ಒಡೆದ ತೆಂಗಿನ ಕಾಯಿಯ ಸ್ವಾರಸ್ಯ ಪ್ರಸಂಗ…!


Team Udayavani, Jul 27, 2021, 8:00 AM IST

ಒಡೆದ ತೆಂಗಿನ ಕಾಯಿಯ ಸ್ವಾರಸ್ಯ ಪ್ರಸಂಗ…!

ನನ್ನ ಸ್ನೇಹಿತೆ ಶಿಕ್ಷಕಿಯೊಬ್ಬಳು ಕಳೆದ ಗ್ರಾಮ ಪಂಚಾಯತ್‌ ಚುನಾವಣೆಗೆ ಕರ್ತವ್ಯಕ್ಕೆಂದು ಹೋದಾಗ ನಡೆದ ಘಟನೆ ಇದು. ಗ್ರಾಮ ಪಂಚಾಯತ್‌ ಚುನಾವಣ ಕರ್ತವ್ಯಕ್ಕೆ ಮತಗಟ್ಟೆ ಅಧಿಕಾರಿಯಾಗಿ ನಿಯೋಜನೆಗೊಂಡವರು ತಮ್ಮ ಮಸ್ಟರಿಂಗ್‌ ಕೇಂದ್ರದಿಂದ ಮತಪೆಟ್ಟಿಗೆಗಳೊಂದಿಗೆ ಮತದಾನ ಕೇಂದ್ರಕ್ಕೆ ಬೇಕಾಗುವ ಎಲ್ಲ ಸಲಕರಣೆಗಳನ್ನು ಪಡೆದು ಮತಗಟ್ಟೆ ಸೇರಿಕೊಳ್ಳುವುದು ಸಾಮಾನ್ಯ ಕ್ರಿಯೆ. ಹಾಗೆಯೇ ಇವರ ತಂಡದವರು ತಮ್ಮ ಸಲಕರಣೆಗಳನ್ನೆಲ್ಲ ಪಡೆದು ಮತದಾನ ನಡೆಯುವ ಕೇಂದ್ರ ತಲುಪಿದ ಮೇಲೆ ಮರುದಿನ ನಡೆಯುವ ಮತದಾನ ಪ್ರಕ್ರಿಯೆಗೆ ಸಿದ್ಧಗೊಳಿಸಿದ್ದಾರೆ.

ಮತಗಟ್ಟೆಯ ಹೊರ ಭಾಗದಲ್ಲಿ ಸೂಚನ ಪತ್ರ, ಸ್ಪರ್ಧಿಸಿದ್ದ ಅಭ್ಯರ್ಥಿಗಳ ವಿವರ, ಚಿಹ್ನೆಗಳ ಮಾಹಿತಿ ಪತ್ರವನ್ನು ಅಂಟಿಸಿ ಸಂಜೆಯ ತಣ್ಣಗಿನ ವಾತಾವರಣದಲ್ಲಿ ಬಿಸಿ ಬಿಸಿ ಚಹಾ ಹೀರುತ್ತ ಮತಗಟ್ಟೆಯಲ್ಲಿ ಅಧಿಕಾರಿಗಳು ಕುಳಿತಿದ್ದಾರೆ.

