ಪ್ರಥಮ ವರ್ಷಧಾರೆಯ ಅನುಭವ
Team Udayavani, Jun 7, 2021, 8:00 AM IST
ವರ್ಷದ ಪ್ರಥಮ ವರ್ಷಧಾರೆ ತರುವ ಸಂಭ್ರಮವೇ ಅಂಥದ್ದು. ಸಕಲ ಜೀವರಾಶಿಗೂ ಮೊದಲ ಮಳೆಯೆಂದರೆ ಇನ್ನಿಲ್ಲದ ಸಂತೋಷ.
ಭೂಮಿಯ ಮೇಲೆ ಎಲ್ಲವೂ ಮಳೆಯ ಮೇಲೆಯೇ ನಿಂತಿದೆ. ವರ್ಷದ ಮೊದಲ ಮಳೆಯೋ ಎಲ್ಲರಲ್ಲೂ ಹತ್ತು ಹಲವು ಹೊಸ ಭರವಸೆಗಳನ್ನು ತರಿಸುತ್ತದೆ. ಮೊದಲು ಸುರಿದ ಮಳೆಯು ರೈತನ ಕಣ್ಣಲ್ಲೊಂದು ಖುಷಿ ತರಿಸುತ್ತದೆ. ಪಕ್ಷಿಗಳಿಗೆ ಇನ್ನಿಲ್ಲದ ಸಂತಸವನ್ನು ನೀಡುತ್ತದೆ. ಮಳೆಯೊಂದು ವಿಸ್ಮಯವೇ ಸರಿ. ಮೊದಲ ಮಳೆ ಸುರಿದಾಗ ಮನೆಯ ಮಣ್ಣ ಪರಿಮಳದ ಮಾತು. ತೊಯ್ದು ತೊಟ್ಟಿಕ್ಕುತ್ತ ತೂಗುವ ಬೇಸಗೆಯ ಚಪ್ಪರದಲ್ಲಿ ಸ್ಥಿರಚಿತ್ರ ಕಡೆದಿಟ್ಟ ತಂಪುಗಾಳಿ ಅಂತ ಮಳೆಯನ್ನು ಹೊಗಳಿ ಬರಿದಿದ್ದಾರೆ ಕಾಯ್ಕಿಣಿಯವರು. ಮೊದಲ ಮಳೆ ಬರಿ ನೆನಪುಗಳನ್ನಲ್ಲದೆ ಪ್ರತೀ ಬಾರಿ ಹೊಸ ಚೇತನವನ್ನು ಪ್ರತೀ ಒಬ್ಬರಿಗೂ ತುಂಬುತ್ತಲೇ ಹೋಗುತ್ತದೆ. ಇದೇ ಮಳೆಯ ಹೆಗ್ಗಳಿಕೆ.
ಮಳೆಗಾಲ ಹುಟ್ಟುಹಾಕುವ ಜೀವ ಸೃಷ್ಟಿಯ ಸರಪಳಿಯು ಈ ಪ್ರಕೃತಿಯ ಒಂದು ಅದ್ಭುತ. ಮಳೆ ಬೀಳುವುದನ್ನೇ ಕಾಯುತ್ತಿದ್ದು, ನೆಲದ ಗರ್ಭದಲ್ಲಿ ಹುದುಗಿದ್ದ ಬೀಜಗಳೆಲ್ಲ ಮೊಳಕೆ ಒಡೆದು, ಎರಡು ಹಸುರು ಎಲೆಗಳನ್ನು ಹೊರಚಾಚಿ, “ನಾನು ಬಂದೆ, ಈ ಜಗತ್ತಿಗೆ’ ಎಂದು ಸಾರಿ ಹೇಳುವ ರೀತಿಯೇ ಒಂದು ರೋಮಾಂಚನವಾದದ್ದು. ಹಾಗೆಯೇ ನಮ್ಮ ಹಿರಿಯರು ಮಳೆಗೂ ಕೂಡ ಗಾದೆ ಕಟ್ಟಿದ್ದರು. ಆ ಗಾದೆಗಳಲ್ಲಿ ಮಳೆಯ ಲಕ್ಷಣದೊಂದಿಗೆ ಜನರ ಬದುಕಿನ ಧ್ವನಿಯೂ ಇದೆ. “ಮಳೆಯೇ ಬೆಳೆಗೆ ಸಿಂಗಾರ’ ಅನ್ನುವ ಗಾದೆ ಮಳೆ ಗಾದೆಗಳ ಮುನ್ನುಡಿಯಾಗಿದೆ. ಇದರ ಜತೆಗೆ ಕೆಲವು ಕಡೆ ಮುಂಗಾರು ಮಳೆಯನ್ನು ದೊಡ್ಡ ಮಳೆಗಳೆಂದು, ಹಿಂಗಾರು ಮಳೆಯನ್ನು ಚಿಕ್ಕ ಮಳೆ ಎಂದು ಕರೆಯುವುದು ರೂಢಿಯಲ್ಲಿದೆ. ಏನೇ ಆಗಲಿ ಮೊದಲ ಮಳೆ ಎಂಬುದು ಹೇಳಲಾಗದ ಅಪೂರ್ವ ಅನುಭವ.
ಯಶಸ್ವಿನಿ ಸುರೇಂದ್ರ ಗೌಡ ಕೊಟ್ಟಿಗೆಹಾರ,
ಜ್ಞಾನ ಜ್ಯೋತಿ ಟಿ ಎಂ ಎಸ್ ಫಸ್ಟ್ ಗ್ರೇಡ್ ಕಾಲೇಜು ಚಿಕ್ಕಮಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