ಕಾವ್ಯ ಮಲ್ಲಿಗೆ : ಮುಂಗಾರ ಕೆಲಸಕ್ಕೆ ಅಣಿಯಾಗಿಹರು
Team Udayavani, Jul 27, 2021, 2:00 PM IST
ಮುಂಗಾರ ಕೆಲಸಕ್ಕೆ ಅಣಿಯಾಗಿಹರು..
ಮೋಡವು ಕವಿದಿದೆ ಮಳೆಯದು ಸುರಿಯುತಿದೆ
ಮುಂಗಾರ ಆರಂಭ ಕೃಷಿ ಕೆಲಸದಾರಂಭ.
ರಾಗಿ ಅಂಬಲಿ ಗಂಜಿ ಊಟವನು ಮಾಡಿಹರು
ಕಂಬಳಿಯ ಹೊದ್ದಿಹರು ಹೊಲಕೆ ನಡೆದಿಹರು.
ಜಡಿಮಳೆಯ ಹೊಡೆತದ ನೀರಲಿ ತೊಯ್ದಿಹರು
ಗಡಗಡ ನಡುಗುತ್ತ ದಿನವಿಡೀ ದುಡಿಯುವರು.
ಎಲೆ ಅಡಿಕೆ ಜಗಿಯುತ್ತ ಬೀಡಿಯ ಸೇದುತ್ತ
ಸುಡುತಿಹ ಚಹವನ್ನು ಗುಟುಕು ಕುಡಿಯುತ್ತ.
ಮೈಯ ಬಿಸಿ ಏರಿದೆ ಚಳಿ ನಡುಕ ತಂದಿದೆ
ಮತ್ತೆ ದುಡಿಯುವ ತುಡಿತ ಉಲ್ಲಾಸ ಬಂದಿದೆ.
ಪಾಡªನವ ಹಾಡುತ್ತ ನೇಜಿಯನು ನೆಡುತಿಹರು
ಎಲ್ಲರೂ ಒಗ್ಗೂಡಿ ಮೈ ಬಗ್ಗಿ ದುಡಿತಿಹರು.
ಸೂರ್ಯಾಸ್ತದ ಸಮಯ ಬಚ್ಚಲಲಿ ಬೆಂಕಿ ಉರಿ ಬಿಸಿನೀರ ಸ್ನಾನದಲಿ ದಣಿವನಾರಿಸುವವರು.
ಸಿರಿತನದ ವೈಭವವು ಇವರಿಗದು ಬೇಕಿಲ್ಲ
ನಾಳೆಯ ಚಿಂತೆ ಅವರಿಗೆಂದೂ ಇಲ್ಲ
ಬಿಸಿಬಿಸಿ ಗಂಜಿಯನು ಸಂಜೆಯೇ ಉಣ್ಣುವರು
ಸುಖದ ನಿದ್ದೆಯ ಮಾಡಿ ನಾಳೆಗಣಿಯಾಗುವರು
-ಭಾರತಿ ಡಿ ತಾಮ್ಹನ್ ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ
Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