ಸಾಧನೆಗೆ ಅಂಕಗಳೇ ಮಾನದಂಡವಾಗದಿರಲಿ


Team Udayavani, Jun 1, 2020, 2:43 AM IST

ಸಾಧನೆಗೆ ಅಂಕಗಳೇ ಮಾನದಂಡವಾಗದಿರಲಿ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಇಂದಿನ ವೇಗದ ಬದುಕಿನಲ್ಲಿ ಪರೀಕ್ಷೆಯಲ್ಲಿ ಪಡೆದ ಅಂಕಗಳೆ ನಮ್ಮ ಮಾನದಂಡಗಳಾಗುತ್ತಿವೆ.

ಸಮಾಜ ನಿಂತಿರುವುದೇ ಅಂಕದ ಮೇಲೆ ಎಂದು ಎಲ್ಲರೂ ಭಾವಿಸಿದಂತಿದೆ.

ಮನೆಯಲ್ಲಿ ಹೆತ್ತವರ, ಶಾಲೆಯಲ್ಲಿ ಶಿಕ್ಷಕರ ಒತ್ತಡದಿಂದ ಪರೀಕ್ಷೆಯ ಅಂಕಕ್ಕಾಗಿ ಸಣ್ಣ ಸಣ್ಣ ಮಕ್ಕಳೂ ಪೈಪೋಟಿಗೆ ಬಿದ್ದಿದ್ದಾರೆ.

ಅಂಕಗಳೇ ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬ ಯೋಚನೆ ಹಲವರಲ್ಲಿ ಇದೆ. ಬದುಕಿನ ಪಾಠವನ್ನು ಅರಿಯದವನಿಗೆ ಹೆಚ್ಚು ಅಂಕ ಬಂದರೆ ಏನು ಪ್ರಯೋಜನ? ಹೀಗೆಂದ ಮಾತ್ರಕ್ಕೆ ಕಲಿಕೆ, ಅಂಕ ಬೇಡವೆಂದಲ್ಲ. ಪರೀಕ್ಷೆಯಲ್ಲಿ ಪಡೆದ ಅಂಕಗಳಷ್ಟೇ ವ್ಯಕ್ತಿತ್ವವನ್ನು ಅಳೆಯುವಂತಹ ಮಾನದಂಡ ಅಲ್ಲ.

ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಸಾಧ್ಯವಿಲ್ಲ. ಎಲ್ಲರ ಜ್ಞಾನ, ತಿಳಿವಳಿಕೆ, ಆಸಕ್ತಿಯ ಕ್ಷೇತ್ರ ಒಂದೇ ಆಗಿರುವುದಿಲ್ಲ. ವಿದ್ಯಾಭ್ಯಾಸದ‌ಲ್ಲಿ ಅನುತ್ತೀರ್ಣರಾದರೆ ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿ ಸಾಧನೆ ಮಾಡಿ ಗೆದ್ದು ಬೀಗಬಹುದು. ಬದಲಾಗಿ ಸೋಲೊಪ್ಪಿಕೊಳ್ಳುವುದು ಸರಿಯಲ್ಲ. ಶಿಕ್ಷಣದಿಂದ ತೊಡಗಿ ಪ್ರತಿ ಹಂತದಲ್ಲಿಯೂ ಸ್ಪರ್ಧೆ ಇದ್ದೇ ಇದೆ. ಅದು ಮುಖ್ಯವೂ ಹೌದು. ಆದರೆ ಅಂಕ ಗಳಿಸುವುದೇ ಜೀವನದ ಸಾಧನೆಯಲ್ಲ.

ಅದೆಷ್ಟೋ ಮಂದಿ ರ್‍ಯಾಂಕ್‌ ಪಡೆದು ಜೀವನದ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಉದಾಹರಣೆಗಳು ನಮ್ಮಲ್ಲಿವೆ. ಅಂತೆಯೇ ಯಾವುದೋ ಕಾರಣದಿಂದ ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಿ ಸಾಧನೆ ಮಾಡಿದವರು ನಮ್ಮ ಕಣ್ಣ ಮುಂದಿದ್ದಾರೆ. ಇವರ ಸಾಧನೆ ಹಲವು ಮಂದಿಯ ಬದುಕಿಗೆ ಮಾದರಿಯಾದ ನಿದರ್ಶನಗಳಿವೆ. ಇವೆಲ್ಲಾ ನಾವು ಆಯ್ಕೆ ಮಾಡುವ ದಾರಿ ಹೇಗಿದೆ ಎಂಬುದರ ಮೇಲೆ ನಿಂತಿದೆ.

