ಸಂಗೀತ ನಮ್ಮ ನಿತ್ಯ ಬದುಕಿನ ಸಂಜೀವಿನಿ


Team Udayavani, Jul 26, 2020, 3:37 PM IST

music instru

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಭಾರತೀಯ ಸಂಸ್ಕೃತಿಯ ಮೂಲಸ್ತಂಭಗಳೇ ಸಂಗೀತ, ನೃತ್ಯ ಮೊದಲಾದ ಲಲಿತಕಲೆಗಳು. ನಮ್ಮ ಪ್ರಾಚೀನರು ಈ ಎಲ್ಲ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆ ಅಪಾರ.

ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಪರಮಾತ್ಮನ ಸಾಧನೆಗಾಗಿ ಲಲಿತಕಲೆ ಉತ್ಪತ್ತಿಯಾಯಿತು ಎಂಬುದರ ಉಲ್ಲೇಖ ಪುರಾಣಗಳಲ್ಲಿದೆ. ಭಾರತೀಯ ಪರಂಪರೆಯಲ್ಲಿ ಲಲಿತಕಲೆಗಳಲ್ಲಿ ಸಂಗೀತವು ಶ್ರೇಷ್ಠ ಸ್ಥಾನವನ್ನು ಪಡೆದಿದೆ.

ಇದರ ಹುಟ್ಟು ಸಾಮವೇದದಿಂದಲೇ ಎಂಬುದು ಸರ್ವ ವಿದಿತವಾದ ಸಂಗತಿ.ಜಗತ್ತಿನಲ್ಲಿ ಅದರದ್ದೇ ಆದ ಅನನ್ಯತೆ ಹಾಗೂ ಭಾವಪೂರ್ಣ ಸೊಬಗನ್ನು ಹೊಂದಿದ ಸಂಗೀತವು ಕೇಳುಗನನ್ನು ದೈವಿಕವಾದ ಆತ್ಮಾನಂದದತ್ತ ಕರೆದೊಯ್ಯುವ ಶಕ್ತಿಯನ್ನು ಹೊಂದಿದೆ. ಸಂಗೀತಕ್ಕೆ ಪ್ರಕೃತಿಯೇ ತಾಯಿ ಎಂಬ ಮಾತಿದೆ.

ಸಂಗೀತ ಪ್ರಕೃತಿ ಮತ್ತು ಮಾನವನ ಅವಿನಾಭಾವ ಸಂಬಂಧದ ದ್ಯೋತಕವೂ ಹೌದು. ಸಂಗೀತಕ್ಕೆ ತಲೆಭಾಗದವರಿಲ್ಲ, ತಲೆದೂಗದವರಿಲ್ಲ. ಕಿಂಚಿತ್‌ ಭಕ್ತಿಯಿಂದೊಡಗೂಡಿದ ಗೀತವು ಅನಂತಾನಂತ ಕೋಟಿ ಜಪಕ್ಕೆ ಸರಿಯಾದುದು ಎಂದು ಬಸವಣ್ಣ ಹೇಳಿದರೆ, ಸಂಗೀತವು ಒಂದು ಉನ್ನತವಾದ ಕಲೆ, ಅದು ಅರ್ಥವಾದವರಿಗೆ ಒಂದು ಉತ್ಕೃಷ್ಟವಾದ ಪೂಜೆ ಎಂಬುದು ಸ್ವಾಮಿ ವಿವೇಕಾನಂದರ ಮಾತು.

ಶ್ರೀ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಪುರಂದರದಾಸರು, ಕನಕದಾಸರು, ನಾಮದೇವ, ತುಲಸಿ, ಕಬೀರ, ಚೈತನ್ಯಾ ಮಹಾಪ್ರಭು ಹೀಗೆ ಅಖಂಡ ಭಾರತದ ಸಂತವರೇಣ್ಯರು ಸಂಗೀತವನ್ನು ನಾದಯೋಗವಾಗಿಸಿದ್ದಾರೆ. ವೈಶಿಷ್ಟé ಪೂರ್ಣತೆಯನ್ನು ಹೊಂದಿರುವ ಭಾರತೀಯ ಸಂಗೀತವು ಕೇವಲ ಮನೋರಂಜನೆಗಾಗಿ ಇರುವ ಸಾಧನವಲ್ಲ.

ಸ್ವರ, ರಾಗ, ಶ್ರುತಿ, ಲಯ ಮಾಧುರ್ಯಗಳಲ್ಲಿ ವಾದ್ಯ, ಹಿಮ್ಮೇಳಗಳ ಸಮ್ಮಿಲನದಿಂದ ನವಿರಾಗಿ ಮೂಡಿಬಂದು ಶ್ರವಣ ಮಾತ್ರದಿಂದಲೇ ನಮ್ಮ ಮನಸ್ಸಿಗೆ ಸಂತೃಪ್ತಿಯನ್ನು ಒದಗಿಸುತ್ತದೆ. ಅದು ನಮ್ಮೆಲ್ಲರ ಚೇತನಗಳಲ್ಲಿರುವ ಅಂತಃಸತ್ವವನ್ನು ದೈನಂದಿನ ಬದುಕಿನ ನೀರಸ ಸ್ತರದಿಂದ ಮೇಲಕ್ಕೆತ್ತಿ ಅದರದ್ದೇ ಆದ ಅಂತಃ ಸತ್ವದಲ್ಲಿ ಲೀನವಾಗಿಸುವ ಶಕ್ತಿಯನ್ನು ಹೊಂದಿದೆ.

ಕಲೆ ಎಂಬುದು ಸಂಜೀವಿನಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ದೇಶದ ಹಿರಿದಾದ ಸಾಂಸ್ಕೃತಿಕ ಪರಂಪರೆಯಲ್ಲಿ ಅವಿಚಿ#ನ್ನವಾಗಿ ಸಾಗಿ ಬಂದ ಸಂಗೀತ ಕಲೆಯನ್ನು ಆಳವಾಗಿ ಅಲ್ಲದಿದ್ದರೂ ಅಲ್ಪವಾದರೂ ಎಲ್ಲರೂ ಅರಿಯುವುದು ಅವಶ್ಯ.

-ಸ್ವಾತಿ ರಾವ್‌, ಮಂಗಳಾದೇವಿ, ಬೆಸೆಂಟ್‌ ಕಾಲೇಜು, ಮಂಗಳೂರು

 

 

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.