ಲೆಫ್ಟ್-ರೈಟ್‌ಗಳನ್ನು ಸರಿಪಡಿಸಿ ಹದಕ್ಕೆ ತರುತ್ತಿದ್ದರು


Team Udayavani, Aug 15, 2020, 9:15 AM IST

school march fast

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬಾಲ್ಯವೆಂದರೆ ಮಕ್ಕಳಾಟಿಕೆ, ಅತ್ಯುತ್ಸಾಹ, ಹಠ, ಖುಷಿ ಇವೆಲ್ಲವುಗಳಿಂದ ಕೂಡಿರುವುಂಥ‌ದ್ದು.

ಭಾರದ ಬ್ಯಾಗ್‌ ಬೆನ್ನಿಗೇರಿಸಿಕೊಂಡು, ಹಠಮಾಡಿ ತೆಗೆಸಿಕೊಂಡ ನೀರಿನ ಬಾಟಲಿ ಹಿಡಿದು ಗೆಳೆಯರೊಂದಿಗೆ ಶಾಲೆಗೆ ಹೋಗುವುದೇ ಖುಷಿ.

ಅದರಲ್ಲೂ ಪ್ರಾರಂಭದ ತಿಂಗಳುಗಳಲ್ಲಿ , ಜಡಿವ ಮಳೆಯಲ್ಲಿ ಬಣ್ಣದ ಕೊಡೆ ಹಿಡಿದು ನಡೆಯುವುದು ಇನ್ನೂ ಖುಷಿ.

ಶಾಲೆ ಆರಂಭವಾದ ಅನಂತರ ಸಿಗುವ ಮೊದಲ ಸರಕಾರಿ ರಜೆಯೇ ಆಗಸ್ಟ್‌ 15. ಈ ದಿನದ ಸಂಭ್ರಮವೇ ಬೇರೆ.

ಎರಡು ದಿನ ಮುಂಚಿತವಾಗಿಯೇ ಪಿ.ಟಿ. ಮಾಸ್ತರರು ನಮ್ಮ ಲೆಫ್ಟ್-ರೈಟ್‌ಗಳನ್ನು ಸರಿಪಡಿಸಿ ಹದಕ್ಕೆ ತರುತ್ತಿದ್ದರು. ಇನ್ನು ನಾವು ಹಾರೋದು, ಕುಣಿಯೋದು, ಮಾತಾಡೋದರಲ್ಲಿ ಮುಂದಿದ್ದ ಕಾರಣ ಸ್ವಾತಂತ್ರ್ಯ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಮುಖ ರುವಾರಿಗಳು ನಾವೇ.

ನೃತ್ಯದ ತಯಾರಿ ಒಂದು ವಾರ ಮುಂಚಿತವಾಗಿಯೇ ಪ್ರಾರಂಭವಾಗುತ್ತಿತ್ತು. ಆವಾಗ ತರಗತಿ ಬಿಟ್ಟು ಅಭ್ಯಾಸಕ್ಕೆ ಹೋಗುವುದು ಒಂಥರಾ ಖುಷಿ!

ಸ್ವಾತಂತ್ರ್ಯ ದಿನದ ತಯಾರಿ, ತರಾತುರಿ ಇನ್ನೊಂದು ತರ. ಶುಭ್ರವಾದ ಸಮವಸ್ತ್ರ ಧರಿಸಿ, ಅಮ್ಮನಿಂದ ನಿಲ್ಲದ ಜಡೆಗೆ ಧ್ವಜ ಬಣ್ಣದ ರಿಬ್ಬನ್‌ ಕಟ್ಟಿಸಿಕೊಂಡು, ಅಮ್ಮನಿಗೆ ನೀನು ಸರಿಯಾಗಿ ಬಾಚಿಲ್ಲ, ಬಿಗಿಯಾಗಿಲ್ಲ ಜಡೆ, ನಿನ್ನಿಂದ ಲೇಟಾಗ್ತದೆ ಅಂತೆಲ್ಲಾ ಹೇಳಿ, ಹಿಂದಿನ ದಿನವಷ್ಟೇ ಖರೀದಿಸಿದ ಬಣ್ಣದ ಬಳೆಗಳನ್ನು ಎರಡೂ ಕೈಗಳಿಗೆ ತೊಟ್ಟು, ಕೈಲ್ಲೊಂದು ಪುಟ್ಟ ಬಾವುಟ ಹಿಡಿದು, ಜೇಬಿನ ಭಾಗದಲ್ಲಿ ಕಣ್ಣಿಗೆ ಕಾಣಿಸದೇ ಇರುವ ಬಾವುಟದ ಬ್ಯಾಡ್ಜ್ ತೊಟ್ಟು ಸ್ವಾತಂತ್ರ್ಯ ದಿನದ ಆಚರಣೆಗೆ ನಾವು ತಯಾರು. ಶಾಲೆಗೆ ಹೋದಮೇಲೆ ಲೆಫ್ಟ್-ರೈಟ್‌ಗಳನ್ನು ಪ್ರದರ್ಶಿಸಿ, ನಮ್ಮ ತರಗತಿಯ ಸರತಿ ಸಾಲಲ್ಲಿ ಅಂಕುಡೊಂಕಾಗಿ ನಿಂತು ರಾಷ್ಟ್ರಗೀತೆಗೆ ಹಾಗೂ ಧ್ವಜಕ್ಕೆ ಸೆಲ್ಯೂಟ್‌ ಹೊಡೆಯುವಾಗ ದೇಶಭಕ್ತಿಯಿಂದ ಮನ ಪುಳಕಗೊಳ್ಳುತ್ತಿತ್ತು.

