ಪರಿಸರವನ್ನು ಉಳಿಸಿ, ಪರಿಸರವನ್ನು ಬೆಳೆಸಿ


Team Udayavani, Jun 5, 2020, 7:00 PM IST

ಪರಿಸರವನ್ನು ಉಳಿಸಿ, ಪರಿಸರವನ್ನು ಬೆಳೆಸಿ

ಸಾಂದರ್ಭಿಕ ಚಿತ್ರ

ಯಾವುದೇ ವಿಷಯವನ್ನು ತೆಗೆದುಕೊಂಡರೆ, ಅದರಲ್ಲಿ ಅನುಕೂಲ ಮತ್ತು ಅನಾನುಕೂಲ ಎರಡು ಇರುತ್ತದೆ.ಆದರೆ ಇದು ಪರಿಸರಕ್ಕೆ ಅನ್ವಯಿಸುವುದಿಲ್ಲ ಎಂಬಂತೆ ಕೆಲವೊಮ್ಮೆ ಭಾಸವಾಗುತ್ತದೆ. ಏನನ್ನೂ ನಿರೀಕ್ಷೆ ಮಾಡದೆ, ತನಗಾಗುತ್ತಿರುವ ತೊಂದರೆಯನ್ನು ಅನುಭವಿಸಿ, ಕೇಡು ಬಯಸಿದರೂ ಒಳಿತು ಮಾಡುವುದೇ ಪರಿಸರ. ಅದಕ್ಕೆ ನಾವು ಪರಿಸರವನ್ನು ತಾಯಿಗೆ ಹೋಲಿಸುವುದು.

ಮನುಷ್ಯನ ಪೂರ್ವಜನ್ಮ ನೋಡಿದಾಗ, ಅವರು ಪರಿಸರ, ಸೂರ್ಯ, ಭೂಮಿ ಹೀಗೆ ಮುಂತಾದ ಪ್ರಕೃತಿಯ ಸ್ವತ್ತನ್ನು ದೇವರೆಂದು ಪೂಜಿಸುತ್ತಿದ್ದರು. ಬರುಬರುತ್ತಾ ಈ ಆಚರಣೆ ದೂರ ಸರಿದಿದೆ. ಅಂದು ಇಲ್ಲದ ಪರಿಸರ ದಿನ ಎಂಬ ಆಚರಣೆ ಇಂದೇಕೆ? ಅಲ್ಲೇ ನಾವು ಅರ್ಥ ಮಾಡಿಕೊಳ್ಳಬೇಕು. ವರ್ಷಪೂರ್ತಿ ನಮ್ಮಿಷ್ಟದಂತೆ ಕಾಲ ಕಳೆಯುವ ನಾವು, ಹುಟ್ಟುಹಬ್ಬದ ದಿನದಂದು ದೇವಸ್ಥಾನಕ್ಕೆ ಹೋಗುವುದು, ತಂದೆ ತಾಯಿ ಆಶೀರ್ವಾದ ಪಡೆಯುವುದು, ಅನಾಥಾಶ್ರಮ ಮುಂತಾದಲ್ಲಿ ದಾನ ಕೊಡುವುದು ಹೀಗೆ ಕೆಲವೊಂದು ಒಳ್ಳೆಯ ಕೆಲಸವನ್ನು ಮಾಡುತ್ತೇವೆಯಲ್ಲವೇ? ಹಾಗೆಯೇ ದಿನದಿಂದ ದಿನಕ್ಕೆ ನಶಿಸುತ್ತಿರುವ ಪರಿಸರವನ್ನು ಒಂದು ದಿನವಾದರೂ ಹೊಸ ಗಿಡವನ್ನು ನೆಟ್ಟು, ಪರಿಸರವನ್ನು ಬೆಳೆಸುವಲ್ಲಿ ಭಾಗಿಯಾಗಿ ಒಟ್ಟಾಗಿ ಸೇರಿ ಪರಸರವನ್ನು ಉಳಿಸಿ, ಬೆಳೆಸುವ ಆಚರಣೆಯೇ ಜೂನ್‌ 5.

ಇನ್ನು ಪರಿಸರವನ್ನು ಬೆಳೆಸುವ, ಸಂರಕ್ಷಿಸುವ ವಿಷಯಕ್ಕೆ ಬಂದರೆ, ನಾವು ಮಾಡಿದ್ದನ್ನು ನಾವೇ ಅನುಭವಿಸಬೇಕು ಈ ಗಾದೆಯನ್ನು ನಾವೆಲ್ಲರೂ ಕೇಳಿರುತ್ತೇವೆ. ಈಗಿರುವ ಪರಿಸ್ಥಿತಿಯಲ್ಲಿ ಈ ಮಾತು ಅಕ್ಷರಶಹ ಸತ್ಯ. ಏಕೆಂದರೆ, ಹಿಂದೆ ಮನುಷ್ಯರಾಗಿದ್ದ ನಾವು ಸಮಯ ಕಳೆದಂತೆ ಕ್ರೂರಿಗಳಂತೆ ವರ್ತಿಸುತ್ತಿದ್ದೇವೆ. ಪ್ರಕೃತಿಯಿಂದ ನಾವು ಎಂಬುದನ್ನು ಮರೆತು ನಮ್ಮಿಂದ ಪ್ರಕೃತಿಯೆಂದು ಭಾವಿಸುತ್ತಿದ್ದೇವೆ. ಪರಿಸರ ಬೆಳೆಸುವ, ಉಳಿಸುವ ಹೊಣೆಯನ್ನು ಎಷ್ಟರ ಮಟ್ಟಿಗೆ ರೂಢಿಸಿಕೊಂಡಿದ್ದೇವೆ? ಶೂನ್ಯ ಎಂದರೆ ತಪ್ಪಾಗದು.

