ಶೌರ್ಯಕ್ಕೆ ಇನ್ನೊಂದು ಹೆಸರೇ ರಜಪುತಾನಾ ರೈಫ‌ಲ್ಸ್‌


Team Udayavani, Jul 4, 2021, 10:00 AM IST

ಶೌರ್ಯಕ್ಕೆ ಇನ್ನೊಂದು ಹೆಸರೇ ರಜಪುತಾನಾ ರೈಫ‌ಲ್ಸ್‌

ರೈಫ‌ಲ್ಸ್‌ ಎಂದರೆ ಥಟ್ಟನೆ ನೆನಪಿಗೆ ಬರೋದು ಗುಂಡುಗಳನ್ನು ಲೋಡ್‌ ಮಾಡಿ ಎದೆಗೇರಿಸಿ ಮಿಕದ ಕಡೆ ಮುಖ ಮಾಡಿ ನೇರವಾಗಿ ಗುರಿ ಹಿಡಿದು ಫೈರ್‌ ಮಾಡುವ ಯೋಧರು ಜತೆಗೆ ನೀಳಾಕೃತಿಯ ಬಗೆ ಬಗೆ ಕೋವಿಗಳು. ಆದರೆ ನಾವಿಲ್ಲಿ ಹೇಳ ಹೊರಟಿರುವುದು ಬರೀ ಬಂದೂಕುಗಳ ಬಗ್ಗೆ ಅಲ್ಲ. ಬಂದೂಕಿನಷ್ಟೇ ಶರವೇಗದಲ್ಲಿ ಮತ್ತು ಕ್ರಿಯಾಶೀಲವಾಗಿ ಕಾರ್ಯಾಚರಣೆ ನಡೆಸುವ ಸಂಘಟಕ ಶಕ್ತಿಗಳ ಬಗ್ಗೆ, ನೂರಾನೆಯ ಬಲದ ಬಗ್ಗೆ.

ಭಾರತೀಯ ಸೇನಾಪಡೆಗಳ ಪೈಕಿ ರಜಪುತಾನಾ ರೈಫ‌ಲ್ಸ್‌ ಕೂಡ ಒಂದು. ಸ್ವಾತಂತ್ರ್ಯಾ ಅನಂತರ ಈ ತುಕಡಿಯು ಪಾಕಿಸ್ಥಾನದ ವಿರುದ್ಧದ ಹಲವು ಸಂಘರ್ಷಗಳಲ್ಲಿ ಭಾಗಿಯಾಗಿತ್ತು. 18ನೇ ಶತಮಾನದಲ್ಲಿ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಲು ರಜಪೂತರನ್ನು ನೇಮಿಸಿಕೊಳ್ಳಲಾಗಿತ್ತು. ಫ್ರೆಂಚ್‌ ಅಧಿಕಾರಿಗಳು ಅಳವಡಿಸಿಕೊಂಡಿದ್ದ ಕಾರ್ಯಕ್ಷಮತೆ ಮತ್ತು ಸ್ಥಳೀಯ ಘಟಕಗಳ ನೇಮಕಾತಿಗಳು ರಜಪೂತನಾ ರೈಫ‌ಲ್ಸ್‌ಗೆ ಪ್ರೇರಣೆಯಾಯಿತು.

ಇದನ್ನು ಭಾರತೀಯ ಸೇನೆಯ ಹಳೆಯ ರೈಫ‌ಲ್ಸ್‌ ಎಂದೂ ಪರಿಗಣಿಸಲಾಗಿದೆ. 1775ರ ಜನವರಿಯಲ್ಲಿ ಈ ರೈಫ‌ಲ್ಸ್‌ ಮೊದಲ ಸ್ಥಳೀಯ ಕಾಲಾಳು ಪಡೆ ಘಟಕಗಳನ್ನು ಬೆಳೆಸಿತು. ಇದರಲ್ಲಿ ಐದನೇ ಬೆಟಾಲಿಯನ್‌ಗಳೂ ಆದ ಬಾಂಬೆ ಸಿಪಾಯಿಗಳೂ ಸೇರಿಕೊಂಡವು. 1778 ರಲ್ಲಿ ಒಂಬತ್ತನೇ ಬೆಟಾಲಿಯನ್‌ ಅನ್ನೂ ಬಾಂಬೆ ಸಿಪಾಯ್ಸ… ಎಂದು ಮರುವಿನ್ಯಾಸಗೊಳಿಸಲಾಯಿತು. 1824ರಲ್ಲಿ ಬಾಂಬೆ  ಸ್ಥಳೀಯ ಕಾಲಾಳು ಪಡೆಯ ಅನಂತರ 1881ರಲ್ಲಿ 4ನೇ ರೆಜಿಮೆಂಟ್‌ ಸ್ಥಳೀಯ ಕಾಲಾಳು  ಪಡೆಯನ್ನು ಬ್ರಿಟೀಷ್‌ ಭಾರತೀಯ ಸೈನ್ಯದ ಮೊದಲ ರೈಫ‌ಲ್ಸ್‌ ರೆಜಿಮೆಂಟ್‌ ಎನ್ನಲಾಯಿತು.