ಅಲ್ಲಿಗೆ ಒಂದು ಹಂತ ಮುಗಿಯಿತು. ಮುಂದಿನ ಭಾಗದಲ್ಲಿ ನಡೆಯುವ ಅತಿಥಿಗಳ ಭಾಷಣ ವಿದ್ಯಾರ್ಥಿಗಳಿಗೆ ಪ್ರವಚನವಿದ್ದಂತೆ. ಇದೇ ಬಹಳ ಕಷ್ಟದ ಕೆಲಸ ಏಕೆಂದರೆ ಬಾಯಿಗೆ ಲಡ್ಡುವೋ, ಚಾಕೊಲೇಟೋ ಬಿದ್ದರೆ ಸಾಕು ಅನ್ನೋ ಭಾವನೆ ಮನದಲ್ಲಿರುತ್ತಿತ್ತು. ಇನ್ನು ಈ ದಿನ ನಮ್ಮ ಭಂಡ ಧೈರ್ಯಕ್ಕೆ ಸಾಕ್ಷಿಯಾಗುವ ದಿನ. ಎರಡು ದಿನಗಳಿಂದ ಮನೆಯಲ್ಲಿ ಅಮ್ಮನನ್ನು ಪೀಡಿಸಿ ಸ್ವಾತಂತ್ರ್ಯ ದಿನದ ಕುರಿತು ಬರೆಸಿಕೊಂಡ ಭಾಷಣ ಬಾಯಿಪಾಠ ಮಾಡಿ ಮನಸಿನಲ್ಲಿ ಹೆದರಿ, ಎದುರಲ್ಲಿ ಏನು ಇಲ್ಲದವರಂತೆ ತೋರಿಸಿಕೊಂಡು ವೇದಿಕೆ ಮೇಲೆ ಹೋಗಿ ಒಂದೇ ಉಸಿರಿನಲ್ಲಿ ಒದರಿಬಿಟ್ಟರೆ ದೊಡ್ಡ ಯುದ್ಧ ಗೆದ್ದ ಅನುಭವ.

ಅದಾದ ನಂತರ ಬಣ್ಣದ ಅಂಗಿ ತೊಟ್ಟು ನಾಲ್ಕು ಹೆಜ್ಜೆ ಹಾಕಿಬಿಟ್ಟರೆ ಆ ದಿನದ ಶಾಲಾ ಸಂಭ್ರಮ ಮುಗಿತು. ನಂತರ ಯಾರಿಗೂ ಕಾಯದೇ ನೇರವಾಗಿ ಮನೆಗೆ ಓಡಿ ಬರುವುದು, ದಿನದ ಬಾಕಿ ರಜೆಯನ್ನು ಅನುಭವಿಸಬೇಕಲ್ಲಾ! ಬೆಳೆಯುತ್ತಾ ದೊಡ್ಡವರಾದ ಹಾಗೇ ಸ್ವಾತಂತ್ರ್ಯ ದಿನದ ಸಂಭ್ರಮ ಬದಲಾಗುತ್ತಾ ಬಂದಿದೆ. ಕಾಲೇಜಿಗೆ ಬಂದ ಮೇಲಂತೂ ಮನೆಯ ಗೋಡೆಯ ಒಳಗೆ ಬಂಧಿಯಾಗಿದೆ ಇದರ ಆಚರಣೆ. ಪ್ರತಿ ವರ್ಷ ಈ ದಿನ ಮರುಕಳಿಸಿದಾಗಲೂ ಬಾಲ್ಯದ ಶಾಲಾ ದಿನಗಳ ಖುಷಿ, ಸಂಭ್ರಮ ನೆನೆಪಾಗುತ್ತದೆ. ಆ ದಿನಗಳ ಹಾಗೂ ವಾಸ್ತವದ ಆಚರಣೆಯಲ್ಲಿ ಎಷ್ಟು ಬದಲಾವಣೆಯಾಗಿದೆ ಅನಿಸಿಬಿಡುತ್ತದೆ.

ವಿಧಾತ್ರಿ ಭಟ್‌, ಎಸ್‌.ಡಿ.ಎಂ. ಕಾಲೇಜು ಉಜಿರೆ

 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.