ಮಳೆರಾಯನಿಗೊಂದು ಮನವಿ


Team Udayavani, Jul 11, 2021, 11:00 AM IST

ಮಳೆರಾಯನಿಗೊಂದು ಮನವಿ

ಮಳೆರಾಯನಿಗೊಂದು ಮನವಿ..

ಬೇಡುವೆ ಮಳೆರಾಯ ಬಾರದಿರು ನೀನು

ಇವರ ಪೂಜೆ ಕೋರಿಕೆಗೆ ಮರುಗದಿರು ನೀನು

ಯಾವ ನೈತಿಕತೆ ಇದೆ ಇವರಿಗೆ ನಿನಗಾಗಿ ಬೇಡಲು

ಇವರಿಗಿಲ್ಲ ಯಾವ ಯೋಗ್ಯತೆ ನಿನ್ನ ಕುರಿತು ಹಾಡಲು

ಬರಿದು ಮಾಡಿದರು ಇವರು ನಿನ್ನವಳ ಒಡಲು

ನಿನ್ನಾಕೆ ಇಳೆ ನೊಂದಳಿವರಿಂದ

ಅವಳ ಸಿರಿಯೊಡಲ ಬಗೆದರು

ಹಡೆದವಳ-ಹೊತ್ತವಳ ಕರುಳ ಕಿತ್ತೆಸೆದರು

ಕೈಕಾಲು ಮೂಳೆಗಳ ಮುರಿದು ದೂರೆಸೆದರು

ನೊಂದವಳು ಅಳದಿರಲೆಂದು ಕಣ್ಣು ಕಿತ್ತೆಸೆದರು

ಯಾರ ಮಾತು ಕೇಳದಿರಲೆಂದು ಕಿವಿ ಕೊಯ್ದರು

ನಿನ್ನೊಡನೆಯೂ ಮಾತಾಡದಿರಲೆಂದು ಬಾಯಿ ಮುಚ್ಚಿದರು

ಉಸಿರೇ ನಿಂತು ಹೋಗಲೆಂದು ಕೊರಳ ಬಿಗಿ ಹಿಡಿದರು

ನಿನ್ನವಳ ಶೋಷಿಸಿದವರ ಪರವಾಗಿ

ಸಂತೃಪ್ತಿಯ ಮಳೆಯಾಗಿ ಬರುವೆಯಾ ಹೇಳು

ತನಗಾಗಿ ಏನೂ ಬಯಸದವಳ

ದುರಾಸೆಗೆ ಬಳಸಿದವರ ಬಯಕೆ ಮನ್ನಿಸುವೆಯಾ ಹೇಳು

ಮರೆತಾದರೂ ಬಾರದಿರು ಮಳೆರಾಯ ಇತ್ತಕಡೆ ನೀನು

ಹೆದರಿ ಬಾರದಿರು ಆಜ್ಞೆ ಮಾಡಿದರೂ ಆ ಬಾನು

ಮೋಡಗಳ ನಡುವೆ ಬಿಕ್ಕಿ ಅತ್ತು ಬಿಡು ನೀನು

ನಿನ್ನ ಕಣ್ಣೀರಹನಿ ಕೂಡ ಬೀಳದಿರಲಿ ಇಲ್ಲಿಗಿನ್ನು

ಕ್ಷಮಿಸಿಬಿಡು ಮಳೆರಾಯ ಇದೊಂದು ಬಾರಿ ನನ್ನ

ನೀ ಬರಲೇಬೇಕಿನ್ನು ಈ ಭೂಮಿಗಿಳಿದು

ನರಳಾಡುತ್ತಿಹಳು ನಿನ್ನವಳು ನೊಂದು

ಬರಡಾಗಿರುವಳು ನೀನಿರದೆ ಬೆಂದು

ನನ್ನ ಮಾತು ಕೇಳಿ ನೀ ಬಾರದಿರಲು

ಹೊತ್ತವಳ ಕೊಂದ ಪಾಪ ಸಲ್ಲುವುದು ನನಗೆ

ಬಾರಯ್ಯ ಕರುಣಾಳೆ ಮಹಾಮಳೆಯೇ ನೀನು

ನಿನ್ನವಳ ನೋವೆಲ್ಲ ಅರೆಕ್ಷಣಕೆ ಕೊಚ್ಚಿ ಹೋಗಿನ್ನು

 

ಶಿವರಾಮು ವಿ. ಗೌಡ

ಮಾನಸ ಗಂಗೋತ್ರಿ, ಮೈಸೂರು

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.