1899ರಲ್ಲಿ ಬೆಟಾಲಿಯನ್‌ ಅನ್ನು ಮತ್ತೂಮ್ಮೆ ಬಾಂಬೆ ಕಾಲಾಳು ಪಡೆ ಮತ್ತು 1901ರಲ್ಲಿ ನಾಲ್ಕನೇ ಬಾಂಬೆ ರೈಫ‌ಲ್ಸ್‌ ಎಂದೂ ಮರು ನಾಮಕರಣ ಮಾಡಲಾಯಿತು. ಬಾಂಬೆ ರೈಫ‌ಲ್ಸ್‌ನ ಕ್ರಾಂತಿಕಾರರ ಸ್ಮರಣಾರ್ಥವಾಗಿ 10 ನೇ ವೆಲ್ಲೆಸಿಯ ರೈಫ‌ಲ್ಸ್‌ ಆಗಿ, 1921ರಲ್ಲಿ ಮತ್ತಷ್ಟು ಮರು ಸಂಘಟನೆಯಲ್ಲಿ ಆರು ರೆಜಿಮೆಂಟ್‌ಗಳನ್ನು ಒಟ್ಟುಗೂಡಿಸಿ 6ನೇ ರಜಪೂತನಾ ರೆಜಿಮೆಂಟ್‌ಗಳನ್ನು ರಚಿಸಲಾಯಿತು. ಒಂದನೇ ಮತ್ತು ಎರಡನೇ ಹಾಗೂ ಇನ್ನಿತರ ಬೆಟಾಲಿಯನ್‌ಗಳನ್ನು 1945ರಲ್ಲಿ ಬ್ರಿಟಿಷ್‌ ಭಾರತೀಯ ಸೇನೆಯ ರೆಜಿಮೆಂಟ್‌ಗಳು ತಮ್ಮ ಶೀರ್ಷಿಕೆಗಳಲ್ಲಿ ಅಂಶಗಳನ್ನು ಕೈ ಬಿಟ್ಟವು ಮತ್ತು ಅದರಿಂದ ರಜಪೂತನಾ ರೈಫ‌ಲ್ಸ್‌ ಪ್ರಸ್ತುತ ಹೆಸರನ್ನು ಪಡೆದುಕೊಂಡಿತು.

ಭಾರತೀಯ ಚರಿತ್ರೆಯ ಒಂದೊಂದು ಘಟನೆಗಳು ಇತಿಹಾಸದ ಮೈಲುಗಲ್ಲುಗಳು. ಅಸ್ಸಾಂ ರೈಫ‌ಲ್ಸ್‌, ಪಂಜಾಬ್‌ ರೈಫ‌ಲ್ಸ್‌ ಹೀಗೆ ಹಲವಾರು ತುಕಡಿಗಳು ರಚನೆಗೊಂಡು ಆಯಾ ಕಾಲಘಟ್ಟದ ಆಡಳಿತಾವಧಿಯಲ್ಲಿ ತಮ್ಮದೇ ಛಾಪು ಮೂಡಿಸಿವೆ.  ಅದರಲ್ಲಿ ರಜಪೂತನಾ ರೈಫ‌ಲ್ಸ್‌ ಪಾತ್ರ ಪ್ರಮುಖವಾದುದು.

ಸಾಹಸಗಾಥೆ : ಎರಡನೇ ಆಫ್ಘಾನ್‌ ಯುದ್ಧದ ಸಂದರ್ಭ, ಫ್ರಾನ್ಸ್‌, ಪ್ಯಾಲೆಸ್ತೀನ್‌ ಹೋರಾಟಗಳಲ್ಲಿ ಈ ರೈಫ‌ಲ್ಸ್‌ನ ಪಾತ್ರ ಪ್ರಮುಖ. ರಜಪುತಾನಾ ರೈಫ‌ಲ್ಸ್‌ನ ಗರಿಮೆಗಳೆಂದೇ ಕರೆಯಬಹುದಾದ 1 ಪರಮ ವೀರ್‌ ಚಕ್ರ, 3 ಅಶೋಕ ಚಕ್ರ, 1 ಪದ್ಮಭೂಷಣ, 10 ಮಹಾ ವೀರ ಚಕ್ರ, 28 ಶೌರ್ಯ ಚಕ್ರ, 55 ಅರ್ಜುನ ಪ್ರಶಸ್ತಿ ಇತ್ಯಾದಿಗಳನ್ನು ತನ್ನದಾಗಿಸಿಕೊಂಡಿದೆ.  ಈಗ ರಜಪೂತನಾ ರೈಫ‌ಲ್ಸ್‌ ರೆಜಿಮೆಂಟ್‌ ಮ್ಯೂಸಿಯಂ ದಿಲ್ಲಿಯ ಕಂಟೋನ್ಮೆಂಟ್‌ ಒಳಗಿದೆ. ಈ ವಸ್ತು ಸಂಗ್ರಹಾಲಯವು ಸುಮಾರು 7000 ಚದರ ಅಡಿ ಗಾತ್ರದಲ್ಲಿದೆ. ಇಲ್ಲಿರುವ ತುಕಡಿಗಳ ಶಸ್ತ್ರಾಸ್ತ್ರ, ಸಮವಸ್ತ್ರ, ದೊಡ್ಡ ಸ್ವರೂಪದ ಚಿತ್ರಗಳು ನೋಡುಗರ ಕಣ್ಣಿಗೆ ಇತಿಹಾಸವನ್ನು ಕಟ್ಟಿಕೊಡುತ್ತವೆ. ಇದನ್ನು ಭಾರತದ ಅತ್ಯುತ್ತಮ ಮಿಲಿಟರಿ ಮ್ಯೂಸಿಯಂ ಎಂದು ಪರಿಗಣಿಸಲಾಗಿದೆ.

 

ಹರೀಶ್‌ ಕಮ್ಮನಕೋಟೆ

ಕುವೆಂಪು ವಿ.ವಿ., ಶಿವಮೊಗ್ಗ

ಟಾಪ್ ನ್ಯೂಸ್

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.