ಇದೇ ಸಮಯದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಒಬ್ಬರು ಬಂದು ಹೊರಗಡೆ ಅಂಟಿಸಿದ್ದ ಅಭ್ಯರ್ಥಿಗಳ ಮಾಹಿತಿ ಹಾಗೂ ಚಿಹ್ನೆಗಳನ್ನು ಗಮನಿಸಿದ್ದಾನೆ. ಗಮನಿಸಿದಾತ ಮೇಡಂ ಮೇಡಂ ನನ್ನ ಚಿಹ್ನೆ ಬದಲಾಯಿಸಿ ಅಂಟಿಸಿದ್ದೀರಾ? ಅವರ ಮಾತಿನಿಂದ ಗಾಬರಿ ಬಿದ್ದ ಮತಗಟ್ಟೆ ಅಧಿಕಾರಿಗಳು ಅವನತ್ತ ಧಾವಿಸಿ, ಏನಾಯ್ತು ಹೇಳಿ ಎಂದಾಗ. ಯಾರಿ ನನ್ನ ಗುರುತಿನ ತೆಂಗಿನಕಾಯಿಯನ್ನು ಒಡೆದದ್ದು. ನನಗೆ ಚುನಾವಣಾಧಿಕಾರಿಗಳು ನನಗೆ ಗುರುತು ಕೊಟ್ಟಿದ್ದು ಒಡೆಯದ ತೆಂಗಿನಕಾಯಿಯನ್ನು, ಇಲ್ಲಿ ನನ್ನ ತೆಂಗಿನಕಾಯಿ ಯಾರು ಒಡೆದಿದ್ದಾರೆ ಹೇಳಿ. ನಾನು ಇಲ್ಲಿ ನಾಳೆ ಮತದಾನ ಆಗಲು ಬಿಡುವುದಿಲ್ಲ. ನಾನು ಒಡೆಯದ ತೆಂಗಿನಕಾಯಿಯೊಂದಿಗೆ ಪ್ರಚಾರ ಮಾಡಿರುವೆ, ಇದೀಗ ಒಡೆದ ತೆಂಗಿನಕಾಯಿ ಕೊಟ್ಟರೆ ಹೇಗೆ ? ಅದು ನಾಳೆಯೇ ಚುನಾವಣೆ ಇದೆ ಅನ್ನುತ್ತ ರೊಚ್ಚಿಗೆದ್ದನು.

ಮತಗಟ್ಟೆ ಅಧಿಕಾರಿಗಳು ಅವನೊಂದಿಗೆ ಮಾತನಾಡಿದರೆ, ಇತ್ತ ಚುನಾವಣಾಧಿಕಾರಿಗೆ, ಪಿಆರ್‌ಒ ಫೋನ್‌ ಮಾಡಿ ವಿಷಯ ತಿಳಿಸಿದರು.

ನನ್ನ ಗುರುತು ತೆಂಗಿನಕಾಯಿ. ಅದು ಒಡೆಯದ ತೆಂಗಿನಕಾಯಿ. ನೀವು ಒಡೆದು ಎರಡು ಹೋಳು ಮಾಡಿಬಿಟ್ಟರೆ ಹೇಗೆ ಎಂಬ ಕೋಪದ ಮಾತು ಅಭ್ಯರ್ಥಿಯದು. ಸಮಾಧಾನ ಮಾಡುವ ಹೊಣೆ ಮತಗಟ್ಟೆ ಅಧಿಕಾರಿಗಳದ್ದು. ಈ ಎಲ್ಲ ಮಾತುಕತೆ ನಡೆಯುತ್ತಿರುವಾಗಲೇ ಚುನಾವಣಾಧಿಕಾರಿಗಳು, ಸೆಕ್ಟರ್‌ ಆಫೀಸರ್‌ಗಳು ಬಂದು ಅಭ್ಯರ್ಥಿಯೊಂದಿಗೆ ಮಾತನಾಡಿ, ಒಡೆದ ಕಾಯಿಯ ಪುರಾಣವನ್ನೆಲ್ಲ ಮತ್ತೂಮ್ಮೆ ಕೇಳಿ, ನೋಡಿ ಆ ಕಾಯಿಯನ್ನು ನಾವು ಒಡೆದಿಲ್ಲ. ಇದೆಲ್ಲ ಮುದ್ರಕರ ತಪ್ಪಿನಿಂದಾಗಿದೆ. ಸರಿಪಡಿಸುತ್ತೇವೆ ಎನ್ನುತ್ತ ಸಮಾಧಾನ ಪಡಿಸಲೆತ್ನಿಸುತ್ತಿದ್ದಾರೆ. ಆಗ ಅಭ್ಯರ್ಥಿಯು, ಅಲ್ಲ ನೀವು ಕೊಟ್ಟಿದ್ದು ಬಿಟ್ಟು ಅದು ಹ್ಯಾಗೇ ಬೇರೆ ಪ್ರಿಂಟ್‌ ಮಾಡ್ತಾರೆ ಅಂತ ವಾದ ಪ್ರಾರಂಭಿಸಿದ. ವಾದ ವಿವಾದವೆಲ್ಲಾ ಆಗಿ, ಕೊನೆಗೆ ನಾವು ಸರಿ ಪಡಿಸುತ್ತೇವೆ ಅಂಥ‌ ಭರವಸೆಯ ಮಾತುಗಳನ್ನು ಅಧಿಕಾರಿಗಳು ನೀಡಿದರು. ಅಭ್ಯರ್ಥಿಯು ಸರಿಯಾಗದಿದ್ದರೆ ನಾನು ಬೆಳಗ್ಗೆ ಮತದಾನಕ್ಕೆ ಅವಕಾಶ ನೀಡುವುದಿಲ್ಲ ಎನ್ನುವ ಎಚ್ಚರಿಕೆ ನೀಡುತ್ತ ಹೊರ ನೆಡದಿದ್ದ.

