ಮಳೆ ಹನಿಗಳ ಸಂತಸ ಸಂಭ್ರಮ


Team Udayavani, Jun 9, 2021, 12:00 PM IST

ಮಳೆ ಹನಿಗಳ  ಸಂತಸ  ಸಂಭ್ರಮ

ಬೇಸಗೆಯ ಬಿಸಿಲಿನಿಂದ ಬಾಡಿ ಹೋದಂತಾಗಿರುವ ಪ್ರಕೃತಿಯು ವರುಣನ ಆಗಮನಕ್ಕಾಗಿ ಕಾಯುತ್ತಾ ಕುಳಿತಿರುತ್ತದೆ. ಮಳೆರಾಯನ ಆಗಮನದಿಂದಾಗಿ ನಿಸರ್ಗ ಮಂದಹಾಸ ಬೀರುತ್ತದೆ. ಈ ಪ್ರಕೃತಿಯ ಜತೆಗೆ ಇಡೀ ಜೀವ-ಸಂಕುಲವೇ ಕುಣಿದು ಕುಪ್ಪಳಿಸುತ್ತದೆ. ರೈತನ ಬಾಳಿಗೆ ಬೆಳಕಾಗುತ್ತದೆ. ಒಣ ಬೇಸಾಯ ಹೊಂದಿದ ಊರಲ್ಲಿ ಮಳೆಯನ್ನೇ ನಂಬಿದ ಜನರಿಗೆ ಮಳೆರಾಯನ ಆಗಮನ ಹಬ್ಬದ ವಾತಾವರಣವನ್ನೇ ಸೃಷ್ಟಿಸುತ್ತದೆ. ಹಳ್ಳಿಗಳಲ್ಲಿ ಜನರು ಮಳೆಗಾಗಿ ಕಾಯುತ್ತಾ ಕುಳಿತಿರುತ್ತಾರೆ.

ಒಣ ಬೇಸಾಯದ ಹೊಲಗಳಿಗೆ ಮಳೆಯೇ ಜೀವನಾಧಾರ. ಮಳೆ ಬಂದರೆ ಸಾಕು ನೀರು ತುಂಬಿದ ಕೆರೆಗಳಲ್ಲಿ ಬಕ ಪಕ್ಷಿಗಳ ಓಡಾಟ, ನೀರಿನ ದಾಹವನ್ನು ತೀರಿಸಲು ಬಂದ ಪಕ್ಷಿಗಳ ಕೂಗು ಎಲ್ಲವೂ ಕಣ್ಣಿಗೆ ಮನೋಹರ. ಹಳ್ಳಿಗಳಲ್ಲಿ ಒಂದು ಮಾತು ಇದೆ, “”ರೋಣಿ ಮಳೆಯಾದ್ರೆ ಓಣೆಲ್ಲ ಜೋಳ” ಅಂತ. ಹೀಗೆ ಬೆಳೆಗಳ ಸಮೃದ್ಧಿಗೆ ಮಳೆಯೇ ಆಧಾರ. ವರ್ಷ ಎಲ್ಲರಿಗೆ ಹರ್ಷವನ್ನು ತಂದು ಕೊಡುತ್ತದೆ. ಚಿಕ್ಕ ಮಕ್ಕಳಿಂದ ದೊಡ್ಡವರ ತನಕ ಮಳೆ ಕಂಡರೆ ಸಾಕು ದಿನವಿಡೀ ಅದರ ಜತೆಗೆ ನೆನೆದು, ಅದರೊಂದಿಗೆ ನೃತ್ಯವನ್ನು ಮಾಡುತ್ತಾರೆ. ಮಳೆಯಲ್ಲಿ ಬೀಸುವ ತಂಪಾದ ಗಾಳಿ ಮನಸ್ಸಿನಲ್ಲಿ ಮಂದಹಾಸ ಮೂಡುತ್ತದೆ.

