ನೂತನ ಶಿಕ್ಷಣ ನೀತಿ; ನಿರೀಕ್ಷೆಯಲ್ಲಿ ಭವ್ಯ ಭಾರತದ ಮುನ್ನೋಟ


Team Udayavani, Aug 15, 2020, 11:30 AM IST

hak tik hak tik

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಲಾಕ್‌ಡೌನ್‌ ಸಮಯದಲ್ಲಿ ನಾನು ಕೇಳಿರುವ ಒಳ್ಳೆಯ ಸುದ್ದಿ ಎಂದರೆ ಅದು ಹೊಸ ಶಿಕ್ಷಣ ನೀತಿ.

ತುಕ್ಕು ಹಿಡಿದ ಕಬ್ಬಿಣದಂತಾಗಿದ್ದ ಶಿಕ್ಷಣ ನೀತಿಗೆ ಹೊಸರೂಪ ದೊರೆತಂತಾಗಿದೆ.

ಶತಮಾನಗಳಿಂದ ಶಿಕ್ಷಣದ ರೀತಿಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದ ನಮಗೆ ಒಂದು ಪರಿಹಾರ ಸಿಕ್ಕಂತಾಗಿದೆ.

ಈ ಬದಲಾದ ಶಿಕ್ಷಣ ನೀತಿ ಹಲವಾರು ವಿಶೇಷಗಳನ್ನು ಒಳಗೊಂಡಿದೆ. ಹೊಸ ಶಿಕ್ಷಣ ನೀತಿಯಲ್ಲಿ ಭವ್ಯ ಭಾರತದ ಮುನ್ನೋಟ ಕಾಣಿಸುತ್ತಿದೆ.

ಈಗಿನ ಶಿಕ್ಷಣ ನೀತಿ ಹೇಗಿದೆ ಎಂದರೆ ಒಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಸಾಮರ್ಥ್ಯವನ್ನು ಆತ ಗಳಿಸಿದ ಅಂಕಗಳ ಆಧಾರದಲ್ಲಿ ನಿರ್ಧರಿಸುವುದು. ಇದು ಎಷ್ಟು ಸರಿ? ಆತ ಬೇರೆ ವಿಷಯದಲ್ಲಿ ನಿಪುಣನಿರಬಹುದು. ವಿದ್ಯಾರ್ಥಿಯ ಅಭಿರುಚಿಗೆ ತಕ್ಕಂತೆ ವಿಷಯಗಳನ್ನು ಆಯ್ದುಕೊಳ್ಳುವ ಅವಕಾಶ ಕಲ್ಪಿಸಿಕೊಡಬೇಕು. ಕೇವಲ ಪುಸ್ತಕ ಓದಿದಾಕ್ಷಣ ಆತ ಒಂದು ವಿಷಯದಲ್ಲಿ ಸಂಪೂರ್ಣ ಜ್ಞಾನ ಹೊಂದಲು ಸಾಧ್ಯವಿಲ್ಲ. ಒಂದು ವಿಷಯವನ್ನು ಪ್ರಾಯೋಗಿಕವಾಗಿ ಕಲಿತಾಗ ಮಾತ್ರ ಅದರಲ್ಲಿ ಸಂಪೂರ್ಣ ಜ್ಞಾನ ಹೊಂದಲು ಸಾಧ್ಯ.

ಇಂತಹ ಬದಲಾವಣೆಯನ್ನು ಹೊಸ ಶಿಕ್ಷಣ ನೀತಿಯಲ್ಲಿ ಕಾಣಬಹುದು. ಅಲ್ಲದೇ ಇನ್ನೂ ಮುಖ್ಯವಾದ ಬದಲಾವಣೆಗಳೆಂದರೆ 1ರಿಂದ 5ನೇ ತರಗತಿವರೆಗೆ ಪ್ರಾಥಮಿಕ, 6ರಿಂದ 8ನೇ ತರಗತಿವರೆಗೆ ಮಾಧ್ಯಮಿಕ ಹಾಗೂ 9ರಿಂದ 11ನೇ ತರಗತಿವರೆಗೆ ಪ್ರೌಢ ಶಿಕ್ಷಣ ನೀಡಲಾಗುತ್ತದೆ. ಪ್ರೌಢ ಶಿಕ್ಷಣದ ಸಮಯದಲ್ಲಿ ವಿದ್ಯಾರ್ಥಿಗೆ ತನ್ನಿಷ್ಟದ ವಿಷಯದ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ.

ಇಲ್ಲಿ ಪದವಿಪೂರ್ವ ಶಿಕ್ಷಣ, ಅಂದರೆ ಪಿಯುಸಿಯನ್ನು ಸಂಪೂರ್ಣ ತೆಗೆದು ಹಾಕಲಾಗಿದೆ. ಪದವಿ ಶಿಕ್ಷಣವನ್ನು 3 ವರ್ಷಗಳ ಬದಲಾಗಿ 4 ವರ್ಷಗಳಿಗೆ ಮಾಡಲಾಗಿದೆ. ಪದವಿ ಅವಧಿಯಲ್ಲಿ ಯಾವುದೇ ವರ್ಷ ಕೂಡ ವಿದ್ಯಾರ್ಥಿ ತನ್ನ ಶಿಕ್ಷಣವನ್ನು ಕೈಬಿಟ್ಟರೆ ಆ ವರ್ಷದ ಪದವಿ ಪ್ರಮಾಣ ಪತ್ರವನ್ನು ನೀಡಲಾಗುವುದು. ಇದು ಒಬ್ಬ ವಿದ್ಯಾರ್ಥಿಗೆ ತುಂಬಾ ಅನುಕೂಲವಾಗುವಂತಹ ವಿಷಯ.