ಅಭ್ಯರ್ಥಿಯ ಎಚ್ಚರಿಕೆ ನುಡಿ, ಕರ್ತವ್ಯದ ಕೂಗಿಗೆ ಎಲ್ಲರೂ ಜಾಗ್ರತೆಯಿಂದ ಹೊರಗಡೆಯ ಮಾಹಿತಿ ಪೋಸ್ಟರನ್ನು ಬೆಳಗಾಗುವುದರೊಳಗೆ ಸರಿಪಡಿಸಲಾಗಿತ್ತು. ಬ್ಯಾಲೆಟ್‌ನಲ್ಲಿ ಗುರುತು ಸರಿಯಾಗಿರುವ ಬಗ್ಗೆ ಅಧಿಕಾರಿಗಳು ಖಚಿತಪಡಿಸಿಕೊಂಡು ಮರುದಿನದ ಕರ್ತವ್ಯವನ್ನು ಯಾವುದೇ ಅಡತಡೆಯಿಲ್ಲದೆ ಯಶಸ್ವಿಯಾಗಿಸಿ ಬಂದಿದ್ದನ್ನು ಈಗಲೂ ನೆನೆದು, ಆ ದಿನದ ಭಯ ಇಂದು ತೆಂಗಿನಕಾಯಿ ಪುರಾಣ ಅನ್ನುತ್ತಾ ನೆನಪಿಸಿಕೊಂಡು ನಗುತ್ತಿರುತ್ತಾರೆ.

 

ಪಲ್ಲವಿ ಡಿ. ಡೊಳ್ಳಿನ

ಕೊಪ್ಪಳ

ಟಾಪ್ ನ್ಯೂಸ್

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

13-uv-fusion

UV Fusion: ಹದ್ದು ಮೀರದೆ ಹದ್ದಿನಂತಾಗೋಣ

7-uv-fusion

Tour Circle: ಓ ಮಲೆನಾಡಿನ ಮೈ ಸಿರಿಯೇ…

6-mother

Mother: ಕೈ ತುತ್ತು ತಿನ್ನಿಸಿದ ಜೀವ ನಲುಗದಿರಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

7-mng

ಚೆಂಡೆ ಬಡಿಯುತ್ತ ಬಂದು ತಂಡದಿಂದ ಪ್ರಶ್ನೆ: ಚಕಮಕಿ, ದೂರು ದಾಖಲು

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

6-mng

Nandini Brand: 50 ಐಸ್‌ ಕ್ರೀಂ ಮಾರುಕಟ್ಟೆಗೆ

Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

5-mng

Mangaluru: ರೋಗಿಗಳಲ್ಲಿ ಭರವಸೆ ತುಂಬುವ ಕೆಲಸವಾಗಲಿ: ರೈ| ರೆ| ಡಾ| ಸಲ್ಡಾನ್ಹಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.