ಜಲರಾಶಿಯ ನಡುವೆ ನೆಲೆಸಿಹಳು ಪದ್ಮಾವತಿ ದೇವಿ


Team Udayavani, Dec 8, 2020, 10:30 AM IST

Varanga 02

ಸೆಮಿಸ್ಟರ್‌ ಪರೀಕ್ಷೆ ಮುಗಿದು ಒಂದು ತಿಂಗಳ ಕಾಲ ರಜೆಯಿತ್ತು. ಹೀಗಾಗಿ ಈ ರಜೆಯಲ್ಲಿ ಎಲ್ಲಾದರು ಪ್ರವಾಸ ಹೋಗಬೇಕೆಂದು ನಿರ್ಧರಿಸಿದ್ದೆ.

ನನ್ನ ಈ ನಿರ್ಧಾರಕ್ಕೆ ಸಹಮತಿ ನೀಡಿದವರು ಮನೆಮಂದಿ. ಅನಂತರ ಎಲ್ಲಿಗೆ ಹೋಗೋಣವೆಂದು ಆಲೋಚಿಸುತ್ತಿದ್ದಾಗ ನೆನಪಿಗೆ ಬಂದದ್ದು ಕಾರ್ಕಳದ ಸಮೀಪದಲ್ಲಿರುವ ವರಂಗ ಜೈನ ಬಸದಿ.

ಅದರಂತೆ ಮುಂಜಾನೆ ಸುಮಾರು 6.30ರ ಹೊತ್ತಿಗೆ ಉಪ್ಪಿನಂಗಡಿಯಿಂದ ವರಂಗ ಬಸದಿಯತ್ತ ಹೊರಟೆವು. ಆಗಷ್ಟೇ ಸೂರ್ಯ ಚಳಿಯಲ್ಲಿ ಮೈ ಬಿಸಿ ಮಾಡಿಸುತ್ತಾ ಬೆಳಕ ಪಸರಿಸುವ ಕೆಲಸ ಮಾಡುತ್ತಿದ್ದ. ಮಂಜಿನ ಹನಿಗಳು ಬಂದು ತಲೆಯ ಮೇಲೆ ಕುಳಿತುಕೊಳ್ಳುತ್ತಿದ್ದವು. ಈ ಸಮಯದಲ್ಲಿ ಮನೆಮಂದಿಯೆಲ್ಲಾ ಹರಟುತ್ತಾ ಮುಂದೆ ಸಾಗಿದೆವು.

ಬಜಗೋಳಿ ತಲುಪುತ್ತಿದ್ದಂತೆ ಹೊಟ್ಟೆ ಹಸಿವಾಗಲು ಶುರುವಾಯಿತು. ಅಲ್ಲೇ ಇದ್ದ ಹೊಟೇಲೊಂದರಲ್ಲಿ ಬೆಳಗ್ಗಿನ ಉಪಾಹಾರ ಸೇವಿಸಿ ಮತ್ತೆ ನಮ್ಮ ಸವಾರಿ ಮುಂದುವರೆಸಿದೆವು. ದಾರಿ ಸಾಗುತ್ತಿದ್ದಂತೆ ಪ್ರಕೃತಿಯ ಸೊಬಗು ನಮ್ಮನ್ನು ಸ್ವಾಗತಿಸುವಂತೆ ಭಾಸವಾಗುತ್ತಿತ್ತು. ತಿರುವು ಮುರುವು ರಸ್ತೆಯಲ್ಲಿ ಸಂಚರಿಸುತ್ತಾ ಆಕಾಶದೆತ್ತರಕ್ಕೆ ತಲೆಬಾಗಿ ನಿಂತಿರುವ ಮರಗಳನ್ನು ಬೆರಗುಗಣ್ಣಿನಿಂದ ನೋಡಿಕೊಂಡು ಮುಂದೆ ಸಾಗಿದೆವು.

ಸುತ್ತಲೂ ಪ್ರಶಾಂತವಾದ ವಾತಾವರಣ. ಮುಗಿಲಿಗೆ ಮುತ್ತಿಡುತ್ತಾ, ಹಸಿರನ್ನೇ ಹೊದ್ದು ಮಲಗಿದ ಬೆಟ್ಟದ ಸಾಲು. ಇನ್ನೊಂದೆಡೆ ವಿಶಾಲವಾಗಿ ಹರಡಿಕೊಂಡಿರುವ ಭತ್ತದ ಗದ್ದೆಗಳು. ವರ್ಷವಿಡೀ ನೀರಿನಿಂದ ತುಂಬಿ ತುಳುಕುವ ಕೆರೆ. ಇದರ ಮಧ್ಯೆ ತೇಲುವ ಮಂಜುಗಡ್ಡೆಯಂತಿರುವ ಜೈನ ಬಸದಿ. ಇದುವೇ ಜೈನರ ಪವಿತ್ರ ಪದ್ಮಾವತಿ ದೇವಿ ಬಸದಿ.

