ಕೆಲವೊಂದು ಸನ್ನಿವೇಶಗಳು ಆಯಾಸವಾದರೂ ಸಂತಸವ ಹೊತ್ತು ತರುತ್ತವೆ…


Team Udayavani, Mar 12, 2021, 4:15 PM IST

DS

ಜೀವನದಲ್ಲಿ ಹಲವಾರು ಘಟ್ಟಗಳನ್ನು ದಾಟಿ ಆಯಾಸ ಮುಕ್ತರಾಗುತ್ತೇವೆ, ಕೆಲವೊಂದು ಸನ್ನಿವೇಶಗಳು ಆಯಾಸವಾದರೂ ಸಂತಸವನ್ನು ಹೊತ್ತು ಬಂದಿರುತ್ತವೆ ಮತ್ತು ಕೆಲವೊಂದು ಸನ್ನಿವೇಶಗಳು ಆಯಾಸವಾಗುವುದಲ್ಲದೆ ಜೀವನದ ಬಗ್ಗೆ ಜುಗುಪ್ಸೆಯನ್ನೇ ಉಂಟು ಮಾಡಿಬಿಡುತ್ತವೆ.

ಇಂತಹ ಘಟನೆಗಳು ಜೀವನದುದ್ದಕ್ಕೂ ಎದುರಾಗುವುದಲ್ಲದೆ ಜೀವನೋಪಾಯಕ್ಕಾಗಿ ಹೊಸ ರೀತಿಯ ದಿಕ್ಕುಗಳನ್ನು ಸೃಷ್ಟಿಸಿಕೊಡುತ್ತವೆ. ಆ ಹೊಸ ರೀತಿಯ ಜೀವನೋಪಾಯದ ದಿಕ್ಕುಗಳೇ ಅನುಭವಗಳು.

ಈ ಅನುಭವ ಎಂಬ ಪದದ ಅರ್ಥ, ನನ್ನ ಪ್ರಕಾರ ಅನುಭವಿಸಿದವರಿಗೆ ಮಾತ್ರ ಅರ್ಥವಾಗುತ್ತದೆ. ಹೀಗೆ ಒಬ್ಬ ವ್ಯಕ್ತಿ ಕಳ್ಳತನ ಮಾಡುತ್ತಿದ್ದ. ಆತ ಕಳ್ಳತನವನ್ನು ರಾತ್ರಿ ಮಾತ್ರ ಮಾಡುತ್ತಿದ್ದನು. ದಿನವೂ ಯಾವುದಾದರೊಂದು ಮನೆಗೆ ಹೋಗುವುದು ಆ ಮನೆಯಲ್ಲಿರುವ ಹಣ, ಚಿನ್ನ ಹೀಗೆ ಕೈಗೆ ಸಿಕ್ಕದ್ದನ್ನು ದೋಚಿಕೊಂಡು ಬರುತ್ತಿದ್ದನು. ಅನಂತರ ಹಗಲು ಹೊತ್ತಿನಲ್ಲಿ ಏನೂ ಗೊತ್ತಿಲ್ಲದಂತೆ ಓಣಿಯಲ್ಲಿ ತಿರುಗಾಡುತ್ತಿದ್ದನು.

ಆತ ಕಳ್ಳತನ ಮಾಡಿದ ಮನೆಯವರು ನಡುಬೀದಿಗೆ ಬಂದು ಅಳುವುದು, ಕಿರಿಚಾಡುವುದನ್ನು ನೋಡಿದರೂ ಮರುಗದೆ, ತಾನು ಕಳ್ಳತನ ಮಾಡಿದ ವಸ್ತುಗಳನ್ನು ನೆನೆದು ಮತ್ತು ಆತ ಕಳ್ಳ ಎಂದು ಯಾರೂ ಗುರುತಿಸದುದ್ದನ್ನು ಕಂಡು ಒಳಗೊಳಗೆ ಸಂತಸಪಡುತ್ತಿದ್ದನು.

ಆತ ಕಳ್ಳತನ ಮಾಡಿದ ಹಣ, ಚಿನ್ನವನ್ನೆಲ್ಲ ಮನೆಯಲ್ಲಿ ಬಿಗಿ ಭದ್ರತೆಯೊಂದಿಗೆ ಜೋಪಾನವಾಗಿ ಇಟ್ಟಿದ್ದನು. ಹೀಗೆ ದಿನವೂ ರಾತ್ರಿ ಒಂದೊಂದು ಮನೆಗೆ ಹೋಗುವುದು, ಕಳ್ಳತನ ಮಾಡುವುದು, ಬೆಳಗ್ಗೆ ಆ ಮನೆಯವರ ರೋದನವನ್ನು ಕೇಳುತ್ತ ಒಳಗೊಳಗೆ ಸಂತಸಪಡುವುದು. ಇದೆ ಆತನ ದಿನಚರಿಯಾಗಿತ್ತು. ಇದೇ ರೀತಿ ಹಲವು ತಿಂಗಳುಗಳು ಕಳೆದವು. ಹೀಗೆ ಮತ್ತೆ ರಾತ್ರಿ ಕಳ್ಳತನ ಮಾಡಲು ಮನೆಯನ್ನು ಹುಡುಕುತ್ತ ಹೋದನು. ಆತ ಕಳ್ಳತನ ಮಾಡಿಕೊಂಡು ಬರುವಷ್ಟರಲ್ಲಿ ಆತನಿಗೆ ಒಂದು ದೊಡ್ಡ ದುರಂತವೇ ಕಾದಿತ್ತು.

