ಹಳೆ ಮಿತ್ರರನ್ನು ಸ್ಮತಿಪುಟಗಳಲ್ಲಿತಂದು ನೆನಪುಗಳನ್ನು ಬೆಸೆಯುವ ಕೊಂಡಿ ಆಟೋಗ್ರಾಫ್


Team Udayavani, Apr 16, 2021, 4:11 PM IST

Autograph

ಆಟೋಗ್ರಾಫ್! ಈ ಪದವೇ ಒಂದು ರೊಮಾಂಚನ..

ಆಟೋಗ್ರಾಫ್ ಎನ್ನುವುದು ಒಂದು ಕನಸು. ಹಲವರಿಗೆ ತಮ್ಮ ನೆಚ್ಚಿನ ಖ್ಯಾತ ವ್ಯಕ್ತಿಗಳ ಬಳಿ ಆಟೋಗ್ರಾಫ್ ಪಡೆಯುವುದೇ ಒಂದು ಕನಸಾದರೆ ಇನ್ನೂ ಕೆಲವರಿಗೆ ತಾವೂ ಸುಪ್ರಸಿದ್ಧ ವ್ಯಕ್ತಿಗಳಾಗಿ ಆಟೋಗ್ರಾಫ್ ನೀಡಬೇಕೆನ್ನುವುದೇ ಒಂದು ಕನಸು-ಗುರಿಯಾಗಿರುತ್ತದೆ.

ನಮ್ಮ ಬಾಲ್ಯದಲ್ಲಿ ಶಾಲೆಗಳಲ್ಲಿ ಸಹಪಾಠಿ, ಮಿತ್ರರ ನೆನಪುಗಳಿಗಾಗಿ ವರ್ಷದ ಕೊನೆಯಲ್ಲಿ ಆಟೋಗ್ರಾಫ್ ಬರೆಸಿಕೊಳ್ಳುತ್ತಿದ್ದೆವು. ಹಲವು ಅಂಗಡಿಗಳಿಗೆ ತೆರಳಿ ಹುಡುಕಿ ವೈವಿಧ್ಯ ಬಣ್ಣ ಬಣ್ಣದ ಆಟೋಗ್ರಾಫ್ ಪುಸ್ತಕ ಕೊಂಡು ಸಹಪಾಠಿ ಮಿತ್ರರಿಗೆ ಒಂದೊಂದುದಿನ ಪಾಳಿ ಪ್ರಕಾರ ಕೊಟ್ಟು ಬರೆಸಿಕೊಳ್ಳುವುದೇ ಒಂದು ಸಡಗರ. ಇನ್ನು ನಮಗೆ ಬಂದ ಆಟೋಗ್ರಾಫ್ ಪುಸ್ತಕ ಬರೆಯುವುದೇ ಒಂದು ದೊಡ್ಡ ಸಾಧನೆ. ಅದನ್ನು ಯಾವ ಕಲರ್‌ ಪೆನ್ಸಿಲಿನಿಂದ ಬರೆಯುವುದು? ಹೇಗೆ ವರ್ಣನಾತ್ಮಕವಾಗಿ ಮಾಡುವುದು?ಎಂಬುದೇ ಯಕ್ಷಪ್ರಶ್ನೆ. ತರಗತಿಯಲ್ಲಿ ದಿನಕ್ಕೆ ಹೆಚ್ಚು ಆಟೋಗ್ರಾಫ್ ಬಂದವರೆ ಹೀರೋ ಆಗಿಬಿಡುತ್ತಿದ್ದರು.

“ಟೀಚರ್‌ ಇವತ್ತು ಆಟೋಗ್ರಾಫ್ ಬುಕ್ಕ ಬರಿಯುದ ಬಾಳ ಇತ್ತರಿ’ ಎಂದೂ ಹೋಂ ವರ್ಕ್‌ ಮಾಡದಿರಲು ಕಾರಣ ಕೊಟ್ಟವರೂ ಉಂಟು. ಶಾಲೆ, ಕಾಲೇಜಿನ ಕೊನೆಯ ದಿನಗಳಲ್ಲಿಎಲ್ಲರ ಕೈಯಲ್ಲೂ ಆಟೋಗ್ರಾಫ್ ಹೊತ್ತಗೆಗಳೇ ರಾರಾಜಿಸುತ್ತಿದ್ದವು.