ಅತ್ಯಂತ ವಿಶಿಷ್ಟ ಎನ್ನಬಹುದಾದಂತಹ ಈ ಬಸದಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಸಮೀಪದಲ್ಲಿ ಸಿಗುವ ವರಂಗ ಎಂಬ ಪುಟ್ಟ ಹಳ್ಳಿಯಲ್ಲಿದೆ. ನಿಶ್ಯಬ್ಧವಾದ ಇಲ್ಲಿನ ವಾತಾವರಣ ಪ್ರಕೃತಿ ಪ್ರಿಯರ ಮನಸ್ಸನ್ನು ಸೆಳೆದು ಬಿಡುತ್ತದೆ. ಸುಮಾರು ಹದಿನಾಲ್ಕು ಎಕರೆ ವಿಸ್ತಾರವಾಗಿ ಸದಾ ಮೂರು ಋತುಗಳಲ್ಲಿಯೂ ತುಂಬಿರುವ ಕೆರೆಯ ನಡುವೆ ನಕ್ಷತ್ರಾಕೃತಿಯಲ್ಲಿ ಬಸದಿ ಇದೆ.

ಕೆರೆಯ ನಡುವಿನಲ್ಲಿರುವ ಬಸದಿಯನ್ನು ತಲುಪಲು ಇರುವ ಏಕೈಕ ಮಾರ್ಗ ದೋಣಿ. ನೀರಿನ ದಾರಿಯುದ್ದಕ್ಕೂ ನಲಿದಾಡುವ ಕಮಲದ ಹೂವುಗಳ ಬಿನ್ನಾಣ. ಅವುಗಳನ್ನು ಸೀಳಿಕೊಂಡು ಸುಮಾರು ನೂರೈವತ್ತು ಮೀಟರ್‌ ದೂರ ದೋಣಿಯಲ್ಲಿ ಕುಳಿತು ಅತ್ತಿತ್ತ ವಾಲುತ್ತಾ ಬಸದಿಯೆಡೆಗೆ ಸಾಗುವುದೇ ರೋಮಾಂಚಕ ಅನುಭವ. ಬಸದಿಯ ಕಟ್ಟೆಯನ್ನು ಹತ್ತಿ ಬಂದ ದಾರಿಯತ್ತ ಕಣ್ಣು ಹಾಯಿಸಿದಾಗ ಕಾಣುವುದು ತಾವರೆಯ ಹೂವುಗಳ ಚೆಲುವು ಮತ್ತು ಜಲರಾಶಿ. ಅಂದಹಾಗೆ ದೋಣಿಯಲ್ಲಿ ಸಾಗಲು 10 ರೂ.ಗಳನ್ನು ನಿಗದಿ ಪಡಿಸಲಾಗಿದೆ. ಈಜುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಬಸದಿಯಲ್ಲಿ ಪ್ರತೀದಿನ ಮೂರು ಹೊತ್ತು ಪೂಜೆ ನಡೆಯುತ್ತದೆ.  ವಿಶಾಲವಾದ ವಾರಿಧಿಯ ಮಧ್ಯೆ ನೆಲೆಸಿರುವ ಪದ್ಮಾವತಿ ದೇವಿಯು ಭಕ್ತರ ಇಷ್ಟಗಳನ್ನು ಪೂರೈಸುತ್ತಾಳೆ ಎನ್ನುವ ನಂಬಿಕೆಯಿದೆ. ಕೆರೆಯ ಮಧ್ಯದ‌ಲ್ಲಿ ಬಸದಿ ಇರುವುದರಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಪ್ರತಿನಿತ್ಯ ಸಾಕಷ್ಟು ಮಂದಿ ಪ್ರವಾಸಿಗರು ಇಲ್ಲಿಗೆ ಬಂದು ಹೋಗುತ್ತಾರೆ.

ವರಂಗ ಜೈನ ಬಸದಿ ಯಾತ್ರಾರ್ಥಿಗಳಿಗೆ ಪಾಲಿಗಂತೂ ನೆಚ್ಚಿನ ಕ್ಷೇತ್ರ. ಉತ್ತರ ಭಾರತದ ಭಕ್ತರು ಅಧಿಕ ಸಂಖ್ಯೆಯಲ್ಲಿ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಮನೆಮಂದಿಯೆಲ್ಲಾ ವರಂಗ ಬಸದಿಯ ವಿಶೇಷತೆಗಳನ್ನು ಕಂಡು ಖುಷಿ ಪಟ್ಟೆವು. ಫೋಟೋ, ಸೆಲ್ಫಿಗಳನ್ನು ಕ್ಲಿಕ್ಕಿಸುತ್ತಾ ನೆನಪುಗಳನ್ನು ಕೂಡಿಡುವ ಕೆಲಸ ಮಾಡತೊಡಗಿದೆವು. ಇದರ ನಡುವೆ ನಾವು ಹಿಂತಿರುಗುವ ಸಮಯ ಬಂದಿತ್ತು. ಕತ್ತಲು ಸರಿಯುತ್ತಿದ್ದಂತೆ ಮನೆ ಸೇರುವ ತವಕದೊಂದಿಗೆ ವರಂಗದ ನೆನಪುಗಳನ್ನು ಮೆಲುಕು ಹಾಕುತ್ತಾ ಹಿಂತಿರುಗಿದೆವು.