ಅದೇನೆಂದರೇ ಆತ ಕಳ್ಳತನ ಮಾಡಲು ಹೋದಾಗ ಆತನ ಮನೆಯನ್ನೇ ಮತ್ತೂಬ್ಬ ಕಳ್ಳ ದೋಚಿಬಿಟ್ಟಿದ್ದನು. ಇದನ್ನು ನೋಡಿದ ಕಳ್ಳನಿಗೆ ಒಮ್ಮೆಲೆ ಆಘಾತವಾಯಿತು. ತಾನು ಇಷ್ಟು ದಿನ ಮಾಡಿದ ಕಳ್ಳತನ ವ್ಯರ್ಥವಾಯಿತೆಂದು ತುಂಬಾ ಸಂಕಟಪಟ್ಟ. ಈ ಘಟನೆ ಆತನ ಮೇಲೆ ಬಲವಾದ ಪರಿಣಾಮ ಬೀರಿತು. ಆತನ ಮನೆ ಕಳವಾದಾಗ ಆತ ಕಳ್ಳತನ ಮಾಡಿದವರ ಮನೆಯ ರೋದನ ಅರ್ಥವಾಗತೊಡಗಿತು ಮತ್ತು ಆತ ಎಂತಹ ತಪ್ಪನ್ನು ಮಾಡುತ್ತಿದ್ದ ಎಂಬ ಅರಿವಾಯಿತು. ಅಲ್ಲದೆ ತನ್ನ ವಸ್ತುಗಳು ಕಳವಾದಾಗ ಎಂತಹ ನೋವು ಉಂಟಾಗುತ್ತದೆ ಎಂಬ ಅನುಭವವಾಯಿತು. ಅಂದಿನಿಂದ ಆತ ಕಳ್ಳತನ ಮಾಡುವುದನ್ನೇ ಬಿಟ್ಟುಬಿಟ್ಟ ಮತ್ತು ಉತ್ತಮ ನಾಗರಿಕನಾಗಿ ಬದುಕನ್ನು ಆರಂಭಿಸಿದ.

ಈ ಕಥೆಯಿಂದ ನಾವು ತಿಳಿದುಕೊಳ್ಳಬೇಕಾದದ್ದು ಏನೆಂದರೆ ಯಾವುದೇ ವ್ಯಕ್ತಿಗೆ ನಾವಾಡುವ ಮಾತುಗಳಾಗಲಿ, ನಾವು ನೀಡುವ ಶಿಕ್ಷೆಯಾಗಲಿ ಪಾಠವನ್ನು ಹೇಳುವುದಿಲ್ಲ. ಸ್ವತಃ ತಾವೇ ಆ ಪರಿಸ್ಥಿತಿಯನ್ನು ಅನುಭವಿಸಿದರೆ ಆ ವ್ಯಕ್ತಿಗೆ ಯಾರ ಮಾರ್ಗದರ್ಶನದ ಅವಶ್ಯವೇ ಇರುವುದಿಲ್ಲ. ಆದ್ದರಿಂದ ನಾವು ಕೂಡ ನಮ್ಮ ಜೀವನದ ಪರಿಸ್ಥಿತಿಗಳನ್ನು ಅನುಭವಿಸುವ ಮೊದಲೇ ಅರಿತುಕೊಳ್ಳಬೇಕು. ನಮ್ಮ ಪರಿಸ್ಥಿತಿಗೆ ತಕ್ಕಂತೆ ಜವಾಬ್ದಾರಿಗಳನ್ನು ಹೊರಬೇಕು.

ನಮ್ಮ ಪರಿಸ್ಥಿತಿಗಳನ್ನು ಅರಿಯದೆ ಹೋದರೆ ಮುಂದಿನ ದುರಂತವನ್ನು ನಾವೇ ಅನುಭವಿಸಬೇಕಾಗುತ್ತದೆ. ಅದು ಒಳ್ಳೆಯ ಅನುಭವವಾದರೆ ಸರಿ, ಕೆಟ್ಟ ಅನುಭವವಾದರೆ ಜೀವನ ಮತ್ತಷ್ಟು ಕೆಡುವುದರಲ್ಲಿ ಸಂದೇಹವಿಲ್ಲ.


ಫಕ್ಕೀರೇಶ, ಜಾಡರ, ಜಿಎಫ್ ಜಿ ಕಾಲೇಜು, ಹಾವೇರಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.