ಬ್ಯಾಡ್ಮಿಂಟನ್‌ನಲ್ಲಿ ಆ ದಿನ ಧೋನಿ ಆದೆ


Team Udayavani, Aug 30, 2020, 5:15 PM IST

badminton620

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಆಟ ಅಂದರೆ ಯಾವ ಮಕ್ಕಳಿಗೆ ತಾನೇ ಇಷ್ಟವಿಲ್ಲ ಹೇಳಿ?

ಬಾಲ್ಯದ ಜೀವನವನ್ನು ಅನುಭವ ಎಂಬ ಬುಟ್ಟಿಯಲ್ಲಿ ಹೆಣೆಯಲಾಗಿರುತ್ತದೆ.

ನನಗೆ ಆಟಗಳೆಂದರೆ ಬಾಲ್ಯದಿಂದಲೂ ತುಂಬಾ ಇಷ್ಟ. ನಾನು ಬ್ಯಾಡ್ಮಿಂಟನ್‌ ಆಟಗಾರ್ತಿಯಾಗಿದ್ದೆ. ಈಗಲೂ ಸಮಯ ಸಿಕ್ಕಾಗ ಬ್ಯಾಡ್ಮಿಂಟನ್‌ ಆಡುತ್ತೇನೆ.

ನಾನು ಒಂಭತ್ತನೇ ತರಗತಿಯಲ್ಲಿರಬೇಕಾದರೆ ದೇಶಿಯ ತಂಡಕ್ಕೆ ಆಟಗಾರನ್ನು ಆಯ್ಕೆ ಮಾಡಲಾಗುತ್ತಿತ್ತು. ವಾರದ ಮುಂಚೆಯೇ ನನಗೆ ಈ ಬಗ್ಗೆ ತಿಳಿದಿತ್ತು. ನನಗೆ ಸ್ವಲ್ಪ ಭಯ ಇತ್ತು.

ನನ್ನ ಬಳಿ ಸೂಕ್ತ ಶರ್ಟ್‌, ಪ್ಯಾಂಟ್‌ ಇರಲಿಲ್ಲ. ನನ್ನ ಆಟದ ಸಾಮರ್ಥ್ಯದ ಬಗ್ಗೆ ಸ್ವಲ್ಪ ಹಿಂಜರಿಕೆ ಇತ್ತು. ನನಗೆ ಗೆಳೆಯನೊಬ್ಬ ಶರ್ಟ್‌ ತಂದುಕೊಟ್ಟ. ಮನೆಯಲ್ಲಿ ಪ್ಯಾಂಟ್‌ ಕೊಂಡುಕೊಂಡೆ. ಅಲ್ಲಿಂದ ಶುರುವಾಯಿತು ನನ್ನ ಕ್ರೀಡಾ ಪಯಣ.

ಆಯ್ಕೆಗೆಂದು ಹೊಸಪೇಟೆಗೆ ಹೊಗಬೇಕಿತ್ತು. ಅಲ್ಲಿ ದೊಡ್ಡ ಮೈದಾನ, ಹೊಸ ಹೊಸ ಮುಖಗಳು, ಅವರ ಸ್ಪರ್ಧಾ ತಯಾರಿ ಕಂಡು ನನಗೆ ಒಳಗೊಳಗೆ ಅಳುಕು ಶುರುವಾಯಿತು. ಉಸಿರು ಉಮ್ಮಳಿಸಿ ಬಂದು ಕೊನೆಗೆ ಅಳುತ್ತಾ ಕುಳಿತುಬಿಟ್ಟೆ. ಬಳಿ ಬಂದ ಶಿಕ್ಷಕರೊರ್ವರು, “ಯಾಕಮ್ಮ ಅಳುತ್ತಿದ್ದೀಯಾ? ನೀನು ಚೆನ್ನಾಗಿ ಆಡುತ್ತೀಯಾ’ ಎಂದು ಧೈರ್ಯ ತುಂಬಿದರು. ಅವರು ಮಾತು ಮುಂದುವರಿಸಿ, “ನೋಡಮ್ಮ ನಿನಗೆ ಆಟಗಾರರಲ್ಲಿ ಯಾರಿಷ್ಟ? ಎಂಬ ಪ್ರಶ್ನೆಗೆ “ಧೋನಿ’ ಎಂದು ಉತ್ತರಿಸಿದೆ. ಅಷ್ಟು ಕೇಳಿ ಅವರು ಮುಂದೆ ಹೋದರು. ಆ ಉಪನ್ಯಾಸಕರು ಆಡಿದ ಮಾತುಗಳಿಂದ ಸಮಾಧಾನವಾಗಿ, ಅಳು ನಿಂತು ನನಗೆ ಆತ್ಮಸ್ಥೈರ್ಯ ಹೆಚ್ಚಿತು.