ನಮ್ಮ ವಿದ್ಯಾರ್ಥಿಗಳು ಈಗಿರುವ ಶಿಕ್ಷಣ ನೀತಿಯಲ್ಲಿ ಪ್ರಾಯೋಗಿಕ ಜ್ಞಾನವಿಲ್ಲದೆ ಪದವಿ ಪಡೆಯುತ್ತಿದ್ದಾರೆ. ಹೀಗಾಗಿ ಆವರಲ್ಲಿ ಕೌಶಲದ ಕೊರತೆ ಉಂಟಾಗುತ್ತದೆ. ಕೌಶಲದ ಕೊರತೆ ಉಂಟಾದಾಗ ಕಂಪೆನಿಗಳು ಉದ್ಯೋಗ ನೀಡಲು ಮುಂದೆ ಬರುವುದಿಲ್ಲ. ಕೇವಲ ಅಂಕಗಳಿಗಾಗಿ ಪಡೆಯುವ ಶಿಕ್ಷಣದಿಂದ ಜ್ಞಾನ ಪಡೆದುಕೊಳ್ಳಲು ಸಾಧ್ಯವಿಲ್ಲ. ಉತ್ತಮ ಜ್ಞಾನವನ್ನು ಒದಗಿಸುವ ಶಿಕ್ಷಣದ ಆವಶ್ಯಕತೆ ನಮ್ಮ ಯುವ ಸಮುದಾಯಕ್ಕೆ ಇದೆ. ಸ್ವಾವಲಂಬಿಯಾಗಿ ಬದುಕುವುದನ್ನು ಹೇಳಿಕೊಡುವ, ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಶಿಕ್ಷಣ ನಮ್ಮ ವಿದ್ಯಾರ್ಥಿಗಳಿಗೆ ಅಗತ್ಯವಿದೆ.

ಕೌಶಲಾಧಾರಿತ ಶಿಕ್ಷಣ ನಮ್ಮ ಯುವ ಸಮುದಾಯಕ್ಕೆ ಸಿಕ್ಕಾಗ ಭವ್ಯ ಭಾರತದ ನಿರ್ಮಾಣದ ಕನಸು ಬೇಗ ನನಸಾಗುತ್ತದೆ. ನಿರುದ್ಯೋಗದ ಸಮಸ್ಯೆ ನಿವಾರಿಸುವತ್ತಲೂ ಇದೊಂದು ಪ್ರಮುಖ ಹೆಜ್ಜೆಯಾಗಿದೆ. ಉದ್ಯೋಗಕ್ಕಾಗಿ ಅರಸುವ ವಿದ್ಯಾರ್ಥಿಗಳ ಬದಲಾಗಿ, ಭವಿಷ್ಯದಲ್ಲಿ ಸ್ವಂತ ಉದ್ಯೋಗ ಮಾಡುವವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು. ಹೀಗಾದಾಗ ಮಾತ್ರ ನಾವು ಪ್ರಧಾನಿಯ ಕನಸಿನ ಆತ್ಮನಿರ್ಭರ ಭಾರತ ಕಟ್ಟಲು ಸಾಧ್ಯ.

ನಾಲ್ಕು ಗೋಡೆಗಳ ಮಧ್ಯೆ ಕಲಿಸುವುದು ಶಿಕ್ಷಣವಲ್ಲ. ಯಾವಾಗ ಶಿಕ್ಷಣ ಒಬ್ಬ ವಿದ್ಯಾರ್ಥಿಯ ಭಯವನ್ನು ಹೋಗಲಾಡಿಸುತ್ತದೋ, ಯಾವಾಗ ಶಿಕ್ಷಣ ಒಬ್ಬ ವಿದ್ಯಾರ್ಥಿಯ ಮನೋಬಲವನ್ನು ಹೆಚ್ಚಿಸುತ್ತದೋ, ಯಾವಾಗ ಶಿಕ್ಷಣವು ವಿದ್ಯಾರ್ಥಿಯ ಅಭಿರುಚಿಗೆ ತಕ್ಕಂತೆ ಇರುತ್ತದೆಯೋ, ಯಾವಾಗ ಶಿಕ್ಷಣ ಒಬ್ಬ ವಿದ್ಯಾರ್ಥಿಯ ಕಲಿಯುವಿಕೆಯ ಆಸಕ್ತಿಯನ್ನು ಹೆಚ್ಚಿಸುತ್ತದೆಯೋ, ಆಗ ಮಾತ್ರ ಶಿಕ್ಷಣಕ್ಕೆ ನೈಜ ಅರ್ಥ ಕಲ್ಪಿಸಲು ಸಾಧ್ಯ. ಈ ರೀತಿಯಾದ ವ್ಯವಸ್ಥೆಯನ್ನು ನಮ್ಮ ನೂತನ ಶಿಕ್ಷಣ ನೀತಿಯಲ್ಲಿ ಕಾಣಬಹುದು.

 ರಕ್ಷಿತ್‌ ಶೆಟ್ಟಿ, ಭಂಡಾರ್ಕಾರ್ಸ್‌ ಕಾಲೇಜು, ಕುಂದಾಪುರ

 

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.