ಮಳೆ ಅಂದರೆ ಪ್ರಾಣ ಬಿಡುತ್ತಿದ್ದ ನಾನು ಬೇಸಗೆ ರಜೆಗೆ ನಮ್ಮ ಅಜ್ಜಿ ಊರಿಗೆ ಹೋದಾಗ ಬಾಲ್ಯ ಸ್ನೇಹಿತೆ ಪುಟ್ಟಿ ಅವರ ಸಂಬಂಧಿಕರ ಮದುವೆಗೆ ಕರೆದುಕೊಂಡು ಹೋಗಿದ್ದರು. ಮದುವೆ ಮುಗಿಸಿ ಬರುವಾಗ ಮರದ ಬುಡದಲ್ಲಿ ಮುದುಕಿಯೊಬ್ಬಳು ಮಾವಿನಹಣ್ಣು ಮಾರುತ್ತ ಕುಳಿತ್ತಿದ್ದಳು. ಅದನ್ನು ಕಂಡ ನಾನು ಮಾವಿನಹಣ್ಣು ಬೇಕೆಂದು ಹೋಗುವಾಗ ಪುಟ್ಟಿ ನಮ್ಮ ಮನೆಯಲ್ಲಿ ಬೇಕಾದಷ್ಟು ಹಣ್ಣು ಇವೆ ಬಾ ಎಂದು ಕರೆದುಕೊಂಡು ಮುಂದೆ ಹೋದಳು. ಆ ಗುಡುಗು ಸಿಡಿಲು ಕಂಡು ನನಗೆ ಭಯವಾಯಿತು. ಅಲ್ಲೇ ಇರುವ ಮರದ ಕೆಳಗೆ ಮಳೆಯಿಂದ ತಪ್ಪಿಸಿಕೊಳ್ಳಲು ಹೊರಟಾಗ ಮರದ ಕೆಳಗೆ ನಿಲ್ಲಬೇಡ, ಸಿಡಿಲು ಬೀಳಬಹುದು ಎಂದು ಅಂಜಿಕೆ ತೋರಿಸಿದಳು ಪುಟ್ಟಿ. ಆಗ ಇಬ್ಬರು ಮನೆಯತ್ತ ವೇಗವಾಗಿ ಓಡುತ್ತಾ ಹೊರಟೆವು.

ಗುಡುಗು ಮಿಂಚಿನ ಶಬ್ದಕ್ಕೆ ಅರ್ಧ ನಡುಗಿ ಹೋಗಿ ಓಡೋಡಿ ಹೋಗಿ ಬಸವಣ°ಪ್ಪನ ಗುಡ್ಯಾಗ ಹೋಗಿ ನಿಂತು ಮಳೆ ನಿಂತ ನಂತರ ಮನೆಗೆ ಹೋದ್ವಿ. ಆ ದಿನ ಎಲ್ಲರ ಕೈಯಿಂದ ನನ್ನ ಸಲುವಾಗಿ ಬೈಸ್ಕೊಂಡು ಜ್ವರ ಬಂದ ನನ್ನ ಸ್ನೇಹಿತೆಯನ್ನು ಇನ್ನೂ ಮರೆತಿಲ್ಲ. ಮಳೆಯಲ್ಲಿ ಬೀಸುವ ಹಿತವಾದ ಗಾಳಿಯನ್ನು ತಬ್ಬಿಕೊಳ್ಳುವಷ್ಟು ಖುಷಿಯಾಗುತ್ತೆ.

 

ಅಂಬಿಕಾ ವಿ. ಘೋರ್ಪಡೆ

ವಿ.ವಿ. ವಿಜಯ

ಟಾಪ್ ನ್ಯೂಸ್

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

7-uv-fusion

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

10-uv-fusion

Lifestyle‌: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ

8-uv-fusion-2

Photographers: ನೆನಪಿನ ನಾವಿಕರಿಗೆ ಸಲಾಂ…

6-uv-fusion

Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.