ಮಾದರಿಯಾಗಿ ಬಾಳುವ ಅವಕಾಶ ತಾನಾಗಿಯೇ ಒದಗುತ್ತದೆ. ಆದರೆ ಸಿಕ್ಕ ಅವಕಾಶಗಳನ್ನು ಕೈ ಚೆಲ್ಲಬಾರದಷ್ಟೆ. ಕಷ್ಟ ಇಂದು ಬಂದು ನಾಳೆ ಮರೆಯಾಗುತ್ತದೆ. ಅನುಭವ ಪ್ರತಿಕ್ಷಣ ಸೂಕ್ತವಾದ ಪಾಠ ಕಲಿಸುತ್ತದೆ. ಉದ್ದೇಶ ಅಚಲವಾಗಿದ್ದು, ಸಾಧನೆಗೆ ಪಣ ತೊಟ್ಟರೆ, ಆ ದಾರಿಯಲ್ಲಿ ನೂರು ಬಾರಿ ಸೋತರೂ ಆ ಸೋಲು ಕೊಡುವ ಅನುಭವ ನಾಳಿನ ದೊಡ್ಡ ಗೆಲುವಿಗೆ ಕಾರಣವಾಗಿರುತ್ತವೆ. ಬದುಕು ನಾವು ಬಯಸಿದಂತೆ ಬಂದರೆ ಸುಖದ ಬಾಳು ಬೇಕು. ಇಲ್ಲವಾದರೆ ಕಷ್ಟವನ್ನು ಎದುರಿಸುವ ಶಕ್ತಿಯನ್ನು ತೊರೆದು ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತೇವೆ.
ಸೋಲು ಗೆಲುವಿನ ಅಂತರ ತುಂಬಾ ಸರಳ.

ಇದಕ್ಕೆ ಅಂಜಿ ಪಲಾಯನ ಮಾಡುವ ಹೇಡಿಗಳಾಗಬೇಕೇ? ಗುರಿಯೊಂದಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ. ಅಸಾಧ್ಯವೆ ನಿಸುವುದನ್ನೂ ಗರಿಷ್ಠ ಪ್ರಮಾಣದಲ್ಲಿ ಪ್ರಯತ್ನಿಸಬೇಕು. ಫ‌ಲದ ನಿರೀಕ್ಷೆ ಮಾಡದೆ ಯಾವುದೇ ಕೆಲಸದಲ್ಲೂ ಶ್ರೇಷ್ಠ, ಕನಿಷ್ಠವೆಂದು ಭಾವಿಸಬಾರದು. ಪ್ರತಿ ಕೆಲಸದಲ್ಲೂ ಘನತೆ ಕಾಣಬೇಕು.

ಆಗ ಮಾತ್ರ ಒಬ್ಬ ಕಾರ್ಮಿಕನೂ ಕಟ್ಟಡದ ಮಾಲಕನಾಗ ಬಹುದು. ಸೋತು ಗೆದ್ದವರ ಜೀವನ ಚರಿತ್ರೆ ನಮಗೆ ಸ್ಪೂರ್ತಿಯಾಗಲಿ. ದೌರ್ಬಲ್ಯವನ್ನೇ ಶಕ್ತಿಯನ್ನಾಗಿಸಿ. ಸೋಲೇ ಗೆಲುವಿಗೆ ಸೋಪಾನ ಎಂದು ಅರಿತು ಕೊಳ್ಳುವ. ಕೊನೆ ಪಕ್ಷ ಕಷ್ಟ ಸುಖಗಳೆಂಬ ಬಾಳ ದೋಣಿಯಲ್ಲಿ ಸಾಗು ವಾಗ ಗುರಿ ಮುಟ್ಟದಿದ್ದರೂ ಪ್ರಯತ್ನವೆಂಬ ಪಯಣವನ್ನು ನಿಲ್ಲಿಸದೆ ಮುಂದುವರಿಸೋಣ.

– ರಾಮಕಿಶನ್‌ ಕೆ.ವಿ., ವಿವೇಕಾನಂದ ಪದವಿ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.