ನೀ ಬರುವ ಹಾದಿಯನು ಕಾದು ಕುಳಿತವರು ನಾವು…


Team Udayavani, Jun 6, 2021, 3:00 PM IST

ನೀ ಬರುವ ಹಾದಿಯನು ಕಾದು ಕುಳಿತವರು ನಾವು…

ಸುಂದರ ಕ್ಷಣಗಳಿಗೆ ಸಾಕ್ಷಿಯಾಗುವ  ಒಂದು ಘಳಿಗೆ ಅದುವೇ ಮಳೆಗಾಲದ ಸಮಯ.  ಮಳೆ ಬರುವ ಮುನ್ನ ನಿಸರ್ಗದಲ್ಲಿ ಆಗುವ ಬದಲಾವಣೆ ಎಷ್ಟೊಂದು ಆಹ್ಲಾದಕರವಾಗಿರುತ್ತದೆ ಎಂದರೆ ಅದನ್ನು  ಪದಗಳಲ್ಲಿ ಹೇಳುವುದಕ್ಕಿಂತ  ಅನುಭವಿಸುವುದರಲ್ಲಿ ತುಂಬಾ ಖುಷಿ ಸಿಗುತ್ತದೆ. ತಂಪಾಗಿ ಬೀಸುವ   ಗಾಳಿ  ಒಂದು ಕಡೆಯಾದರೆ ಮೋಡಕವಿದ  ವಾತಾವರಣ ಮತ್ತೂಂದು ಕಡೆ. ಅದರ ಮಧ್ಯದಲ್ಲಿ ನಾನು ಏಕೆ ಸುಮ್ಮನೆ ಇರಲಿ ಎಂದು ಗುಡುಗು ಮತ್ತು ಸಿಡಿಲಿನ ನಡುವೆ ಭಯಂಕರವಾಗಿ ಸಮರಕ್ಕೆ ಸಿದ್ಧ.

ಈ ವರುಣನು  ಸಹ ಯಾವಾಗ ಬೇಕಾದರೂ ಬಂದು ಬಿಡುವನು. ಅವನ ಅಚಾನಕ್‌ ಆಗಮನ ನಮಗೆ  ಒಂದು ಕಡೆ ಖುಷಿಯನ್ನು  ತಂದರೆ ಮತ್ತೂಂದು ಕಡೆ  ದುಃಖಕ್ಕೆ ಆಹ್ವಾನವನ್ನು ಕೊಟ್ಟು ಅನಾಹುತಗಳ ರಹದಾರಿಯಲ್ಲಿ ತಂದು ಬಿಟ್ಟು ಬಿಡುತ್ತಾನೆ. ಆದರೂ ವರುಣನ ಆಗಮನ  ಏನೋ ಒಂದು ಹರುಷವನ್ನು  ವ್ಯಕ್ತ ಪಡಿಸುತ್ತದೇ ನೀ ಬರುವ ದಾರಿಯನ್ನು  ಕಾದು ಕುಳಿತವರು ನಾವು ಎಂದರೂ ಅತಿಶಯೋಕ್ತಿ ಇಲ್ಲ.

ಜಿಟಿಪಿಟಿ ಮಳೆ ಬರುವ ಸಮಯದಲ್ಲಿ ಬಿಸಿಯಾದ ಚಹಾ  ಜತೆಗೆ ಮಿರ್ಚಿ ಬಜ್ಜಿ ಇದ್ದರೆ ಬೇರೊಂದು ಲೋಕಕ್ಕೆ ಹೋಗಿ ಬಂದ ಹಾಗೆ  ಭಾಸವಾಗುತ್ತದೆ. ಅದರೊಂದಿಗೆ ಓದಲು ಪುಸ್ತಕ ಹಾಗೂ ಕೇಳಲು ಇಂಪಾದ ಹಾಡು ಇದ್ದರೆ ಆ ಸಂತೋಷವೇ ಬೇರೆ.

“ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ’ ಯೋಗರಾಜ್‌ ಭಟ್ಟರು ಬರೆದ  ಸಾಲುಗಳು ನೆನಪಿಗೆ ಬರುತ್ತದೆ. ಅವರು ಹೇಳಿದ ಹಾಗೇ ಮಳೆರಾಯನ ಲೀಲೆಯನ್ನು ತಿಳಿದುಕೊಂಡವರು ಯಾರೂ ಇಲ್ಲ ಎನ್ನಬಹುದು.