ನೋಟ್ಸ್‌ಗಳನ್ನಾದ್ದರೂ ತರುವುದು ಮರೆಯುತ್ತಿದ್ದರೇನೋ, ಆದರೆ ಇದನ್ನಲ್ಲ. ವರ್ಷವಿಡೀ ಕೈಯಲ್ಲಿ ಒಂದೇ ಪುಸ್ತಕ ಹಿಡಿದು ಶೋಕಿ ಮಾಡಲು ಬರುವವರೆಲ್ಲ ಆ ಸಮಯಗಳಲ್ಲಿ ಆಟೋಗ್ರಾಫ್ ಪುಸ್ತಕ ವಿನಿಮಯಕ್ಕೆ ಕಾಲೇಜ್‌ ಬ್ಯಾಗೇ ತರುತ್ತಿದ್ದರು. ಆಟೋಗ್ರಾಫ್ ಪುಸ್ತಕ ಎನ್ನುವುದೇ ಒಂದು ಭಾವನಾತ್ಮಕ ನೆನಪಿನ ಬುತ್ತಿ…ಅದು ಹಲವು ಮಧುರಕ್ಷಣವನ್ನು, ಮಿತ್ರರ ಹಸ್ತಾಕ್ಷರವನ್ನು ಹೊತ್ತಿರುವ ಹೊತ್ತಗೆ.

ಎಷ್ಟೋ ವರ್ಷಗಳ ಅನಂತರ ಪುರುಸೊತ್ತು ಮಾಡಿಕೊಂಡು ಕಟ್ಟಿಟ್ಟ ಗಂಟನ್ನು ತೆಗೆದು ಧೂಳು ಜಾಡಿಸಿ ಆಟೋಗ್ರಾಫ್ ಪುಸ್ತಕದ ಒಂದೊಂದೇ ಪುಟ ತಿರುಗಿಸಿದಾಗ ಅದು ನಮ್ಮನ್ನು ಶಾಲಾ, ಕಾಲೇಜಿನ ನೆನಪುಗಳತ್ತ ಕೊಂಡೊಯ್ಯುತ್ತದೆ.ನಮ್ಮದೇ ಉದ್ಯೋಗ, ಸಂಸಾರದ ಜಂಜಾಟದ ಜಗತ್ತಿನಲ್ಲಿ ಕಳೆದು ಹೋದ ನಮಗೆ ಅಲ್ಲಿ ಬರೆದಿರುವ ನಮ್ಮದೇ ಮಿತ್ರರ ಸಾಲುಗಳಿಗೆ ಕಳೆದು ಹೋದ ಸುಂದರ ಪ್ರಪಂಚಕ್ಕೆ ಕೊಂಡೊಯ್ಯುವ ಶಕ್ತಿಯಿದೆ.

ಹಳೆ ಮಿತ್ರರನ್ನು ಸ್ಮತಿಪುಟಗಳಲ್ಲಿ ತಂದು ಕಳೆದು ಹೋದ ಸಹಪಾಠಿಗಳನ್ನು ಮತ್ತೆ ಬೆಸೆಯುವಂತೆ ಮಾಡುವ ಕೊಂಡಿ ಆಟೋಗ್ರಾಫ್ ಪುಸ್ತಕ. ರಭಸದಿಂದ ಹರಿಯುತ್ತಿರುವ ಕಾಲಚಕ್ರದ ಸುಳಿಗೆ ಸಿಕ್ಕಿಹಾಕಿಕೊಂಡು ಮೊಬೈಲ್‌ ಮುಂತಾದ ಆಧುನಿಕ ತಂತ್ರಜ್ಞಾನದ ಮಾಯಾ ಪಾಶ ಗಳಿಗೆ ಸಿಲುಕಿದ ಯುವ ಪೀಳಿಗೆ ಗಳ ಕೈಯಿಂದ ಅಳಿವಿನ ಅಂಚಿ ನಲ್ಲಿರುವ ಮಾಯಾಪುಸ್ತಕಕ್ಕೆ ನನ್ನ ಭಾವಪೂರ್ಣ ನಮನ.


ಮಹಿಮಾ ಭಟ್, ಧಾರವಾಡ ವಿವಿ

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.