ಆಟ ಶುರುವಾಯಿತು. ನನ್ನನ್ನು ಮಾತನಾಡಿಸಿದವರು ಆಯ್ಕೆ ಸಮಿತಿಯಲ್ಲಿದ್ದರು. ಸ್ವಲ್ಪ ಭಯವಾಗಿ ಇವರು ನನ್ನ ಬಗ್ಗೆ ಏನೆಂದು ತಿಳಿದುಕೊಂಡರೊ ಎಂದೆನಿಸಿತು. ಸಂಜೆ ಆಯ್ಕೆಯಾದವರ ಹೆಸರನ್ನು ಪ್ರಕಟಿಸುವ ಸಮಯ ಬಂದೇ ಬಿಟ್ಟಿತು.

8 ಜನರ ಪೈಕಿ ಮೊದಲ 5 ಜನರಲ್ಲಿ ನನ್ನ ಹೆಸರು ಇಲ್ಲದಿರುವಾಗ ನನಗೆ ಸ್ಪಲ್ಪ ನಿರಾಸೆ ಉಂಟಾಯಿತು. ಇನ್ನು 7 ಜನ ಹೆಸರನ್ನು ಕೂಗಿದಾಗಲೂ ನಾನು ಮಾತ್ರ ಆಯ್ಕೆಯಾಗಲಿಲ್ಲ. ಕೊನೆಯ ಒಬ್ಬರ ಹೆಸರನ್ನು ಕೂಗುವಾಗ ನನ್ನಲ್ಲಿ ನಿರಾಸೆಯ ಕಾರ್ಮೋಡ ಕವಿದಿತ್ತು. ಧೋನಿ ಸೆಲೆಕ್ಟಡ್‌ ಅಂತ ಕೂಗಿದಾಗ ಭಯದಲ್ಲಿ ನನಗೆ ಏನೂ ತಿಳಿಯಲಿಲ್ಲ. ಮತ್ತೆ ಮೂರು ಸಲ ಕೂಗಿದ್ರು. ಕೊನೆಯದಾಗಿ ಓಯ್‌ ಧೋನಿ ನೀನೇ ಆಯ್ಕೆ ಆಗಿದ್ದೀಯಾ ಅಂದ್ರು. ನನ್ನ ಖುಷಿಗೆ ಪಾರವೇ ಇರಲಿಲ್ಲ. ತಂಡಕ್ಕೆ ಆಯ್ಕೆಯಾದ ಸಂತೋಷ ಒಂದೆಡೆಯಾದರೆ ನನ್ನ ಹೆಸರೇ ಬದಲಾಯಿಸಿದ್ರಲ್ಲ ಅನ್ನೋ ಖುಷಿ ಇನ್ನೊಂದೆಡೆ. ಅವತ್ತಿನಿಂದ ಇವತ್ತಿನವರೆಗೂ ಆ ಸರ್‌ ನನ್ನನ್ನು ಧೋನಿ ಅಂತಾನೆ ಕರಿಯೋದು.

 ವಿನುತಾ ಹವಾಲ್ದಾರ್‌, ಅಕ್ಕಮಹಾದೇವಿ ಮಹಿಳಾ ವಿವಿ, ವಿಜಯಪುರ 

 

 

ಟಾಪ್ ನ್ಯೂಸ್

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

7-uv-fusion

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

10-uv-fusion

Lifestyle‌: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ

8-uv-fusion-2

Photographers: ನೆನಪಿನ ನಾವಿಕರಿಗೆ ಸಲಾಂ…

6-uv-fusion

Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.