ವರಂಗ ಬಸದಿಯ ಪ್ರದೇಶದಲ್ಲಿ ಯಾವುದೇ ಅಂಗಡಿಗಳಾಗಲಿ, ಹೊಟೇಲುಗಳಾಗಲಿ ಇಲ್ಲ. ಹೀಗಿರುವಾಗ ಹೊರಗಿನಿಂದಲೇ ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬೇಕು. ಆದರೆ ಬಸದಿಯ ಸ್ವತ್ಛತೆಯನ್ನು ಕಾಪಾಡುವುದು ಪ್ರತೀಯೊಬ್ಬ ಪ್ರವಾಸಿಗನ ಕರ್ತವ್ಯ.

ಎಷ್ಟು ದೂರ?
ಮಂಗಳೂರಿನಿಂದ 76 ಕಿ.ಮೀ, ಉಡುಪಿಯಿಂದ 36 ಕಿ.ಮೀ, ಕಾರ್ಕಳದಿಂದ 26 ಕಿ.ಮೀ ಹಾಗೂ ಹೆಬ್ರಿಯಿಂದ 9 ಕಿ.ಮೀ ದೂರವಿದೆ. ಕಾರ್ಕಳ ಅಥವಾ ಹೆಬ್ರಿಗೆ ಬಂದರೆ ಖಾಸಗಿ ಬಸ್‌ಗಳ ಮೂಲಕ ವರಂಗ ಬಸದಿಯನ್ನು ತಲುಪಬಹುದು. ಅಥವಾ ಸ್ವಂತ ವಾಹನದ ಮೂಲಕವಾಗಿಯೂ ಸಂದರ್ಶಿಸಬಹುದು.

ಬಸದಿಯ ವಿಶೇಷತೆ
ಜಲರಾಶಿಯ ಮಧ್ಯದಲ್ಲಿ ವಿಶಿಷ್ಟವಾಗಿ ನಿರ್ಮಾಣವಾಗಿರುವ ಬಸದಿಯು ತನ್ನ ಒಡಲಾಳದಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಜೈನಧರ್ಮದ ತೀರ್ಥಂಕರರಾದ ಪಾರ್ಶ್ವನಾಥ, ನೇಮಿನಾಥ, ಶಾಂತಿನಾಥ ಮತ್ತು ಅನಂತನಾಥರ ವಿಗ್ರಹಗಳನ್ನು ಕರಿಶಿಲೆಯಲ್ಲಿ ಖಡ್ಗಾಸನ ಭಂಗಿಯಲ್ಲಿ ಕೆತ್ತಿರುವುದು ಇಲ್ಲಿನ ವಿಶೇಷತೆ. ಈ ಕ್ಷೇತ್ರವು ಹೊಯ್ಸಳ ಮತ್ತು ಚಾಲುಕ್ಯರ ಶಿಲ್ಪಕಲಾ ಶೈಲಿಯ ಸಮ್ಮಿಶ್ರಣವಾಗಿದ್ದು, ವಿಗ್ರಹಗಳ ಎರಡೂ ಬದಿಯಲ್ಲಿ ಯಕ್ಷ-ಯಕ್ಷಿಯರ ಬಿಂಬಗಳಿವೆ.

ಪೂರ್ವದಲ್ಲಿ ಪಾರ್ಶ್ವನಾಥ ಸ್ವಾಮಿಯ ವಿಗ್ರಹದ ಪಕ್ಕದಲ್ಲಿ ಪದ್ಮಾವತಿ ದೇವಿಯ ವಿಗ್ರಹವಿದೆ. ಅವಳೇ ಇಲ್ಲಿನ ಪ್ರಧಾನ ದೇವತೆ. ಬಸದಿಯ ನಾಲ್ಕು ದಿಕ್ಕಿನಿಂದಲೂ ಏಕರೂಪವಾದ ಪ್ರವೇಶದ್ವಾರವಿದ್ದು, ಪ್ರತಿಯೊಂದು ದಿಕ್ಕಿಗೂ ಒಂದೇ ಅಳತೆಯ ಮುಖ ಮಂಟಪಗಳಿವೆ. ಪ್ರವೇಶ ದ್ವಾರದ ಹೊರಭಾಗದಲ್ಲಿ ಪ್ರದಕ್ಷಿಣೆ ಹಾಕಲು ಅನುಕೂಲವಾಗುವಂತೆ ಪ್ರದಕ್ಷಿಣಾ ಪಥವಿದೆ.

ಇದನ್ನು ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಿಸಿರುವುದು ವಿಶೇಷತೆ. ಹೊರಾಂಗಣದಲ್ಲಿ ಬಾವಿಯಿದೆ. ಬಸದಿಯನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.


 ಶ್ರೀರಾಮ ಶಾಸ್ತ್ರೀ, ವಿವೇಕಾನಂದ ಪ. ಕಾಲೇಜು, ಪುತ್ತೂರು 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.