ಮಳೆ ಮತ್ತೇ  ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ. ಪುಟ್ಟ ಪುಟ್ಟ ಕೊಡೆ, ರೈನ್‌ ಕೋಟ್‌ಗಳು ಅಮ್ಮ ಬೈದು ಬೈದು ಹಾಕಿದರು ಮತ್ತೆ  ಮನೆಗೆ ಮರಳುವಾಗ ತಲೆ ಎಲ್ಲ ಒದ್ದೆಯಾಗಿರುವುದನ್ನು ಕಂಡು ಮತ್ತೆ ಅವರು ಮುನಿಸಿಕೊಳ್ಳುವುದು, ಆಲಿಕಲ್ಲು ಬೀಳುವಾಗ ಅದನ್ನು ಹಿಡಿಯಲು ಮಳೆಯಲ್ಲಿ ಓಡಾಡುವುದು, ನಿಂತ ನೀರಿನಲ್ಲಿ ಸ್ನೇಹಿತರ ಜತೆಗೂಡಿ ಆಟವಾಡುವುದು, ಮಳೆರಾಯನ ಆರ್ಭಟಕ್ಕೆ ಅದೆಷ್ಟು ಸಲ ಭಯ ಪಟ್ಟಿದ್ದು ಉಂಟು.  ಅಮ್ಮನ ಮಡಿಲಲ್ಲಿ  ಹೋಗಿ ಬಚ್ಚಿಟ್ಟುಕೊಂಡಿದ್ದು ಉಂಟು. ಹೀಗೆ ಹತ್ತು ಹಲವಾರು ಕೀಟಲೆಗಳನ್ನು ಮಾಡುತ್ತಿದ್ದುದು ಉಂಟು. ಆದರೆ  ಈಗ ಅವು ನೆನಪು ಮಾತ್ರ ಅಷ್ಟೇ. ಮಳೆ , ವರುಣ, ವರ್ಷಧಾರೆ , ಹೀಗೆ ಹಲವಾರು  ರೀತಿಯಿಂದ ಕರೆಯುವ ಈ ವರುಣ ದೇವನ ಆಗಮನವೇ ಮನುಜ ಕುಲಕ್ಕೆ ಒಂದು ಹರುಷದ ವಾತಾವರಣ.

ರೈತನ ಮೊಗದಲ್ಲಿ ಮಂದಹಾಸವನ್ನು ಮೂಡಿಸುವವನು ಇವನೇ. ಹಾಗೆ ಕೆಲವೊಂದು ಸಲ ಎಡೆ‌ಬಿಡದೆ ಸುರಿದು ಅವರ ಖುಷಿಯನ್ನು ಹಿಂದೆ  ಪಡೆಯವವನು ಇವನೇ.  ಮಳೆ ಇಲ್ಲದೆ ಸಕಲ ಜೀವ ರಾಶಿಗಳು ಬದುಕಲು ಸಾಧ್ಯವಿಲ್ಲ.  ನಾವು ಮತ್ತೆ ನಮ್ಮ ಕನಸಿನ ಜೀವನಕ್ಕೆ ಜ್ಯೋತಿಯನ್ನು ಬೆಳಗಬೇಕು ಎಂದರೆ ಪರಿಸರ ಮಾತೆ ಯನ್ನು ರಕ್ಷಿಸಬೇಕು.  ಮತ್ತೇ ಬಾಲ್ಯದ ನೆನಪುಗಳು ಬೇಕು ಎಂದರೆ ಗಿಡಗಳನ್ನು ಬೆಳೆಸಬೇಕು. ಸದ್ಯ ಪರಿಸ್ಥಿತಿ ಒಮ್ಮೆ ಅರಿತು ಕೊಂಡರೆ  ನಾವೇ ನಮ್ಮಲ್ಲಿ ಬದಲಾವಣೆಯನ್ನು ತರಬಹುದು.

 

ಭಾಗ್ಯಶ್ರೀ ಎಸ್‌. ಆರ್‌.ಧಾರವಾಡ

ಟಾಪ್ ನ್ಯೂಸ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.