

ಈ ರೋಗದಿಂದ ಬಳಲುತ್ತಿದ್ದ ತನ್ನ ಪ್ರೇಯಸಿಯನ್ನು ಕೂದಲನ್ನು ಯುವನೊಬ್ಬ ಟ್ರಿಮ್‌ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಒಂದು ನಿಮಿಷದ ವೀಡಿಯೋದಲ್ಲಿ ಗೆಳೆಯ ತನ್ನ ಗೆಳತಿಯ ತಲೆ ಬೋಳಿಸಿಕೊಳ್ಳುವುದನ್ನು ತೋರಿಸುತ್ತದೆ. ಅಲೋಪೆಸಿಯಾದಿಂದ ಬಳಲುತ್ತಿದ್ದ ತನ್ನ ಹುಡುಗಿಯ ತಲೆ ಕೂದಲನ್ನು ಟ್ರಿಮ್‌ ಮಾಡುತ್ತಾನೆ. ಹುಡುಗಿಗೆ ತನ್ನ ಕೂದಲ ಮೇಲೆ ಇರುಷ್ಟೇ ಪ್ರೀತಿ ಹುಡುಗನಿಗೂ.

ತನ್ನವಳ ಕೂದಲನ್ನು ಬಾಚಬೇಕು, ತಲೆ ಕೂದಲ ಸ್ಪರ್ಶವನ್ನು ಅನುಭವಿಸಬೇಕು. ಸಮಾರಂಭಗಳಿಗೆ ಹೊರಟಾಗ ಜಡೆತುಂಬಾ ಹೂವುಗಳು ಘಮಘಮಿಸಬೇಕು ಇತ್ಯಾದಿ ಕನಸು ಪ್ರತಿ ಹುಡುಗನಿಗೂ ಇರುತ್ತದೆ. ಇದು ವಾಸ್ತವ ಹಾಗೂ ಸಾಮಾನ್ಯ. ಇಲ್ಲಿ ಈ ಎಲ್ಲ ಕನಸನ್ನು ಕಂಡಿದ್ದ ಯುವಕ ಸ್ವತಃ ಕೈಯಿಂದ ಹುಡುಗಿಯ ತಲೆ ಸಂಪೂರ್ಣವಾಗಿ ಕ್ಷೌರ ಮಾಡುತ್ತಾನೆ. ಬಳಿಕ ಆತ ಇದ್ದಕ್ಕಿದ್ದಂತೆ ಟ್ರಿಮ್ಮರ್‌ ಅನ್ನು ತನ್ನ ತಲೆಯ ಕಡೆಗೆ ತೆಗೆದುಕೊಂಡು ಅವನ ತಲೆ ಬೋಳಿಸಲು ಪ್ರಾರಂಭಿಸುತ್ತಾನೆ.

ಅದನ್ನು ನೋಡಿ ಅವಳು ಆಘಾತಕ್ಕೊಳಗಾಗುತ್ತಾಳೆ. ಅವನ ಪ್ರೀತಿಗೆ ಸೋತು ಅವಳ ಕಣ್ಣೀರ ಕಟ್ಟೆ ಒಡೆಯುತ್ತದೆ. ಗೆಳತಿಗೆ ಬೆಂಬಲ ತೋರಿಸಲು ಹುಡುಗ ತಲೆ ಬೋಳಿಸಿಕೊಂಡ. ಅವಳು ಅಳುತ್ತಿದ್ದಂತೆ ಅವನು ಅವಳ ಕೆನ್ನೆಗೆ ಮುತ್ತನ್ನು ಇಡುತ್ತಾನೆ. ಈ ದೃಶ್ಯ ಒಂದರೆಕ್ಷಣ ಮನಸ್ಸನ್ನು ಭಾರವೆನಿಸುತ್ತದೆ. ಈ ವೀಡಿಯೋ 10 ಗಂಟೆಗಳ ಅವಧಿಯಲ್ಲಿ 30 ಲಕ್ಷ ವೀಕ್ಷಣೆಯನ್ನು ಪಡೆದಿದೆ. ಈ ವೀಡಿಯೋ ಅನ್ನು ರೆಕ್ಸ್‌ ಚಾಪ್‌ಮೆನ್‌ ಅವರು ಹಂಚಿಕೊಂಡಿದ್ದಾರೆ.

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.