ಮಿತಿ ಮೀರಿದ ದುರಾಸೆಯಿಂದಾಗಿ ನಾವು ಪ್ರಕೃತಿಗೆ ಕೊಡುಗೆಯಾಗಿ ಕೊಟ್ಟಿದ್ದು ಮಾತ್ರ ವಾಯು ಮಾಲಿನ್ಯ, ಜಲ ಮಾಲಿನ್ಯ ಹೀಗೆ ಮುಂತಾದವುಗಳು. ಕೆರೆ, ಕಾಲುವೆಗಳನ್ನು ಮುಚ್ಚಿ, ಆಕಾಶಕ್ಕೆ ಮುಟ್ಟಿಕುವಷ್ಟು ದೊಡ್ಡ ಕಟ್ಟಡ ಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ನದಿ, ಸಮುದ್ರವನ್ನು ನಮ್ಮದೇ ರಾಜ್ಯಭಾರ ಮಾಡಿಕೊಂಡು ಕಸದ ತೊಟ್ಟಿ ಮಾಡಿ ಜಲಚರಗಳ ಸಾವಿಗೆ ಕಾರಣರಾಗುತ್ತಿದ್ದೇವೆ. ಮುಗ್ದ ಮೂಕ ಪ್ರಾಣಿ, ಪಕ್ಷಿಗಳನ್ನು ನಿರ್ಜೀವ ವಸ್ತುಗಳಂತೆ ವರ್ತಿಸಿಕೊಳ್ಳುತ್ತಿದ್ದೇವೆ.

ಪರಿಸರವು ಎರಡು ಮುಖದ ನಾಣ್ಯದ ಹಾಗೆ. ಪ್ರೀತಿ, ಮಮತೆ, ವಾತ್ಸಲ್ಯವು ಒಂದು ಶಾಂತತೆಯ ಮುಖವಾದರೆ. ಸುನಾಮಿ, ಭೂಕಂಪ, ಚಂಡಮಾರುತ ಹೀಗೆ ಮುಂತಾದ ಪ್ರಕೃತಿವಿಕೋಪಗಳು ಹಾನಿ ಮಾಡಿದ ಮನುಕುಲಕ್ಕೆ ತಕ್ಕ ಪಾಠ ಕಲಿಸುವ ಇನ್ನೊಂದು ರೌದ್ರ ಮುಖವಾಗಿದೆ. ನಾವು ಒಂದು ಕೈಯಲ್ಲಿ ಏನನ್ನು ಕೊಡುತ್ತೇವೋ ಅದೇ ನಮಗೆ ಮರಳಿ ಬರುವುದು. ಅಂದರೆ, ನಾವು ಪರಿಸರಕ್ಕೆ ಒಳಿತು ಮಾಡಿದರೆ, ಶಾಂತವಾಗಿರುವ ಪಕೃತಿಯು ನಮಗೊಲಿಯುತ್ತದೆ. ಕೇಡು ಬಯಸಿದರೆ, ಅದೇ ಪ್ರಕೃತಿಯ ರೌದ್ರಾವತಾರವನ್ನು ಕಾಣಬಹುದಾಗಿದೆ. ಆಯ್ಕೆ ನಮ್ಮದೇ.

ಪರಿಸರ, ಅರಣ್ಯ ಪ್ರದೇಶ, ವನ್ಯಜೀವಿಗಳನ್ನು ರಕ್ಷಿಸಲು ಹಲವಾರು ಅಭಿಯಾನಗಳನ್ನು ಸರಕಾರ ಹಮ್ಮಿಕೊಳ್ಳುತ್ತಿದೆಯಾದರೂ, ಅದರಲ್ಲಿ ನಮ್ಮ ಪಾಲು ಸಹ ಅತ್ಯಗತ್ಯ. ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ನಮ್ಮಿಂದ ಅಳಿಲುಸೇವೆಯಾದರೆ ಪರಿಸರವನ್ನು ಉಜ್ವಲ ರೀತಿಯಲ್ಲಿ ಕಾಣಬಹುದು. ಹೀಗೆ ಪರಿಸರವನ್ನು ನಾವು ನಾಶ ಮಾಡುತ್ತ ಹೋದರೆ, ಮುಂದೊಂದು ದಿನ ನಮ್ಮ ಜೀವಕ್ಕೆ ತೊಂದರೆಯಾಗಿ, ಮನುಕುಲವೇ ನಾಶವಾಗಿ, ಮನುಷ್ಯನಿಲ್ಲದ ಭೂಮಿಯಾಗುತ್ತದೆ. ಪರಿಸರವನ್ನು ತಾಯಿಯಂತೆ ಪೂಜಿಸಿ, ಮಗುವಿನಂತೆ ಪಾಲನೆ ಮಾಡಬೇಕು ಎನ್ನುವುದೇ ಪರಿಸರ ದಿನಾಚರಣೆಯ ನಿಲುವು.

ಸುಚಿತ್ರ ಬಿ.ಎಸ್‌., ಕೌಲಾಲಂಪುರ ಮಲೇಷಿಯಾ

ಟಾಪ್ ನ್ಯೂಸ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.